IND vs END 2nd Test: ಇಂಗ್ಲೆಂಡ್ ಬ್ಯಾಟರ್ನ ವರ್ತನೆಗೆ ಕೋಪಗೊಂಡ ರಿಷಭ್ ಪಂತ್: ಏನು ಮಾಡಿದ್ರು ನೋಡಿ
Rishabh Pant Angry vs England: ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಗಿಯುವ ಸ್ವಲ್ಪ ಮೊದಲು, ರವೀಂದ್ರ ಜಡೇಜಾ ಇಂಗ್ಲೆಂಡ್ ಇನ್ನಿಂಗ್ಸ್ನಲ್ಲಿ 19 ನೇ ಓವರ್ ಬೌಲ್ ಮಾಡಲು ಬಂದರು. ಬ್ರೂಕ್ ಜಡೇಜಾ ಬೌಲಿಂಗ್ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಹ್ಯಾರಿ ಬ್ರೂಕ್ ಪ್ರತಿ ಚೆಂಡಿನ ನಂತರ ಬೇಕಂತಲೇ ಸಮಯ ತೆಗೆದುಕೊಳ್ಳುತ್ತಿದ್ದರು.

ಬೆಂಗಳೂರು (ಜು. 04): ಶುಭ್ಮನ್ ಗಿಲ್ (Shubman Gill) ಅವರ ಬಲಿಷ್ಠ ಬ್ಯಾಟಿಂಗ್ ನಂತರ, ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಗಿಲ್ 269 ರನ್ಗಳ ದಾಖಲೆಯ ಇನ್ನಿಂಗ್ಸ್ ಆಡಿದರು, ಇವರ ಬ್ಯಾಟಿಂಗ್ ಶಕ್ತಿಯಿಂದ ಟೀಮ್ ಇಂಡಿಯಾ 587 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಇದರ ನಂತರ, ಆಕಾಶ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ ಮತ್ತು ಇಂಗ್ಲೆಂಡ್ನ ಮೂರು ವಿಕೆಟ್ಗಳನ್ನು 25 ರನ್ಗಳಿಗೆ ಕಬಳಿಸಿದರು.
ಆದಾಗ್ಯೂ, ದಿನದ ಅಂತ್ಯದ ವೇಳೆಗೆ, ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಒಟ್ಟಾಗಿ ಹೇಗೋ ಸ್ಕೋರ್ ಅನ್ನು 77 ರನ್ಗಳಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಕೊನೆ ಕೊನೆಯಲ್ಲಿ ಕೂಡ ಇಂಗ್ಲೆಂಡ್ ಬ್ಯಾಟರ್ಗಳು ಭಾರತೀಯ ಬೌಲರ್ಗಳನ್ನು ಎದುರಿಸಲು ಪರದಾಡುತ್ತಿದ್ದರು. ಮುಖ್ಯವಾಗಿ ಬ್ರೂಕ್ ಭಾರತೀಯ ಬೌಲರ್ಗಳಿಂದ ತಪ್ಪಿಸುತ್ತಿರುವುದು ಕಂಡುಬಂದಿತು, ಇದರಿಂದಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಕೋಪಗೊಂಡ ಘಟನೆ ನಡೆಯಿತು.
ಪಂತ್ ಮತ್ತು ಹ್ಯಾರಿ ಬ್ರೂಕ್ ನಡುವೆ ಏನಾಯಿತು?
ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಗಿಯುವ ಸ್ವಲ್ಪ ಮೊದಲು, ರವೀಂದ್ರ ಜಡೇಜಾ ಇಂಗ್ಲೆಂಡ್ ಇನ್ನಿಂಗ್ಸ್ನಲ್ಲಿ 19 ನೇ ಓವರ್ ಬೌಲ್ ಮಾಡಲು ಬಂದರು. ಬ್ರೂಕ್ ಜಡೇಜಾ ಬೌಲಿಂಗ್ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಹ್ಯಾರಿ ಬ್ರೂಕ್ ಪ್ರತಿ ಚೆಂಡಿನ ನಂತರ ಬೇಕಂತಲೇ ಸಮಯ ತೆಗೆದುಕೊಳ್ಳುತ್ತಿದ್ದರು. ಅವರು ಉದ್ದೇಶಪೂರ್ವಕವಾಗಿ ತಮ್ಮ ಕೈಗವಸುಗಳನ್ನು ತೆರೆದು ಹಾಕುವುದು, ಕ್ರೀಸ್ನಿಂದ ದೂರ ಹೋಗಿ ನಿಂತುಕೊಳ್ಳುವುದು ಮಾಡುತ್ತಿದ್ದರು. ಬ್ರೂಕ್ ಬೌಲರ್ ಜೊತೆ ಮೈಂಡ್ ಗೇಮ್ ಆಡುತ್ತಿದ್ದಾರೆ ಎಂದು ರಿಷಭ್ ಪಂತ್ ಅರ್ಥಮಾಡಿಕೊಂಡರು.
Ravindra Jadeja: ಬಿಸಿಸಿಐ ನಿಯಮ ಉಲ್ಲಂಘಿಸಿದ ರವೀಂದ್ರ ಜಡೇಜಾ: ಮಂಡಳಿಯಿಂದ ನಿಷೇಧ ಸಾಧ್ಯತೆ
ಹ್ಯಾರಿ ಬ್ರೂಕ್ ಅವರ ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ರಿಷಭ್ ಪಂತ್ ಹಾಗೂ ಜಡೇಜಾ, “ನೀವು ಸಮಯ ವ್ಯರ್ಥ ಮಾಡುತ್ತಿದ್ದೀರಿ” ಎಂದು ಹೇಳಿದರು. ಜಡೇಜಾ ಕೂಡ ಅಂಪೈರ್ ಕಡೆಗೆ ನೋಡಿ ಬ್ರೂಕ್ ಹೀಗೆ ಏಕೆ ಮಾಡುತ್ತಿದ್ದಾರೆ ಎಂದು ಕೇಳಿದರು. ಜಡೇಜಾ ಮತ್ತೊಂದು ಓವರ್ ಹಾಕವುದನ್ನು ತಡೆಯುವುದು ಬ್ರೂಕ್ ಉದ್ದೇಶವಾಗಿತ್ತು. ರೂಟ್ ಮತ್ತು ಬ್ರೂಕ್ ಹೇಗಾದರೂ ಅಜೇಯರಾಗಿ ಪೆವಿಲಿಯನ್ಗೆ ಹಿಂತಿರುಗಲು ಪ್ರಯತ್ನಿಸುತ್ತಿದ್ದರು.
ರಿಷಭ್ ಪಂತ್ ಅಂಪೈರ್ ಅವರನ್ನು ಕರೆದು, “ಅವರು ಸಮಯ ವ್ಯರ್ಥ ಮಾಡುತ್ತಿದ್ದಾರೆ, ಬೌಲರ್ ಸಿದ್ಧರಾಗಿದ್ದಾರೆ. ಏನಾಗುತ್ತಿದೆ? ಅವರು ಪ್ರತಿ ಚೆಂಡಿಗೂ ಸಿದ್ಧರಾಗಲು ಸಮಯ ತೆಗೆದುಕೊಳ್ಳುತ್ತಿದ್ದಾರೆ” ಎಂದರು. ಜಡೇಜಾ ಕೂಡ ಅಂಪೈರ್ ಕಡೆಗೆ ನೋಡಿ ಬ್ರೂಕ್ ಹೀಗೆ ಏಕೆ ಮಾಡುತ್ತಿದ್ದಾನೆ ಎಂದು ಕೇಳಿದರು. ಬಳಿಕ ಇದರ ಬಗ್ಗೆ ಅಂಪೈರ್ ಬ್ರೂಕ್ಗೆ ಎಚ್ಚರಿಕೆ ನೀಡಿದರು.
ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಅವರ ದಾಖಲೆಯ ದ್ವಿಶತಕದೊಂದಿಗೆ ಮೊದಲ ಇನ್ನಿಂಗ್ಸ್ನಲ್ಲಿ 587 ರನ್ ಗಳಿಸಿದ ನಂತರ, ಎರಡನೇ ಟೆಸ್ಟ್ನ ಎರಡನೇ ದಿನದಂದು ಇಂಗ್ಲೆಂಡ್ನ ಸ್ಕೋರ್ ಅನ್ನು ಮೂರು ವಿಕೆಟ್ಗಳಿಗೆ 77 ರನ್ಗಳಿಗೆ ಇಳಿಸುವ ಮೂಲಕ ಭಾರತವು ಮೇಲುಗೈ ಸಾಧಿಸಿತು. ಎರಡನೇ ದಿನದ ಮೂರು ಅವಧಿಗಳಲ್ಲಿಯೂ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ವಿಶೇಷವಾಗಿ ದಿನದ ಅಂತ್ಯದ ವೇಳೆಗೆ, ಟೀಮ್ ಇಂಡಿಯಾದ ಬೌಲರ್ಗಳು ಸಹ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Fri, 4 July 25




