AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಅಂಪೈರ್ ವೈಡ್ ಕೊಡದಿದ್ದಕ್ಕೆ ಮೈದಾನದಲ್ಲೇ ಸಿಡಿದೆದ್ದ ರೋಹಿತ್ ಶರ್ಮಾ: ಏನು ಮಾಡಿದ್ರು ನೋಡಿ

India vs South Africa: ಎರಡನೇ ಓವರ್​ನ ವೇನ್ ಪಾರ್ನೆಲ್​ನ ನಾಲ್ಕನೇ ಎಸೆತ ಲೆಗ್​ಸೈಡ್ ಕಡೆ ಬಂದ ಕಾರಣ ಕ್ರೀಸ್​ನಲ್ಲಿದ್ದ ರೋಹಿತ್ ಶರ್ಮಾ ಚೆಂಡನ್ನು ವೈಡ್ ಎಂದು ಬಿಟ್ಟರು. ಈ ಸಂದರ್ಭ ಅಂಪೈರ್ ಕೊಟ್ಟ ನಿರ್ಧಾರಕ್ಕೆ ರೋಹಿತ್ ಸಿಡಿಮಿಡಿಗೊಂಡ ಘಟನೆ ಕೂಡ ನಡೆಯಿತು.

Rohit Sharma: ಅಂಪೈರ್ ವೈಡ್ ಕೊಡದಿದ್ದಕ್ಕೆ ಮೈದಾನದಲ್ಲೇ ಸಿಡಿದೆದ್ದ ರೋಹಿತ್ ಶರ್ಮಾ: ಏನು ಮಾಡಿದ್ರು ನೋಡಿ
Rohit Sharma IND vs SA 2nd T20I
TV9 Web
| Edited By: |

Updated on: Oct 03, 2022 | 10:33 AM

Share

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿರುವ ಭಾರತ (India vs South Africa) ಟಿ20 ವಿಶ್ವಕಪ್​ಗೂ ಮುನ್ನ ಬಲಿಷ್ಠವಾಗಿ ಹೊರಹೊಮ್ಮಿದೆ. ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ರನ್ ಮಳೆಯೇ ಹರಿಯಿತು. ಉಭಯ ತಂಡಗಳ ಸ್ಕೋರ್ 200ರ ಗಡಿ ದಾಟಿದವು. ಭಾರತ 237 ರನ್ ಸಿಡಿಸಿದರೆ ಆಫ್ರಿಕಾ 221 ರನ್ ಗಳಿಸಿತು. ರೋಹಿತ್ ಪಡೆ 16 ರನ್​ಗಳ ಜಯ ಸಾಧಿಸಿತು. ಬೌಲರ್​ಗಳ ನೆಚ್ಚಿನ ಪಿಚ್ ಆಗಿರುವ ಬರ್ಸಾಪರದಲ್ಲಿ ಬ್ಯಾಟರ್​ಗಳು ಅಬ್ಬರಿಸಿದ್ದು ಎಲ್ಲರ ಹುಬ್ಬೇರಿವಂತೆ ಮಾಡಿತು. ಮೊದಲ ಓವರ್​ನಿಂದಲೇ ಟೀಮ್ ಇಂಡಿಯಾ ಓಪನರ್​ಗಳಾದ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಉಪ ನಾಯಕ ಕೆಎಲ್ ರಾಹುಲ್ (KL Rahul) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 9.5 ಓವರ್​ಗಳಲ್ಲಿ​ 96 ರನ್​ ಜೊತೆಯಾಟ ಆಡಿ ಭದ್ರ ಬುನಾದಿ ಹಾಕಿದರು. ಇದರ ನಡುವೆ ಅಂಪೈರ್ ಕೊಟ್ಟ ನಿರ್ಧಾರಕ್ಕೆ ರೋಹಿತ್ ಸಿಡಿಮಿಡಿಗೊಂಡ ಘಟನೆ ಕೂಡ ನಡೆಯಿತು.

ಎರಡನೇ ಓವರ್​ನ ವೇನ್ ಪಾರ್ನೆಲ್​ನ ನಾಲ್ಕನೇ ಎಸೆತ ಲೆಗ್​ಸೈಡ್ ಕಡೆ ಬಂದ ಕಾರಣ ಕ್ರೀಸ್​ನಲ್ಲಿದ್ದ ರೋಹಿತ್ ಶರ್ಮಾ ಚೆಂಡನ್ನು ವೈಡ್ ಎಂದು ಬಿಟ್ಟರು. ಈ ಸಂದರ್ಭ ರೋಹಿತ್ ಬ್ಯಾಟ್ ಆಗಲಿ, ಪ್ಯಾಡ್ ಚೆಂಡಿಗೆ ಟಚ್ ಆಗಿರಲಿಲ್ಲ. ಆದರೆ, ಅಂಪೈರ್ ಇದನ್ನು ವೈಡ್ ಎಂಬ ತೀರ್ಮಾನ ಪ್ರಕಟಿಸಿಲ್ಲ. ಇದರಿಂದ ಕೋಪಗೊಂಡ ರೋಹಿತ್ ಮೈದಾನದಲ್ಲೇ ಅಂಪೈರ್ ಜೊತೆ ವಾದಕ್ಕಿಳಿದಿದ್ದಾರೆ. ಅಲ್ಲದೆ ಇದು ವೈಡ್ ಎಂದು ಡಿಆರ್​ಎಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ವೈಡ್​ಗೆ ರಿವ್ಯೂ ತೆಗೆದುಕೊಳ್ಳುವ ಆಯ್ಕೆ ಇಲ್ಲದ ಕಾರಣ ಅಂಪೈರ್ ತೀರ್ಮಾನಕ್ಕೆ ಸುಮ್ಮನಾಗಬೇಕಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Virat Kohli: ಅರ್ಧಶತಕಕ್ಕೆ ಒಂದು ರನ್ ಬೇಕಿದ್ದಾಗ ನೀನೇ ಬ್ಯಾಟಿಂಗ್ ಮಾಡೆಂದು ಕಾರ್ತಿಕ್​ಗೆ ತಾಕೀತು ಮಾಡಿದ ಕೊಹ್ಲಿ: ವಿಡಿಯೋ
Image
KL Rahul: ಪಂದ್ಯಶ್ರೇಷ್ಠ ನೀಡುವ ವೇಳೆ ಈ ಪ್ರಶಸ್ತಿ ನನಗೆ ಬೇಡ ಎಂದ ಕೆಎಲ್ ರಾಹುಲ್: ಯಾಕೆ ಗೊತ್ತೇ?
Image
IND Vs SA: ಗುವಾಹಟಿಯಲ್ಲಿ ಸೂರ್ಯ ಸ್ಫೋಟ; ಕೇವಲ 573 ಎಸೆತಗಳಲ್ಲಿ 1000 ರನ್ ಪೂರ್ಣ..!
Image
IND Vs SA: ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ರೋಹಿತ್; ಧೋನಿ- ಕೊಹ್ಲಿಯನ್ನು ಹಿಂದಿಕ್ಕಿದ ಹಿಟ್​ಮ್ಯಾನ್.!

ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ:

ದಕ್ಷಿಣ ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಇತಿಹಾಸ ಸೃಷ್ಟಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿರುವ ರೋಹಿತ್ 400 ಟಿ20 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಮತ್ತು ವಿಶ್ವದ ಒಂಬತ್ತನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರ ಕೀರಾನ್ ಪೊಲಾರ್ಡ್ ವಿಶ್ವದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದು, ಅವರು ಇದುವರೆಗೆ 614 ಪಂದ್ಯಗಳನ್ನು ಆಡಿದ್ದಾರೆ.

ರೋಹಿತ್ ಪುರುಷರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದು, ಇದುವರೆಗೆ 140 ಟಿ20 ಪಂದ್ಯಗಳನ್ನು ಆಡಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಎಂಎಸ್ ಧೋನಿ ಮಾತ್ರ ಟಿ20ಯಲ್ಲಿ 350ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಭಾರತೀಯ ಕ್ರಿಕೆಟಿಗರಾಗಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್ ಕಲೆಹಾಕಿತು. ರೋಹಿತ್​ ಶರ್ಮಾ 37 ಎಸೆತದಲ್ಲಿ 43 ರನ್​ ಬಾರಿಸಿ ಔಟಾದರೆ, ರಾಹುಲ್ 28 ಎಸೆತದಲ್ಲಿ 57 ರನ್​ ಗಳಿಸಿದರು. ಕೊಹ್ಲಿ – ಸೂರ್ಯಕುಮಾರ್​ ಯಾದವ್ ಶತಕದ ಜೊತೆಯಾಟ ಆಡಿದರು. ಸೂರ್ಯ 22 ಬಾಲ್​ನಲ್ಲಿ 5 ಸಿಕ್ಸರ್​ ಹಾಗೂ 5 ಬೌಂಡರಿಯಿಂದ 61 ರನ್ ​ಚಚ್ಚಿದರು. ಕೊಹ್ಲಿ 49 ರನ್​ಗಳ ಕೊಡುಗೆ ನೀಡಿದರು.

ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಸೋಲಿಗೆ ಶರಣಾಯಿತು. ಡೇವಿಡ್ ಮಿಲ್ಲರ್ ಅಜೇಯ 106 ರನ್ ಸಿಡಿಸಿದರೆ, ಡಿಕಾಕ್ ಅಜೇಯ 69 ರನ್ ಗಳಿಸಿದರು.

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ