AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಸಮಯ ಮುಗಿದ ನಂತರ ಡಿಆರ್‌ಎಸ್ ತೆಗೆದುಕೊಂಡ ರೋಹಿತ್ ಶರ್ಮಾ?: ಅಂಪೈರಿಂಗ್ ಬಗ್ಗೆ ಮತ್ತೆ ವಿವಾದ

RR vs MI, IPL 2025: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ರಿವ್ಯೂ ತೆಗೆದುಕೊಂಡ ನಂತರ, ಥರ್ಡ್ ಅಂಪೈರ್ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಬಿದ್ದಿರುವುದನ್ನು ಕಂಡುಕೊಂಡರು. ಅದಕ್ಕಾಗಿಯೇ ರೋಹಿತ್ ಔಟಾಗಲಿಲ್ಲ. ಇದಾದ ನಂತರ, ರೋಹಿತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದರು. ಅವರು ರಿಕ್ಟನ್ ಜೊತೆ 116 ರನ್‌ಗಳ ಜೊತೆಯಾಟ ಆಡಿದರು.

Rohit Sharma: ಸಮಯ ಮುಗಿದ ನಂತರ ಡಿಆರ್‌ಎಸ್ ತೆಗೆದುಕೊಂಡ ರೋಹಿತ್ ಶರ್ಮಾ?: ಅಂಪೈರಿಂಗ್ ಬಗ್ಗೆ ಮತ್ತೆ ವಿವಾದ
Rohit Sharma Drs
Vinay Bhat
|

Updated on: May 02, 2025 | 9:25 AM

Share

ಬೆಂಗಳೂರು (ಮೇ. 02): ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ (Rajasthan Royals vs Mumbai Indians) ನಡುವಿನ ಐಪಿಎಲ್ 2025 ರ ಪಂದ್ಯದಲ್ಲಿ ರೋಹಿತ್ ಶರ್ಮಾ ಡಿಆರ್​ಎಸ್ ತೆಗೆದುಕೊಂಡ ರೀತಿ ವಿವಾದಕ್ಕೆ ಕಾರಣವಾಗಿದೆ. ಪಂದ್ಯದ ವೇಳೆ ಅಂಪೈರ್ ರೋಹಿತ್‌ಗೆ ಔಟ್ ನೀಡಿದರು. ರೋಹಿತ್ ಡಿಆರ್‌ಎಸ್ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಹೇಳುವಂತೆ ರೋಹಿತ್ ಅವರು 15 ಸೆಕೆಂಡುಗಳ ನಂತರ ಡಿಆರ್‌ಎಸ್ ತೆಗೆದುಕೊಂಡರು. ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ರೋಹಿತ್ ಡಿಆರ್‌ಎಸ್ ಬಗ್ಗೆ ವಿವಾದ:

ರೋಹಿತ್ ರಿವ್ಯೂ ತೆಗೆದುಕೊಂಡ ನಂತರ, ಥರ್ಡ್ ಅಂಪೈರ್ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಬಿದ್ದಿರುವುದನ್ನು ಕಂಡುಕೊಂಡರು. ಅದಕ್ಕಾಗಿಯೇ ರೋಹಿತ್ ಔಟಾಗಲಿಲ್ಲ. ಇದಾದ ನಂತರ, ರೋಹಿತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದರು. ಅವರು ರಿಕ್ಟನ್ ಜೊತೆ 116 ರನ್‌ಗಳ ಜೊತೆಯಾಟ ಆಡಿದರು. ಈ ಪಂದ್ಯದಲ್ಲಿ ರೋಹಿತ್ ಮುಂಬೈ ಇಂಡಿಯನ್ಸ್ ಪರ 6000 ರನ್ ಗಳಿಸಿದರು. ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಫಜಲ್ಹಕ್ ಫಾರೂಕಿ ರೋಹಿತ್ ಶರ್ಮಾ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದ್ದರು. ಅಂಪೈರ್ ಔಟ್ ಕೂಡ ನೀಡಿದರು. ಈ ಸಂದರ್ಭ ರೋಹಿತ್ ಡಿಆರ್​ಎಸ್ ತೆಗೆದುಕೊಳ್ಳಲು ಸ್ವಲ್ಪ ಗೊಂದಲಕ್ಕೊಳಗಾಗಿದ್ದರು. 15 ಸೆಕೆಂಡುಗಳ ಸಮಯ ಮುಗಿಯುವುದರಲ್ಲಿತ್ತು.

ಇದನ್ನೂ ಓದಿ
Image
ಪ್ಲೇಆಫ್‌ನಿಂದ ಹೊರಬಿದ್ದ ನಂತರ ರಿಯಾನ್ ಪರಾಗ್ ನೋವಿನ ಮಾತು: ಏನು ಹೇಳಿದ್ರು?
Image
ಸಿಎಸ್​ಕೆಯಂತೆ ಲೀಗ್ ಹಂತದಲ್ಲೇ ಪ್ರಯಾಣ ಮುಗಿಸಿದ ರಾಜಸ್ಥಾನ್
Image
ಐಪಿಎಲ್​ನಿಂದ ವೇಗಿ ಸಂದೀಪ್ ಶರ್ಮಾ ಔಟ್
Image
2ನೇ ಓವರ್​ನಲ್ಲಿ ಸಿಕ್ತು ಜೀವದಾನ; ಅರ್ಧಶತಕ ಸಿಡಿಸಿದ ರೋಹಿತ್

ರೋಹಿತ್ ಡಿಆರ್‌ಎಸ್ ತೆಗೆದುಕೊಳ್ಳುವುದಿಲ್ಲ ಎಂದು ತೋರುತ್ತಿತ್ತು. ಆದರೆ, ಟೈಮರ್ ಶೂನ್ಯ ತಲುಪಿದ ತಕ್ಷಣ, ಅವರು ಡಿಆರ್‌ಎಸ್‌ಗೆ ಸಿಗ್ನಲ್ ಮಾಡಿದರು. ಸಮಯ ಮುಗಿದ ನಂತರ ಅವರು ಡಿಆರ್‌ಎಸ್ ತೆಗೆದುಕೊಂಡರು ಎಂದು ಕೆಲವರು ಹೇಳುತ್ತಿದ್ದಾರೆ. ನಂತರ ಥರ್ಡ್ ಅಂಪೈರ್ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಬಿದ್ದಿರುವುದನ್ನು ನೋಡಿ ಅಂಪೈರ್ ನಿರ್ಧಾರ ಬದಲಾಯಿಸಿ ಎಂದು ಹೇಳಿದರು.

15 ಸೆಕೆಂಡುಗಳ ನಂತರ ತೆಗೆದುಕೊಂಡ DRS:

15 ಸೆಕೆಂಡುಗಳ ನಂತರ ರೋಹಿತ್ ಡಿಆರ್‌ಎಸ್‌ಗಾಗಿ ಸಿಗ್ನಲ್ ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ. ಡಿಆರ್‌ಎಸ್ ನಿಯಮಗಳ ಪ್ರಕಾರ, ಆಟಗಾರರು 15 ಸೆಕೆಂಡುಗಳ ಒಳಗೆ ಡಿಆರ್‌ಎಸ್ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದೀಗ ಅಂಪೈರ್ ನಿರ್ಧಾರ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ರೋಹಿತ್ ಶರ್ಮಾ ತನಗೆ ಸಿಕ್ಕಿ ಅವಕಾಶವನ್ನು ಸಂಪೂರ್ಣ ಲಾಭ ಪಡೆದುಕೊಂಡು 36 ಎಸೆತಗಳಲ್ಲಿ 53 ರನ್ ಗಳಿಸಿದರು.

RR vs MI, IPL 2025: ಪ್ಲೇಆಫ್‌ನಿಂದ ಹೊರಬಿದ್ದ ನಂತರ ರಿಯಾನ್ ಪರಾಗ್ ನೋವಿನ ಮಾತು: ಏನು ಹೇಳಿದ್ರು?

ನಿರ್ಧಾರದ ಬಗ್ಗೆ ಉದ್ಭವಿಸುವ ಪ್ರಶ್ನೆ:

ರೋಹಿತ್ ಶರ್ಮಾ ಡಿಆರ್‌ಎಸ್ ತೆಗೆದುಕೊಂಡ ರೀತಿ ಬಗ್ಗೆ ಜನರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರು ಸಮಯಕ್ಕೆ ಸರಿಯಾಗಿ ಡಿಆರ್‌ಎಸ್ ತೆಗೆದುಕೊಳ್ಳಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಅಂಪೈರ್ ನಿರ್ಧಾರ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ. ಈ ಘಟನೆಯು ಐಪಿಎಲ್‌ನಲ್ಲಿ ಡಿಆರ್‌ಎಸ್ ನಿಯಮಗಳ ಬಗ್ಗೆ ಮತ್ತೆ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!