IND vs AUS: ‘ಹೌದು ನನ್ನದೇ ತಪ್ಪು’; ಬುಮ್ರಾ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್

India vs Australia Test Series: ಸಿಡ್ನಿ ಟೆಸ್ಟ್ ಪಂದ್ಯದವೇಳೆ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ವಾಗ್ವಾದ ನಡೆಸಿದ ಘಟನೆಯ ಬಗ್ಗೆ ಸ್ಯಾಮ್ ಕೊನ್​ಸ್ಟಾಸ್ ವಿವರಣೆ ನೀಡಿದ್ದಾರೆ. ಇದರಲ್ಲಿ ನನ್ನದೇ ತಪ್ಪು. ಖವಾಜಾ ಸ್ಟ್ರೈಕ್ ತೆಗೆದುಕೊಳ್ಳಲು ತಡ ಮಾಡಿದಾಗ ಬುಮ್ರಾ ಅವರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿ ನಾನು ಮಾತಿಗಿಳಿದೆ ಎಂದು ಕೊನ್​ಸ್ಟಾಸ್ ಹೇಳಿದ್ದಾರೆ. ಆದರೆ ಬುಮ್ರಾ ಅವರ ಬೌಲಿಂಗ್ ಕೌಶಲ್ಯವನ್ನು ಹೊಗಳಿರುವ ಕೊನ್​ಸ್ಟಾಸ್, ಬುಮ್ರಾ ವಿಶ್ವ ದರ್ಜೆಯ ಆಟಗಾರ ಎಂದು ಬಣ್ಣಿಸಿದ್ದಾರೆ.

IND vs AUS: ‘ಹೌದು ನನ್ನದೇ ತಪ್ಪು’; ಬುಮ್ರಾ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಸ್ಯಾಮ್ ಕೊನ್​ಸ್ಟಾಸ್, ಜಸ್ಪ್ರೀತ್ ಬುಮ್ರಾ
Follow us
ಪೃಥ್ವಿಶಂಕರ
|

Updated on:Jan 08, 2025 | 6:05 PM

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಅಂತ್ಯಗೊಂಡಿದೆ. ಸರಣಿಯ ಫಲಿತಾಂಶ ಭಾರತದ ಪರವಾಗಿಲ್ಲದಿದ್ದರೂ, ಈ ಸರಣಿ ಸೋಲಿನಿಂದ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಭಾರತ ಸರಣಿ ಸೋತಿತ್ತಾದರೂ, ಪಂದ್ಯದ ವೇಳೆ ಬೇಕಂತಲೇ ಆಟಗಾರರನ್ನು ಕೆಣಕುತ್ತಿದ್ದ ಆಸೀಸ್ ಆಟಗಾರರಿಗೆ ಹಾಗೂ ಆಸೀಸ್ ಅಭಿಮಾನಿಗಳಿಗೆ ಸರಿಯಾಗಿ ತಿರುಗೇಟು ನೀಡಿತ್ತು. ಈ ಸರಣಿಯಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಸಾಕಷ್ಟು ಬಾರಿ ಮಾತಿನ ಚಕಮಕಿಯೂ ನಡೆದಿತ್ತು. ಅದರಲ್ಲಿ ಪ್ರಮುಖವಾದದ್ದು, ಜಸ್ಪ್ರೀತ್ ಬುಮ್ರಾ ಜೊತೆಗೆ ಆಸೀಸ್ ಯುವ ಆಟಗಾರ ಸ್ಯಾಮ್ ಕೊನ್​ಸ್ಟಾಸ್ ಕಾರಣವಿಲ್ಲದೆ ಕಾಲ್ಕೆರದು ಜಗಳ ಮಾಡಿದ್ದರು. ಇದೀಗ ಸರಣಿ ಮುಗಿದ ಬಳಿಕ ಕೊನ್​ಸ್ಟಾಸ್ ತಾನು ಹಾಗೆ ಮಾಡಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

ಘಟನೆಯ ವಿವರ ಹೀಗಿದೆ

ವಾಸ್ತವವಾಗಿ ಸಿಡ್ನಿ ಟೆಸ್ಟ್​ನ ಮೊದಲನೇ ದಿನದಾಟದ ಕೊನೆಯ ಸೆಷನ್​ನಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾವನ್ನು ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿತ್ತು. ದಿನದಾಟ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಆಸೀಸ್ ಪರ ಖವಾಜಾ ಹಾಗೂ ಕೊನ್​ಸ್ಟಾಸ್ ಇನ್ನಿಂಗ್ಸ್ ಆರಂಭಿಸಿದ್ದರು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಖವಾಜಾಗೆ ಬೌಲಿಂಗ್ ಮಾಡುವ ಜವಬ್ದಾರಿಯನ್ನು ಬುಮ್ರಾ ಹೊತ್ತಿದ್ದರು. ಆದರೆ ಸ್ಟ್ರೈಕ್ ತೆಗೆದುಕೊಳ್ಳಲು ಖವಾಜಾ ತಡ ಮಾಡಿದಕ್ಕೆ ಸಿಡಿಮಿಡಿಗೊಂಡ ಬುಮ್ರಾ, ಬೇಗ ಸ್ಟ್ರೈಕ್ ತೆಗೆದುಕೊಳ್ಳುವಂತೆ ಖವಾಜಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಈ ವೇಳೆ ನಾನ್​ ಸ್ಟ್ರೈಕ್​ನಲ್ಲಿದ್ದ ಕೊನ್​ಸ್ಟಾಸ್ ಸುಮ್ಮನಿರದೆ ಬುಮ್ರಾ ಜೊತೆ ಮಾತಿನ ಚಕಮಕಿಗೆ ಮುಂದಾದರು. ಇದನ್ನು ನೋಡಿದ ಬುಮ್ರಾ ಕೂಡ ಕೊನ್​ಸ್ಟಾಸ್ ವಿರುದ್ಧ ಗರಂ ಆದರು. ಈ ವೇಳೆಗೆ ಮಧ್ಯ ಪ್ರವೇಶಿಸಿದ ಅಂಪೈರ್​ಗಳು ವಾತಾವರಣನ್ನು ತಿಳಿಗೊಳಿಸಿ ಮತ್ತೆ ಆಟವನ್ನು ಆರಂಭಿಸಿದರು. ಆದರೆ ಅದೇ ಓವರ್​ನಲ್ಲಿ ಖವಾಜಾ ಅವರ ವಿಕೆಟ್ ಉರುಳಿಸುವ ಮೂಲಕ ಬುಮ್ರಾ, ಕೊನ್​ಸ್ಟಾಸ್​ಗೆ ತಿರುಗೇಟು ನೀಡಿದ್ದರು. ಈ ಘಟನೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಎಲ್ಲರೂ ಕೊನ್​ಸ್ಟಾಸ್ ನಡೆಯನ್ನು ವಿರೋಧಿಸಿದ್ದರು. ಯುವ ಕ್ರಿಕೆಟಿಗ ಈ ರೀತಿ ವರ್ತಿಸುವುದು ಸರಿ ಇಲ್ಲ ಎಂದಿದ್ದರು.

ಕೊನ್​ಸ್ಟಾಸ್ ನೀಡಿದ ಕಾರಣವಿದು

ಇದೀಗ ತಾನು ಹಾಗೆ ಮಾಡಲು ಕಾರಣ ಏನು ಎಂಬುದನ್ನು ಕೊನ್​ಸ್ಟಾಸ್ ವಿವರಿಸಿದ್ದಾರೆ. ‘ದಿ ಡೈಲಿ ಟೆಲಿಗ್ರಾಫ್’ ಜೊತೆ ಮಾತನಾಡಿದ ಸ್ಯಾಮ್ ಕೊನ್​ಸ್ಟಾಸ್, ‘ ಖವಾಜಾ ಸ್ಟ್ರೈಕ್ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಬುಮ್ರಾ ಅವರು ಸಿಡಿಮಿಡಿಗೊಂಡ ಕಾರಣ ನಾನು ಖವಾಜಾ ಪರ ನಿಂತು ಬುಮ್ರಾ ಬಳಿ ಮಾತಿನ ಚಕಮಕಿ ನಡೆಸಿದೆ. ಹೌದು ಆ ಇಡೀ ಘಟನೆಯಲ್ಲಿ ನನ್ನದೇ ತಪ್ಪು ಎಂದು ಕೊನ್​ಸ್ಟಾಸ್ ಹೇಳಿದ್ದಾರೆ. ಇದರ ಜೊತೆಗೆ ಬುಮ್ರಾ ಪ್ರದರ್ಶನವನ್ನು ಹೊಗಳಿದ ಕೊನ್​ಸ್ಟಾಸ್,  ಇದೆಲ್ಲದರ ಹೊರತಾಗಿ ಓವರ್​ನ ಕೊನೆಯಲ್ಲಿ ಖವಾಜಾ ಅವರ ವಿಕೆಟ್ ಉರುಳಿಸುವ ಮೂಲಕ ಬುಮ್ರಾ ಮೇಲುಗೈ ಸಾಧಿಸಿದರು. ನಿಸ್ಸಂಶಯವಾಗಿ ಬುಮ್ರಾ ವಿಶ್ವ ದರ್ಜೆಯ ಆಟಗಾರ. ಹೀಗಾಗಿ ಅವರು ಸರಣಿಯಲ್ಲಿ 32 ವಿಕೆಟ್​ಗಳನ್ನು ಪಡೆದರು. ಅಂತಿಮವಾಗಿ ಕ್ರಿಕೆಟ್​ನಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಕೆಲಸವನ್ನು ಕೊನ್​ಸ್ಟಾಸ್ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Wed, 8 January 25

ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ