AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shane Warne: ಸ್ಪಿನ್ ದಿಗ್ಗಜರ ಶೇನ್ ವಾರ್ನ್ ಸಾವಿಗೆ ಮುಳುವಾಯಿತೇ ಈ ಒಂದು ಕಾರಣ?

ವಾರ್ನ್ ಸಾವಿಗೆ ಅವರ ಅತಿಯಾದ ಡಯಟ್ (Diet) ಕೂಡಾ ಕಾರಣ ಎನ್ನಲಾಗಿದೆ. ವಾರ್ನ್ ಅವರು ಇತ್ತೀಚೆಗೆ ತಮ್ಮ ತೂಕ ಇಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಲಿಕ್ವಿಡ್ ಡಯಟ್ ಮೊರೆ ಹೋಗಿದ್ದರು. ಈ ಬಗ್ಗೆ ವಾರ್ನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

Shane Warne: ಸ್ಪಿನ್ ದಿಗ್ಗಜರ ಶೇನ್ ವಾರ್ನ್ ಸಾವಿಗೆ ಮುಳುವಾಯಿತೇ ಈ ಒಂದು ಕಾರಣ?
Shane Warne
TV9 Web
| Edited By: |

Updated on: Mar 13, 2022 | 10:18 AM

Share

ಆಸ್ಟ್ರೇಲಿಯಾದ (Australia) ಸ್ಪಿನ್ ದಿಗ್ಗಜ ಶೇನ್ ವಾರ್ನ್ (Shane Warne) ಥಾಯ್ಲೆಂಡ್‌ಗೆ ರಜಾದಿನಗಳನ್ನು ಕಳೆಯಲು ಸ್ನೇಹಿತರೊಂದಿಗೆ ಹೋಗಿದ್ದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದು ಕ್ರಿಕೆಟ್ ಜಗತ್ತಿಗೆ ಬಹುದೊಡ್ಡ ಆಘಾತ ನೀಡಿತ್ತು. ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನ ತನ್ನ ಸ್ಪಿನ್ ಮಾಂತ್ರಿಕತೆಯ ಮೂಲಕ ಪೆವಿಲಿಯನ್‌ಗೆ ಅಟ್ಟುತ್ತಿದ್ದ ಶೇನ್ ವಾರ್ನ್ 52ನೇ ವಯಸ್ಸಿನಲ್ಲಿ ಇಹಲೋಹ ತ್ಯಜಿಸಿದರು. ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಶೇನ್ ವಾರ್ನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಆದರೆ ವಾರ್ನ್ ಸಾವಿಗೆ ಅವರ ಅತಿಯಾದ ಡಯಟ್ (Diet) ಕೂಡಾ ಕಾರಣ ಎನ್ನಲಾಗಿದೆ. ವಾರ್ನ್ ಅವರು ಇತ್ತೀಚೆಗೆ ತಮ್ಮ ತೂಕ ಇಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಲಿಕ್ವಿಡ್ ಡಯಟ್ ಮೊರೆ ಹೋಗಿದ್ದರು. ಈ ಬಗ್ಗೆ ವಾರ್ನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. “ಆಪರೇಷನ್ ಷ್ರೆಡ್ ಪ್ರಾರಂಭವಾಗಿದೆ (10 ದಿನಗಳಲ್ಲಿ) ಜುಲೈ ವೇಳೆಗೆ ಕೆಲವು ವರ್ಷಗಳ ಹಿಂದಿನ ಈ ಆಕಾರಕ್ಕೆ ಮರಳುವುದು ನನ್ನ ಗುರಿ” ಎಂದು ಟ್ವೀಟ್‌ನಲ್ಲಿ ಹೇಳಿದ್ದರು.

ಇದೀಗ ಸಾವಿಗೂ ಮುನ್ನ 2 ವಾರ ವಿಶೇಷ ಡಯೆಟ್‌ನಲ್ಲಿದ್ದ ವಾರ್ನ್‌ ಸಣ್ಣ ಆಗುವ ಭರದಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಅವರ ವ್ಯವಸ್ಥಾಪಕ ಜೇಮ್ಸ್‌ ಎಸ್ಕ್ರೀನ್‌, ‘2 ವಾರ ಡಯೆಟ್‌ನಲ್ಲಿದ್ದ ವಾರ್ನ್‌ ಈ ವೇಳೆ ಕೇವಲ ದ್ರವ ಮಾತ್ರ ಸೇವನೆ ಮಾಡುತ್ತಿದ್ದರು. ಇದಕ್ಕೂ ಮೊದಲು ಅದೇ ರೀತಿ ಅವರು 3-4 ಬಾರಿ ಮಾಡಿದ್ದಾರೆ. ಸಾಯುವ ಕೆಲ ದಿನಗಳ ಹಿಂದೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅತಿಯಾಗಿ ಬೆವರುತ್ತಿರುವುದಾಗಿ ಹೇಳಿಕೊಂಡಿದ್ದರು’ ಎಂದಿದ್ದಾರೆ. ಹಿಂದೆಯೂ 3-4 ಬಾರಿ ಇಂಥದ್ದೇ ಡಯೆಟ್ ಮಾಡಿದ್ದರು. ಬೆಣ್ಣೆ ಸಹಿತ ಬನ್ ಮತ್ತು ಜ್ಯೂಸ್‌ಗಳನ್ನು ಮಾತ್ರ ಸೇವಿಸುತ್ತಿದ್ದರು. ಜತೆಗೆ ಸಾಕಷ್ಟು ಸಿಗರೇಟ್‌ಗಳನ್ನು ಸೇದುತ್ತಿದ್ದರು.

ಮೊದಲು ಶೇನ್ ವಾರ್ನ್‌ಗೆ ಅತಿಯಾಗಿ ತಿನ್ನುವ ಅಭ್ಯಾಸವಿತ್ತು. ವಿಭಿನ್ನ ಆಹಾರಗಳನ್ನು ಇಷ್ಟಪಡುತ್ತಿದ್ದ ವಾರ್ನ್, ತನ್ನ ಹೆಚ್ಚಿನ ಪ್ರಯಾಣಗಳಲ್ಲಿ ಆಹಾರದ ಮೇಲೆ ಕೇಂದ್ರೀಕರಿಸಿದನು. ಇದರೊಂದಿಗೆ ಅವರ ದೇಹದ ತೂಕ ಹೆಚ್ಚಾಯಿತು. ಅದನ್ನು ನಿಯಂತ್ರಿಸಲು ಶೇನ್ ವಾನ್ ಇಂತಹ ಅತಿಯಾದ ಡಯಟ್ ಮಾಡಿದ್ದು, ಅವರ ಸಾವಿಗೆ ಕಾರಣವಾಗಿದೆ. ವಾರ್ನ್ ತಮ್ಮ ತೂಕ ಇಳಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಲಿಕ್ವಿಡ್ ಡಯಟ್ ಯಾವುದು?:

ಶೇನ್ ವಾರ್ನ್ ಅವರ ಮ್ಯಾನೇಜರ್ ಪ್ರಕಾರ, ಅವರು 14 ದಿನಗಳ ದ್ರವ ಆಹಾರದಲ್ಲಿದ್ದರು. ಅದು ಕೇವಲ ದ್ರವಗಳನ್ನು ಒಳಗೊಂಡಿತ್ತು ಮತ್ತು ಯಾವುದೇ ಘನ ಆಹಾರವಿರಲಿಲ್ಲ. ಅವರು ನಿಧನ ಹೊಂದಿದ ವಾರ ವಾರ್ನ್ ವಿಪರೀತ ಬೆವರುತ್ತಿದ್ದರು. ದ್ರವ ಆಹಾರಗಳು ದೇಹದಲ್ಲಿ ಕ್ಯಾಲೋರಿ ಕೊರತೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿದ್ದು, ಅದು ಹೆಚ್ಚುವರಿ ಕೊಬ್ಬನ್ನು ಸೇವಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ. ಕೇವಲ ದ್ರವ ಆಹಾರಗಳ ಗುರಿ ಎಂದರೆ, ದೇಹದಲ್ಲಿ ಮತ್ತೆ ಕ್ಯಾಲೊರಿ ಸೇರದಂತೆ ತಡೆಗಟ್ಟುವುದು. ಕೇವಲ ವಿಟಮಿನ್‌ ನಂಥ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಹಾಗೂ ಅನಗತ್ಯ ಕಾರ್ಬೋ ಇತ್ಯಾದಿಗಳು ದೇಹಕ್ಕೆ ಹೋಗದಂತೆ ಈ ಡಯಟ್ ನೋಡಿಕೊಳ್ಳುತ್ತದೆ. ಅಂದರೆ ಒಂದು ಹಂತದ ಕ್ಯಾಲೋರಿ ಕೊರತೆಯನ್ನು ಉಂಟುಮಾಡುತ್ತದೆ. ಹೆಚ್ಚಾಗಿ ಜ್ಯೂಸ್, ಕಪ್ಪು ಮತ್ತು ಹಸಿರು ರಸ, ಕೆಲವೊಮ್ಮೆ ಬೆಣ್ಣೆ ಮತ್ತು ಲಸಾಂಜ ಸೇರಿಸಿದ ಬಿಳಿ ಬನ್‌ಗಳನ್ನು ವಾರ್ನ್ ತೆಗೆದುಕೊಳ್ಳುತ್ತಿದ್ದರು. ಶೇನ್ ತಮ್ಮ ಜೀವನದ ಬಹುಪಾಲು ಧೂಮಪಾನ ಮಾಡಿದ್ದರು. ಆದರೆ ಲಿಕ್ವಿಡ್ ಡಯಟ್‌ನ ಸಂದರ್ಭದಲ್ಲಿ ಅದನ್ನು ಬಿಟ್ಟಿದ್ದರೋ ಇಲ್ಲವೋ ತಿಳಿಯದು ಎಂದು ಹೇಳಿದ್ದಾರೆ.

Virat Kohli: ಟೀಮ್ ಇಂಡಿಯಾ ಜೆರ್ಸಿ ಒಳಗಡೆ ಆರ್​​ಸಿಬಿ ಜೆರ್ಸಿ ತೊಟ್ಟ ವಿರಾಟ್ ಕೊಹ್ಲಿ?: ವಿಡಿಯೋ ವೈರಲ್

Shreyas Iyer: ಅನುಭವಿಗಳ ವೈಫಲ್ಯ: ಅಬ್ಬರಿಸಿದ್ದು ಮಾತ್ರ 4ನೇ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಅಯ್ಯರ್

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?