AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SMAT 2022-23: ಕರ್ನಾಟಕ ಟಿ20 ಟೀಮ್ ಪ್ರಕಟ: ತಂಡಕ್ಕೆ ಹೊಸ ನಾಯಕ ಆಯ್ಕೆ

Syed Mushtaq Ali Trophy 2022: ಈ ಬಾರಿಯ ಟೂರ್ನಿಯನ್ನು ಐದು ವಿಭಿನ್ನ ಎಲೈಟ್ ಗುಂಪುಗಳ ಮೂಲಕ ಆಡಿಸಲಾಗುತ್ತದೆ. ಇಲ್ಲಿ A, B ಮತ್ತು C ಗುಂಪುಗಳಲ್ಲಿ ಎಂಟು ತಂಡಗಳು ಮತ್ತು E ಮತ್ತು F ಗುಂಪುಗಳಲ್ಲಿ ಏಳು ತಂಡಗಳು ಇರಲಿದೆ.

SMAT 2022-23: ಕರ್ನಾಟಕ ಟಿ20 ಟೀಮ್ ಪ್ರಕಟ: ತಂಡಕ್ಕೆ ಹೊಸ ನಾಯಕ ಆಯ್ಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 08, 2022 | 4:00 PM

Share

Syed Mushtaq Ali Trophy 2022: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23 (SMAT 2022) ಟಿ20 ಟೂರ್ನಿಗಾಗಿ ಕರ್ನಾಟಕ ತಂಡವನ್ನು (Karnataka Squad) ಪ್ರಕಟಿಸಲಾಗಿದೆ. ಈ ಬಾರಿ ತಂಡದ ನಾಯಕನಾಗಿ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಆಯ್ಕೆ ಮಾಡಲಾಗಿದೆ. ಇದಾಗ್ಯೂ ಮಾಜಿ ನಾಯಕ ಮನೀಷ್ ಪಾಂಡೆ (Manish Pandey) ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ತಂಡದಲ್ಲಿ ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್ ಸೇರಿದಂತೆ ಪ್ರಮುಖ ಆಟಗಾರರ ದಂಡೇ ಇದೆ. ಹಾಗೆಯೇ ಕರ್ನಾಟಕ ತಂಡವು ತನ್ನ ಮೊದಲ ಸುತ್ತಿನ ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ.

ಈ ಬಾರಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯು ಅಕ್ಟೋಬರ್ 11 ರಿಂದ ಶುರುವಾಗಲಿದೆ. ಭಾರತದ ಆರು ನಗರಗಳಲ್ಲಿ ಟೂರ್ನಿ ನಡೆಯಲಿದೆ. ಅದರಂತೆ ರಾಜ್​ಕೋಟ್, ಮೊಹಾಲಿ, ಜೈಪುರ್, ಇಂದೋರ್, ಲಕ್ನೋ ನಗರಗಳಲ್ಲಿ ಮೊದಲ ಸುತ್ತಿನ ಪಂದ್ಯಗಳು ನಡೆಯಲಿವೆ. ಇನ್ನು ನಾಕೌಟ್ ಹಂತದ ಎಲ್ಲಾ ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಜರುಗಲಿದೆ. ಹಾಗೆಯೇ ನವೆಂಬರ್ 5 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೂ ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯವಹಿಸಲಿದೆ.

ಒಟ್ಟು 38 ತಂಡಗಳು:

ಇದನ್ನೂ ಓದಿ
Image
Anna Rajan: ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ..!
Image
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Image
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Image
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಈ ಬಾರಿಯ ಟೂರ್ನಿಯನ್ನು ಐದು ವಿಭಿನ್ನ ಎಲೈಟ್ ಗುಂಪುಗಳ ಮೂಲಕ ಆಡಿಸಲಾಗುತ್ತದೆ. ಇಲ್ಲಿ A, B ಮತ್ತು C ಗುಂಪುಗಳಲ್ಲಿ ಎಂಟು ತಂಡಗಳು ಮತ್ತು E ಮತ್ತು F ಗುಂಪುಗಳಲ್ಲಿ ಏಳು ತಂಡಗಳು ಇರಲಿದೆ. ಅದರಂತೆ ಐದು ಗ್ರೂಪ್​ಗಳ ಮೂಲಕ ಮೊದಲ ಸುತ್ತಿನಲ್ಲಿ ಒಟ್ಟು 38 ತಂಡಗಳು ಸೆಣಸಲಿದೆ.

ಗ್ರೂಪ್​ಗಳ ವಿವರಗಳು:

ಎಲೈಟ್-A (ರಾಜ್‌ಕೋಟ್)

  1. ಅಸ್ಸಾಂ
  2. ಮಧ್ಯಪ್ರದೇಶ
  3. ಮಿಜೋರಾಂ
  4. ಮುಂಬೈ
  5. ರೈಲ್ವೆ ತಂಡ
  6. ರಾಜಸ್ಥಾನ
  7. ಉತ್ತರಾಖಂಡ
  8. ವಿದರ್ಭ

ಎಲೈಟ್-B (ಜೈಪುರ)

  1. ದೆಹಲಿ
  2. ಗೋವಾ
  3. ಹೈದರಾಬಾದ್
  4. ಮಣಿಪುರ
  5. ಪುದುಚೇರಿ
  6. ಪಂಜಾಬ್
  7. ತ್ರಿಪುರ
  8. ಉತ್ತರ ಪ್ರದೇಶ

ಎಲೈಟ್-C (ಮೊಹಾಲಿ)

  1. ಅರುಣಾಚಲ ಪ್ರದೇಶ
  2. ಹರ್ಯಾಣ
  3. ಜಮ್ಮು ಮತ್ತು ಕಾಶ್ಮೀರ
  4. ಕರ್ನಾಟಕ
  5. ಕೇರಳ
  6. ಮಹಾರಾಷ್ಟ್ರ
  7. ಮೇಘಾಲಯ
  8. ಸರ್ವೀಸಸ್ ತಂಡ

ಎಲೈಟ್-D (ಇಂದೋರ್)

  1. ಆಂಧ್ರ ಪ್ರದೇಶ
  2. ಬರೋಡಾ
  3. ಬಿಹಾರ
  4. ಗುಜರಾತ್
  5. ಹಿಮಾಚಲ ಪ್ರದೇಶ
  6. ನಾಗಾಲ್ಯಾಂಡ್
  7. ಸೌರಾಷ್ಟ್ರ

ಎಲೈಟ್-E (ಲಕ್ನೋ)

  1. ಬಂಗಾಳ
  2. ಚಂಡೀಗಢ
  3. ಛತ್ತೀಸ್‌ಗಢ
  4. ಜಾರ್ಖಂಡ್
  5. ಒಡಿಶಾ
  6. ಸಿಕ್ಕಿಂ
  7. ತಮಿಳುನಾಡು

ಕರ್ನಾಟಕ ಟಿ20 ತಂಡ ಹೀಗಿದೆ: ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಚೇತನ್ ಎಲ್ಆರ್, ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಲುವ್​ನೀತ್ ಸಿಸೋಡಿಯಾ, ಶರತ್ ಬಿಆರ್, ಕೌಶಿಕ್ ವಿ, ವೈಶಾಕ್ ವಿ, ಕಾವೇರಪ್ಪ, ವೆಂಕಟೇಶ್ ಎಂ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ