AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಓರೆ ಕಣ್ಣಿನಲ್ಲಿ ಪಾಕಿಸ್ತಾನ ವಿಕೆಟ್ ಕೀಪರ್​ನ ಕುತಂತ್ರ ಅರಿತ ವಿರಾಟ್ ಕೊಹ್ಲಿ: ಏನು ಮಾಡಿದರು ಗೊತ್ತೇ?

Asia Cup 2022, IND vs PAK: ವಿರಾಟ್ ಕೊಹ್ಲಿಯ ವಿಕೆಟ್ ಉರುಳಿಸಲು ಪಾಕ್ ಆಟಗಾರರು ಮಾಡಿದ ರಣತಂತ್ರ ಅಷ್ಟಿಟ್ಟಲ್ಲ. ಮೊಹಮ್ಮದ್ ನವಾಜ್ ಕೊಹ್ಲಿಯನ್ನು ಪೆವಿಲಿಯನ್​ಗೆ ಅಟ್ಟಲು ಕೆಲ ಟ್ರಿಕ್ಸ್ ಉಪಯೋಗಿಸಿದರು. ಇದಕ್ಕೆ ಮೊಹಮ್ಮದ್ ರಿಜ್ವಾನ್ ಕೂಡ ಸಾಥ್ ನೀಡಿದರು.

Virat Kohli: ಓರೆ ಕಣ್ಣಿನಲ್ಲಿ ಪಾಕಿಸ್ತಾನ ವಿಕೆಟ್ ಕೀಪರ್​ನ ಕುತಂತ್ರ ಅರಿತ ವಿರಾಟ್ ಕೊಹ್ಲಿ: ಏನು ಮಾಡಿದರು ಗೊತ್ತೇ?
Virat Kohli IND vs PAK Asia Cup 2022
TV9 Web
| Updated By: Vinay Bhat|

Updated on:Sep 05, 2022 | 11:42 AM

Share

ಏಷ್ಯಾಕಪ್ 2022ರ (Asia Cup 2022) ಲೀಗ್ ಹಂತದ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್ 4ಗೆ ಲಗ್ಗೆಯಿಟ್ಟಿದ್ದ ಭಾರತಕ್ಕೆ ಮೊದಲ ಮ್ಯಾಚ್​ನಲ್ಲೇ ಶಾಕ್ ಆಗಿದೆ. ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ (India vs Pakistan) ಕೆಲ ತಪ್ಪುಗಳನ್ನು ಎಸಗಿ ಅಂತಿಮ ಹಂತದಲ್ಲಿ ಸೋಲು ಕಾಣಬೇಕಾಯಿತು. ಇದೀಗ ರೋಹಿತ್ ಪಡೆಯ ಫೈನಲ್ ಹಾದಿ ಕಠಿಣವಾಗಿದ್ದು, ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲ ಬೇಕಾದ ಒತ್ತಡದಲ್ಲಿದೆ. ಪಾಕ್ ಪರ ವಿರಾಟ್ ಕೊಹ್ಲಿ (Virat Kohli) ಮಾತ್ರ ಕೊನೆಯ ವರೆಗೂ ನಿಂತು ತಂಡದ ಮೊತ್ತ ಹೆಚ್ಚಿಸಲು ನೆರವಾದರು. ರೋಹಿತ್ರಾಹುಲ್ ನಿರ್ಗಮನದ ಬಳಿಕ ಕುಸಿತ ಕಂಡ ಭಾರತಕ್ಕೆ ಕೊಹ್ಲಿ ಬೆನ್ನೆಲುಬಾಗಿ ನಿಂತರು. 44 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸರ್ ಬಾರಿಸಿ 60 ರನ್​ಗಳ ಕೊಡುಗೆ ನೀಡಿದರು.

ವಿರಾಟ್ ಕೊಹ್ಲಿಯ ವಿಕೆಟ್ ಉರುಳಿಸಲು ಪಾಕ್ ಆಟಗಾರರು ಮಾಡಿದ ರಣತಂತ್ರ ಅಷ್ಟಿಟ್ಟಲ್ಲ. ಆದರೆ, ಅದು ಯಾವುದೂ ಯಶಸ್ಸಿಯಾಗಲಿಲ್ಲ. ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಕೊಹ್ಲಿ ಒಂದು ಕ್ಷಣ ಕೂಡ ಮೈಮರೆಯಲಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಾಕಿಸ್ತಾನ ಆಟಗಾರರು ಕುತಂತ್ರ ರೂಪಿಸಿದರೂ ಅದನ್ನು ಅರಿತ ಕೊಹ್ಲಿ ಎದುರಾಳಿಗೆ ಸರಿಯಾಗಿ ಚಳ್ಳೆ ಹಣ್ಣು ತಿನ್ನಿಸಿದರು.

ಇದನ್ನೂ ಓದಿ
Image
Virat Kohli: ನನ್ನ ನಂಬರ್ ಅನೇಕರಲ್ಲಿದೆ, ಆದ್ರೆ ಮೆಸೇಜ್ ಮಾಡಿದ್ದು ಧೋನಿ ಮಾತ್ರ: ಕೊಹ್ಲಿ ಶಾಕಿಂಗ್ ಹೇಳಿಕೆ
Image
Rohit Sharma: ತನ್ನದೇ ತಂಡದ ಆಟಗಾರನ ವಿರುದ್ಧ ರೊಚ್ಚಿಗೆದ್ದ ರೋಹಿತ್ ಶರ್ಮಾ: ಸೋತ ಬಳಿಕ ಏನಂದ್ರು ಗೊತ್ತೇ?
Image
IND vs PAK: ಪಂದ್ಯದ ಮಧ್ಯೆ ಸೂರ್ಯಕುಮಾರ್ ಜೊತೆ ಜಗಳಕ್ಕಿಳಿದ ರಿಜ್ವಾನ್, ಶದಾಬ್: ಮುಂದೇನಾಯ್ತು?
Image
Virat Kohli: ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ ತಕ್ಷಣ ಸ್ಟೇಡಿಯಂನಲ್ಲಿ ಫ್ಯಾನ್ಸ್ ಏನು ಮಾಡಿದ್ರು ನೋಡಿ

ಭಾರತ ಬ್ಯಾಟಿಂಗ್ ಇನ್ನಿಂಗ್ಸ್​ನ 8ನೇ ಓವರ್ ಬೌಲಿಂಗ್ ಮಾಡಲು ಬಂದ ಮೊಹಮ್ಮದ್ ನವಾಜ್ ಕೊಹ್ಲಿಯನ್ನು ಹೇಗಾದರು ಮಾಡಿ ಪೆವಿಲಿಯನ್​ಗೆ ಅಟ್ಟಬೇಕೆಂದು ಕೆಲ ಟ್ರಿಕ್ಸ್ ಉಪಯೋಗಿಸಿದರು. ಇದಕ್ಕೆ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೂಡ ಸಾಥ್ ನೀಡಿದರು. 8ನೇ ಓವರ್​ನಲ್ಲಿ ಕೊಹ್ಲಿ ಫೀಲ್ಡ್ ನೋಡಿ ಬ್ಯಾಟ್ ಬೀಸಲು ಸಿದ್ಧರಾದರು. ಅತ್ತ ನವಾಜ್ ಬೌಲಿಂಗ್​ಗೆ ಎಂದು ಓಡಿ ಬರಲು ಶುರು ಮಾಡಿದರು. ಕೊಹ್ಲಿ ಸಂಪೂರ್ಣವಾಗಿ ತನ್ನ ಏಕಾಗ್ರತೆಯನ್ನು ಚೆಂಡನ್ನು ನೋಡುವುದರಲ್ಲಿದ್ದರು.

ಕೊಹ್ಲಿ ಚೆಂಡನ್ನು ಎದುರಿಸಲು ಸಿದ್ಧರಾದರು ಎಂಬುವ ಹೊತ್ತಿಗೆ ವಿಕೆಟ್ ಹಿಂಭಾಗದಲ್ಲಿದ್ದ ಕೀಪರ್ ರಿಜ್ವಾನ್ ಯಾರಿಗೂ ತಿಳಿಯದಂತೆ ಫೀಲ್ಡ್​ನಲ್ಲಿ ಕೊಂಚ ಬದಲಾವಣೆ ಮಾಡಿದರು. ಆದರೆ, ಈ ಕುತಂತ್ರವನ್ನು ಅರಿತ ಕೊಹ್ಲಿ ಚೆಂಡನ್ನು ನೋಡುವ ಜೊತೆಗೆ ಓರೆ ಕಣ್ಣಿನಲ್ಲಿ ಫೀಲ್ಡ್​ನಲ್ಲಿ ಬದಲಾವಣೆ ಮಾಡಿರುವುದನ್ನೂ ಗಮನಿಸಿದ್ದಾರೆ. ಕೊಹ್ಲಿ ಅವರು ಈರೀತಿ ಓರೆ ಕಣ್ಣಿನಲ್ಲಿ ನೋಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳಂತು ಪಂದ್ಯದ ಮಧ್ಯೆ ಕೊಹ್ಲಿಯ ಏಕಾಗ್ರತೆ ಕಂಡು ದಂಗಾಗಿದ್ದಾರೆ.

ಸತತವಾಗಿ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಕೊಹ್ಲಿ ಈಗ ಏಷ್ಯಾಕಪ್​ನಲ್ಲಿ ರನ್ ಮಳೆ ಸುರಿಸುತ್ತಿದ್ದಾರೆ. ಕೊಹ್ಲಿ 2.0 ಯುಗ ಈಗ ಶುರುವಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಸದ್ಯ ಸಾಗುತ್ತಿರುವ ಏಷ್ಯಾಕಪ್​ನಲ್ಲಿ ಬೊಂಬಾಟ್ ಪ್ರದರ್ಶನ ತೋರುತ್ತಿರುವ ವಿರಾಟ್ ಆಡಿದ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸೋತಿತಾದರೂ ಕೊಹ್ಲಿ ಆಡಿದ ಆಟ ಎಲ್ಲರ ಗಮನ ಸೆಳೆಯಿತು. 60 ರನ್ ಬಾರಿಸುವ ಮೂಲಕ ವಿಶೇಷ ದಾಖಲೆಯನ್ನೂ ಕೊಹ್ಲಿ ಮಾಡಿದ್ದು, ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 50+ ರನ್ ಬಾರಿಸಿದ ಬ್ಯಾಟ್ಸ್​ಮನ್ ಆಗಿದ್ದಾರೆ.

Published On - 11:42 am, Mon, 5 September 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ