AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಲು ಬಾರಿಸಿ ಕ್ಷಮೆಯಾಚಿಸಿದ ಯಾಸಿನ್ ಅಯಾರಿ..!

FIFA Wodld Cup 2026: ಫಿಫಾ ವಿಶ್ವಕಪ್​ನಲ್ಲಿ ಸ್ವೀಡನ್​ನ ಯುವ ಆಟಗಾರ ಯಾಸಿನ್ ಅಯಾರಿ ಕಮಾಲ್ ಮಾಡಿದ್ದಾರೆ. ಅದು ಸಹ ಮೊದಲ ಮ್ಯಾಚ್​ನಲ್ಲೇ ಎರಡು ಭರ್ಜರಿ ಗೋಲುಗಳನ್ನು ದಾಖಲಿಸುವ ಮೂಲಕ. ಈ ಗೋಲುಗಳ ಬಳಿಕ ಯಾಸಿನ್ ನಡೆದುಕೊಂಡು ರೀತಿ ಇದೀಗ ಭಾರೀ ವೈರಲ್ ಆಗಿದೆ.

ಗೋಲು ಬಾರಿಸಿ ಕ್ಷಮೆಯಾಚಿಸಿದ ಯಾಸಿನ್ ಅಯಾರಿ..!
Yasin AyariImage Credit source: TOI
ಝಾಹಿರ್ ಯೂಸುಫ್
|

Updated on: Jun 17, 2026 | 10:17 AM

Share

FIFA World Cup 2026: ಫಿಫಾ ವಿಶ್ವಕಪ್‌ನಲ್ಲಿ ಸ್ವೀಡನ್ ಪರ ಮೊದಲ ಪಂದ್ಯದಲ್ಲೇ ಎರಡು ಗೋಲು ಬಾರಿಸಿ ಯಾಸಿನ್ ಅಯಾರಿ ಸಖತ್ ಸುದ್ದಿಯಾಗಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ 2 ಭರ್ಜರಿ ಗೋಲು ದಾಖಲಿಸಿದರೂ ಸಂಭ್ರಮಿಸದೇ ಇರುವುದು. ಬದಲಾಗಿ ಎದುರಾಳಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.

ಮೆಕ್ಸಿಕೋದ ಎಸ್ಟಾಡಿಯೊ ಬಿಬಿವಿಎ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ‘ಎಫ್’ ಪಂದ್ಯದಲ್ಲಿ ಟ್ಯುನಿಝಿಯಾ ಮತ್ತು ಸ್ವೀಡನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಸ್ವೀಡನ್ ತಂಡವು 5-1 ಅಂತರದಿಂದ ಟ್ಯುನಿಝಿಯಾವನ್ನು ಮಣಿಸಿತು.

ಮೊದಲೇ ಹೇಳಿದಂತೆ,  ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದು 22 ವರ್ಷದ ಮಿಡ್‌ಫೀಲ್ಡರ್ ಯಾಸಿನ್ ಅಯಾರಿ. ಈ ಪಂದ್ಯದಲ್ಲಿ ಎರಡು ಅದ್ಭುತ ಗೋಲುಗಳನ್ನು ಹೊಡೆದರೂ, ಸಂಭ್ರಮಿಸದಿರುವ ಅವರ ಭಿನ್ನ ನಡವಳಿಕೆ ಇದೀಗ ಎಲ್ಲರ ಮನ ಗೆದ್ದಿದೆ.

ಮೌನಕ್ಕೆ ಶರಣಾದ ಅಯಾರಿ:

ಪಂದ್ಯದ 7ನೇ ನಿಮಿಷದಲ್ಲಿ ಟ್ಯುನಿಝಿಯಾ ಗೋಲ್‌ಕೀಪರ್ ಚಮಾಖ್ ಮಾಡಿದ ತಪ್ಪಿನಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಯಾರಿ, ಪೆನಾಲ್ಟಿ ಬಾಕ್ಸ್‌ನ ಹೊರಗಿನಿಂದಲೇ ರಾಕೆಟ್ ವೇಗದ ಲಾಂಗ್-ರೇಂಜ್ ಗೋಲ್ ಬಾರಿಸಿದರು. ಇದು ಈ ಬಾರಿಯ ವಿಶ್ವಕಪ್‌ನ ಅತ್ಯಂತ ವೇಗದ ಮತ್ತು ಅತ್ಯುತ್ತಮ ಗೋಲುಗಳಲ್ಲಿ ಒಂದಾಗಿತ್ತು.

ಆದರೆ, ಅಷ್ಟು ದೊಡ್ಡ ಗೋಲು ಹೊಡೆದರೂ ಅಯಾರಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಲಿಲ್ಲ. ಬದಲಿಗೆ ತಮ್ಮ ಎರಡೂ ಕೈಗಳನ್ನು ಸಾಂಕೇತಿಕವಾಗಿ ಮೇಲೆತ್ತಿ ಟ್ಯುನಿಝಿಯಾ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದರು.

ಕ್ಷಮೆ ಕೇಳಲು ಕಾರಣವೇನು?

ಯಾಸಿನ್ ಅಯಾರಿ ಸ್ವೀಡನ್‌ನಲ್ಲಿ ಹುಟ್ಟಿ ಬೆಳೆದಿದ್ದರೂ, ಅವರ ತಂದೆ ಅಝೌಜ್ ಅಯಾರಿ ಟ್ಯುನಿಝಿಯಾ ಮೂಲದವರಾಗಿದ್ದಾರೆ. ತಮ್ಮ ರಕ್ತಗತ ಸಂಬಂಧವಿರುವ ದೇಶದ ವಿರುದ್ಧವೇ ಗೋಲು ಹೊಡೆದಾಗ, ಅಲ್ಲಿನ ಜನರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಅವರು ಭಾವಿಸಿದ್ದರು. ಹೀಗಾಗಿ ಗೋಲು ಬಾರಿಸಿದ ಬಳಿಕ ಯಾಸಿನ್ ಅಯಾರಿ ಟ್ಯುನಿಝಿಯಾ ಅಭಿಮಾನಿಗಳಿದ್ದ ಗ್ಯಾಲರಿಯತ್ತ ಮುಖ ಮಾಡಿ ಕ್ಷಮೆಯಾಚಿಸಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ 2022ರ ವಿಶ್ವಕಪ್‌ಗೂ ಮುನ್ನ ಟ್ಯುನಿಝಿಯಾ ಫುಟ್‌ಬಾಲ್ ಫೆಡರೇಶನ್ ತನ್ನ ದೇಶದ ಪರ ಆಡುವಂತೆ ಅಯಾರಿಗೆ ಮುಕ್ತ ಆಹ್ವಾನ ನೀಡಿತ್ತು. ಆದರೆ ಅಯಾರಿ ತಾವು ಬೆಳೆದ ಸ್ವೀಡನ್ ದೇಶವನ್ನೇ ಆರಿಸಿಕೊಂಡಿದ್ದರು. ಅದರಂತೆ ಇದೀಗ ಸ್ವೀಡನ್ ಪರ ಕಣಕ್ಕಿಳಿದಿರುವ ಯಾಸಿನ್ ಟ್ಯುನಿಝಿಯಾ ವಿರುದ್ಧ 2 ಗೋಲು ದಾಖಲಿಸಿ ಮಿಂಚಿದ್ದಾರೆ.

ತಂದೆಯ ಬೆಂಬಲ:

ಟ್ಯುನಿಝಿಯಾ ಪರ ಕಣಕ್ಕಿಳಿಯಲು ನೀಡಿದ ಆಹ್ವಾನವನ್ನು ತಿರಸ್ಕರಿಸಿದ ಯಾಸಿನ್ ಅಯಾರಿ ನಿರ್ಧಾರವನ್ನು ಅವರ ತಂದೆ ಬೆಂಬಲಿಸಿದ್ದರು. ಅಯಾರಿ ಅವರ ತಂದೆ ಸ್ವೀಡನ್‌ನ ಅಫ್ಟನ್‌ಬ್ಲಾಡೆಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, “ತನ್ನನ್ನು ಸಲಹಿದ, ಬೆಳೆಸಿದ ದೇಶಕ್ಕೆ ಮರಳಿ ಏನನ್ನಾದರೂ ನೀಡಲು ಮಗ ಸ್ವೀಡನ್ ಪರ ಆಡಬೇಕೆಂದು ನಾನೇ ಬಯಸಿದ್ದೆ”  ಎಂದು ತಿಳಿಸಿದ್ದರು.

ಇದೀಗ ತಂದೆಯ ಇಚ್ಛೆಯಂತೆ ಸ್ವೀಡನ್ ಪರ ಮೊದಲ ಮ್ಯಾಚ್​ನಲ್ಲೇ 22 ವರ್ಷದ ಯಾಸಿನ್ ಅಯಾರಿ ಕಮಾಲ್ ಮಾಡಿದ್ದಾರೆ. ಈ ಕಮಾಲ್​ನೊಂದಿಗೆ ತಂದೆ ತವರಾದ ಟ್ಯುನಿಝಿಯಾ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುವ ಮೂಲಕ ಅವರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಎರಡನೇ ಬಾರಿ ಸಂಭ್ರಮ:

ಪಂದ್ಯ ಮುಗಿಯಲು ಕೆಲವೇ ಕ್ಷಣಗಳು ಬಾಕಿ ಇರುವಾಗ (90+6ನೇ ನಿಮಿಷದಲ್ಲಿ), ಯಾಸಿನ್ ಅಯಾರಿ ಮತ್ತೊಂದು ಅದ್ಭುತ ಗೋಲ್ ಬಾರಿಸಿ ಸ್ವೀಡನ್‌ನ ಗೆಲುವನ್ನು 5-1 ಕ್ಕೆ ತಂದಿಟ್ಟರು. ಆದರೆ ಈ ಬಾರಿ ಅವರು ಮೊದಲಿನಂತೆ ಸುಮ್ಮನೆ ನಿಲ್ಲಲಿಲ್ಲ.

ಮೈದಾನದಲ್ಲಿ ಮಂಡಿಯೂರಿ ಸ್ಲೈಡ್ ಮಾಡುತ್ತಾ, ತಮ್ಮ ಕಿವಿಗೆ ಕೈಯಿಟ್ಟು ಸ್ವೀಡನ್ ಅಭಿಮಾನಿಗಳ ಕಡೆಗೆ ತಿರುಗಿ ಅತ್ಯಂತ ಉತ್ಸಾಹದಿಂದ ಸಂಭ್ರಮಿಸಿದರು. ಈ ಮೂಲಕ ಸ್ವೀಡನ್ ಫ್ಯಾನ್ಸ್​ಗಳ ಸಂಭ್ರಮ ಹೆಚ್ಚಿಸಿದರು.

ಇದನ್ನೂ ಓದಿ: ಗೋಲುಗಳ ಮೇಲೆ ಗೋಲು… ವಿಶ್ವ ದಾಖಲೆ ಸರಿಗಟ್ಟಿದ ಮೆಸ್ಸಿ..!

ಇತಿಹಾಸ ಬರೆದ ಅಯಾರಿ:

ಈ ಎರಡು ಗೋಲುಗಳ ಮೂಲಕ ಯಾಸಿನ್ ಅಯಾರಿ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಸ್ವೀಡನ್‌ನ ಮೂರನೇ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಬ್ರೈಟನ್ ಕ್ಲಬ್ ಪರ ಆಡುತ್ತಿರುವ ಈ ಯುವ ಮಿಡ್‌ಫೀಲ್ಡರ್, ಈ ಪಂದ್ಯದ ಮೂಲಕ ಜಾಗತಿಕ ಫುಟ್‌ಬಾಲ್‌ನಲ್ಲಿ ಹೊಸ ಭಾಷ್ಯ ಬರೆಯುವ ಸೂಚನೆ ನೀಡಿದ್ದಾರೆ.

Follow Us
ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ?
ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಯೋಗ!
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ವಿಶೇಷ ಗೌರವ
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ವಿಶೇಷ ಗೌರವ
ಫ್ರಾನ್ಸ್‌ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಫ್ರಾನ್ಸ್‌ನ ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ
ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ
ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ
ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ:ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ
ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ:ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ
ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ
ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ