AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ದ್ರಾವಿಡ್ ಹೇಳಿದ್ದ ಸ್ಫೂರ್ತಿಯ ಮಾತುಗಳು ಇಂದು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿವೆ; ಅಜಿಂಕ್ಯ ರಹಾನೆ

ನಾನು ಹೇಳಲು ಬಯಸುವುದು ನೀವು ಆಡುವಂತೆಯೇ ಆಟವಾಡಿ. ನೀವು ನಿಮ್ಮ ಆಟದ ಬಗ್ಗೆ ಗಮನ ಕೊಡಿ, ಆಗ ನಿಮ್ಮನ್ನು ಭಾರತೀಯ ತಂಡಕ್ಕೆ ಅವರಾಗಿಯೇ ಆಯ್ಕೆ ಮಾಡುತ್ತಾರೆ

ಅಂದು ದ್ರಾವಿಡ್ ಹೇಳಿದ್ದ ಸ್ಫೂರ್ತಿಯ ಮಾತುಗಳು ಇಂದು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿವೆ; ಅಜಿಂಕ್ಯ ರಹಾನೆ
ಅಜಿಂಕ್ಯಾ ರಹಾನೆ
ಪೃಥ್ವಿಶಂಕರ
|

Updated on: Jun 10, 2021 | 7:17 PM

Share

ದಿ ವಾಲ್ ಎಂದು ಕರೆಯಲ್ಪಡುವ ಭಾರತೀಯ ತಂಡದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಪ್ರಸ್ತುತ ಭಾರತದ ಕ್ರಿಕೆಟ್ ತಂಡಕ್ಕೆ ಅನೇಕ ಆಟಗಾರರನ್ನು ಕೊಡುಗೆಯಾಗಿ ನೀಡಿದ್ದಾರೆ. ಇದರಲ್ಲಿ ಭಾರತೀಯ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಒಬ್ಬರಾಗಿದ್ದಾರೆ. ಈಗಿನ ಕ್ರಿಕೆಟ್ ವಲಯದಲ್ಲಿ ದ್ರಾವಿಡ್ 2.0 ಎಂದು ಕರೆಯಲ್ಪಡುವ ರಹಾನೆ, ದ್ರಾವಿಡ್ ಅವರ ಬಗ್ಗೆಗಿನ ಅವರ ಮನದಾಳದ ಮಾತನ್ನು ಹೊರಹಾಕಿದ್ದಾರೆ. ರಾಹುಲ್ ದ್ರಾವಿಡ್ ತಮ್ಮ ಆಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳುವ ಮೂಲಕ ರಹಾನೆ ತಮ್ಮ ಗುರುವಿನ ಸಹಾಯವನ್ನು ನೆನೆದಿದ್ದಾರೆ.

ನಿಮ್ಮನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಬೇಕೆಂದು ಆಶಿಸುತ್ತೇನೆ ಇಎಸ್ಪಿಎನ್ಕ್ರಿಕ್ಇನ್ಫೊಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಹಾನೆ, 2008-09ರಲ್ಲಿ ದ್ರಾವಿಡ್ ಅವರು ತಮ್ಮೊಂದಿಗೆ ನಡೆಸಿದ್ದ ಸಂಭಾಷಣೆಯ ಬಗ್ಗೆ ಮಾತನಾಡಿದರು. ಆ ಸಮಯದಲ್ಲಿ ಅಜಿಂಕ್ಯ ರಹಾನೆ ಅವರನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಿರಲಿಲ್ಲ. ಆಗ ಅವರು ದುಲೀಪ್ ಟ್ರೋಫಿ ಆಡುತ್ತಿದ್ದರು. ರಹಾನೆ ಪಶ್ಚಿಮ ವಲಯ ಪರ ಆಡುತ್ತಿದ್ದರೆ, ದ್ರಾವಿಡ್ ದಕ್ಷಿಣ ವಲಯದಲ್ಲಿದ್ದರು. ಫೈನಲ್‌ನಲ್ಲಿ ರಹಾನೆ 165 ಮತ್ತು 98 ರನ್ ಗಳಿಸಿದ್ದರು. ಆ ಪಂದ್ಯದ ನಂತರ ದ್ರಾವಿಡ್ ರಹಾನೆಗೆ, “ನಾನು ನಿಮ್ಮ ಬಗ್ಗೆ ಸಾಕಷ್ಟು ಕೇಳಿದ್ದೇನೆ. ನೀವು ಸಾಕಷ್ಟು ಚೆನ್ನಾಗಿ ಆಡುತ್ತಿದ್ದೀರಿ. ಆದ್ದರಿಂದ ಈಗ ನಾನು ನಿಮ್ಮನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಬೇಕೆಂದು ಆಶಿಸುತ್ತೇನೆ. ಆದರೆ ನಾನು ಹೇಳಲು ಬಯಸುವುದು ನೀವು ಆಡುವಂತೆಯೇ ಆಟವಾಡಿ. ನೀವು ನಿಮ್ಮ ಆಟದ ಬಗ್ಗೆ ಗಮನ ಕೊಡಿ, ಆಗ ನಿಮ್ಮನ್ನು ಭಾರತೀಯ ತಂಡಕ್ಕೆ ಅವರಾಗಿಯೇ ಆಯ್ಕೆ ಮಾಡುತ್ತಾರೆ ಎಂದಿದ್ದರಂತೆ. ದ್ರಾವಿಡ್ ಅವರ ಮಾತಿನಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ ಎಂದು ರಹಾನೆ ಹೇಳಿದರು. ಅಲ್ಲದೆ, ಆ ಸರಣಿಯ ನಂತರ 2 ವರ್ಷಗಳಲ್ಲಿ ರಹಾನೆ ಅವರನ್ನು ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಯಿತು.

ನಿರಾಶಾದಾಯಕ ಆರಂಭದ ನಂತರ ಯಶಸ್ಸು ಅಜಿಂಕ್ಯ ರಹಾನೆ 2011 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಲು ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆರಂಭಿಕ ಪ್ರದರ್ಶನಗಳು ವಿಶೇಷವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪ್ರವೀಣ್ ಅಮ್ರೆ ನನಗೆ ಸಹಾಯ ಮಾಡಿದ್ದಾರೆ ಎಂದು ರಹಾನೆ ಹೇಳಿದ್ದಾರೆ. ನನ್ನ ಮೊದಲ 3-4 ರಣಜಿ ಟ್ರೋಫಿ ಪಂದ್ಯಗಳು ಅಷ್ಟೊಂದು ಉತ್ತಮವಾಗಿರಲಿಲ್ಲ. ನಾನು ತಂಡದಿಂದ ಹೊರಹೋಗುವ ಬಗ್ಗೆ ಮಾತನಾಡಲು ಪ್ರಾರಂಭಿಸಿದೆ. ಆದರೆ ನಮ್ಮ ತರಬೇತುದಾರ ಪ್ರವೀಣ್ ಅಮ್ರೆ ಅವರು ನಿಮ್ಮ ತಾಕತ್ತು ತಿಳಿಯಬೇಕೆಂದರೆ ನೀವು 7-8 ಪಂದ್ಯಗಳನ್ನು ಆಡಬೇಕು ಎಂದು ಹೇಳಿದರು. ನಂತರ ನಾನು ಉತ್ತಮ ಪ್ರದರ್ಶನ ನೀಡಿದೆ. 5 ಋತುಗಳಲ್ಲಿ ನಾನು 1000 ರನ್ ಗಳಿಸಿದೆ ಎಂದು ರಹಾನೆ ಹಿಂದಿನ ಘಟನೆಯನ್ನು ನೆನೆದಿದ್ದಾರೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ