2025ರ ಚಾಂಪಿಯನ್ಸ್ ಟ್ರೋಫಿಯಿಂದ ಭಾರತವನ್ನು ಹೊರಗಿಟ್ಟ ಪಾಕ್, ಪಿಸಿಬಿ ನಡೆಗೆ ಐಸಿಸಿ ವಿರೋಧ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೀಂ ಇಂಡಿಯಾವನ್ನು 2025ರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗಿಟ್ಟದೆ. ಈ ನಿರ್ಧಾರಕ್ಕೆ ಐಸಿಸಿ ಅಚ್ಚರಿಗೊಂಡಿದೆ. ಯಾವ ಕಾರಣಕ್ಕೆ ಪಾಕ್ ಭಾರತವನ್ನು ಈ ಪಂದ್ಯಾದಿಂದ ಹೊರಗಿಟ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಪಾಕಿಸ್ತಾನ ಪದೇ ಪದೇ ಭಾರತದ ವಿರುದ್ಧ ಒಂದಲ್ಲ ಒಂದು ವಿಚಾರವಾಗಿ ದ್ವೇಷ ಸಾಧಿಸುತ್ತಿದೆ. ಇದೀಗ ದ್ವೇಷ ಕ್ರಿಕೆಟ್ ಕ್ಷೇತ್ರಕ್ಕೂ ಬಂದಿದೆ. ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ 2025ನಲ್ಲಿ ಭಾರತವನ್ನು ಹೊರಗಿಟ್ಟಿದೆ. ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ 2025ನ್ನು ಫೆಬ್ರವರಿ-ಮಾರ್ಚ್ನಲ್ಲಿ ಪಾಕಿಸ್ತಾನದಲ್ಲಿ ಆಯೋಜಿಸಲಾಗಿದೆ. 8 ತಂಡಗಳ ಈ ಪಂದ್ಯಾವಳಿಗೆ 6 ತಂಡಗಳು ಪಾಕಿಸ್ತಾನಕ್ಕೆ ಹೋಗಲು ಅವಕಾಶ ನೀಡಲಾಗಿದೆ. ಆದರೆ ಇದರಲ್ಲಿ ಭಾರತದ ಭಾಗವಹಿಸುವಿಕೆಯನ್ನು ವಿರೋಧಿಸಿದೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಪಾಕಿಸ್ತಾನ ಪತ್ರಕರ್ತರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಪ್ರಶ್ನಿಸಿದೆ. ಭಾರತದ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಟೂರ್ನಿಗೆ ಬರಬೇಕು ಅಥವಾ ಟೀಂ ಇಂಡಿಯಾ ಇಲ್ಲದೇ ಟೂರ್ನಿ ಆಯೋಜಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಆದರೆ ವಾಸ್ತವಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವ ಸಾಧ್ಯತೆಯೇ ಇಲ್ಲ. ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳಲು ಬಿಸಿಸಿಐಗೆ ಭಾರತ ಸರ್ಕಾರದಿಂದ ಅನುಮತಿ ಅಗತ್ಯವಿದ್ದು, ಸದ್ಯ ಉಭಯ ದೇಶಗಳ ನಡುವಣ ಸಂಬಂಧವನ್ನು ನೋಡಿದರೆ ಅದು ನಡೆಯುವಂತೆ ಕಾಣುತ್ತಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. ಮಂಡಳಿಯು ಈ ಬಾರಿ ಹೈಬ್ರಿಡ್ ಮಾದರಿಗೆ ಸಿದ್ಧವಾಗುವುದಿಲ್ಲ ಎಂದು ಹೇಳಿಕೊಂಡಿದೆ ಮತ್ತು ಈ ಪಂದ್ಯಾವಳಿಗೆ ತಂಡವನ್ನು ಕಳುಹಿಸಲು ಐಸಿಸಿ ಬಿಸಿಸಿಐಗೆ ಮನವರಿಕೆ ಮಾಡುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಟಿ20 ರ್ಯಾಂಕಿಂಗ್: ಸ್ಮೃತಿ ಮಂಧಾನಗೆ ಭಾರಿ ಲಾಭ; ರೇಣುಕಾ ಸಿಂಗ್ಗೂ ಮುಂಬಡ್ತಿ
ಪಿಸಿಬಿಯ ಕ್ರಮದಿಂದ ಐಸಿಸಿ ಅಚ್ಚರಿ
ಪಿಸಿಬಿಯ ಈ ವರ್ತನೆಯಿಂದ ಐಸಿಸಿ ಅಚ್ಚರಿಗೊಂಡಿದೆ. ಟೀಮ್ ಇಂಡಿಯಾ ಸೇರ್ಪಡೆಗೆ ಸಂಬಂಧಿಸಿದಂತೆ ಪಿಸಿಬಿ ಬೇರೆ ಯಾವುದೇ ಯೋಜನೆ ಹಾಕಿಕೊಳ್ಳದಿರುವುದಕ್ಕೆ ಐಸಿಸಿ ಅಚ್ಚರಿಗೊಂಡಿದೆ. ಒಂದು ವೇಳೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲು ಸಿದ್ಧವಿಲ್ಲದಿದ್ದರೆ, ಆ ಪರಿಸ್ಥಿತಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಮಾತ್ರ ಟೂರ್ನಿ ಆಯೋಜಿಸಲು ಸಾಧ್ಯ. ಆದರೆ ಈ ಬಗ್ಗೆ ಪಿಸಿಬಿ ತೆಗೆದುಕೊಂಡ ನಿರ್ಧಾರಕ್ಕೆ ಐಸಿಸಿ ವಿರೋಧಿಸಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾಗವಹಿಸದೇ ಇದ್ದರೆ ಟೂರ್ನಿಗೆ ಮಜಾ ಇರುವುದಿಲ್ಲ ಹಾಗೂ ಐಸಿಸಿಗೆ ಭಾರಿ ನಷ್ಟವೂ ಆಗಬಹುದು ಎಂದು ಹೇಳಲಾಗಿದೆ. ಈ ಕಾರಣಕ್ಕೆ ಪಿಸಿಬಿ ಮೇಲೆ ಐಸಿಸಿ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದಲ್ಲದೇ ಏಷ್ಯಾ ಕಪ್ 2025 ಕೂಡ ಚರ್ಚೆಗೆ ಬಂದಿದೆ. ಭಾರತ ಈಗಾಗಲೇ ಈ ಟೂರ್ನಿಯ ಆತಿಥ್ಯವನ್ನು ಪಡೆದುಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ, ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಗೆ ಅನುಸರಿಸುತ್ತಿರುವ ವಿಧಾನವನ್ನು ಪಿಸಿಬಿ ಕೂಡ ಈ ಪಂದ್ಯಾವಳಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ.