AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC World Test Championship: ‘ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಲು ಭಾರತ ಇಷ್ಟು ಮಾಡಿದರೆ ಸಾಕು!’

ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಮ್ಮ ಆಟಗಾರರು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿದ್ದರು. ಆದರೂ ಎದೆಗುಂದದೆ ಪರಾಕ್ರಮಿಗಳಾದರು. ಒಟ್ಟಿನಲ್ಲಿ ನಮ್ಮ ತಂಡ ತನ್ನ ಹಾಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಬಿಟ್ಟರೆ ಜಯ ಕಟ್ಟಿಟ್ಟಬುತ್ತಿ ಎಂದು ಥಮ್ಸ್​ಅಪ್​ ಮಾಡುತ್ತಾರೆ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ.

ICC World Test Championship: ‘ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಲು ಭಾರತ ಇಷ್ಟು ಮಾಡಿದರೆ ಸಾಕು!’
ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್
ಸಾಧು ಶ್ರೀನಾಥ್​
| Updated By: ಪೃಥ್ವಿಶಂಕರ|

Updated on:May 12, 2021 | 2:15 PM

Share

ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ವೇದಿಕೆ ಸಜ್ಜಾಗುತ್ತಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ವಿಶ್ವ ಮುಕುಟ ಧರಿಸಲು ಸೆಣಸಾಟ ನಡೆಸಲಿವೆ. ಆ ಪಟ್ಟ ಗಿಟ್ಟಿಸಲು ಭಾರತ ತಂಡ ಇಷ್ಟು ಮಾಡಿದರೆ ಸಾಕು ಅಂತಿದ್ದಾರೆ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೆಣೆಸಾಡಲು ಯಾವುದೇ ಕಂಡೀಷನ್​ಗೆ ಒಗ್ಗಿಕೊಳ್ಳಬಲ್ಲ ಆಟಗಾರರು ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡದಲ್ಲಿದ್ದಾರೆ ಅನ್ನುತ್ತಾರೆ ರಿತೀಂದರ್​ ಸಿಂಗ್​ ಸೋಧಿ.

ಜೂನ್ 18ರಿಂದ ಇಂಗ್ಲೆಂಡ್​ನ ಸೌಥಾಂಪ್ಟನ್​ ಮೈದಾನದಲ್ಲಿ World Test Championship (WTC) ಟೆಸ್ಟ್​ ಪಂದ್ಯ ನಡೆಯಲಿದೆ. ಕೊಹ್ಲಿ ಅಂಡ್​ ಕಂಪನಿ ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಲಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್​ ಆಡಳಿತ ಮಂಡಳಿ ಬಿಸಿಸಿಐ (BCCI) 20 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಜೊತೆಗೆ ನಾಲ್ಕು ಮಂದಿ ರಿಸರ್ವ್​ ಆಟಗಾರರೂ ಇದ್ದಾರೆ.

ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ, WTC ಪಂದ್ಯ ಭಾರತದಲ್ಲಿ ನಡೆಯುವುದಲ್ಲ; ಅದು ಇಂಗ್ಲೆಂಡ್​ನಲ್ಲಿ ಜರುಗಲಿದೆ. ಅಲ್ಲಿನ ಮೈದಾನದ ವಾತಾವರಣ ಭಾರತ ತಂಡಕ್ಕೆ ಪ್ರತಿಕೂಲ ವಾತಾವರಣ (adverse conditions) ಎದುರುಗೊಳ್ಳಲಿದೆ. ಆದರೆ ಭಾರತ ತಂಡದ ಈಗಿನ ಮನಸ್ಥಿತಿ, ದೃಢತೆ, ಫಾರಂ ಅನ್ನು ಗಣನೆಗೆ ತೆಗೆದುಕೊಂಡಾಗ ಮತ್ತು ಭಾರತ ತಂಡ ಈಗಾಗಲೇ ಇಂತಹ ಪ್ರತಿಕೂಲ ವಾತಾವರಣದಲ್ಲಿ ಆಡಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದರಿಂದ ಅದಕ್ಕೆ ಭಾರತ ತಂಡ ಈಗಾಗಲೇ ಒಗ್ಗಿಕೊಂಡಿದೆ ಎಂಬುದು ಅರಿವಿಗೆ ಬರುತ್ತದೆ. ಸಮರ್ಥ ಬೌಲರ್​ಗಳು ನಮ್ಮಲ್ಲಿದ್ದಾರೆ, ಬ್ಯಾಟಿಂಗ್​ ಅದ್ಭುತವಾಗಿದೆ, ಇನ್ನು ಟೆಸ್ಟ್​ ಮ್ಯಾಚ್​ಗಳಲ್ಲಿ ಸ್ಲಿಪ್​ ಕ್ಯಾಚಿಂಗ್ ಸಹ ಸುಧಾರಿಸಿದೆ ಎನ್ನುತ್ತಾರೆ.

Former cricketer Reetinder Singh Sodhi 1

ಭಾರತದ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ

ಪ್ರಚಲಿತ ಭಾರತ ತಂಡ ಒತ್ತಡದಲ್ಲಿ ಕುಸಿಯುವುದಿಲ್ಲ. ನಮ್ಮ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ಗೆಲುವಿನ ಪತಾಕೆ ಹಾರಿಸಬಲ್ಲದು ಅನ್ನುತ್ತಾರೆ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ.

ಇದೇ ಪರಿಸ್ಥಿತಿಯನ್ನು ಹಿಂದಿನ ವರ್ಷಗಳಿಗೆ ಹೋಲಿಸಿ ನೋಡಿದರೆ ನಾವು ಪ್ರೆಷರ್​ನಲ್ಲಿ ಆಡುವಾಗ ವಿಫಲರಾಗುತ್ತಿದ್ದೆವು. ಏನೋ ಒಂದು ಸಮಸ್ಯೆ ಎದುರಾಗುತ್ತಿತ್ತು. ಆದರೆ ಈಗಿನ ತಂಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಂತಹ ಯಾವುದೇ ಪ್ರೆಷರ್​ ಇದ್ದರೂ ಅದನ್ನು ನೀಗಿಕೊಂಡು ಜಯ ಸಾಧಿಸಬಲ್ಲದು ಅಂತಾ ನನಗೆ ಅನ್ನಿಸುತ್ತದೆ. ತಾಜಾ ಉದಾಹರಣೆ ಅಂದ್ರೆ ಆಸ್ಟ್ರೇಲಿಯಾ ಪ್ರವಾಸ. ನಮ್ಮ ಆಟಗಾರರು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿದ್ದರು. ಆದರೂ ಎದೆಗುಂದದೆ ಪರಾಕ್ರಮಿಗಳಾದರು. ಒಟ್ಟಿನಲ್ಲಿ ನಮ್ಮ ತಂಡ ತನ್ನ ಹಾಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಬಿಟ್ಟರೆ ಜಯ ಕಟ್ಟಿಟ್ಟಬುತ್ತಿ ಎಂದು ಥಮ್ಸ್​ಅಪ್​ ಮಾಡುತ್ತಾರೆ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ.

(If India plays to their potential, the first World Test Championship will definitely be ours says Former cricketer Reetinder Singh Sodhi)

ಭಾರತದಲ್ಲಿ ಕ್ರಿಕೆಟ್​ ವ್ಯವಸ್ಥೆ ಬಲಿಷ್ಠವಾಗಿದ್ದು, ಉಚ್ಛ್ರಾಯ ಸ್ಥಿತಿಯಲ್ಲಿದೆ.. ಇದಕ್ಕೆ ಬಿಸಿಸಿಐ ದಾದಾ ಗಂಗೂಲಿ ಕೊಡುವ ಕಾರಣಗಳು ಏನು ಗೊತ್ತಾ!?

Published On - 4:35 pm, Tue, 11 May 21

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​