AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧಾರ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. 60 ಪಂದ್ಯಗಳ ಸುದೀರ್ಘ ಹೋರಾಟದ ನಂತರವೂ ಇದುವರೆಗೆ ಯಾವುದೇ ಒಂದು ತಂಡ ಪ್ಲೇಆಫ್ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್​ ಈಗಾಗಲೇ ಹೊರಬಿದ್ದಿದ್ದರೆ, ಬಾಕಿ ಉಳಿದಿರುವ 10 ಲೀಗ್ ಪಂದ್ಯಗಳು ಉಳಿದ 8 ತಂಡಗಳ ಮುಂದಿನ ಹಾದಿಯನ್ನು ನಿರ್ಧರಿಸಲಿದೆ.

ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧಾರ!
Ipl 2026
ಝಾಹಿರ್ ಯೂಸುಫ್
|

Updated on:May 17, 2026 | 10:33 AM

Share

IPL 2026: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಠಿಣ ಪ್ಲೇಆಫ್ ರೇಸ್‌ಗೆ 2026ರ ಸೀಸನ್ ಸಾಕ್ಷಿಯಾಗಿದೆ. ಲೀಗ್​ ಹಂತದ 60 ಪಂದ್ಯಗಳು ಮುಗಿದರೂ ಇನ್ನೂ ಕೂಡ ಯಾವುದೇ ತಂಡದ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ಉಳಿದಿರುವ ಕೊನೆಯ 10 ಲೀಗ್ ಪಂದ್ಯಗಳು 8 ತಂಡಗಳ ಭವಿಷ್ಯವನ್ನು ನಿರ್ಧರಿಸಲಿವೆ. ಈಗಾಗಲೇ ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ.

ಇದೀಗ 8 ತಂಡಗಳ ನಡುವೆ 4 ಸ್ಥಾನಗಳಿಗಾಗಿ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಈ ವಾರದೊಳಗೆ ಪ್ಲೇಆಫ್ ಆಡಲಿರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.

8 ತಂಡಗಳ ಪ್ಲೇಆಫ್  ಸಮೀಕರಣಗಳು:

  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – ಅಂಕಗಳು: 16
  •  ಉಳಿದಿರುವ ಪಂದ್ಯಗಳು: 2 (vs PBKS, SRH)
  • ಸಮೀಕರಣ: ಹಾಲಿ ಚಾಂಪಿಯನ್ಸ್ ಆರ್‌ಸಿಬಿ ಸದ್ಯ ಅತ್ಯುತ್ತಮ ನೆಟ್ ರನ್ ರೇಟ್ (+1.053) ಹೊಂದಿದೆ. ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದರೂ ಪ್ಲೇಆಫ್ ಆಡುವುದು ಖಚಿತವಾಗಲಿದೆ. ಎರಡೂ ಪಂದ್ಯ ಗೆದ್ದರೆ ಟಾಪ್-2 ಸ್ಥಾನ ಸಿಗಲಿದೆ.
  • ಗುಜರಾತ್ ಟೈಟಾನ್ಸ್ (GT) – ಅಂಕಗಳು: 16
  • ಉಳಿದಿರುವ ಪಂದ್ಯ: 1 (vs CSK)
  • ಸಮೀಕರಣ: ಗುಜರಾತ್ ಟೈಟಾನ್ಸ್ ಈಗಾಗಲೇ 13 ಪಂದ್ಯಗಳನ್ನು ಆಡಿದ್ದು 16 ಅಂಕ ಗಳಿಸಿದೆ. ಕೊನೆಯ ಪಂದ್ಯವನ್ನು ಗೆದ್ದರೆ ಪ್ಲೇಆಫ್ ಜೊತೆಗೆ ಟಾಪ್-2 ರೇಸ್‌ನಲ್ಲಿ ಉಳಿಯಲಿದೆ. ಒಂದು ವೇಳೆ ಸೋತರೆ ಪ್ಲೇಆಫ್​ಗೇರಲು ಇತರ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.
  • ಸನ್‌ರೈಸರ್ಸ್ ಹೈದರಾಬಾದ್ (SRH) – ಅಂಕಗಳು: 14
  • ಉಳಿದಿರುವ ಪಂದ್ಯಗಳು: 2 (vs CSK, RCB)
  • ಸಮೀಕರಣ: ಎಸ್‌ಆರ್‌ಹೆಚ್ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ಸುಲಭವಾಗಿ 18 ಅಂಕಗಳೊಂದಿಗೆ ಕ್ವಾಲಿಫೈ ಆಗಲಿದೆ. ಒಂದು ಪಂದ್ಯ ಗೆದ್ದು 16 ಅಂಕ ಗಳಿಸಿದರೂ ಉತ್ತಮ ರನ್ ರೇಟ್ ನೆರವಿನಿಂದ ಪ್ಲೇಆಫ್​ಗೇರುವ ಅವಕಾಶ ಇದೆ.
  • ಪಂಜಾಬ್ ಕಿಂಗ್ಸ್ (PBKS) – ಅಂಕಗಳು: 13
  •  ಉಳಿದಿರುವ ಪಂದ್ಯಗಳು: 2 (vs RCB, LSG)
  • ಸಮೀಕರಣ: ಸತತ 5 ಸೋಲುಗಳಿಂದ ಕಂಗಾಲಾಗಿರುವ ಪಂಜಾಬ್ ಕಿಂಗ್ಸ್​ ತಂಡಕ್ಕೆ ಇನ್ನುಳಿದ ಪಂದ್ಯಗಳು ‘ಡೂ ಆರ್ ಡೈ ಮ್ಯಾಚ್’. ಪಂಜಾಬ್ ಪಡೆ 17 ಅಂಕ ತಲುಪಲು ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ಸೋತರೆ ರೇಸ್‌ನಿಂದ ಹೊರಬೀಳುವ ಆತಂಕವಿದೆ.
  • ರಾಜಸ್ಥಾನ್ ರಾಯಲ್ಸ್ (RR) – ಅಂಕಗಳು: 12
  • ಉಳಿದಿರುವ ಪಂದ್ಯಗಳು: 3 (vs DC, LSG, MI)
  • ಸಮೀಕರಣ: ರಾಜಸ್ಥಾನ್ ರಾಯಲ್ಸ್​ ಕೈಯಲ್ಲಿ ಇನ್ನೂ 3 ಪಂದ್ಯಗಳಿವೆ. ಈ ಮೂರನ್ನೂ ಗೆದ್ದರೆ ಯಾವುದೇ ಅಡೆತಡೆಯಿಲ್ಲದೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.
  •  ಚೆನ್ನೈ ಸೂಪರ್ ಕಿಂಗ್ಸ್ (CSK) – ಅಂಕಗಳು: 12
  • ಉಳಿದಿರುವ ಪಂದ್ಯಗಳು: 2 (vs SRH, GT)
  • ಸಮೀಕರಣ: ಸಿಎಸ್​ಕೆ ತಂಡವು  ಪ್ಲೇಆಫ್ ಆಸೆಯನ್ನು ಜೀವಂತವಾಗಿಡಲು ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು 16 ಅಂಕ ಗಳಿಸಬೇಕು. ಹಾಗೆಯೇ ಇತರ ತಂಡಗಳ ಸೋಲನ್ನು ಸಹ ಎದುರು ನೋಡಬೇಕು.
  • ಕೋಲ್ಕತ್ತಾ ನೈಟ್ ರೈಡರ್ಸ್ (KKR) – ಅಂಕಗಳು: 11
  • ಉಳಿದಿರುವ ಪಂದ್ಯಗಳು: 2 (vs MI, DC)
  • ಸಮೀಕರಣ: ಕೆಕೆಆರ್ ಗರಿಷ್ಠ 15 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯ. ಪ್ಲೇಆಫ್ ತಲುಪುವ ಸಾಧ್ಯತೆ ಕೇವಲ 3.6% ರಷ್ಟಿದ್ದು, ಪವಾಡಗಳು ಸಂಭವಿಸಿದರೆ ಮಾತ್ರ ಕೊಲ್ಕತ್ತಾ ನೈಟ್ ರೈಡರ್ಸ್​ ಮುಂದಿನ ಹಂತಕ್ಕೇರಬಹುದು.
  • ಡೆಲ್ಲಿ ಕ್ಯಾಪಿಟಲ್ಸ್ (DC) – ಅಂಕಗಳು: 10
  • ಉಳಿದಿರುವ ಪಂದ್ಯಗಳು: 2 (vs RR, KKR)
  • ಸಮೀಕರಣ: ಡೆಲ್ಲಿ ಕ್ಯಾಪಿಟಲ್ಸ್​ ತಂಡ ಉಳಿದಿರುವ 2 ಮ್ಯಾಚ್​ಗಳನ್ನು ಗೆದ್ದರೂ ಗರಿಷ್ಠ 14 ಅಂಕ ತಲುಪಬಹುದು. ಆದರೆ ಅತ್ಯಂತ ಕಳಪೆ ನೆಟ್ ರನ್ ರೇಟ್ (-0.993) ಹೊಂದಿರುವುದರಿಂದ ಇವರ ಪ್ಲೇಆಫ್ ಕನಸು ಬಹುತೇಕ ಅಂತ್ಯವಾಗಿದೆ ಎನ್ನಬಹುದು.

ಇದನ್ನೂ ಓದಿ: IPL 2026: ಇಂದಿನ  ಪಂದ್ಯಕ್ಕೂ RCB ತಂಡದ ಸ್ಟಾರ್ ಆಟಗಾರ ಅಲಭ್ಯ!

ಇನ್ನು 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದ್ದು, ಇದಾಗ್ಯೂ ಈ ತಂಡಗಳ ವಿರುದ್ಧದ ಫಲಿತಾಂಶಗಳು ಇತರೆ ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧರಿಸಲಿದೆ.

Published On - 10:32 am, Sun, 17 May 26

Follow Us
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​