- Kannada News Photo gallery Cricket photos IPL 2026: 5 Underperforming Teams Likely to Get New Captains for 2027 Season
IPL 2026: ಈ ಸೀಸನ್ ಬಳಿಕ ಈ ಐದು ತಂಡಗಳ ನಾಯಕತ್ವದಲ್ಲಿ ಬದಲಾವಣೆ
IPL 2026: 2026ರ ಐಪಿಎಲ್ನಲ್ಲಿ ಕೆಲವು ಬಲಿಷ್ಠ ತಂಡಗಳ ನಿರಸ ಪ್ರದರ್ಶನಕ್ಕೆ ಆಟಗಾರರ ವೈಫಲ್ಯ ಹಾಗೂ ನಾಯಕರ ಕಳಪೆ ನಿರ್ವಹಣೆಯೇ ಕಾರಣ. ಲೀಗ್ ಹಂತದಲ್ಲೇ ಸೋತು ಸುಣ್ಣವಾಗಿರುವ ಐದು ತಂಡಗಳು ಮುಂದಿನ ಆವೃತ್ತಿಗೆ ಹೊಸ ನಾಯಕರ ನಾಯಕತ್ವದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ರಿಷಭ್ ಪಂತ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಅಜಿಂಕ್ಯ ರಹಾನೆ, ರುತುರಾಜ್ ಗಾಯಕ್ವಾಡ್ರಂತಹ ಪ್ರಮುಖ ಆಟಗಾರರು ಒತ್ತಡದಲ್ಲಿದ್ದಾರೆ.
Updated on: May 13, 2026 | 8:39 PM

2026 ರ ಐಪಿಎಲ್ನಲ್ಲಿ ಕೆಲವು ಬಲಿಷ್ಠ ತಂಡಗಳು ನಿರಸ ಪ್ರದರ್ಶನ ನೀಡಿವೆ. ಇದಕ್ಕೆ ಕಾರಣ ತಂಡದಲ್ಲಿರುವ ಆಟಗಾರರ ಕಳಪೆ ಪ್ರದರ್ಶನ ಒಂದೆಡೆಯಾದರೆ, ತಂಡದ ನಾಯಕರ ಕಳಪೆ ನಾಯಕತ್ವವೂ ಪ್ರಮುಖ ಕಾರಣವಾಗಿದೆ. ಹೀಗಾಗಿ ಲೀಗ್ ಹಂತದಲ್ಲೇ ಪ್ರಯಾಣ ಮುಗಿಸುವ ಸನಿಹದಲ್ಲಿರುವ ಐದು ತಂಡಗಳು ಮುಂದಿನ ಆವೃತ್ತಿಯಲ್ಲಿ ಹೊಸ ನಾಯಕರ ನಾಯಕತ್ವದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ರಿಷಭ್ ಪಂತ್: ಲಕ್ನೋ ತಂಡವು 2025 ರ ಐಪಿಎಲ್ನಲ್ಲಿ ಏಳನೇ ಸ್ಥಾನ ಪಡೆದುಕೊಂಡಿತ್ತು. ಆಡಿದ್ದ 14 ಪಂದ್ಯಗಳಲ್ಲಿ ಎಂಟರಲ್ಲಿ ಸೋತಿತ್ತು. ಇದೀಗ 2026 ರಲ್ಲಿಯೂ ಅಡಿರುವ 11 ಪಂದ್ಯಗಳಲ್ಲಿ ಎಂಟರಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ. ಈ ತಂಡವು ಪ್ಲೇಆಫ್ ರೇಸ್ನಿಂದ ಹೊರಗಿದೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಲಕ್ನೋ ತಂಡಕ್ಕೆ ಹೊಸ ನಾಯಕ ಸಿಗಬಹುದು.

ಅಕ್ಷರ್ ಪಟೇಲ್: ಅಕ್ಷರ್ ಪಟೇಲ್ ನಾಯಕತ್ವದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 2025 ರಲ್ಲಿಯೂ ಪ್ಲೇಆಫ್ ತಲುಪಲು ವಿಫಲವಾಗಿತ್ತು. ಇದೀಗ, ತಂಡವು 2026 ರಲ್ಲಿಯೂ ಪ್ಲೇಆಫ್ ತಲುಪುವ ಸಾಧ್ಯತೆಯಿಲ್ಲ. ನಾಯಕನಾದ ನಂತರ ಅಕ್ಷರ ಪಟೇಲ್ ಅವರ ಪ್ರದರ್ಶನವೂ ಕುಸಿದಿದೆ. ಅದಕ್ಕಾಗಿಯೇ ದೆಹಲಿ ತಂಡವು 2027 ರ ಆವೃತ್ತಿಗೆ ಹೊಸ ನಾಯಕನನ್ನು ನೇಮಿಸಬಹುದು.

ಹಾರ್ದಿಕ್ ಪಾಂಡ್ಯ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ನ ಪ್ರದರ್ಶನವು ಈ ಸೀಸನ್ನಲ್ಲಿ ಉತ್ತಮವಾಗಿಲ್ಲ. ಬಲಿಷ್ಠ ಅಂತರರಾಷ್ಟ್ರೀಯ ಆಟಗಾರರ ಸಂಯೋಜನೆ, ತಂಡದೊಳಗಿನ ಅಂತಃಕಲಹ ಮತ್ತು ಫಾಲೋ-ಅನ್ಫಾಲೋ ವಿವಾದ ಇವೆಲ್ಲವೂ ಫ್ರಾಂಚೈಸಿಯನ್ನು ಪರಿಶೀಲನೆಗೆ ಒಳಪಡಿಸಿವೆ. ಇದೆಲ್ಲದರ ನಡುವೆ ಹಾರ್ದಿಕ್ ಮುಂಬೈ ತಂಡವನ್ನು ತೊರೆಯಬಹುದು ಎಂಬ ವದಂತಿಗಳು ಹರಡಿವೆ. ಪರಿಣಾಮವಾಗಿ, ಮುಂಬೈ ಇಂಡಿಯನ್ಸ್ 2027 ರಲ್ಲಿ ಹಾರ್ದಿಕ್ ಹೊರತುಪಡಿಸಿ ಬೇರೆಯವರನ್ನು ನಾಯಕನನ್ನಾಗಿ ನೇಮಿಸುವ ಸಾಧ್ಯತೆಯಿದೆ.

ಅಜಿಂಕ್ಯ ರಹಾನೆ: ಕಳೆದ ಐಪಿಎಲ್ನಲ್ಲಿ ಏಳು ಪಂದ್ಯಗಳಲ್ಲಿ ಸೋತಿದ್ದ ಕೆಕೆಆರ್, ಪ್ರಸ್ತುತ ಸೀಸನ್ನಲ್ಲೂ ಕಳಪೆ ಆರಂಭವನ್ನು ಪಡೆದುಕೊಂಡಿತು. ನಂತರ ತಂಡವು ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಪ್ಲೇಆಫ್ಗೆ ಪೈಪೋಟಿಯಲ್ಲಿದೆ. ಆದಾಗ್ಯೂ ಕೆಕೆಆರ್ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದರೂ ಪ್ಲೇಆಫ್ಗೇರುವ ಅವಕಾಶಗಳು ಕಡಿಮೆ. ಪರಿಣಾಮವಾಗಿ, ಕೆಕೆಆರ್ 2027 ರ ಸೀಸನ್ಗೂ ಮೊದಲು ಹೊಸ ನಾಯಕನನ್ನು ನೇಮಿಸಬಹುದು.

ರುತುರಾಜ್ ಗಾಯಕ್ವಾಡ್: 2025 ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಪ್ರದರ್ಶನ ಕಳಪೆಯಾಗಿತ್ತು, 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನ ಪಡೆದಿತ್ತು. ಈ ಆವೃತ್ತಿಯಲ್ಲಿಯೂ ತಂಡದ ಪ್ರದರ್ಶನ ಕಳಪೆಯಾಗಿದ್ದು ಪ್ಲೇಆಫ್ ತಲುಪಲು ಹೆಣಗಾಡುತ್ತಿದೆ. ನಾಯಕತ್ವದ ಒತ್ತಡದಲ್ಲಿ ರುತುರಾಜ್ ಅವರ ಬ್ಯಾಟಿಂಗ್ ಪ್ರದರ್ಶನವೂ ಕುಸಿದಿದೆ. ಸಂಜು ಸ್ಯಾಮ್ಸನ್ ಅವರಂತಹ ಅನುಭವಿ ಆಟಗಾರ ತಂಡದಲ್ಲಿರುವ ಕಾರಣ ಅವರಿಗೆ ನಾಯಕತ್ವ ಸಿಗಬಹುದು.




