AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sim Card: ನಿಮ್ಮ ಹೆಸರಿನಲ್ಲಿ ಲೆಕ್ಕಕ್ಕಿಂತ ಹೆಚ್ಚು ಸಿಮ್ ಕಾರ್ಡ್​ ಇದೆಯಾ?: ಸರ್ಕಾರ ತಂದಿದೆ ಹೊಸ ರೂಲ್ಸ್

ಒಂಬತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಚಂದಾದಾರರ ಸಿಮ್ ಕಾರ್ಡ್‌ಗಳನ್ನು ಪರಿಶೀಲಿಸುವಂತೆ ಟೆಲಿಕಾಂ ಇಲಾಖೆ  ನಿರ್ದೇಶನ ನೀಡಿದೆ. ದೇಶದಲ್ಲಿ ಸೈಬರ್​ ಅಪರಾಧಗಳು, ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

Sim Card: ನಿಮ್ಮ ಹೆಸರಿನಲ್ಲಿ ಲೆಕ್ಕಕ್ಕಿಂತ ಹೆಚ್ಚು ಸಿಮ್ ಕಾರ್ಡ್​ ಇದೆಯಾ?: ಸರ್ಕಾರ ತಂದಿದೆ ಹೊಸ ರೂಲ್ಸ್
Sim Card
TV9 Web
| Updated By: Vinay Bhat|

Updated on: Dec 09, 2021 | 1:16 PM

Share

ಈ ಹಿಂದೆ ನೀಮ್ಮ ಬಳಿ ಮತಚೀಟಿ (Voter Id card) ಅಥವಾ ರೇಷನ್​ ಕಾರ್ಡ್ (Ration card)​​ ಜೆರಾಕ್ಸ್ ಪ್ರತಿ (Xerox) ಇದ್ದರೆ ಸಿಮ್​ ಕಾರ್ಡ್​(SIM Card)  ಸುಲಭವಾಗಿ ಸಿಗುತ್ತಿತ್ತು. ಬೇಕಾದಷ್ಟು ನಂಬರ್​ ಬಳಸಬಹುದಾಗಿತ್ತು. ಅಷ್ಟೇ ಏಕೆ ಯಾರೋದ್ದೋ ಹೆಸರಿನಲ್ಲಿ ಯಾರಿಗೋ ಸಿಮ್​ ಕಾರ್ಡ್​ ಪಡೆದುಕೊಳ್ಳಬಹುದಿತ್ತು. ಸದ್ಯ ಇದನ್ನರಿತ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಬಿಗಿಗೊಳಿಸಿದೆ. ಕೇಂದ್ರ ಸರ್ಕಾರ ತಂದಿರುವ ಹೊಸ ರೂಲ್ಸ್ ಪ್ರಕಾರ, ಒಂಬತ್ತಕ್ಕಿಂತ ಹೆಚ್ಚು ಸಿಮ್​ ಕಾರ್ಡ್ ಹೊಂದಿದವರ ಫೋನ್​ ಸಂಪರ್ಕ ಕಡಿತಗೊಳ್ಳಲಿದೆಯಂತೆ. ಹೌದು, ಭಾರತದಾದ್ಯಂತ ಒಂಬತ್ತು ಸಂಪರ್ಕಗಳನ್ನು ಮೀರಿದ ಮತ್ತು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂನಲ್ಲಿ ಆರು ಸಂಪರ್ಕಗಳನ್ನು ಹೊಂದಿರುವ ಚಂದಾದಾರರ ಸಿಮ್ ಅನ್ನು ಮರುಪರಿಶೀಲಿಸಲು ಮತ್ತು ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳಿಸಲು ದೂರಸಂಪರ್ಕ ಇಲಾಖೆ (DOT) ಆದೇಶ ಹೊರಡಿಸಿದೆ.

ಒಂಬತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಚಂದಾದಾರರ ಸಿಮ್ ಕಾರ್ಡ್‌ಗಳನ್ನು ಪರಿಶೀಲಿಸುವಂತೆ ಟೆಲಿಕಾಂ ಇಲಾಖೆ  ನಿರ್ದೇಶನ ನೀಡಿದೆ. ದೇಶದಲ್ಲಿ ಸೈಬರ್​ ಅಪರಾಧಗಳು, ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ನಿಯಮಗಳ ಪ್ರಕಾರ ಬಳಕೆಯಲ್ಲಿ ಇಲ್ಲದ ಎಲ್ಲಾ ಫ್ಲ್ಯಾಗ್​ ಮಾಡಲಾದ ಮೊಬೈಲ್​ ಸಂಪರ್ಕಗಳನ್ನು ಡೇಟಾಬೇಸ್​ನಿಂದ ತೆಗೆದು ಹಾಕುವಂತೆ ಟೆಲಿಕಾಂ ಆಪರೇಟರ್​ಗಳಿಗೆ ಡಿಓಟಿ ಸೂಚನೆ ನೀಡಿದೆ.

ಡಿಸೆಂಬರ್ 7 ರಂದು ಹೊರಡಿಸಿದ ಆದೇಶದ ಪ್ರಕಾರ ಚಂದಾದಾರರಿಗೆ ಉಳಿದ ಸಂಪರ್ಕಗಳನ್ನು ಉಳಿಸಿಕೊಳ್ಳಲು ಮತ್ತು ನಿಷ್ಕ್ರಿಯಗೊಳಿಸಲು ಬಯಸುವ ಸಂಪರ್ಕವನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಬಳಕೆಯಲ್ಲಿ ಇಲ್ಲದ ಸಿಮ್ ಕಾರ್ಡ್ ಅನ್ನು ಅಥವಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್ಗಳು ಡಿಒಟಿಗೆ ತಿಳಿಸಿದೆ. ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದ ಪ್ರಕಾರ ಗ್ರಾಹಕರಿಗೆ ಅವರು ಉಳಿಸಿಕೊಳ್ಳಲು ಬಯಸುವ ಸಿಮ್​ನ್ನು ಆಯ್ಕೆ ಮಾಡಲು ಹಾಗೂ ಉಳಿದ ಸಿಮ್​ಗಳನ್ನು ನಿಷ್ಕ್ರಿಯಗೊಳಿಸಲು ಆಯ್ಕೆ ನೀಡಲಾಗುತ್ತದೆ.

“ಹೊರಹೋಗುವ (ಡೇಟಾ ಸೇವೆಗಳನ್ನು ಒಳಗೊಂಡಂತೆ) ಫ್ಲಾಗ್ ಮಾಡಲಾದ ಮೊಬೈಲ್ ಸಂಪರ್ಕದ ಸೌಲಭ್ಯಗಳನ್ನು 30 ದಿನಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ ಮತ್ತು ಚಂದಾದಾರರು ಪರಿಶೀಲನೆಗೆ ಹಾಜರಾಗಿದ್ದರೆ ಮತ್ತು ಶರಣಾಗಲು, ವರ್ಗಾಯಿಸಲು ಅವರ ಆಯ್ಕೆಯನ್ನು ಚಲಾಯಿಸಿದರೆ ಒಳಬರುವ ಸೇವೆಯನ್ನು 45 ದಿನಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಯಾವುದೇ ಚಂದಾದಾರರು ಮರು-ಪರಿಶೀಲನೆಗೆ ಬಾರದಿದ್ದಲ್ಲಿ, ಫ್ಲ್ಯಾಗ್ ಮಾಡಿದ ಸಂಖ್ಯೆಯನ್ನು ಡಿಸೆಂಬರ್ 7 ರಿಂದ ಎಣಿಸಲು 60 ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ. ಅಂತರರಾಷ್ಟ್ರೀಯ ರೋಮಿಂಗ್‌ನಲ್ಲಿರುವ ಅಥವಾ ದೈಹಿಕ ಅಂಗವೈಕಲ್ಯ ಅಥವಾ ಚಂದಾದಾರರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಹೆಚ್ಚುವರಿ 30 ದಿನಗಳನ್ನು ಒದಗಿಸಲಾಗುತ್ತದೆ” ಎಂದು ಆದೇಶವು ಹೇಳಿದೆ.

ಇತ್ತೀಚೆಗಷ್ಟೆ ದೂರಸಂಪರ್ಕ (DOP) ಇಲಾಖೆಯು ಟೆಲಿಕಾಂ ಅನಾಲಿಟಿಕ್ಸ್‌ ಫಾರ್‌ ಫ್ರಾಡ್‌ ಮ್ಯಾನೇಜ್‌ಮೆಂಟ್‌ ಮತ್ತು ಗ್ರಾಹಕ ರಕ್ಷಣೆ ಅಥವಾ TAFCOP ಎಂದು ಕರೆಯಲಾಗುವ ಹೊಸ ಪೋರ್ಟಲ್‌ ಅನ್ನು ಪರಿಚಯಿಸಿತ್ತು. ಇದರ ಮೂಲಕ ಬಳಕೆದಾರರು ತಮ್ಮ ಆಧಾರ್‌ ಸಂಖ್ಯೆಗೆ ಲಿಂಕ್ ಮಾಡಿರುವ ಎಲ್ಲಾ ಫೋನ್‌ಗಳನ್ನು ಪರಿಶೀಲಿಸಲು ಇದರಿಂದ ಸಾಧ್ಯವಾಗುತ್ತದೆ.

Google Year in Search 2021: 2021 ರಲ್ಲಿ ಗೂಗಲ್​ನಲ್ಲಿ ಜನರು ಅತಿ ಹೆಚ್ಚು ಸರ್ಚ್ ಮಾಡಿದ ವಿಷಯ ಏನು ಗೊತ್ತೇ?

(Central government order to disconnect the phone connections of people with more than nine sim cards)

​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು