UPI LITE: ಪೇಟಿಎಂ ಆ್ಯಪ್ ಬಳಸುವವರಿಗೆ ಬಂಪರ್ ಸುದ್ದಿ: ಬಿಡುಗಡೆ ಆಗಿದೆ ಹೊಸ ಆ್ಯಪ್

Paytm: ನೀವು ಪೇಟಿಎಂ ಆ್ಯಪ್ ಬಳಸುತ್ತಿದ್ದರೆ ಇನ್ಮುಂದೆ ನೀವು ಯುಪಿಐ ಲೈಟ್ (UPI LITE) ಸೇವೆಗಳನ್ನು ಸಹ ಬಳಸಲು ಸಾಧ್ಯವಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಪೇಟಿಎಂ ಸಹಯೋಗದಲ್ಲಿ ಪೇಟಿಎಂ ಅಪ್ಲಿಕೇಶನ್‌ನಲ್ಲಿ ನೂತನವಾಗಿ ಯುಪಿಐ ಲೈಟ್ ಸೇವೆಗಳನ್ನು ಆರಂಭಿಸಲಾಗಿದೆ.

UPI LITE: ಪೇಟಿಎಂ ಆ್ಯಪ್ ಬಳಸುವವರಿಗೆ ಬಂಪರ್ ಸುದ್ದಿ: ಬಿಡುಗಡೆ ಆಗಿದೆ ಹೊಸ ಆ್ಯಪ್
UPI LITE
Follow us
|

Updated on:Feb 24, 2023 | 11:35 AM

ಇಂದಿನ ಸ್ಮಾರ್ಟ್​​ ಯುಗದಲ್ಲಿ ಹೆಚ್ಚಿನ ಜನರು ಸ್ಮಾರ್ಟ್​​ಫೋನ್ (Smartphon) ಮೂಲಕವೇ ಅರ್ಧ ಕೆಲಸ ಮುಗಿಸಿಬಿಡುತ್ತಾರೆ. ಅದರಲ್ಲೂ ಆನ್​ಲೈನ್ ಪೇಮೆಂಟ್ ವಿಚಾರಕ್ಕೆ ಬರುವುದಾದರೆ ಕ್ಯಾಶ್ ಕೊಟ್ಟು ಏನಾದರು ಖರೀದಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ಬಹುತೇಕರು ಸ್ಮಾರ್ಟ್​​ಫೋನ್​ನಲ್ಲಿ ಫೋನ್ ಪೇ (PhonePe), ಗೂಗಲ್ ಪೇ, ಪೇಟಿಎಂ ನಂತರ ಯುಪಿಐ ಆ್ಯಪ್ ಇನ್​ಸ್ಟಾಲ್ ಮಾಡಿ ಅದರ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಾರೆ. ಇದರಲ್ಲಿ ನೀವು ಪೇಟಿಎಂ ಆ್ಯಪ್ ಬಳಸುತ್ತಿದ್ದರೆ ಇನ್ಮುಂದೆ ನೀವು ಯುಪಿಐ ಲೈಟ್ (UPI LITE) ಸೇವೆಗಳನ್ನು ಸಹ ಬಳಸಲು ಸಾಧ್ಯವಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಪೇಟಿಎಂ ಸಹಯೋಗದಲ್ಲಿ ಪೇಟಿಎಂ ಅಪ್ಲಿಕೇಶನ್‌ನಲ್ಲಿ ನೂತನವಾಗಿ ಯುಪಿಐ ಲೈಟ್ ಸೇವೆಗಳನ್ನು ಆರಂಭಿಸಲಾಗಿದೆ.

ಇದರ ಮೂಲಕ ಪೇಟಿಎಂ ಗ್ರಾಹಕರು ಸಣ್ಣ ಪಾವತಿಗಳು, ಇಂಟರ್‌ನೆಟ್ ಇಲ್ಲದೆ ಹಣ ಪಾವತಿ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆಯಬಹುದು. ಇದರೊಂದಿಗೆ ಈಗ ಪೇಟಿಎಮ್‌ ಯುಪಿಐ ಲೈಟ್‌ ಬಳಕೆದಾರರಿಗೆ ಪಿನ್‌ ನಮೂದಿಸಿ ಎಂದು ಕೇಳದೆ ಹಣ ಪಾವತಿಗೆ ಅನುಕೂಲ ಮಾಡಿಕೊಡುತ್ತಿದೆ. ಯುಪಿಐ ಲೈಟ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ವಿನ್ಯಾಸಗೊಳಿಸಿದ್ದು, ಸೆಪ್ಟೆಂಬರ್ 2022 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಲಾಂಚ್‌ ಮಾಡಲಾಗಿತ್ತು. ಅದರಂತೆ ಬ್ಯಾಂಕ್ ವಹಿವಾಟುಗಳ ಸಂಖ್ಯೆಯ ಬಗ್ಗೆ ಚಿಂತಿಸದೆ ಸಣ್ಣ ಮೌಲ್ಯದ ವಹಿವಾಟುಗಳನ್ನು ಇದು ಅನುಮತಿಸಲಿದ್ದು, ಈ ಫೀಚರ್ಸ್‌ ದೇಶಾದ್ಯಂತ ಡಿಜಿಟಲ್ ಪಾವತಿಗಳ ಇನ್ನಷ್ಟು ಬಳಕೆಗೆ ಅನುವು ಮಾಡಿಕೊಡಲಿದೆ.

IPL 2023: 4K ರೆಸಲ್ಯೂಶನ್​ನಲ್ಲಿ ಐಪಿಎಲ್ 2023 ವೀಕ್ಷಿಸಿ: ಜಿಯೋ ಬಳಕೆದಾರರಿಗೆ ಬಂಪರ್ ಸುದ್ದಿ

ಇದನ್ನೂ ಓದಿ
Image
Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಎಲ್ಲರಂತೆ ನೀವು ಕೂಡ ಈ ತಪ್ಪು ಮಾಡಬೇಡಿ
Image
WhatsApp Edit Message: ವಾಟ್ಸ್​ಆ್ಯಪ್​ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು: ಹೇಗೆ ಗೊತ್ತೇ?
Image
Mobile Lost: ಮೊಬೈಲ್ ಕಳೆದುಹೋದರೆ ಸುಲಭದಲ್ಲಿ ನೀವೇ ಹುಡುಕುವುದು ಹೇಗೆ?
Image
Infinix Smart 7: 6000mAh ಬ್ಯಾಟರಿ: ಭಾರತದಲ್ಲಿ ಕೇವಲ 7,299 ರೂ. ಗೆ ರಿಲೀಸ್ ಆಗಿದೆ ಹೊಸ ಫೋನ್: ಯಾವುದು?

ಪಿನ್‌ ನಮೂದಿಸಬೇಕಾದ ಅವಶ್ಯಕತೆಯಿಲ್ಲ:

ವಿಶೇಷ ಎಂದರೆ ಇದರಲ್ಲಿ ನೀವು ಹಣ ಪಾವತಿ ಮಾಡುವಾಗ ಯುಪಿಐ ಪಿನ್‌ ನಮೂದಿಸಬೇಕಾದ ಅವಶ್ಯಕತೆಯಿಲ್ಲ, ಏಕೆಂದರೆ, ಇದು ನಿಮ್ಮ ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸುವುದಿಲ್ಲ. ಬದಲಾಗಿ ನಿಮ್ಮ ಹಣವನ್ನು ವಾಲೆಟ್‌ನಲ್ಲಿ ಇಟ್ಟುಕೊಂಡು, ಹಣವನ್ನು ಕಳುಹಿಸುತ್ತದೆ ಅಥವಾ ಸ್ವೀಕರಿಸುತ್ತದೆ. ಆಂದರೆ, ಇದಕ್ಕಾಗಿ ನೀವು ಮೊದಲೇ ಹಣವನ್ನು ಸೇರಿಸಬೇಕು. ಈ ಫೀಚರ್ಸ್‌ ಮೂಲಕ ಬಳಕೆದಾರರು ಒಂದು ದಿನದಲ್ಲಿ 200 ರೂ. ಗಳನ್ನು ಪಾವತಿ ಮಾಡಬಹುದಾಗಿದೆ. ಪಾವತಿ ಪ್ರಕ್ರಿಯೆಯು ತ್ವರಿತ ಮತ್ತು ತಡೆರಹಿತ ವಹಿವಾಟಾಗಿದ್ದು, ಇದರೊಂದಿಗೆ ಬಳಕೆದಾರರು ತಮ್ಮ ಈ ಲೈಟ್ ವ್ಯಾಲೆಟ್‌ಗೆ ದಿನಕ್ಕೆ ಎರಡು ಬಾರಿ 2,000 ರೂ. ಗಳನ್ನು ಆಡ್‌ ಮಾಡಬಹುದಾಗಿದ್ದು, ಈ ಮೂಲಕ ದಿನವೂ 4,000 ರೂ. ಗಳ ವರೆಗೆ ಉಪಯೋಗಿಸಬಹುದು.

ಇದು ಥೇಟ್ ಯುಪಿಐ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಆದರೆ, ಇದಕ್ಕಿಂತಲೂ ಸರಳವಾಗಿ ಸೇವೆಗಳನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ ಪರಿಚಯಿಸಿರುವ ಹೊಸ ಪೇಮೆಂಟ್ ತಂತ್ರಜ್ಞಾನ ಇದಾಗಿದೆ. ಮುಖ್ಯವಾಗಿ ಇಂಟರ್‌ನೆಟ್‌ ಇಲ್ಲದಿದ್ದರೂ ಕೂಡ ವೇಗವಾಗಿ ಮತ್ತು ಸರಳವಾಗಿ ಹಣ ಪಾವತಿ ಮಾಡಬಹುದು ಎಂಬುದು ಪ್ಲಸ್ ಪಾಯಿಂಟ್. ಆನ್-ಡಿವೈಸ್ ವ್ಯಾಲೆಟ್ ಆಗಿರುವ ಯುಪಿಐ ಲೈಟ್​ನಲ್ಲಿ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ವಾಲೆಟ್‌ಗೆ ಹಣವನ್ನು ಸೇರಿಸಬೇಕಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Fri, 24 February 23

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ