AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಮೊಬೈಲ್​ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡುವ ಮೊದಲು ಈ ವಿಷಯಗಳನ್ನು ಪರಿಶೀಲಿಸಿ

Fake App: ಹೆಚ್ಚಿನ ಆ್ಯಪ್​ಗಳು ನಕಲಿ ಅಪ್ಲಿಕೇಶನ್ ಆಗಿರುತ್ತದೆ. ನೀವು ಅದನ್ನು ಸರಿಯಾಗಿ ಪರಿಶೀಲಿಸದಿದ್ದರೆ ತೊಂದರೆಗೆ ಒಳಗಾಗುವುದು ಖಚಿತ. ಇದರಿಂದಾಗಿ ನಿಮ್ಮ ಫೋನ್‌ನ ವೈಯಕ್ತಿಕ ಡೇಟಾವನ್ನು ಕದಿಯಬಹುದು.

Tech Tips: ಮೊಬೈಲ್​ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡುವ ಮೊದಲು ಈ ವಿಷಯಗಳನ್ನು ಪರಿಶೀಲಿಸಿ
Play Store and App Store
Follow us
Vinay Bhat
|

Updated on: Aug 04, 2023 | 1:48 PM

ಇಂದು ಬಹುತೇಕ ಎಲ್ಲರೂ ಸ್ಮಾರ್ಟ್​ಫೋನ್​ಗಳನ್ನು (Smartphones) ಬಳಸುತ್ತಿದ್ದಾರೆ. ಆನ್‌ಲೈನ್ ವಹಿವಾಟಿನಿಂದ ಹಿಡಿದು ಶಾಪಿಂಗ್‌ವರೆಗೆ ಮತ್ತು ಕಚೇರಿ ಕೆಲಸಗಳನ್ನು ಸಹ ಮೊಬೈಲ್ ಫೋನ್‌ಗಳ ಮೂಲಕವೇ ಮಾಡಲಾಗುತ್ತದೆ. ಬಿಡುವಿನ ಸಮಯದಲ್ಲಿ ಮೊಬೈಲ್​ನಲ್ಲಿ ಅನೇಕರು ಹಲವು ಗೇಮ್​ಗಳನ್ನು ಕೂಡ ಆಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ಗೇಮ್ಸ್ (Games) ಆಡುವಾಗ ಅಥವಾ ಯಾವುದೇ ಕೆಲಸ ಮಾಡುವಾಗ ಬೇರೆ ಯಾವುದಾದರೂ ಆ್ಯಪ್ ಡೌನ್‌ಲೋಡ್ (Download) ಮಾಡುವ ಜಾಹೀರಾತುಗಳು ಬರುತ್ತಲೇ ಇರುತ್ತವೆ. ನೀವು ಅದನ್ನು ಒಂದೇ ಕ್ಲಿಕ್‌ನಲ್ಲಿ ಡೌನ್​ಲೋಡ್ ಮಾಡಬಹುದು. ಆದರೆ ಇದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಯೋಚಿಸಿದ್ದೀರಾ?.

ನಿಮ್ಮ ಫೋನ್‌ನ ವೈಯಕ್ತಿಕ ಡೇಟಾವನ್ನು ಕದಿಯಬಹುದು:

ಈ ರೀತಿಯ ಹೆಚ್ಚಿನ ಆ್ಯಪ್​ಗಳು ನಕಲಿ ಅಪ್ಲಿಕೇಶನ್ ಆಗಿರುತ್ತದೆ. ನೀವು ಅದನ್ನು ಸರಿಯಾಗಿ ಪರಿಶೀಲಿಸದಿದ್ದರೆ ತೊಂದರೆಗೆ ಒಳಗಾಗುವುದು ಖಚಿತ. ಇದರಿಂದ ನಿಮ್ಮ ಫೋನ್‌ನ ವೈಯಕ್ತಿಕ ಡೇಟಾವನ್ನು ಕದಿಯಬಹುದು. ನೀವು ಜಾಹೀರಾತು ಅಥವಾ ಫಾರ್ವರ್ಡ್ ಮಾಡಿದ ಲಿಂಕ್, ಇಲ್ಲವೆ ಆ್ಯಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದರೆ ಏನೇನು ಪರಿಶೀಲಿಸಬೇಕೆಂದು ತಿಳಿಸಿಕೊಡುತ್ತೇವೆ.

Amazon Great Freedom Festival sale: ಅಮೆಜಾನ್​ನಲ್ಲಿ ಶುರುವಾಗಿದೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್: ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಬಂಪರ್ ಡಿಸ್ಕೌಂಟ್

ಇದನ್ನೂ ಓದಿ
Image
ಭಾರತ ಸರ್ಕಾರ ಲ್ಯಾಪ್‌ಟಾಪ್‌ಗಳ ಆಮದಿನ ಮೇಲೆ ನಿರ್ಬಂಧ ಹೇರಿದ್ದೇಕೆ?: ಸದ್ಯದಲ್ಲೇ ಲ್ಯಾಪ್‌ಟಾಪ್‌ಗಳ ಬೆಲೆ ಹೆಚ್ಚಳ?
Image
Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಬಂಪರ್ ಆಫರ್ ಮಿಸ್ ಮಾಡ್ಬೇಡಿ
Image
Redmi 12 4G: ಶಓಮಿ ರೆಡ್ಮಿ ಹೊಸ ಫೋನ್ ಬೆಲೆ ₹8,999! ಬೆಸ್ಟ್ ಆಫರ್ ಇಲ್ಲಿದೆ..
Image
Redmi SonicBass: ಶಓಮಿ ರೆಡ್ಮಿ ಹೊಸ ವೈರ್​ಲೆಸ್ ನೆಕ್​ಬ್ಯಾಂಡ್ ಬಿಡುಗಡೆ

ಅಪ್ಲಿಕೇಶನ್ ಹೆಸರು ಮತ್ತು ಐಕಾನ್, ಕಾಗುಣಿತವನ್ನು ಪರಿಶೀಲಿಸಿ:

ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್​ನ ಆ್ಯಪ್ ಸ್ಟೋರ್ ಅಥವಾ ಯಾವುದೇ ಜಾಹೀರಾತು ಲಿಂಕ್‌ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಇದನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅನೇಕ ಬಾರಿ ಅಸಲಿ ಮತ್ತು ನಕಲಿ ಅಪ್ಲಿಕೇಶನ್‌ಗಳ ನಡುವೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಜನರು ನಕಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಬಿಡುತ್ತಾರೆ. ಆದ್ದರಿಂದ ಅಪ್ಲಿಕೇಶನ್ ಹೆಸರು ಕಾಗುಣಿತ ಮತ್ತು ಐಕಾನ್ ಅನ್ನು ಸರಿಯಾಗಿ ಪರಿಶೀಲಿಸಿ.

ಅಪ್ಲಿಕೇಶನ್ ಡೆವಲಪರ್ ವಿವರಗಳನ್ನು ಪರಿಶೀಲಿಸಿ:

ಯಾವುದೇ ಅಪ್ಲಿಕೇಶನ್ ಅನ್ನು ಡೌನ್​ಲೋಡ್ ಮಾಡುವ ಮೊದಲು, ಅಪ್ಲಿಕೇಶನ್ ಡೆವಲಪರ್ ಯಾರೆಂದು ಪರಿಶೀಲಿಸಿ. ಅದನ್ನು ಗುರುತಿಸಲು ಸುಲಭವಾದ ಮಾರ್ಗವೆಂದರೆ ನಿಜವಾದ ಅಪ್ಲಿಕೇಶನ್​ನಲ್ಲಿ ಡೆವಲಪರ್ ವಿವರಗಳು ಎಲ್ಲಿಯಾದರೂ ಸುಲಭವಾಗಿ ಲಭ್ಯವಿರುತ್ತವೆ. ಆದರೆ ನಕಲಿ ಡೆವಲಪರ್ ವಿವರಗಳು ಲಭ್ಯವಿಲ್ಲ. ಅಪೂರ್ಣ ಮಾಹಿತಿಯನ್ನು ಹೊಂದಿರುವ ಡೆವಲಪರ್‌ಗಳು ನಕಲಿಯಾಗಿರಬಹುದು.

ಎಷ್ಟು ಡೌನ್‌ಲೋಡ್‌ ಆಗಿದೆಯೆಂದು ಪರಿಶೀಲಿಸಿ:

ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅದರ ಡೌನ್‌ಲೋಡ್‌ಗಳನ್ನು ಪರಿಶೀಲಿಸಿ. ಏಕೆಂದರೆ ಒರಿಜಿನಲ್ ಆ್ಯಪ್‌ಗಳ ಡೌನ್‌ಲೋಡ್‌ಗಳು ಲಕ್ಷ ಮತ್ತು ಕೋಟಿಗಳಲ್ಲಿವೆ ಮತ್ತು ನಕಲಿ ಅಪ್ಲಿಕೇಶನ್‌ಗಳು ಹೆಚ್ಚಿನ ಡೌನ್‌ಲೋಡ್‌ಗಳನ್ನು ಹೊಂದಿರುವುದಿಲ್ಲ.

ಅಪ್ಲಿಕೇಶನ್‌ನ ವಿಮರ್ಶೆಗಳನ್ನು ಓದಿ:

ಕೆಲವೊಮ್ಮೆ ನಕಲಿ ಅಪ್ಲಿಕೇಶನ್‌ಗಳು ಕೂಡ ಹೆಚ್ಚಿನ ಸಂಖ್ಯೆಯ ಡೌನ್‌ಲೋಡ್‌ಗಳನ್ನು ಹೊಂದಿರುತ್ತವೆ, ಆದ್ದರಿಂದ ನಕಲಿ ಅಪ್ಲಿಕೇಶನ್‌ಗಳನ್ನು ಗುರುತಿಸಲು ಅಪ್ಲಿಕೇಶನ್‌ನ ಕೆಳಗೆ ಬರೆದಿರುವ ವಿಮರ್ಶೆಗಳನ್ನು ಓದಲು ಮರೆಯದಿರಿ. ಅದರ ಮೂಲಕ ನಿಮಗೆ ಸತ್ಯ ತಿಳಿಯುತ್ತದೆ.

ನಕಲಿ ಅಪ್ಲಿಕೇಶನ್‌ಗಳಿಂದ ವೈಯಕ್ತಿಕ ಡೇಟಾದ ಅಪಾಯ:

ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದಾಗ, ಅದು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಪ್ರವೇಶಿಸುತ್ತದೆ. ಇವೆರಡೂ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತವೆ. ಹೀಗಾದಾಗ ನಕಲಿ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗೆ ಪ್ರವೇಶವನ್ನು ಪಡೆಯಬಹುದು ಮತ್ತು ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ