AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Privacy Policy: ವಾಟ್ಸಾಪ್ ಖಾಸಗಿತನ ನೀತಿ 2021 ಒಪ್ಪಿಕೊಳ್ಳಲು ಮೇ 15 ಕೊನೆ ದಿನ; ಸಮ್ಮತಿಸದವರ ಖಾತೆ ಏನಾಗುತ್ತೆ?

WhatsApp Privacy Policy: ವಾಟ್ಸಾಪ್ ಖಾಸಗಿತನದ ನೀತಿ 2021 ಒಪ್ಪಿಕೊಳ್ಳುವುದಕ್ಕೆ ಮೇ 15, ಅಂದರೆ ಇಂದು ಕೊನೆಯ ದಿನ. ಒಂದು ವೇಳೆ ಸಮ್ಮತಿ ಸೂಚಿಸದಿದ್ದರೆ ಏನಾಗುತ್ತದೆ ಎಂಬ ವಿವರ ಇಲ್ಲಿದೆ.

WhatsApp Privacy Policy: ವಾಟ್ಸಾಪ್ ಖಾಸಗಿತನ ನೀತಿ 2021 ಒಪ್ಪಿಕೊಳ್ಳಲು ಮೇ 15 ಕೊನೆ ದಿನ; ಸಮ್ಮತಿಸದವರ ಖಾತೆ ಏನಾಗುತ್ತೆ?
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 15, 2021 | 8:09 PM

ವಾಟ್ಸಾಪ್ 2021 ಖಾಸಗಿ ನೀತಿ ಅಪ್​ಡೇಟ್​ ಗಡುವು ಮೇ 15ನೇ ತಾರೀಕು, 2021 ಆಗಿತ್ತು. ಇನ್ನು ಬಳಕೆದಾರರು ಒಂದೋ ಅದನ್ನು ಒಪ್ಪಿಕೊಳ್ಳಬೇಕು ಅಥವಾ ಒಂದೊಂದೇ ಫೀಚರ್​ಗಳನ್ನು ಬಳಸುವುದಕ್ಕೆ ಸಾಧ್ಯವಾಗಲ್ಲ ಮತ್ತು ಮುಂಬರುವ ವಾರಗಳಲ್ಲಿ ಚಾಟ್​ಲಿಸ್ಟ್ ಕೂಡ ಬಳಕೆಗೆ ಲಭ್ಯ ಇರಲ್ಲ. ಇದಕ್ಕೆ ಪರಿಹಾರ ಏನಪ್ಪಾ ಅಂದರೆ, ಒಂದೋ ನಿಯಮವನ್ನು ಒಪ್ಪಬೇಕು ಅಥವಾ ಬೇರೆ ಮೆಸೇಜಿಂಗ್ ಅಪ್ಲಿಕೇಷನ್ ಬಳಕೆ ಮಾಡಬೇಕು. ಖಾಸಗಿತನದ ನೀತಿಯನ್ನು ಒಪ್ಪಲಿಲ್ಲ ಅಂದಾಕ್ಷಣ ವಾಟ್ಸಾಪ್​ನಿಂದ ಖಾತೆ ಏನೂ ಡಿಲೀಟ್ ಆಗಲ್ಲ. ಆದರೆ ಕ್ರಮೇಣವಾಗಿ ಫೀಚರ್​ಗಳು ಮಿತಿಯಾಗುತ್ತಾ ಸಾಗುತ್ತವೆ. ಈಚೆಗಷ್ಟೇ ವಾಟ್ಸಾಪ್​ನಿಂದ ದೆಹಲಿ ಹೈಕೋರ್ಟ್​ನಲ್ಲಿ ಹೇಳಿರುವಂತೆ, ಹೊಸ ಖಾಸಗಿತನದ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳಲಿಲ್ಲ ಅಂದರೆ ವಾಟ್ಸಾಪ್ ಬಳಸುವುದನ್ನು ನಿಲ್ಲಿಸಬಹುದು. ಇದನ್ನು ಒಪ್ಪಿಕೊಳ್ಳಿ ಅಂತ ಯಾರಿಗೂ ಬಲವಂತ ಮಾಡುತ್ತಿಲ್ಲ ಎಂದು ಹೇಳಲಾಗಿತ್ತು. ಆದರೆ ಆ ನೀತಿಯನ್ನು ಒಪ್ಪಿಕೊಳ್ಳಲೂ ಇಲ್ಲ, ಆ್ಯಪ್ ಬಳಕೆಯನ್ನು ಮುಂದುವರಿಸುತ್ತೇವೆ ಅಂದರೆ ಏನಾಗುತ್ತದೆ? ಅದನ್ನು ತಿಳಿಯಬೇಕು ಅಂದರೆ ಮುಂದೆ ಓದಿ.

ವಾಟ್ಸಾಪ್ ಖಾಸಗಿ ನೀತಿಗಳನ್ನು ಒಪ್ಪಿಕೊಳ್ಳದಿದ್ದಲ್ಲಿ ಕ್ರಮೇಣ ಬಳಕೆದಾರರಿಗೆ ಫೀಚರ್​ಗಳು ಸಿಗುವುದು ಕಡಿಮೆ ಆಗುತ್ತಾ ಹೋಗುತ್ತದೆ. ಇನ್ನು ನಾಳೆಯಿಂದ (ಮೇ 16, 2021) ವಾಟ್ಸಾಪ್​ನಿಂದ ನೆನಪಿಸುವುದಕ್ಕೆ ಶುರು ಮಾಡಲಾಗುತ್ತದೆ. ಹೊಸ ಖಾಸಗಿತನ ನೀತಿ ಒಪ್ಪಿಕೊಳ್ಳಿ ಎಂದು ನೆನಪಿಸುವುದಕ್ಕೆ ಆರಂಭವಾಗುತ್ತದೆ. ಕೆಲವು ವಾರಗಳು ಕಳೆದ ನಂತರ, ಯಾರು ಅಪ್​ಡೇಟ್​ ಒಪ್ಪಿಕೊಂಡಿರುವುದಿಲ್ಲವೋ ಅಂಥವರಿಗೆ ಕೆಲವು ಫೀಚರ್​ಗಳನ್ನು ದೊರೆಯದಂತೆ ಮಾಡಲಾಗುತ್ತದೆ. ಆಮೇಲೆ ವಾಟ್ಸಾಪ್​ನಿಂದ ನಿರಂತರವಾಗಿ ನೆನಪಿಸಲಾಗುತ್ತದೆ. ಇದು ಶುರುವಾದ ಮೇಲೆ ಬಳಕೆದಾರರಿಗೆ ಚಾಟ್​ಲಿಸ್ಟ್​ ಸಿಗುವುದಿಲ್ಲ. ಏನಿದ್ದರೂ ಒಳಬರುವ ಹಾಗೂ ಹೊರಹೋಗುವ ಧ್ವನಿ ಅಥವಾ ವಿಡಿಯೋ ಕಾಲ್​ಗಳಿಗೆ ಉತ್ತರಿಸಬಹುದು. ಫೋನ್​ಗೆ ನೋಟಿಫಿಕೇಷನ್ ಬಂದಾಗ ಸಂದೇಶ ಓದುವ ಅಥವಾ ಪ್ರತಿಕ್ರಿಯಿಸುವ ಅವಕಾಶ ಇರುತ್ತದೆ.

ಕೆಲವು ವಾರಗಳ ಸೀಮಿತ ಫಂಕ್ಷನಾಲಿಟಿ ಬಂದ ಮೇಲೆ ಆ ನಂತರವೂ ಖಾಸಗಿತನದ ನೀತಿಯನ್ನು ಒಪ್ಪಿಕೊಳ್ಳದಿದ್ದಲ್ಲಿ ಆಗ ಒಳಬರುವ ಹಾಗೂ ಹೊರಹೋಗುವ ಕರೆಗಳು ಸಹ ನಿಲ್ಲುತ್ತವೆ. ಸಂದೇಶಗಳು ಬರುವುದು ಹಾಗೂ ಹೋಗುವುದು ಸಹ ನಿಲ್ಲುತ್ತದೆ. ಈ ಹಂತದಲ್ಲಿ ವಾಟ್ಸಾಪ್ ಬಳಸಬೇಕಾ ಅಥವಾ ಬೇರೆಯದಕ್ಕೆ ಬದಲಾಗಬೇಕಾ ಎಂದು ತೀರ್ಮಾನ ಮಾಡಿಕೊಳ್ಳಬೇಕು. ಒಂದು ವೇಳೆ ವಾಟ್ಸಾಪ್ ಡಿಲೀಟ್​ ಮಾಡಬೇಕು ಹಾಗೂ ಡೇಟಾ ಡೌನ್​ಲೋಡ್ ಮಾಡಬೇಕು ಅಂದುಕೊಂಡಿದ್ದೀರಾ? ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಅಂದಹಾಗೆ ವಾಟ್ಸಾಪ್​ ಖಾತೆಯಲ್ಲಿನ ಮಾಹಿತಿಯನ್ನು ಡಿಲೀಟ್ ಮಾಡುವುದಕ್ಕೆ 90 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗುತ್ತದೆ.

ಹಂತ 1: ವಾಟ್ಸಾಪ್ ತೆರೆಯಿರಿ ಮತ್ತು ಬಲಗಡೆಯ ತುದಿಯಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ.

ಹಂತ 2: ಸೆಟ್ಟಿಂಗ್ಸ್​ ಮೇಲೆ ಒತ್ತಿ, ಅಕೌಂಟ್ ವಿಭಾಗಕ್ಕೆ ತೆರಳಿ ಮತ್ತು ಅಲ್ಲಿ ಡಿಲೀಟ್ ಮೈ ಅಕೌಂಟ್ ಆಯ್ಕೆಯನ್ನು ಒತ್ತಿ.

ಹಂತ 3: ಆ ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು ಹಾಗೂ ಡಿಲೀಟ್ ಮೈ ಅಕೌಂಟ್ ಒತ್ತಿ.

ಹಂತ 4: ಡ್ರಾಪ್​ ಡೌನ್​ನಲ್ಲಿ ಯಾವ ಕಾರಣಕ್ಕಾಗಿ ನೀವು ಖಾತೆಯನ್ನು ಡಿಲೀಟ್ ಮಾಡಲು ಬಯಸುತ್ತೀರಿ ಎಂದು ಕೇಳಲಾಗುತ್ತದೆ.

ಹಂತ 5: ಡಿಲೀಟ್ ಮೈ ಅಕೌಂಟ್ ಒತ್ತಿ.

ನಿಮ್ಮ ವೈಯಕ್ತಿಕ ಡೇಟಾವನ್ನು ಯಾವುದೇ ಥರ್ಡ್ ಪಾರ್ಟಿ ಆ್ಯಪ್​ಗೆ ಬಸಿದುಕೊಳ್ಳಬಹುದು. ಚಾಟ್​ ಅನ್ನು ತೆರೆದು, ಮೂರು ಚುಕ್ಕೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆ ಮೇಲೆ ಅದನ್ನು More ಎಂಬುದರ ಮೇಲೆ ಒತ್ತಿ, ಎಕ್ಸ್​ಪೋರ್ಟ್ ಚಾಟ್ ಆರಿಸಿಕೊಳ್ಳಬೇಕು. ಫೋಟೋ, ವಿಡಿಯೋ ಮತ್ತು ಇತರ ಮೀಡಿಯಾ ಹೀಗೆ ಎಲ್ಲ ಫೈಲ್​ಗಳನ್ನು ಸೇರಿಸಿಕೊಳ್ಳಬೇಕಾ ಎಂದು ಕೇಳಲಾಗುತ್ತದೆ. ಒಂದು ಸಲ Include Media ಎಂದು ಒತ್ತಿದರೆ ಗೂಗಲ್ ಡ್ರೈವ್, ಜಿಮೇಲ್ ಅಥವಾ ಬೇರೆ ಇತರ ಆ್ಯಪ್​ಗೆ ಎಕ್ಸ್​ಪೋರ್ಟ್ ಮಾಡಬೇಕಾ ಎಂಬ ಆಯ್ಕೆ ಬರುತ್ತದೆ.

ವಾಟ್ಸಾಪ್​ಗೆ ಪರ್ಯಾಯಗಳಿವೆಯಾ? ಹಲವಾರು ಮಂದಿ ಈಗಾಗಲೇ ವಾಟ್ಸಾಪ್ ಬಿಟ್ಟು ಬೇರೆ ಬೇರೆ ಮೆಸೇಜಿಂಗ್ ಆ್ಯಪ್​ಗೆ ಬದಲಾಗಿದ್ದಾರೆ. ಅದರಲ್ಲಿ ಟೆಲಿಗ್ರಾಮ್ ಮತ್ತು ಸಿಗ್ನಲ್ ಕೂಡ ಇವೆ. ಸದ್ಯಕ್ಕೆ ಇವೆರಡು ನಂಬಿಕಸ್ತ ಮೆಸೇಜಿಂಗ್ ಆ್ಯಪ್​ಗಳಾಗಿವೆ. ಟೆಲಿಗ್ರಾಮ್​ನಲ್ಲಿ ಎಂಡ್ ಟು ಎಂಡ್ ಎನ್​ಕ್ರಿಪ್ಷನ್ ಸೀಕ್ರೆಟ್ ಚಾಟ್​ಗೆ, ಒನ್-ಆನ್-ಒನ್ ವಿಡಿಯೋ ಅಥವಾ ವಾಯ್ಸ್ ವಾಯ್ಸ್​ ಕಾಲ್​ಗಳಿಗೆ ಮಾತ್ರ ಇದೆ. ಯಾರಿಗೆ ಭದ್ರತೆ ಬಗ್ಗೆ ಆತಂಕ ಇದೆಯೋ ಅಂಥವರು ಸೀಕ್ರೆಟ್ ಚಾಟ್​ ಮೋಡ್ ಎನೇಬಲ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: WhatsApp: ವಾಟ್ಸಾಪ್ ಖಾಸಗಿತನದ ನೀತಿ ಒಪ್ಪಿಕೊಳ್ಳುವುದು ಅನಿವಾರ್ಯ ಆಗಲಿದೆ ಏಕೆ ಗೊತ್ತಾ?

(If WhatsApp privacy policy 2021 not accepted by May 15, what will happen to account? Here is an explainer)

ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು
ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
Daily horoscope: ರವಿ ಮಿಥುನ ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್