Hasanamba Temple
ಹಾಸನದ ಅಧಿದೇವತೆ, ನಾಡಿನ ಶಕ್ತಿ ದೇವತೆ ಎಂದೇ ಪ್ರಸಿದ್ಧಳಾದ ಹಾಸನಾಂಬೆ ಅಥವಾ ಹಾಸನಾಂಬಾ ದೇವಿ ವರ್ಷದಲ್ಲಿ ಒಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಾಳೆ. ಹಾಸನದಲ್ಲಿ ಹುತ್ತದ ರೂಪದಲ್ಲಿ ನೆಲೆಸಿರುವ ಶಕ್ತಿದೇವತೆಯ ದರ್ಶನ ಸಾಮಾನ್ಯವಾಗಿ ದೀಪಾವಳಿಯ ಸಂದರ್ಭದಲ್ಲಿ ಆರಂಭವಾಗುತ್ತದೆ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯ ಗುರುವಾರ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಹಾಸನಾಂಬ ದೇಗುಲ ಸುಮಾರು 12ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಎನ್ನಲಾಗಿದೆ. ಹೊಯ್ಸಳ ರಾಜವಂಶದವರ ಕಾಲದಲ್ಲಿ ನಿರ್ಮಾಣವಾಗಿದ್ದು ಎನ್ನಲಾದ ಈ ದೇಗುಲಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಾರೆ. ಈ ವರ್ಷ (2024) ಅಕ್ಟೋಬರ್ 24ರ ಮದ್ಯಾಹ್ನ ದೇಗುಲದ ಬಾಗಿಲು ತೆರೆದರೆ ನವೆಂಬರ್ 3ಕ್ಕೆ ಮದ್ಯಾಹ್ನ 12ಕ್ಕೆ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತದೆ. ನಂತರ ಮುಂದಿನ ವರ್ಷವೇ ದೇವಿ ಭಕ್ತರಿಗೆ ದರ್ಶನ ನೀಡುವುದು
ಹಾಸನಾಂಬ ಹುಂಡಿಯಲ್ಲಿ ಇಂಡೋನೇಷ್ಯಾ, ಮಾಲ್ಡೀವ್ಸ್, ಅಮೆರಿಕ ಕರೆನ್ಸಿ! ರಾಶಿ ರಾಶಿ ಹಣ
ಹಾಸನಾಂಬೆಯ ದರ್ಶನೋತ್ಸವ ಈಗಾಗಲೇ ಮುಕ್ತಾಯಗೊಂಡಿದ್ದು, ಈ ಬಾರಿ ಊಹೆಗೂ ಮೀರಿದ ಭಕ್ತಸಾಗರವನ್ನು ಆಕರ್ಷಿಸಿತ್ತು. ಇದೀಗ ದರ್ಶನೋತ್ಸವದ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ ಇಂಡೋನೇಷ್ಯಾ, ಮಾಲ್ಡೀವ್ಸ್ ಹಾಗೂ ಅಮೆರಿಕ ಕರೆನ್ಸಿಗಳು ಪತ್ತೆಯಾಗಿದೆ. ಅಮೆರಿಕದ ಐದು ಡಾಲರ್ ಸೇರಿದಂತೆ ಭಕ್ತರು ಬರೆದ ಪತ್ರಗಳು, ಹಳೆಯ ಐದು ನೂರು ರೂಪಾಯಿ ನೋಟುಗಳೂ ಸಹ ಸಿಕ್ಕಿವೆ. ಬೆಳಿಗ್ಗೆಯಿಂದ ಆರಂಭವಾದ ಎಣಿಕೆ ಕಾರ್ಯವನ್ನು ಡಿಸಿ ಲತಾ ಮತ್ತು ಆಡಳಿತ ಅಧಿಕಾರಿ ಮಾರುತಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
- Bhavana Hegde
- Updated on: Oct 24, 2025
- 11:09 am
Hasanambe Temple Live: ಇಂದು ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್; ಲೈವ್ ನೋಡಿ
ವರ್ಷಕ್ಕೊಮ್ಮೆ ತೆರೆದಿದ್ದ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಮುಚ್ಚಲಿದೆ. ಅಕ್ಟೋಬರ್ 9ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ 26 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, 22 ಕೋಟಿ ರೂ.ಗೂ ಅಧಿಕ ಆದಾಯ ಸಂಗ್ರಹವಾಗಿದೆ. ವಿಶ್ವರೂಪ ದರ್ಶನದ ನಂತರ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚಲಾಗುವುದು.
- Gangadhar Saboji
- Updated on: Oct 23, 2025
- 11:15 am
ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ತೆರೆ: ನಾಳೆ ಗರ್ಭಗುಡಿ ಬಂದ್
ಸದ್ಯ, ಹಾಸನಾಂಬೆಯ ಸಾರ್ವಜನಿಕ ದರ್ಶನ ಸಂಜೆ 7ಕ್ಕೆ ಸ್ಥಗಿತಗೊಂಡಿದೆ.. ರಾತ್ರಿ 12 ಗಂಟೆ ತನಕ ನೈವೇದ್ಯ ಪೂಜೆ ನಡೆಯಲಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಈ ಬಾರಿ ಹಾಸನಾಂಬೆ ಉತ್ಸವಕ್ಕೆ ನಿರೀಕ್ಷೆಗೆ ಮೀರಿದ ಭಕ್ತರು ಆಗಮಿಸಿದ್ದಾರೆ.
- Manjunath KB
- Updated on: Oct 22, 2025
- 10:06 pm
ಕೇವಲ 12 ದಿನದಲ್ಲಿ 23 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹಾಸನಾಂಬೆಯ ದರ್ಶನ: ಇನ್ನೊಂದೇ ದಿನ ಬಾಕಿ
ಹಾಸನಾಂಬೆ ದರ್ಶನೋತ್ಸವಕ್ಕೆ ನಾಳೆ ತೆರೆಬೀಳಲಿದೆ. ಈಗಾಗಲೇ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ದರ್ಶನ ಜೊತೆಜೊತೆಗೆ 17 ಕೋಟಿ ರೂ ಆದಾಯ ಸಂಗ್ರಹವಾಗಿದೆ. ಇನ್ನು ದೀಪಾವಳಿ ಹಬ್ಬದ ಹಿನ್ನೆಲೆ ಇಂದು ಸರತಿ ಸಾಲುಗಳು ಸಂಪೂರ್ಣ ಖಾಲಿ ಇದೆ. ಅ 22 ಅಂದರೆ ನಾಳೆ ಹಾಸನಾಂಬೆ ಉತ್ಸವ ಕೊನೆಯಾಗಲಿದೆ.
- Manjunath KB
- Updated on: Oct 21, 2025
- 8:36 am
ಹಾಸನಾಂಬೆಯ ದರ್ಶನ ಮುಗಿಸಿ ಮರಳುತ್ತಿದ್ದ ಬೈಕ್ಗೆ ಗುದ್ದಿದ ಇನ್ನೋವಾ ಕಾರು; ಸ್ಥಳದಲ್ಲೆ ಇಬ್ಬರ ದುರ್ಮರಣ
ಹಾಸನಾಂಬ ದೇವಿ ದರ್ಶನ ಪಡೆದು ವಾಪಾಸ್ ಬರುತ್ತಿದ್ದ ಬೈಕ್ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲಿನಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಒಬ್ಬ ಯುವತಿಯ ಸ್ಥಿತಿ ಗಂಭೀರವಾಗಿದೆ. ಅದಲ್ಲದೇ ಇನ್ನೋರ್ವ ಬೈಕ್ ಸವಾರನಿಗೂ ಇದೇ ಗಾಡಿ ಗುದ್ದಿದ್ದು, ಆತನಿಗೂ ಗಂಭೀರ ಗಾಯಗಳಾಗಿವೆ.
- Manjunath KB
- Updated on: Oct 20, 2025
- 11:44 am
ಹಾಸನಾಂಬೆ ದರ್ಶನದಲ್ಲಿ ಕಾಲ್ತುಳಿತದ ಎಚ್ಚರಿಕೆ! ವಿಶೇಷ ಬಸ್ ವ್ಯವಸ್ಥೆ ರದ್ದು ಮಾಡಲು ಜಿಲ್ಲಾಧಿಕಾರಿಗೆ ಪತ್ರ
ಹಾಸನಾಂಬೆಯ ದರ್ಶನಕ್ಕೆ ರಾಜ್ಯದೆಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಕುರಿತು ಹಾಸನ ಡಿಸಿಗೆ ಪತ್ರ ಬರೆದಿರುವ ಎಸ್ಪಿ, ವಿಶೇಷ ಬಸ್ ವ್ಯವಸ್ಥೆಯನ್ನು ರದ್ದು ಮಾಡುವಂತೆ ಕೋರಿದ್ದಾರೆ. ವಿಶೇಷ ಬಸ್ ಸೌಲಭ್ಯದಿಂದಾಗಿ ಎಲ್ಲಾ ಜಿಲ್ಲೆಯಿಂದ ಭಕ್ತರ ದಂಡು ಬಂದರೆ ಕಾಲ್ತುಳಿತ ಸಂಭವಿಸುವ ಸಾಧ್ಯತೆಯಿದೆ, ಅನಾಹುತವೇನಾದರು ಆದರೆ ನ ಆವು ಹೊಣೆಯಲ್ಲವೆಂದು ಪತ್ರದಲ್ಲಿ ತಿಳಿಸಲಾಗಿದೆ.
- Bhavana Hegde
- Updated on: Oct 19, 2025
- 8:28 am
ಹಾಸನಾಂಬೆ ಉತ್ಸವಕ್ಕೆ ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ: ಬಾಲ್ಯದ ನೆನಪು ಮೆಲುಕು ಹಾಕಿದ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್ ಅವರು ಇಂದು ಕುಟುಂಬ ಸಮೇತರಾಗಿ ಹಾಸನಾಂಬೆಯ ದರ್ಶನ ಪಡೆದುಕೊಂಡರು. ಬಳಿಕ ಮಾತನಾಡಿರುವ ಅವರು, ಇದು ನನಗೆ ಮೊದಲೇನಲ್ಲ, ನನ್ನ ತಾಯಿ ಕೈಹಿಡಿದು ಬರುತ್ತಿದ್ದಾಗಿನಿಂದ ನೋಡಿದ್ದೇನೆ ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
- Manjunath KB
- Updated on: Oct 15, 2025
- 6:02 pm
ಪತ್ನಿ ಸಮೇತ ಹಾಸನಾಂಬೆ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಪತ್ನಿ ಸಮೇತ ಹಾಸನಾಂಬೆ ದರ್ಶನ ಪಡೆದರು. ಸಂಕಲ್ಪದ ವೇಳೆ ಶತ್ರುಗಳ ಮೇಲೆ ವಿಜಯ ಸಾಧಿಸಲು ಖಡ್ಗಮಾಲಾ ಸ್ತೋತ್ರ ಪಠಿಸಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ಹಾಸನಾಂಬೆ ದುರ್ಗೆಯ ಸ್ವರೂಪಿ ಎಂದು ಬಣ್ಣಿಸಿದ ಅವರು, ಜಿಲ್ಲಾಡಳಿತದ ಉತ್ತಮ ಸಿದ್ಧತೆಗಳನ್ನು ಶ್ಲಾಘಿಸಿದರು. ಪ್ರತಿ ವರ್ಷ ಕುಟುಂಬದೊಂದಿಗೆ ದರ್ಶನ ಪಡೆಯುವ ಭಾಗ್ಯ ತಮ್ಮದೆಂದು ತಿಳಿಸಿದರು.
- Gangadhar Saboji
- Updated on: Oct 14, 2025
- 11:10 pm
Hasanamaba Temple: ವೀಕೆಂಡ್ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
ಅ.9 ರಿಂದ ಅ.23ರ ವರೆಗಿರುವ ಹಾಸನಾಂಬೆ ದೇವಿಯ ದರ್ಶನ ಮಾಡಲು ಜನರು ಎಲ್ಲೆಡೆಯಿಂದ ಬರುತ್ತಿದ್ದಾರೆ. ಒಂದು ವರ್ಷಕ್ಕೆ ಕೇವಲ ಒಂದೇ ಬಾರಿ ನೋಡಲು ಸಿಗುವ ತಾಯಿಯ ದರ್ಶನಕ್ಕೆ ಮೂರು ದಿನಗಳಿಂದ ಜನಸ್ತೋಮ ಹರಿದು ಬರುತ್ತಿದ್ದು, ವಾರಾಂತ್ಯದ ಸಮಯವಾದ್ದರಿಂದ ಇಂದು ಹೆಚ್ಚಿನ ಪ್ರಮಾಣದಲ್ಲಿಯೇ ಭಕ್ತರು ಆಗಮಿಸಿದ್ದಾರೆ. ವೀಡಿಯೋ ಇಲ್ಲಿದೆ.
- Bhavana Hegde
- Updated on: Oct 12, 2025
- 8:57 am
ಹಾಸನಾಂಬೆ ದರ್ಶನದ ವೇಳೆ ಕರ್ತವ್ಯ ಲೋಪ; ನಾಲ್ವರು ಸಿಬ್ಬಂದಿ ಅಮಾನತು
ಅ.9 ರಿಂದ ಹಾಸನಾಂಬೆಯ ದರ್ಶನ ಶುರುವಾಗಿದೆ. ವರ್ಷಕ್ಕೊಮ್ಮೆ ದರ್ಶನಕೊಡುವ ಹಾಸನಾಂಬೆಯನ್ನು ನೋಡಲು ಜನ ಕಿಕ್ಕಿರಿದು ಬರುತ್ತಿದ್ದಾರೆ. ಈ ಹಿಂದೆ ಕ್ಷೇತ್ರದ ಆಡಳಿತ ಮಂಡಳಿ ಗೋಲ್ಮಾಲ್ ಆರೋಪವನ್ನೂ ಎದುರಿಸಿತ್ತು. ಈಗಾಗಲೇ ಇಬ್ಬರು ಅಧಿಕಾರಿಗಳು ಅಮಾನತು ಹೊಂದಿದ್ದರೂ, ಈಗ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಮೂಲಕ ಕರ್ತವ್ಯ ಪಾಲನೆಯಲ್ಲಿ ಅಶಿಸ್ತು ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ.
- Manjunath KB
- Updated on: Oct 12, 2025
- 8:33 am