SS Rajamouli
ರಾಜಮೌಳಿ
ಎಸ್. ಎಸ್. ರಾಜಮೌಳಿ ಪೂರ್ಣ ಹೆಸರು ಕೊಡೂರಿ ಶ್ರೀಶೈಲ ಶ್ರೀ ರಾಜಮೌಳಿ. ಇವರು ಜನಿಸಿದ್ದು1973ರ ಅಕ್ಟೋಬರ್ 10ರಂದು. ಕರ್ನಾಟಕದ ರಾಯಚೂರಿನ ಮಾನ್ವಿಯಲ್ಲಿ ಅವರು ಜನಿಸಿದರು. ಅವರದ್ದು ತೆಲುಗು ಕುಟುಂಬ. ಅವರ ತಂದೆ ಪ್ರಸಿದ್ಧ ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಮತ್ತು ಅವರ ತಾಯಿ ರಾಜ ನಂದಿನಿ. ರಾಜಮೌಳಿ ರಮಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ದತ್ತು ಮಕ್ಕಳಿದ್ದಾರೆ. ರಾಜಮೌಳಿ ಭವ್ಯವಾಗಿ ಸಿನಿಮಾ ನಿರ್ದೇಶಿಸಲು ಹೆಸರುವಾಸಿಯಾಗಿದ್ದಾರೆ. ‘ಮಗಧೀರ’, ‘ಬಾಹುಬಲಿ’, ‘ಬಾಹುಬಲಿ 2, ‘ಆರ್ಆರ್’ ರೀತಿಯ ಸಿನಿಮಾಗಳನ್ನು ಅವರು ನೀಡಿದ್ದಾರೆ. ಈಗ ಅವರು ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ 2027ರಲ್ಲಿ ತೆರೆಗೆ ಬರಲಿದೆ. ಮಹೇಶ್ ಬಾಬು ಈ ಚಿತ್ರಕ್ಕೆ ಹೀರೋ ಆದರೆ, ಪ್ರಿಯಾಂಕಾ ಚೋಪ್ರಾ ಅವರು ನಾಯಕಿ.
ಇನ್ನೂ ಹೆಚ್ಚು ಓದಿರಾಜಮೌಳಿ ‘ವಾರಾಣಸಿ’ ಸಿನಿಮಾದ ಡಬ್ಬಿಂಗ್ಗೆ ಎಐ ಬದಲು 1500 ಧ್ವನಿಗಳ ಆಡಿಷನ್
ಎಸ್. ಎಸ್. ರಾಜಮೌಳಿ ನಿರ್ದೇಶನದ 'ವಾರಾಣಸಿ' ಸಿನಿಮಾದ ಡಬ್ಬಿಂಗ್ಗೆ ಎಐ ತಂತ್ರಜ್ಞಾನ ಬಳಸದೆ 1500 ನೈಜ ಧ್ವನಿ ಕಲಾವಿದರ ಆಡಿಷನ್ ನಡೆಸಲಾಗುತ್ತಿದೆ. ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ನಟನೆಯ ಈ ಜಾಗತಿಕ ಸಿನಿಮಾ 50 ಭಾಷೆಗಳಲ್ಲಿ ಹಾಗೂ 120 ದೇಶಗಳಲ್ಲಿ 2027ರ ಏಪ್ರಿಲ್ 7ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
- Shreelaxmi H
- Updated on: Aug 24, 2026
- 11:19 am
ರಾಜಮೌಳಿ ಸಹಾಯಕನ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ನಟ ಅಜಿತ್?
ತಮಿಳು ಸೂಪರ್ಸ್ಟಾರ್ ಅಜಿತ್ ಸಾಲು ಸಾಲು ಭಾರಿ ನಿರೀಕ್ಷೆಯ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. 'ಡೇರ್ ಡೆವಿಲ್' ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ವೆಂಕಟ್ ಪ್ರಭು ಕಾಂಬಿನೇಷನ್ ಮತ್ತು ರಾಜಮೌಳಿ ಶಿಷ್ಯನ ಜೊತೆ ಪ್ಯಾನ್-ಇಂಡಿಯಾ ಸಿನಿಮಾಗೆ ಮಾತುಕತೆ ನಡೆದಿದೆ. ಜೊತೆಗೆ ರೇಸಿಂಗ್ ಡಾಕ್ಯುಮೆಂಟರಿ 'ಗ್ಲಾಡಿಯೇಟರ್ಸ್' ಕೂಡ ಬರಲಿದೆ.
- Shreelaxmi H
- Updated on: Aug 24, 2026
- 8:15 am
ಪ್ರಚಂಡ ಸಾಹಸಕ್ಕೆ ಕೈ ಹಾಕಿದ ರಾಜಮೌಳಿ, 50 ಭಾಷೆಯಲ್ಲಿ ‘ವಾರಣಾಸಿ’
SS Rajamouli movie: ‘ಬಾಹುಬಲಿ’ ಬಳಿಕ ರಾಜಮೌಳಿ ಭಾರತದ ನಂಬರ್ 1 ನಿರ್ದೇಶಕ ಎನಿಸಿಕೊಂಡಿದ್ದರು. ಆದರೆ ‘ವಾರಣಾಸಿ’ ಸಿನಿಮಾದ ಬಳಿಕ ವಿಶ್ವದ ಅತ್ಯುತ್ತಮ ನಿರ್ದೇಶಕರ ಸಾಲಿಗೆ ಸೇರುವುದು ಬಹುತೇಕ ಖಾತ್ರಿ. ‘ವಾರಣಾಸಿ’ಯನ್ನು ಹಾಲಿವುಡ್ ಅಲ್ಲ ಅದಕ್ಕಿಂತಲೂ ಉನ್ನತ ಮಟ್ಟದಲ್ಲಿ ನಿರ್ಮಿಸುವ ಹಾಗೂ ವಿತರಿಸುವ ಪ್ರಯತ್ನದಲ್ಲಿದ್ದಾರೆ ರಾಜಮೌಳಿ.
- Manjunatha C
- Updated on: Aug 23, 2026
- 7:18 pm
ಮಾರುಕಟ್ಟೆಗೆ ಬರಲಿದೆ ‘ವಾರಣಾಸಿ’ ‘ರುದ್ರ ಲಾಕೆಟ್’ ಹಾಗೂ ಟೀ-ಶರ್ಟ್ಸ್
ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ 'ವಾರಾಣಸಿ' ಸಿನಿಮಾದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ಚಿತ್ರತಂಡವು ಅಧಿಕೃತ ಮರ್ಚಂಡೈಸ್ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಇದರಲ್ಲಿ ರುದ್ರ ಲಾಕೆಟ್ ಹಾಗೂ ಟೀ-ಶರ್ಟ್ಗಳು ಲಭ್ಯವಿರಲಿವೆ. ಈ ಅಪರೂಪದ ಪ್ರಚಾರದ ವೈಖರಿ ಮಹೇಶ್ ಬಾಬು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹಾಗೂ ಸಂಭ್ರಮವನ್ನು ಹೆಚ್ಚಿಸಿದೆ.
- Shreelaxmi H
- Updated on: Aug 10, 2026
- 8:13 am
ಮಹೇಶ್ ಬಾಬು ಜನ್ಮದಿನಕ್ಕೆ ‘ವಾರಣಾಸಿ’ ಗ್ಲಿಂಪ್ಸ್ ಸಿಗಲ್ವಾ? ಸಿಕ್ಕಿದೆ ಬಿಗ್ ಅಪ್ಡೇಟ್
ಆಗಸ್ಟ್ 9ರಂದು ಸೂಪರ್ಸ್ಟಾರ್ ಮಹೇಶ್ ಬಾಬು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ಎಸ್ಎಸ್ ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಗ್ಲಿಂಪ್ಸ್ ಸಿಗಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಲಿದ್ದು, ಚಿತ್ರತಂಡ ಕೇವಲ ಪೋಸ್ಟರ್ ರಿಲೀಸ್ ಮಾಡಲು ಸಜ್ಜಾಗಿದೆ. ಸಿನಿಮಾ 2027ರ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ.
- Shreelaxmi H
- Updated on: Aug 5, 2026
- 11:17 am
‘ವಾರಣಾಸಿ’ ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸುತ್ತಿರುವುದೇಕೆ? ಕಾರಣ ತಿಳಿಸಿದ ರಾಜಮೌಳಿ
ನಿರ್ದೇಶಕ ರಾಜಮೌಳಿ ತಮ್ಮ 'ವಾರಣಾಸಿ' ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸುವ ಕಾರಣ ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿರುವ 300 ಅಡಿ ಎತ್ತರದ ಹಿಮಬಂಡೆಗಳು ಹಾಗೂ ಬೃಹತ್ ವಾನರ ಸೇನೆಯ ದೃಶ್ಯ ವೈಭವವನ್ನು ಪ್ರೇಕ್ಷಕರಿಗೆ ಸಂಪೂರ್ಣವಾಗಿ ತಲುಪಿಸಲು ಐಮ್ಯಾಕ್ಸ್ ಪರದೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಜಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.
- Shreelaxmi H
- Updated on: Aug 3, 2026
- 11:18 am
ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ
ದರ್ಶಕ ಧೀರ ಎಸ್ಎಸ್ ರಾಜಮೌಳಿ ಅವರ 'ವಾರಣಾಸಿ' ಸಿನಿಮಾದಲ್ಲಿ ನಟಿಸುತ್ತಿರುವ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ 'ಐ, ನೋಬಡಿ' ಚಿತ್ರ ಬಿಡುಗಡೆ ಮಾಡಿದ್ದ ನಟ, ಈಗ ಓಣಂ ಹಬ್ಬಕ್ಕೆ 'ಖಲೀಫಾ' ಸಿನಿಮಾ ರಿಲೀಸ್ ಮಾಡಲು ರೆಡಿಯಾಗಿದ್ದಾರೆ.
- Shreelaxmi H
- Updated on: Jul 29, 2026
- 8:05 am
ಫ್ರಾನ್ಸ್ನ ಲುಮಿಯೆರ್ ಮ್ಯೂಸಿಯಂನಲ್ಲಿ ರಾಜಮೌಳಿಗೆ ಗೌರವ: ‘ವಾಲ್ ಆಫ್ ಫಿಲ್ಮ್ ಮೇಕರ್ಸ್’ಗೆ ಸೇರ್ಪಡೆ
ಫ್ರಾನ್ಸ್ನ ಲಿಯಾನ್ನಲ್ಲಿರುವ ಲುಮಿಯೆರ್ ಮ್ಯೂಸಿಯಂನಲ್ಲಿ ನಿರ್ದೇಶಕ ಎಸ್ಎಸ್ ರಾಜಮೌಳಿಗೆ ಅದ್ಧೂರಿ ಗೌರವ ಲಭಿಸಿದೆ. ಅಲ್ಲಿನ 'ವಾಲ್ ಆಫ್ ಫಿಲ್ಮ್ ಮೇಕರ್ಸ್' ಗೋಡೆಯ ಮೇಲೆ ಅವರ ಹೆಸರನ್ನು ಅನಾವರಣಗೊಳಿಸಲಾಗಿದೆ. ಈ ಸಂದರ್ಭದಲ್ಲಿ 'ಈಗ' ಮತ್ತು 'ಆರ್ಆರ್ಆರ್' ಚಿತ್ರಗಳ ಪ್ರದರ್ಶನಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾಗತಿಕ ನಿರ್ದೇಶಕರ ಸಾಲಿಗೆ ಸೇರಿದ ಈ ಗೌರವದಿಂದ ಭಾವುಕರಾದ ರಾಜಮೌಳಿ, ಫ್ರಾನ್ಸ್ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
- Shreelaxmi H
- Updated on: Jul 3, 2026
- 8:03 am
‘ವಾರಣಾಸಿ’ ಚಿತ್ರದ ಬಿಗ್ ಅಪ್ಡೇಟ್ ನೀಡಿದ ರಾಜಮೌಳಿ: ಶೂಟಿಂಗ್ ಮುಗಿಯಲು ಇನ್ನು ಎಷ್ಟು ದಿನ ಬಾಕಿ?
ಆರ್ಆರ್ಆರ್ ನಂತರ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ 'ವಾರಣಾಸಿ' ಸಿನಿಮಾ ಜಾಗತಿಕವಾಗಿ ಕುತೂಹಲ ಮೂಡಿಸಿದೆ. ಚಿತ್ರದ ಪ್ರಮುಖ ಆಕ್ಷನ್ ದೃಶ್ಯಗಳ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಕೇವಲ 80 ದಿನಗಳ ಟಾಕಿ ಭಾಗಗಳು ಬಾಕಿ ಇವೆ ಎಂದು ರಾಜಮೌಳಿ ತಿಳಿಸಿದ್ದಾರೆ. ನಂತರ ಸುದೀರ್ಘ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯಲಿದೆ. ಮಹೇಶ್ ಬಾಬು ಹೊಸ ಅವತಾರದಲ್ಲಿ ಕಾಣಲಿದ್ದು, ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ.
- Rajesh Duggumane
- Updated on: Jul 1, 2026
- 6:25 pm
ಪ್ಯಾರಿಸ್ನಲ್ಲಿ ಸುದೀಪ್ ‘ಈಗ’ ಚಿತ್ರಕ್ಕೆ ಭಾರಿ ಪ್ರಶಂಸೆ; ರಾಜಮೌಳಿಗೆ ಸಿಕ್ಕಿತು ಅಪರೂಪದ ಗೌರವ
ಎಸ್.ಎಸ್. ರಾಜಮೌಳಿ ಯುರೋಪ್ ಪ್ರವಾಸದಲ್ಲಿದ್ದು, ಅವರ ಹಿಟ್ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಪ್ಯಾರಿಸ್ನಲ್ಲಿ 'ಈಗ' ಚಿತ್ರದ ದೃಶ್ಯವೊಂದಕ್ಕೆ ಪ್ರೇಕ್ಷಕರು ಹುಚ್ಚೆದ್ದು ಸಂಭ್ರಮಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. 'ಸಿನೆಮಾಥೆಕ್ ಫ್ರಾಂಕೈಸ್' ಸಂಸ್ಥೆಯಿಂದ ರಾಜಮೌಳಿಗೆ ಜಾಗತಿಕ ಗೌರವ ಲಭಿಸಿದೆ. ನಾನಿ, ಸಮಂತಾ, ಸುದೀಪ್ ನಟಿಸಿದ್ದ 'ಈಗ' ಚಿತ್ರದ ವಿಭಿನ್ನ ಕಥೆ ಮತ್ತು ಸುದೀಪ್ ನಟನೆಗೆ ವಿಶ್ವಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
- Rajesh Duggumane
- Updated on: Jun 30, 2026
- 8:37 am
‘ವಾರಣಾಸಿ’ ಸಿನಿಮಾ ಅಬ್ಬರ; 3,500 ಜೂನಿಯರ್ ಆರ್ಟಿಸ್ಟ್ಗಳ ಜತೆ ಮಹೇಶ್ ಬಾಬು ಮಹಾಯುದ್ಧ
ಹಿಂದೆಂದೂ ಕಂಡಿರದ ದೃಶ್ಯವೈಭವ ಸೃಷ್ಟಿಸಲು ನಿರ್ದೇಶಕ ರಾಜಮೌಳಿ ಅವರು ತಯಾರಾಗಿದ್ದಾರೆ. ‘ವಾರಣಾಸಿ’ ಸಿನಿಮಾದಲ್ಲಿ ಅತಿ ದೊಡ್ಡ ಯುದ್ಧದ ಸೀನ್ ಇರಲಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಆ್ಯಕ್ಷನ್ ಸೀಕ್ವೆನ್ಸ್ ಆಗಿರಲಿದೆ ಎನ್ನಲಾಗಿದೆ. ಆ ಬಗ್ಗೆ ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ.
- Madan Kumar
- Updated on: Jun 29, 2026
- 6:35 pm
ಬಿಗ್ ಅಪ್ಡೇಟ್: ‘ಬಾಹುಬಲಿ 3’ ಬರೋದು ಪಕ್ಕಾ; ರಿವೀಲ್ ಮಾಡಿದ ಪ್ರಭಾಸ್-ರಾನಾ ಜೋಡಿ
'ಬಾಹುಬಲಿ' ಚಿತ್ರಗಳ ಮೂರನೇ ಭಾಗದ ಕುರಿತಾದ ಅಭಿಮಾನಿಗಳ ಪ್ರಶ್ನೆಗೆ ಈಗ ಅಧಿಕೃತ ಉತ್ತರ ಸಿಕ್ಕಿದೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ ಅವರು ಸ್ವತಃ 'ಬಾಹುಬಲಿ 3' ಖಚಿತಪಡಿಸಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಪರಂಪರೆ ಮುಂದುವರಿಯುತ್ತದೆ’ ಎಂಬ ಸಂದೇಶ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
- Rajesh Duggumane
- Updated on: Jun 26, 2026
- 8:00 am