SS Rajamouli
ರಾಜಮೌಳಿ
ಎಸ್. ಎಸ್. ರಾಜಮೌಳಿ ಪೂರ್ಣ ಹೆಸರು ಕೊಡೂರಿ ಶ್ರೀಶೈಲ ಶ್ರೀ ರಾಜಮೌಳಿ. ಇವರು ಜನಿಸಿದ್ದು1973ರ ಅಕ್ಟೋಬರ್ 10ರಂದು. ಕರ್ನಾಟಕದ ರಾಯಚೂರಿನ ಮಾನ್ವಿಯಲ್ಲಿ ಅವರು ಜನಿಸಿದರು. ಅವರದ್ದು ತೆಲುಗು ಕುಟುಂಬ. ಅವರ ತಂದೆ ಪ್ರಸಿದ್ಧ ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಮತ್ತು ಅವರ ತಾಯಿ ರಾಜ ನಂದಿನಿ. ರಾಜಮೌಳಿ ರಮಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ದತ್ತು ಮಕ್ಕಳಿದ್ದಾರೆ. ರಾಜಮೌಳಿ ಭವ್ಯವಾಗಿ ಸಿನಿಮಾ ನಿರ್ದೇಶಿಸಲು ಹೆಸರುವಾಸಿಯಾಗಿದ್ದಾರೆ. ‘ಮಗಧೀರ’, ‘ಬಾಹುಬಲಿ’, ‘ಬಾಹುಬಲಿ 2, ‘ಆರ್ಆರ್’ ರೀತಿಯ ಸಿನಿಮಾಗಳನ್ನು ಅವರು ನೀಡಿದ್ದಾರೆ. ಈಗ ಅವರು ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ 2027ರಲ್ಲಿ ತೆರೆಗೆ ಬರಲಿದೆ. ಮಹೇಶ್ ಬಾಬು ಈ ಚಿತ್ರಕ್ಕೆ ಹೀರೋ ಆದರೆ, ಪ್ರಿಯಾಂಕಾ ಚೋಪ್ರಾ ಅವರು ನಾಯಕಿ.
ಇನ್ನೂ ಹೆಚ್ಚು ಓದಿಮಹೇಶ್ ಬಾಬು ಜನ್ಮದಿನಕ್ಕೆ ‘ವಾರಣಾಸಿ’ ಗ್ಲಿಂಪ್ಸ್ ಸಿಗಲ್ವಾ? ಸಿಕ್ಕಿದೆ ಬಿಗ್ ಅಪ್ಡೇಟ್
ಆಗಸ್ಟ್ 9ರಂದು ಸೂಪರ್ಸ್ಟಾರ್ ಮಹೇಶ್ ಬಾಬು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ಎಸ್ಎಸ್ ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಗ್ಲಿಂಪ್ಸ್ ಸಿಗಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಲಿದ್ದು, ಚಿತ್ರತಂಡ ಕೇವಲ ಪೋಸ್ಟರ್ ರಿಲೀಸ್ ಮಾಡಲು ಸಜ್ಜಾಗಿದೆ. ಸಿನಿಮಾ 2027ರ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ.
- Shreelaxmi H
- Updated on: Aug 5, 2026
- 11:17 am
‘ವಾರಣಾಸಿ’ ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸುತ್ತಿರುವುದೇಕೆ? ಕಾರಣ ತಿಳಿಸಿದ ರಾಜಮೌಳಿ
ನಿರ್ದೇಶಕ ರಾಜಮೌಳಿ ತಮ್ಮ 'ವಾರಣಾಸಿ' ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸುವ ಕಾರಣ ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿರುವ 300 ಅಡಿ ಎತ್ತರದ ಹಿಮಬಂಡೆಗಳು ಹಾಗೂ ಬೃಹತ್ ವಾನರ ಸೇನೆಯ ದೃಶ್ಯ ವೈಭವವನ್ನು ಪ್ರೇಕ್ಷಕರಿಗೆ ಸಂಪೂರ್ಣವಾಗಿ ತಲುಪಿಸಲು ಐಮ್ಯಾಕ್ಸ್ ಪರದೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಜಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.
- Shreelaxmi H
- Updated on: Aug 3, 2026
- 11:18 am
ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ
ದರ್ಶಕ ಧೀರ ಎಸ್ಎಸ್ ರಾಜಮೌಳಿ ಅವರ 'ವಾರಣಾಸಿ' ಸಿನಿಮಾದಲ್ಲಿ ನಟಿಸುತ್ತಿರುವ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ 'ಐ, ನೋಬಡಿ' ಚಿತ್ರ ಬಿಡುಗಡೆ ಮಾಡಿದ್ದ ನಟ, ಈಗ ಓಣಂ ಹಬ್ಬಕ್ಕೆ 'ಖಲೀಫಾ' ಸಿನಿಮಾ ರಿಲೀಸ್ ಮಾಡಲು ರೆಡಿಯಾಗಿದ್ದಾರೆ.
- Shreelaxmi H
- Updated on: Jul 29, 2026
- 8:05 am
ಫ್ರಾನ್ಸ್ನ ಲುಮಿಯೆರ್ ಮ್ಯೂಸಿಯಂನಲ್ಲಿ ರಾಜಮೌಳಿಗೆ ಗೌರವ: ‘ವಾಲ್ ಆಫ್ ಫಿಲ್ಮ್ ಮೇಕರ್ಸ್’ಗೆ ಸೇರ್ಪಡೆ
ಫ್ರಾನ್ಸ್ನ ಲಿಯಾನ್ನಲ್ಲಿರುವ ಲುಮಿಯೆರ್ ಮ್ಯೂಸಿಯಂನಲ್ಲಿ ನಿರ್ದೇಶಕ ಎಸ್ಎಸ್ ರಾಜಮೌಳಿಗೆ ಅದ್ಧೂರಿ ಗೌರವ ಲಭಿಸಿದೆ. ಅಲ್ಲಿನ 'ವಾಲ್ ಆಫ್ ಫಿಲ್ಮ್ ಮೇಕರ್ಸ್' ಗೋಡೆಯ ಮೇಲೆ ಅವರ ಹೆಸರನ್ನು ಅನಾವರಣಗೊಳಿಸಲಾಗಿದೆ. ಈ ಸಂದರ್ಭದಲ್ಲಿ 'ಈಗ' ಮತ್ತು 'ಆರ್ಆರ್ಆರ್' ಚಿತ್ರಗಳ ಪ್ರದರ್ಶನಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಾಗತಿಕ ನಿರ್ದೇಶಕರ ಸಾಲಿಗೆ ಸೇರಿದ ಈ ಗೌರವದಿಂದ ಭಾವುಕರಾದ ರಾಜಮೌಳಿ, ಫ್ರಾನ್ಸ್ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
- Shreelaxmi H
- Updated on: Jul 3, 2026
- 8:03 am
‘ವಾರಣಾಸಿ’ ಚಿತ್ರದ ಬಿಗ್ ಅಪ್ಡೇಟ್ ನೀಡಿದ ರಾಜಮೌಳಿ: ಶೂಟಿಂಗ್ ಮುಗಿಯಲು ಇನ್ನು ಎಷ್ಟು ದಿನ ಬಾಕಿ?
ಆರ್ಆರ್ಆರ್ ನಂತರ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ 'ವಾರಣಾಸಿ' ಸಿನಿಮಾ ಜಾಗತಿಕವಾಗಿ ಕುತೂಹಲ ಮೂಡಿಸಿದೆ. ಚಿತ್ರದ ಪ್ರಮುಖ ಆಕ್ಷನ್ ದೃಶ್ಯಗಳ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಕೇವಲ 80 ದಿನಗಳ ಟಾಕಿ ಭಾಗಗಳು ಬಾಕಿ ಇವೆ ಎಂದು ರಾಜಮೌಳಿ ತಿಳಿಸಿದ್ದಾರೆ. ನಂತರ ಸುದೀರ್ಘ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯಲಿದೆ. ಮಹೇಶ್ ಬಾಬು ಹೊಸ ಅವತಾರದಲ್ಲಿ ಕಾಣಲಿದ್ದು, ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ.
- Rajesh Duggumane
- Updated on: Jul 1, 2026
- 6:25 pm
ಪ್ಯಾರಿಸ್ನಲ್ಲಿ ಸುದೀಪ್ ‘ಈಗ’ ಚಿತ್ರಕ್ಕೆ ಭಾರಿ ಪ್ರಶಂಸೆ; ರಾಜಮೌಳಿಗೆ ಸಿಕ್ಕಿತು ಅಪರೂಪದ ಗೌರವ
ಎಸ್.ಎಸ್. ರಾಜಮೌಳಿ ಯುರೋಪ್ ಪ್ರವಾಸದಲ್ಲಿದ್ದು, ಅವರ ಹಿಟ್ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಪ್ಯಾರಿಸ್ನಲ್ಲಿ 'ಈಗ' ಚಿತ್ರದ ದೃಶ್ಯವೊಂದಕ್ಕೆ ಪ್ರೇಕ್ಷಕರು ಹುಚ್ಚೆದ್ದು ಸಂಭ್ರಮಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. 'ಸಿನೆಮಾಥೆಕ್ ಫ್ರಾಂಕೈಸ್' ಸಂಸ್ಥೆಯಿಂದ ರಾಜಮೌಳಿಗೆ ಜಾಗತಿಕ ಗೌರವ ಲಭಿಸಿದೆ. ನಾನಿ, ಸಮಂತಾ, ಸುದೀಪ್ ನಟಿಸಿದ್ದ 'ಈಗ' ಚಿತ್ರದ ವಿಭಿನ್ನ ಕಥೆ ಮತ್ತು ಸುದೀಪ್ ನಟನೆಗೆ ವಿಶ್ವಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
- Rajesh Duggumane
- Updated on: Jun 30, 2026
- 8:37 am
‘ವಾರಣಾಸಿ’ ಸಿನಿಮಾ ಅಬ್ಬರ; 3,500 ಜೂನಿಯರ್ ಆರ್ಟಿಸ್ಟ್ಗಳ ಜತೆ ಮಹೇಶ್ ಬಾಬು ಮಹಾಯುದ್ಧ
ಹಿಂದೆಂದೂ ಕಂಡಿರದ ದೃಶ್ಯವೈಭವ ಸೃಷ್ಟಿಸಲು ನಿರ್ದೇಶಕ ರಾಜಮೌಳಿ ಅವರು ತಯಾರಾಗಿದ್ದಾರೆ. ‘ವಾರಣಾಸಿ’ ಸಿನಿಮಾದಲ್ಲಿ ಅತಿ ದೊಡ್ಡ ಯುದ್ಧದ ಸೀನ್ ಇರಲಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಆ್ಯಕ್ಷನ್ ಸೀಕ್ವೆನ್ಸ್ ಆಗಿರಲಿದೆ ಎನ್ನಲಾಗಿದೆ. ಆ ಬಗ್ಗೆ ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ.
- Madan Kumar
- Updated on: Jun 29, 2026
- 6:35 pm
ಬಿಗ್ ಅಪ್ಡೇಟ್: ‘ಬಾಹುಬಲಿ 3’ ಬರೋದು ಪಕ್ಕಾ; ರಿವೀಲ್ ಮಾಡಿದ ಪ್ರಭಾಸ್-ರಾನಾ ಜೋಡಿ
'ಬಾಹುಬಲಿ' ಚಿತ್ರಗಳ ಮೂರನೇ ಭಾಗದ ಕುರಿತಾದ ಅಭಿಮಾನಿಗಳ ಪ್ರಶ್ನೆಗೆ ಈಗ ಅಧಿಕೃತ ಉತ್ತರ ಸಿಕ್ಕಿದೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ ಅವರು ಸ್ವತಃ 'ಬಾಹುಬಲಿ 3' ಖಚಿತಪಡಿಸಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಪರಂಪರೆ ಮುಂದುವರಿಯುತ್ತದೆ’ ಎಂಬ ಸಂದೇಶ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರ ಯಾವಾಗ ಸೆಟ್ಟೇರಲಿದೆ ಎಂಬ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
- Rajesh Duggumane
- Updated on: Jun 26, 2026
- 8:00 am
‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್ ಎಂದ ರಾಜಮೌಳಿ
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕಠಿಣ ಕೆಲಸದ ಶೈಲಿಯನ್ನು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ 'ವಾರಣಾಸಿ' ಚಿತ್ರೀಕರಣದ ಅನುಭವಗಳ ಮೂಲಕ ವಿವರಿಸಿದ್ದಾರೆ. ಒಂದು ನಿರ್ದಿಷ್ಟ ಶಾಟ್ಗಾಗಿ ಇಡೀ ದಿನ ಶೂಟಿಂಗ್ ನಡೆಸಿ, 100 ಟೇಕ್ಗಳನ್ನು ತೆಗೆದುಕೊಂಡ ಪ್ರಸಂಗವನ್ನು ಅವರು ಬಹಿರಂಗಪಡಿಸಿದ್ದಾರೆ. ಮಹೇಶ್ ಬಾಬು ಕೂಡ ಭಾಗಿಯಾಗಿದ್ದ ಈ ಘಟನೆ, ರಾಜಮೌಳಿ ಅವರ ಪರಿಪೂರ್ಣತೆ ಮತ್ತು ಚಿತ್ರದ ಮೇಲಿನ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ.
- Rajesh Duggumane
- Updated on: Jun 25, 2026
- 12:33 pm
‘ವಾರಣಾಸಿ’ ಬಗ್ಗೆ ಬಾಲಿವುಡ್ ಮಂದಿಯ ಅಪಪ್ರಚಾರ; ಸಿನಿಮಾ ಮೂಲಕವೇ ಉತ್ತರಿಸುತ್ತಾರೆ ರಾಜಮೌಳಿ
ಮಹೇಶ್ ಬಾಬು-ರಾಜಮೌಳಿ ಕಾಂಬಿನೇಷನ್ನ 'ವಾರಣಾಸಿ' ಚಿತ್ರದ ಬಜೆಟ್ ಮತ್ತು ಒಟಿಟಿ ಡೀಲ್ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಸುಳ್ಳು. ರಾಜಮೌಳಿಗೆ ಮಾರುಕಟ್ಟೆಯ ಪಲ್ಸ್ ಚೆನ್ನಾಗಿ ಗೊತ್ತಿದ್ದು, ಇದು ಭಾರತೀಯ ಮಾರುಕಟ್ಟೆ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ. ಪ್ರೀ-ರಿಲೀಸ್ ಬಿಸಿನೆಸ್ ಮೂಲಕವೇ ನಿರ್ಮಾಪಕರ ಹೂಡಿಕೆ ಸುರಕ್ಷಿತವಾಗಿದೆ ಎಂಬುದು ಅವರ ಲೆಕ್ಕಾಚಾರ.
- Rajesh Duggumane
- Updated on: Jun 16, 2026
- 7:06 am
‘ವಾರಣಾಸಿ’ ಸಿನಿಮಾದಲ್ಲಿ ರಾಮ-ಕುಂಭಕರ್ಣನ ಮಧ್ಯೆ 30 ನಿಮಿಷಗಳ ಫೈಟ್
ಎಸ್.ಎಸ್. ರಾಜಮೌಳಿ ನಿರ್ದೇಶನದ 'ವಾರಾಣಸಿ' ಚಿತ್ರದ ಕಥೆಯ ಬಗ್ಗೆ ವಿಜಯೇಂದ್ರ ಪ್ರಸಾದ್ ರೋಚಕ ಮಾಹಿತಿ ಹಂಚಿಕೊಂಡಿದ್ದಾರೆ. ರಾಮ ಮತ್ತು ಕುಂಭಕರ್ಣನ ನಡುವಿನ 30 ನಿಮಿಷಗಳ ಮಹಾ ಯುದ್ಧ ಈ ಚಿತ್ರದ ಹೈಲೈಟ್ ಆಗಲಿದೆ. ಮಹೇಶ್ ಬಾಬು ಶ್ರೀರಾಮನಾಗಿ ನಟಿಸಿದ್ದು, ಈ ಯುದ್ಧ ದೃಶ್ಯಕ್ಕಾಗಿ 60 ದಿನಗಳ ಕಾಲ ಚಿತ್ರೀಕರಣ ನಡೆದಿದೆ.
- Rajesh Duggumane
- Updated on: Jun 6, 2026
- 8:31 am
ರಾಜಮೌಳಿಯ ಐಮ್ಯಾಕ್ಸ್ ಥಿಯೇಟರ್ ಕನಸು ನನಸು ಮಾಡಿದ ನಟ ಮಹೇಶ್ ಬಾಬು
ದೃಶ್ಯ ವೈಭವ ಹಾಗೂ ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರಾಗಿರುವ ತೆಲುಗು ಚಿತ್ರರಂಗಕ್ಕೆ ಈ ಬೆಳವಣಿಗೆಯು ಬಹುದೊಡ್ಡ ಮೈಲಿಗಲ್ಲಾಗಿದೆ. ಪ್ರೇಕ್ಷಕರು ಇನ್ಮುಂದೆ ಜಾಗತಿಕ ಮಟ್ಟದ ಸಿನಿಮಾ ವೀಕ್ಷಣೆಯ ಅನುಭವವನ್ನು ಹೈದರಾಬಾದ್ನಲ್ಲೇ ಪಡೆಯಬಹುದಾಗಿದೆ ಎಂದು ಟಾಲಿವುಡ್ ಮಂದಿ ಖುಷಿಪಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Jun 1, 2026
- 6:53 pm