‘ಡ್ರೀಮ್ ಗರ್ಲ್’ ಪ್ರೇರಿತ ಹಗರಣ; ಹುಡುಗಿ ಧ್ವನಿಯಲ್ಲಿ ಮಾತನಾಡಿ ಪುರುಷರಿಂದ ಹಣ ದೋಚುತ್ತಿದ್ದ ಯುವಕ

ಕಳೆದ ವರ್ಷ ಆಗಸ್ಟ್ 25 ರಂದು ಡ್ರೀಮ್ ಗರ್ಲ್ 2 ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ‘ಡ್ರೀಮ್ ಗರ್ಲ್’ ಚಲನಚಿತ್ರದ ಕತೆಯ, ಆಯುಷ್ಮಾನ್‌ನ ಪಾತ್ರದಂತೆಯೇ ಹುಡುಗಿ ಧ್ವನಿಯಲ್ಲಿ ಮಾತನಾಡಿ ಸಾಕಷ್ಟು ಪುರುಷರಿಂದ ಹಣ ದೋಚುತ್ತಿದ್ದ ವಂಚನೆಯ ಆರೋಪದ ಮೇಲೆ 22 ವರ್ಷದ ಯುವಕನನ್ನು ಇದೀಗ ಭೋಪಾಲ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ ಈ ರೀತಿಯ ಕೃತ್ಯಕ್ಕೆ ‘ಡ್ರೀಮ್ ಗರ್ಲ್’ ಚಿತ್ರದಿಂದ ಪ್ರೇರಿತನಾಗಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.

'ಡ್ರೀಮ್ ಗರ್ಲ್' ಪ್ರೇರಿತ ಹಗರಣ; ಹುಡುಗಿ ಧ್ವನಿಯಲ್ಲಿ ಮಾತನಾಡಿ ಪುರುಷರಿಂದ ಹಣ ದೋಚುತ್ತಿದ್ದ ಯುವಕ
Follow us
|

Updated on: Jun 08, 2024 | 3:15 PM

ಭೋಪಾಲ್: ಆಯುಷ್ಮಾನ್ ಖುರಾನಾ ಅಭಿನಯದ ‘ಡ್ರೀಮ್ ಗರ್ಲ್’ ಚಿತ್ರದ ಕಥಾವಸ್ತುವನ್ನು ಪ್ರತಿಬಿಂಬಿಸುವ ಪ್ರಕರಣವೊಂದು ಸದ್ಯ ಭಾರೀ ಸುದ್ದಿಯಲ್ಲಿದೆ. ಆನ್‌ಲೈನ್‌ನಲ್ಲಿ ಯುವತಿಯಂತೆ ಮಾತನಾಡಿ ಸಾಕಷ್ಟು ಪುರುಷರನ್ನು ತನ್ನ ವಂಚನೆಯ ಬಲೆಗೆ ಸಿಲುಕಿಸಿದ್ದ 22 ವರ್ಷದ ಯುವಕನನ್ನು ಇದೀಗ ಭೋಪಾಲ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಾಸ್ಯದ ಮೂಲಕವೇ ಜನಮೆಚ್ಚುಗೆ ಗಳಿಸಿದ ಡ್ರೀಮ್ ಗರ್ಲ್ ಸಿನಿಮಾದ ಮಾದರಿಯಲ್ಲೇ ಈ ಪ್ರಕರಣ ನಡೆದಿದ್ದು, ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ ಆಗಸ್ಟ್ 25 ರಂದು ಡ್ರೀಮ್ ಗರ್ಲ್ 2 ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ‘ಡ್ರೀಮ್ ಗರ್ಲ್’ ಚಲನಚಿತ್ರದ ಕತೆಯ, ಆಯುಷ್ಮಾನ್‌ನ ಪಾತ್ರದಂತೆಯೇ ಸ್ತ್ರೀ ಧ್ವನಿಯನ್ನು ಅನುಕರಿಸಲು  ಧ್ವನಿ ಬದಲಾಯಿಸುವ ತಂತ್ರಗಳನ್ನು ಬಳಸಿ ಆರೋಪಿ ಸಾಕಷ್ಟು ಜನರಿಗೆ ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಅಜಯ್​​ ಅಥವಾ ಛೋಟು ಮೆಹ್ರಾ ಎಂದು ಕರೆಯಲ್ಪಡುವ ಈತ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹುಡುಗಿಯ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳನ್ನು ಹೊಂದಿದ್ದ, ಈ ಮೂಲಕ ಹುಡುಗಿನ ಧ್ವನಿಯಲ್ಲಿ ಮಾತನಾಡುವ ಮೂಲಕ ಸಾಕಷ್ಟು ಪುರುಷರನ್ನು ತನ್ನ ಬಲೆಗೆ ಬೀಳಿಸುತ್ತಿದ್ದ. ಈತನ ಧ್ವನಿಗೆ ಮರುಳಾದ ಸಾಕಷ್ಟು ಪುರುಷರಿಂದ ಹಣವನ್ನು ದೋಚುತ್ತಿದ್ದ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಈತನಿಂದ ವಂಚನೆಗೆ ಒಳಗಾಗಿದ್ದ ಅಮನ್ ನಾಮದೇವ್ ಎಂಬ ವ್ಯಕ್ತಿ ಮಂಗಳವಾರ ಜೂನ್ 4 ರಂದು ಪೊಲೀಸ್ ದೂರು ನೀಡಿದ ನಂತರ ಅಜಯ್ ಸಿಕ್ಕಿಬಿದ್ದಿದ್ದಾನೆ. ನಕಲಿ ಖಾತೆಗಳಲ್ಲಿ ಒಂದಾದ ಶಿವಾನಿ ರಘುವಂಶಿ ಎಂಬ ಇನ್ಸ್ಟಾಗ್ರಾಮ್​​​​ ಖಾತೆಯೊಂದಿಗೆ ಸ್ನೇಹ ಬೆಳೆಸಿದ್ದ ಅಮನ್ ನಾಮದೇವ್ ಮಹಿಳೆಯೆಂದೇ ಭಾವಿಸಿ ಸ್ನೇಹ ಬೆಳೆಸಿದ್ದಾನೆ. ಇದಲ್ಲದೇ ಆಕೆಯ ಧ್ವನಿಗೆ ಮರುಳಾಗಿದ್ದಾನೆ. ದಿನಗಳು ಕಳೆಯುತ್ತಿದ್ದಂತೆ ಯುವತಿ ಮದುವೆಯಾಗುವಂತೆ ಒತ್ತಡ ಹೇರಿದ್ದು, ನಿರಾಕರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದಾದ ಕೆಲ ದಿನಗಳ ಬಳಿಕ ಶಿವಾನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ನಾಟಕವಾಡಿ ಮತ್ತೊಂದು ನಂಬರ್​ ಮೂಲಕ ಅಜಯ್​​ ಹುಡುಗನ ಧ್ವನಿಯಲ್ಲಿ ಮಾತನಾಡಿ ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ಅಮನ್ ನಾಮದೇವ್ ಅವರಿಗೆ ಕರೆ ಮಾಡಿದ್ದಾನೆ. ಭಯದಿಂದ ನಾಮದೇವ್ 70,000 ರೂ. ವರ್ಗಾಯಿಸಿದ್ದಾರೆ.

ಇದನ್ನೂ ಓದಿ: ಸಿಂಗಲ್ಸ್​​​ಗಳಿಗಾಗಿ ಡೇಟಿಂಗ್ ಆ್ಯಪ್ ಲಾಂಚ್ ಮಾಡಿದ ಸರ್ಕಾರ

ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಹಗರಣದ ಹಿಂದೆ ಅಜಯ್​​ ಕೈವಾಡ ಇರುವುದು ಕಂಡುಬಂದಿದೆ. ಈ ರೀತಿಯ ಕೃತ್ಯಕ್ಕೆ ‘ಡ್ರೀಮ್ ಗರ್ಲ್’ ಚಿತ್ರದಿಂದ ಪ್ರೇರಿತನಾಗಿದ್ದೆ ಎಂದು ಅವರು ಒಪ್ಪಿಕೊಂಡಿದ್ದಾನೆ. ಅಜಯ್​​ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಯುವತಿಯ ಹೆಸರಿನಲ್ಲಿ ಹಲವಾರು ನಕಲಿ ಪ್ರೊಫೈಲ್‌ಗಳನ್ನು ರಚಿಸಿ ಪುರುಷರೊಂದಿಗೆ ಹೆಣ್ಣಿನ ಧ್ವನಿಯಲ್ಲಿ ಸಂಭಾಷಣೆಗಳನ್ನು ಪ್ರಾರಂಭಿಸುತ್ತಿದ್ದ, ಅಂತಿಮವಾಗಿ ಅವರ ಮೇಲೆ ಒತ್ತಡ ಹೇರುತ್ತಿದ್ದ ಮತ್ತು ಆತ್ಮಹತ್ಯೆಯ ಪ್ರಯತ್ನಗಳಂತಹ ತುರ್ತು ಪರಿಸ್ಥಿತಿಗಳನ್ನು ನಿರ್ಮಿಸಿ ಹಣವನ್ನು ಸುಲಿಗೆ ಮಾಡುತ್ತಿದ್ದನು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್