AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 1 ರೂಪಾಯಿ ಚಿಕನ್ ಬಿರಿಯಾನಿಗಾಗಿ ಹೋಟೆಲ್ ಮುಂದೆ ಜಮಾಯಿಸಿದ ಜನ

ತಮಿಳುನಾಡಿನ ಕರೀಂ ನಗರದಲ್ಲಿ ಹೊಸತಾಗಿ ಪ್ರಾರಂಭಗೊಂಡ ಹೋಟೇಲ್ ಒಂದರ ‘1 ರೂಪಾಯಿಗೆ ಬಿರಿಯಾನಿ’ ಎಂಬ ಅತ್ಯಾಕರ್ಷಕ ರಿಯಾಯಿತಿಗೆ ಬಿರಿಯಾನಿ ಖರೀದಿಸಲು ಜನಸಾಗರವೇ ಹರಿದುಬಂದಿದ್ದು, ಇದರಲ್ಲಿ ಕೆಲವರು ಬಿರಿಯಾನಿ ಖರೀದಿಸಲು ಹೋಗಿ ಟ್ರಾಫಿಕ್ ಪೋಲಿಸರಿಗೆ 200 ರೂ. ದಂಡ ಕಟ್ಟಿ ಮನೆಗೆ ವಾಪಸ್ ಆಗಿದ್ದಾರೆ.

Viral News: 1 ರೂಪಾಯಿ ಚಿಕನ್ ಬಿರಿಯಾನಿಗಾಗಿ ಹೋಟೆಲ್ ಮುಂದೆ ಜಮಾಯಿಸಿದ ಜನ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 20, 2023 | 11:12 AM

ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅಂಗಡಿ ಮಾಲೀಕರು ಬೃಹತ್ ರಿಯಾಯಿತಿ ಅಥವಾ ಒಂದನ್ನು ಖರೀದಿಸಿದರೆ ಇನ್ನೊಂದು ಉತ್ಪನ್ನ ಉಚಿತ ಎಂಬೆಲ್ಲಾ ಮಾರುಕಟ್ಟೆ ತಂತ್ರಗಳನ್ನು ಉಪಯೋಗಿಸುತ್ತಾರೆ. ಈ ರೀತಿಯ ಮಾರುಕಟ್ಟೆ ತಂತ್ರಗಳಿಗೆ ಜನರು ಬೇಗ ಮರುಳಾಗುತ್ತಾರೆ ಹಾಗೂ ಆ ಉತ್ಪನ್ನವನ್ನು ಖರೀದಿಸಲು ಜನರು ಮುಗಿಬೀಳುತ್ತಾರೆ. ಇತ್ತೀಚಿಗೆ ತೆಲಂಗಾಣದ ಕರೀಂನಗರದಲ್ಲಿ ರೆಸ್ಟೋರೆಂಟ್ ಮಾಲೀಕರೊಬ್ಬರು ಇದೇ ರೀತಿ ಗ್ರಾಹಕರನ್ನು ಆಕರ್ಷಿಸಲು ವಿನೂತನ ಮಾರುಕಟ್ಟೆ ತಂತ್ರವನ್ನು ಬಳಸಿದ್ದಾರೆ. ಹೊಸ ರೆಸ್ಟೋರೆಂಟ್ ತೆರೆದಿರುವ ವ್ಯಕ್ತಿಯೊಬ್ಬರು ಆರಂಭಿಕ ಆಫರ್ ಅಡಿಯಲ್ಲಿ 1 ರೂಪಾಯಿಯ ನೋಟು ತಂದವರಿಗೆ ತಲಾ ಒಂದು ಬಿರಿಯಾನಿ ನೀಡಲಾಗುವುದು ಎಂದು ಎಲ್ಲೆಡೆ ಫ್ಲೆಕ್ಸ್ ಹಾಕಿ ಪ್ರಚಾರ ಮಾಡಿದ್ದಾರೆ. ರುಚಿಕರವಾದ ಬಿರಿಯಾನಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಬಿರಿಯಾನಿ ಸವಿಯಲೆಂದೇ ದಿನನಿತ್ಯ ಹೋಟೆಲ್ ಗೆ ಹೋಗುವ ಸಾವಿರಾರು ಸಂಖ್ಯೆಯ ಜನರಿದ್ದಾರೆ. ಸಾಮಾನ್ಯವಾಗಿ ಒಂದು ಪ್ಲೇಟ್ ಚಿಕನ್ ಬಿರಿಯಾನಿಗೆ 100 ರಿಂದ 200 ರೂ. ಗಳವೆರೆಗೂ ಬೆಲೆ ಇರುವಾಗ 1. ರೂಪಾಯಿಗೆ ಬಿರಿಯಾನಿ ಸಿಗುವುದೆಂದರೆ ಯಾರಾದರು ಈ ಸುವರ್ಣವಕಾಶವನ್ನು ಸುಮ್ಮನೆ ಬಿಡುವುದುಂಟೆ. ಹೀಗೆ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುತ್ತಾ ಹೋಟೇಲ್ ಶುಭಾರಂಭದ ದಿನ ಅಂದರೆ ಜೂನ್ 17 ರ ಶನಿವಾರದಂದು 1 ರೂಪಾಯಿ ಬಿರಿಯಾನಿ ಖರೀದಿಸಲು ತಮಿಳುನಾಡಿನ ಕರೀಂ ನಗರದಲ್ಲಿ ಜನಸಾಗರವೇ ಹರಿದು ಬಂದಿದೆ. ಬಿರಿಯಾನಿ ಪ್ರಿಯರು ಮುಂಜಾನೆಯೆ ಹೋಟೆಲ್ ಮುಂದೆ ಜಮಾಸಿದ್ದು, ಗಂಟೆಗಳು ಕಳೆದಂತೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು.

ನೂರಾರು ಪ್ಲೇಟ್ ಬಿರಿಯಾನಿಯನ್ನು ಪಾರ್ಸೆಲ್ ಸೇರಿದಂತೆ, ಹೋಟೆಲ್ ನಲ್ಲಿಯೂ ಗ್ರಾಹಕರಿಗೆ ಬಿರಿಯಾನಿ ಉಣಬಡಿಸಲಾಯಿತು. ಆದರೆ ರಿಯಾಯಿತಿಯ ಬಿರಿಯಾನಿ ಸವಿಯಲು ಸಿಕ್ಕ ಅತ್ಯಾಕರ್ಷಕ ಅವಕಾಶ ಮಾತ್ರ ಅಸ್ತವ್ಯಸ್ತವಾಯಿತು. ಹೋಟೆಲ್ ಮುಂದೆ ಭಾರಿ ಜನದಟ್ಟಣೆಯ ಕಾರಣ ಹೋಟೆಲ್ ಆಡಳಿತ ಮಂಡಳಿ ಜನರನ್ನು ನಿಯಂತ್ರಿಸಲು ವಿಫಲವಾಗಿ, ಹೋಟೆಲ್ ಶೆಟರ್ ಮುಚ್ಚಬೇಕಾಯಿತು. ಈ ನಡುವೆ ಶೆಟರ್ ಬಾಗಿಲು ಮುಚ್ಚುತ್ತಿದ್ದಂತೆ ಜನರು ರೊಚ್ಚಿಗೇಳುವಂತಹ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೋಡಬಹದು.

ಇದನ್ನೂ ಓದಿ: Viral Video: ಕ್ಷಣಾರ್ಧದಲ್ಲಿ ಚಿರತೆಯ ವಶದಿಂದ ಪಾರಾಗಿ ಬುದ್ಧಿವಂತಿಕೆ ಮೆರೆದ ಮರಿ ಹಕ್ಕಿ

ಅವ್ಯವಸ್ಥೆಯ ಕಾರಣ ಆ ಸ್ಥಳದಲ್ಲಿ ಅಗಾಧ ಸಂಚಾರ ದಟ್ಟಣೆಯೂ ಉಂಟಾಯಿತು. ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಆಗಮಿಸಿ ಜನರನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಹಾಗೂ ಬಿರಿಯಾನಿ ಕೊಳ್ಳುವ ಆತುರದಲ್ಲಿ ನೋ ಪಾರ್ಕಿಂಗ್ ಜಾಗಗಳಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರ ಹಾಗೂ ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಿದವರ ಮೇಲೆ 200 ರಿಂದ 250 ರೂಪಾಯಿ ದಂಡವನ್ನು ಕೂಡಾ ವಿಧಿಸಿದರು. ನಂತರ ಗ್ರಾಹಕರಿಗೆ ಉಂಟಾದ ಅನಾನುಕೂಲತೆಗಾಗಿ ಹೋಟೆಲ್ ಆಡಳಿತ ಮಂಡಳಿ ಗ್ರಾಹಕರಿಗೆ ಕ್ಷಮೆಯಾಚಿಸಿದೆ.

ಎ.ಬಿ.ಎಸ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಹೋಟೆಲ್ ನ ಹೊರಬದಿಯಲ್ಲಿ ಬಿರಿಯಾನಿ ಖರೀದಿಸಲು ಗ್ರಾಹಕ ಜಟಾಪಟಿ ನಡೆಸುವುದನ್ನು ಹಾಗೂ ಬಿರಿಯಾನಿ ಖರೀದಿಸಲು ನೆರೆದಿರುವ ಜನಸಾಗರವನ್ನು ಕಾಣಬಹುದು. ಕಾಣಬಹುದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:11 am, Tue, 20 June 23

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು