AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಯಿ ತೆವಳುತ್ತಿದೆ, ಪಾಪ’ ಎಂದವರನ್ನು ಬೇಸ್ತು ಬೀಳಿಸಿದ ಶ್ವಾನ; ಇದಕ್ಕೆ ಆಸ್ಕರ್ ಕೊಡಬೇಕು ಎಂದ ನೆಟ್ಟಿಗರು: ವಿಡಿಯೊ ನೋಡಿ

Viral Video: ತೆವಳುತ್ತಾ ಸಾಗುತ್ತಿದ್ದ ನಾಯಿಯೊಂದು, ಇದ್ದಕ್ಕಿದ್ದಂತೆ ಎದ್ದು ನಿಂತು ಎಲ್ಲರನ್ನೂ ಬೇಸ್ತು ಬೀಳಿಸಿದೆ. ನಾಯಿಯ ಅದ್ಭುತಾ ನಟನಾ ಕೌಶಲ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. ಏನಿದು ಸುದ್ದಿ? ಇಲ್ಲಿದೆ ಓದಿ.

‘ನಾಯಿ ತೆವಳುತ್ತಿದೆ, ಪಾಪ’ ಎಂದವರನ್ನು ಬೇಸ್ತು ಬೀಳಿಸಿದ ಶ್ವಾನ; ಇದಕ್ಕೆ ಆಸ್ಕರ್ ಕೊಡಬೇಕು ಎಂದ ನೆಟ್ಟಿಗರು: ವಿಡಿಯೊ ನೋಡಿ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
TV9 Web
| Edited By: |

Updated on: Sep 26, 2021 | 6:42 PM

Share

ಸಾಮಾಜಿಕ ಜಾಲತಾಣದಲ್ಲಿ ಒಮ್ಮೊಮ್ಮೆ ಬಹಳ ಅಪರೂಪದ ಸಂಗತಿಗಳು, ನೋಡುಗರ ಗಮನ ಸೆಳೆಯುತ್ತವೆ. ಯಾವ ಸಮಯದಲ್ಲಿ ಯಾವ ವಿಡಿಯೊ ವೈರಲ್ ಆಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಪ್ರಸ್ತುತ ಶ್ವಾನವೊಂದು ಎಲ್ಲರನ್ನೂ ಬೇಸ್ತು ಬೀಳಿಸಿದ ವಿಡಿಯೊ ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ಅದು ಏನು ಮಾಡಿತು ಅಂತೀರಾ? ಇಲ್ಲಿದೆ ಓದಿ.

ಈ ನಾಯಿಗೆ ಜನರನ್ನು ಆಕರ್ಷಿಸುವ ಕಲೆ ಕರಗತವಾಗಿದೆ. ತನ್ನ ಜಾಣತನದಿಂದ ಎಲ್ಲರ ಗಮನ ಸೆಳೆದ ಈ ನಾಯಿಯ ಚೇಷ್ಟೆ ನೋಡಿದ ವೀಕ್ಷಕರು, ಅಬ್ಬಾ ನಾಯಿಯೇ! ಎಂದು ಉದ್ಗರಿಸಿದ್ದು ಸುಳ್ಳಲ್ಲ. ಕಾರಣ, ಈ ಶ್ವಾನ ಮೊದಲಿಗೆ, ತನ್ನ ನಾಲ್ಕು ಕಾಲುಗಳೊಂದಿಗೆ ನೆಲದಲ್ಲಿ ತೆವಳುವ ಮಾದರಿಯಲ್ಲಿ ಸಾಗುತ್ತಿರುತ್ತದೆ. ಮೊದಲಿಗೆ ನೋಡುವಾಗ, ನಾಯಿಗೆ ಏನೋ ಖಾಯಿಲೆಯಾಗಿ ಕಷ್ಟ ಪಡುತ್ತಿರುವಂತೆ ಕಾಣಿಸುತ್ತದೆ. ಆದರೆ ಸ್ವಲ್ಪ ಸಮಯದ ನಂತರವೇ ಎಲ್ಲರಿಗೂ ನಿಜದ ಅರಿವಾಗುವುದು!

ವಿಡಿಯೊದಲ್ಲಿ ಮೊದಲಿಗೆ ತೆವಳುತ್ತಿರುವ ನಾಯಿ ಇದ್ದಕ್ಕಿದ್ದಂತೆ, ಮಾಮೂಲಿಯಾಗಿ ಎದ್ದು ನಿಲ್ಲುತ್ತದೆ.. ತನಗೇನೂ ಆಗಿಲ್ಲವಂತೆ ನಡೆದು ನೋಡುಗರನ್ನು ಚಕಿತರನ್ನಾಗಿಸುತ್ತದೆ. ಎಲ್ಲರನ್ನೂ ಮಂಗ ಮಾಡುವ ಈ ಕಲೆ ಈ ನಾಯಿಗೆ ಬಹಳ ಕರಗತವಾದಂತಿದೆ. ವೈರಲ್ ಆಗಿರುವ ಈ ವಿಡಿಯೊವನ್ನು ನೋಡಿದ ನೆಟ್ಟಿಗರು, ನಾಯಿಯ ತುಂಟಾಟಕ್ಕೆ ಮೆಚ್ಚಿಕೊಂಡಿದ್ದು ಥರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ನಾಯಿಯ ಈ ವಿಡಿಯೊಗೆ ಬಂದಿರುವ ಕಾಮೆಂಟ್​ಗಳಲ್ಲಿ ಒಬ್ಬರು, ‘ಆ ಶ್ವಾನ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಬೇಕು’ ಎಂದಿದ್ದಾರೆ. ಇನ್ನೊಬ್ಬರು ವಿಡಿಯೊದಲ್ಲಿ ಕಾಣುವ ನಾಯಿ ತುಂಬಾ ಬುದ್ಧಿವಂತ ಎಂದು ಬರೆದಿದ್ದಾರೆ. ‘ಇಂತಹ ಸಾಕುಪ್ರಾಣಿಯು ಎಲ್ಲರ ಮನೆಯಲ್ಲಿ ಇರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಓರ್ವ ಬಳಕೆದಾರರಂತೂ ಇನ್ನೂ ಮುಂದಕ್ಕೆ ಹೋಗಿ, ‘ಈ ‘ಕೋಳಿಗೆ’ ಆಸ್ಕರ್ ಸಿಗಬೇಕು’ ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಲು ಈ ಶ್ವಾನ ಕಾರಣವಾಗಿರುವುದಂತೂ ಹೌದು.

ಇದನ್ನೂ ಓದಿ:

Viral Video: ಶಾಪಿಂಗ್​ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!

ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್​ ಪುತಿನ್​

Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ

(a dog act like it does not able to walk but then there is shocking for viewer watch the video)

ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ