AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ

ಉತ್ತರ ಪ್ರದೇಶದ ಪ್ರತಾಪ್​ ಗಢ್​​ನ ಬಿಜೆಪಿ ಸಂಸದ ಸಂಗಮ್​ ಲಾಲ್​ ಗುಪ್ತಾರಿಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರು ಥಳಿಸಿದ್ದಾರೆ. ಸಂಗಮ್​ ಲಾಲ್​ ಅವರು ತಮ್ಮ ಕ್ಷೇತ್ರ ಪ್ರತಾಪ್​ಗಢ್​​ನ ಸಂಗಿಪುರ್​​ ಬ್ಲಾಕ್​​ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.  ಈ ವೇಳೆ ಸಾರ್ವಜನಿಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಹೊಡೆದಿದೆ. ಜನರಿಂದ ತಪ್ಪಿಸಿಕೊಂಡು ವಾಹನ ಹತ್ತಿದರೂ ಬಿಡದೆ, ವಾಹನಕ್ಕೇ ಕಲ್ಲು ಹೊಡೆದಿದ್ದಾರೆ. ಈ ದಾಳಿ ನಡೆಯಲು ಮುಖ್ಯ ಕಾರಣ  ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ, ಜನಪ್ರತಿನಿಧಿ […]

Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ
ಸಂಗಮ್​ ಲಾಲ್​ ಗುಪ್ತಾ
TV9 Web
| Edited By: |

Updated on:Sep 26, 2021 | 5:29 PM

Share

ಉತ್ತರ ಪ್ರದೇಶದ ಪ್ರತಾಪ್​ ಗಢ್​​ನ ಬಿಜೆಪಿ ಸಂಸದ ಸಂಗಮ್​ ಲಾಲ್​ ಗುಪ್ತಾರಿಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರು ಥಳಿಸಿದ್ದಾರೆ. ಸಂಗಮ್​ ಲಾಲ್​ ಅವರು ತಮ್ಮ ಕ್ಷೇತ್ರ ಪ್ರತಾಪ್​ಗಢ್​​ನ ಸಂಗಿಪುರ್​​ ಬ್ಲಾಕ್​​ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.  ಈ ವೇಳೆ ಸಾರ್ವಜನಿಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಹೊಡೆದಿದೆ. ಜನರಿಂದ ತಪ್ಪಿಸಿಕೊಂಡು ವಾಹನ ಹತ್ತಿದರೂ ಬಿಡದೆ, ವಾಹನಕ್ಕೇ ಕಲ್ಲು ಹೊಡೆದಿದ್ದಾರೆ.

ಈ ದಾಳಿ ನಡೆಯಲು ಮುಖ್ಯ ಕಾರಣ  ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ, ಜನಪ್ರತಿನಿಧಿ ಆರಾಧನಾ ಮಿಶ್ರಾ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಆರೋಗ್ಯ ಶಿಬಿರದಲ್ಲಿ ನಡೆದ ಗಲಾಟೆಯಲ್ಲಿ ಹಲವು ಬಿಜೆಪಿ ಕಾರ್ಯಕರ್ತರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಾಪ್​ಗಢ್​ ಬಿಜೆಪಿ ಸಂಸದನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ವಾರಾಣಸಿ ಹೆದ್ದಾರಿಯಲ್ಲಿ ಧರಣಿ ನಡೆಸಿ, ಕ್ರಮಕ್ಕೆ ಆಗ್ರಹಿಸಿದ್ದರು.

ಇದಾದ ನಂತರ ಪ್ರತಾಪ್​ಗಡ್​ನ ಲಾಲ್​ಗಂಜ್​ ಪೊಲೀಸ್​ ಠಾಣೆಯಲ್ಲಿ ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ ಆರಾಧನಾ ಮಿಶ್ರ ಮತ್ತು ಅವರ 27 ಬೆಂಬಲಿಗರ ವಿರುದ್ಧ ಹತ್ಯೆ ಯತ್ನ ಪ್ರಕರಣದಡಿ ಎಫ್ಐಆರ್ ದಾಖಲಾಗಿದೆ. ಎಫ್​ಐಆರ್​ ದಾಖಲಾಗುತ್ತಿದ್ದಂತೆ ಬಿಜೆಪಿಗರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್​, ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಕೆಲವರು ಅಲ್ಲಿನ ವ್ಯವಸ್ಥೆಯಿಂದ ಕಿರಿಕಿರಿಗೊಂಡರು. ಅವ್ಯವಸ್ಥೆ ಬಗ್ಗೆ ಬಿಜೆಪಿ ಸಂಸದನನ್ನು ಪ್ರಶ್ನಿಸಿದರು. ಆದರೆ ಸರಿಯಾಗಿ ಉತ್ತರ ಬಾರದೆ ಇದ್ದಾಗ ಸಿಟ್ಟಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ

ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್​ ಪುತಿನ್​ 

(BJP MP Sangam Lal Gupta attacked by public in Pratapgarh Of Uttar Pradesh)

Published On - 5:28 pm, Sun, 26 September 21

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ