AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ

ಉತ್ತರ ಪ್ರದೇಶದ ಪ್ರತಾಪ್​ ಗಢ್​​ನ ಬಿಜೆಪಿ ಸಂಸದ ಸಂಗಮ್​ ಲಾಲ್​ ಗುಪ್ತಾರಿಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರು ಥಳಿಸಿದ್ದಾರೆ. ಸಂಗಮ್​ ಲಾಲ್​ ಅವರು ತಮ್ಮ ಕ್ಷೇತ್ರ ಪ್ರತಾಪ್​ಗಢ್​​ನ ಸಂಗಿಪುರ್​​ ಬ್ಲಾಕ್​​ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.  ಈ ವೇಳೆ ಸಾರ್ವಜನಿಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಹೊಡೆದಿದೆ. ಜನರಿಂದ ತಪ್ಪಿಸಿಕೊಂಡು ವಾಹನ ಹತ್ತಿದರೂ ಬಿಡದೆ, ವಾಹನಕ್ಕೇ ಕಲ್ಲು ಹೊಡೆದಿದ್ದಾರೆ. ಈ ದಾಳಿ ನಡೆಯಲು ಮುಖ್ಯ ಕಾರಣ  ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ, ಜನಪ್ರತಿನಿಧಿ […]

Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ
ಸಂಗಮ್​ ಲಾಲ್​ ಗುಪ್ತಾ
TV9 Web
| Edited By: |

Updated on:Sep 26, 2021 | 5:29 PM

Share

ಉತ್ತರ ಪ್ರದೇಶದ ಪ್ರತಾಪ್​ ಗಢ್​​ನ ಬಿಜೆಪಿ ಸಂಸದ ಸಂಗಮ್​ ಲಾಲ್​ ಗುಪ್ತಾರಿಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರು ಥಳಿಸಿದ್ದಾರೆ. ಸಂಗಮ್​ ಲಾಲ್​ ಅವರು ತಮ್ಮ ಕ್ಷೇತ್ರ ಪ್ರತಾಪ್​ಗಢ್​​ನ ಸಂಗಿಪುರ್​​ ಬ್ಲಾಕ್​​ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.  ಈ ವೇಳೆ ಸಾರ್ವಜನಿಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಹೊಡೆದಿದೆ. ಜನರಿಂದ ತಪ್ಪಿಸಿಕೊಂಡು ವಾಹನ ಹತ್ತಿದರೂ ಬಿಡದೆ, ವಾಹನಕ್ಕೇ ಕಲ್ಲು ಹೊಡೆದಿದ್ದಾರೆ.

ಈ ದಾಳಿ ನಡೆಯಲು ಮುಖ್ಯ ಕಾರಣ  ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ, ಜನಪ್ರತಿನಿಧಿ ಆರಾಧನಾ ಮಿಶ್ರಾ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಆರೋಗ್ಯ ಶಿಬಿರದಲ್ಲಿ ನಡೆದ ಗಲಾಟೆಯಲ್ಲಿ ಹಲವು ಬಿಜೆಪಿ ಕಾರ್ಯಕರ್ತರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಾಪ್​ಗಢ್​ ಬಿಜೆಪಿ ಸಂಸದನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ವಾರಾಣಸಿ ಹೆದ್ದಾರಿಯಲ್ಲಿ ಧರಣಿ ನಡೆಸಿ, ಕ್ರಮಕ್ಕೆ ಆಗ್ರಹಿಸಿದ್ದರು.

ಇದಾದ ನಂತರ ಪ್ರತಾಪ್​ಗಡ್​ನ ಲಾಲ್​ಗಂಜ್​ ಪೊಲೀಸ್​ ಠಾಣೆಯಲ್ಲಿ ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ ಆರಾಧನಾ ಮಿಶ್ರ ಮತ್ತು ಅವರ 27 ಬೆಂಬಲಿಗರ ವಿರುದ್ಧ ಹತ್ಯೆ ಯತ್ನ ಪ್ರಕರಣದಡಿ ಎಫ್ಐಆರ್ ದಾಖಲಾಗಿದೆ. ಎಫ್​ಐಆರ್​ ದಾಖಲಾಗುತ್ತಿದ್ದಂತೆ ಬಿಜೆಪಿಗರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್​, ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಕೆಲವರು ಅಲ್ಲಿನ ವ್ಯವಸ್ಥೆಯಿಂದ ಕಿರಿಕಿರಿಗೊಂಡರು. ಅವ್ಯವಸ್ಥೆ ಬಗ್ಗೆ ಬಿಜೆಪಿ ಸಂಸದನನ್ನು ಪ್ರಶ್ನಿಸಿದರು. ಆದರೆ ಸರಿಯಾಗಿ ಉತ್ತರ ಬಾರದೆ ಇದ್ದಾಗ ಸಿಟ್ಟಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ

ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್​ ಪುತಿನ್​ 

(BJP MP Sangam Lal Gupta attacked by public in Pratapgarh Of Uttar Pradesh)

Published On - 5:28 pm, Sun, 26 September 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್