Viral: ಸ್ವಿಗ್ಗಿಯಲ್ಲಿ ಆಹಾರ ಸಮಸ್ಯೆ ಬಗ್ಗೆ ದೂರು ಸಲ್ಲಿಸಿ ಇಂಟರ್ವ್ಯೂ ಅವಕಾಶ ಕೇಳಿದ ಯುವಕ

ಕೆಲವರ ಬುದ್ಧಿವಂತಿಕೆ ಮೆಚ್ಚಬೇಕೋ, ಬೇಡವೋ ಎನ್ನುವ ಅನುಮಾನ ಮೂಡುತ್ತದೆ. ಇದೀಗ ಈ ವ್ಯಕ್ತಿಯ ಬುದ್ಧಿವಂತಿಕೆಯನ್ನು ನೀವು ಮೆಚ್ಚಲೇಬೇಕು. ಹೌದು, ಸ್ವಿಗ್ಗಿ ಕಸ್ಟಮರ್ ಸಪೋರ್ಟ್ ಗೆ ಕರೆ ಮಾಡಿ ಆಹಾರ ಸಮಸ್ಯೆ ಬಗ್ಗೆ ವಿವರಿಸಿ, ಆ ಬಳಿಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಯುವಕನು ಉದ್ಯೋಗ ಹುಡುಕುವ ಈ ಪ್ಲ್ಯಾನ್‌ಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಸ್ವಿಗ್ಗಿಯಲ್ಲಿ ಆಹಾರ ಸಮಸ್ಯೆ ಬಗ್ಗೆ ದೂರು ಸಲ್ಲಿಸಿ ಇಂಟರ್ವ್ಯೂ ಅವಕಾಶ ಕೇಳಿದ ಯುವಕ
ಸಾಂದರ್ಭಿಕ ಚಿತ್ರ
Image Credit source: Jackyenjoyphotography/Moment/Getty Images

Updated on: Sep 18, 2026 | 7:14 PM

ಈಗಿನ ಕಾಲದಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಕಷ್ಟಕರ. ಉದ್ಯೋಗಕ್ಕಾಗಿ (job) ನಾನಾ ರೀತಿಯ ಪ್ರಯತ್ನ ಮಾಡ್ತಾರೆ. ಆದರೆ ಇಲ್ಲೊಬ್ಬ ಯುವಕ ಮೊದಲು ಸ್ವಿಗ್ಗಿಯಲ್ಲಿ ಆರ್ಡರ್ ಬಗ್ಗೆ ದೂರು ನೀಡಿದ್ದಾನೆ. ಆ ಬಳಿಕ ಸಿಕ್ಕ ಚಾನ್ಸ್ ಮಿಸ್ ಮಾಡಿಕೊಳ್ಳದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಸದ್ಯಕ್ಕೆ ಈ ಯುವಕ ಸ್ವಿಗ್ಗಿ ಸಪೋರ್ಟ್ ಗೆ ಕಳುಹಿಸಿದ ಸಂಭಾಷಣೆಯ ಸ್ಕ್ರೀನ್ ಶಾಟ್ ಸಖತ್ ವೈರಲ್ ಆಗಿದೆ. ಈ ಯುವಕನ ಬುದ್ಧಿವಂತಿಕೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಆಹಾರ ಸಮಸ್ಯೆ ಬಗ್ಗೆ ದೂರು ಸಲ್ಲಿಸಿ ಇಂಟರ್ವ್ಯೂ ಅವಕಾಶ

ಓಜಸ್ ಶರ್ಮಾ (OjasSharma) ತಮ್ಮಎಕ್ಸ್ ಖಾತೆಯಲ್ಲಿ ಸ್ವಿಗ್ಗಿ ಕೇರ್ಸ್ ಗೆ ಕಳುಹಿಸಿದ ಸಂದೇಶದ ಸ್ಕ್ರೀನ್ ಶಾಟ್ ಹಂಚಿಕೊಂಡು, ಜಾಬ್ ಹಂಟ್ ಫೈನಲ್ ಬಾಸ್, ಒಂದು ವೇಳೆ ಸ್ವಿಗ್ಗಿಯಿಂದ ಪ್ರತಿಕ್ರಿಯೆ ಬರದಿದ್ದರೆ ಜೋಮ್ಯಾಟೋಗೆ ಬದಲಾಯಿಸುತ್ತೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್‌ನಲ್ಲಿ ಮೊದಲಿಗೆ ಆರ್ಡರ್‌ನಲ್ಲಿ ಸಮಸ್ಯೆ ಇದೆ ಎಂದು ಸ್ವಿಗ್ಗಿ ಕಸ್ಟಮರ್ ಸಪೋರ್ಟ್ ಗೆ ದೂರು ನೀಡಿದ್ದಾನೆ. ಅದರ ಜತೆಗೆ ಉದ್ಯೋಗ ಅರ್ಜಿ ಸಲ್ಲಿಸುವ ಬಗ್ಗೆ ಉಲ್ಲೇಖಿಸಿದ್ದಾನೆ. ನಂಗೆ ಸಂದರ್ಶನದ ಅವಕಾಶ ನೀಡದಿದ್ದರೆ ನಾನಿನ್ನು ಮುಂದೆ ಸ್ವಿಗ್ಗಿ ಅಥವಾ ಇನ್ಸ್ಟಾ ಮಾರ್ಟ್ ನಿಂದ ಫುಡ್ ಆರ್ಡರ್ ಮಾಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾನೆ.

ಸ್ವಿಗ್ಗಿ ಆರ್ಡರ್‌ಗಳಿಗೆ ಯುವಕ ಮಾಡಿದ ಖರ್ಚು ಎಷ್ಟು ನೋಡಿ

ಸ್ವಿಗ್ಗಿ ಆರ್ಡರ್‌ಗಳಿಗೆ ಸುಮಾರು 1.5 ಲಕ್ಷ ರೂ, ಇನ್ಸ್ಟಾ ಮಾರ್ಟ್‌ನಲ್ಲಿ 50 ಸಾವಿರ ರೂ ಖರ್ಚು ಮಾಡಿದ್ದೇನೆ. ಒಟ್ಟು ಖರ್ಚು 2 ಲಕ್ಷ ರೂ ಆಗಿದೆ. ಒಂದು ವೇಳೆ ನೀವು ನಂಗೆ ಸಂದರ್ಶನದ ಅವಕಾಶ ನೀಡದೇ ಹೋದಲ್ಲಿ ನಿಮ್ಗೆ ನಷ್ಟವಾಗುತ್ತದೆ ಎಂದು ಈ ಸಂದೇಶದಲ್ಲಿ ಬರೆದಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್ ಇಲ್ಲಿದೆ


ಇದನ್ನೂ ಓದಿ: ಪಿಜ್ಜಾ ಆರ್ಡರ್ ಮಾಡಿ ಅಜ್ಜಿಗೆ ಸರ್ಪ್ರೈಸ್ ಕೊಟ್ಟ ಮೊಮ್ಮಗಳು

ಈ ಪೋಸ್ಟ್ ಇದುವರೆಗೆ ಇಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಪ್ಲ್ಯಾನ್ ಚೆನ್ನಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ಫೈನಲ್ ಸ್ಟೆಪ್, ನೀವು ಬುದ್ಧಿವಂತರು ಎಂದು ಹೇಳಿದ್ದಾರೆ. ಮತ್ತೊಬ್ಬರು, ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us