AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನಿಮ್ಗೆಲ್ಲಾ ಗೂಗಲ್ ಕಂಪನಿಯಲ್ಲಿ ಯಾರ್ ಕೆಲ್ಸ ಕೊಡ್ತಾರೆ ಎಂದ ಸಂದರ್ಶಕನಿಗೆ ಮುಟ್ಟಿಕೊಳ್ಳುವಂತೆ ಉತ್ತರ ನೀಡಿದ ಯುವತಿ

ಈಗಿನ ಕಾಲದಲ್ಲಿ ಕೆಲಸ ಸಿಗೋದು ತುಂಬಾನೇ ಕಷ್ಟ. ಇನ್ನು ಸಂದರ್ಶನದಲ್ಲಿ ಪಾಸ್ ಆಗಿ ಕೆಲಸ ಸಿಕ್ಕರೆ ಅದಕ್ಕಿಂತ ಸಂತೋಷ ಬೇರೇನಿಲ್ಲ. ಯುವತಿಯೊಬ್ಬಳು ಸಂದರ್ಶನಕ್ಕೆಂದು ಹೋಗಿದ್ದ ವೇಳೆಯಲ್ಲಿ ತನಗೆ ಆದ ಅನುಮಾನ, ಎಲ್ಲವನ್ನು ಮೆಟ್ಟಿ ನಿಂತು ಹೇಗೆ ಕೆಲಸ ಗಿಟ್ಟಿಸಿಕೊಂಡೆ ಎಂದು ಪೋಸ್ಟ್ ಮಾಡಿದ್ದಾಳೆ. ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ.

Viral: ನಿಮ್ಗೆಲ್ಲಾ ಗೂಗಲ್ ಕಂಪನಿಯಲ್ಲಿ ಯಾರ್ ಕೆಲ್ಸ ಕೊಡ್ತಾರೆ ಎಂದ ಸಂದರ್ಶಕನಿಗೆ ಮುಟ್ಟಿಕೊಳ್ಳುವಂತೆ ಉತ್ತರ ನೀಡಿದ ಯುವತಿ
ಸಾಂದರ್ಭಿಕ ಚಿತ್ರImage Credit source: Twitter
ಸಾಯಿನಂದಾ
|

Updated on:Aug 26, 2025 | 7:31 PM

Share

ಈಗಿನ ಕಾಲದಲ್ಲಿ ಕೆಲಸ (job) ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಒಳ್ಳೆಯ ಪ್ರತಿಭೆ, ಕೆಲಸ ಮಾಡುವ ಆಸಕ್ತಿಯಿದ್ರು ಸಂದರ್ಶನದ ಕೊನೆಯಲ್ಲಿ ಕೆಲಸ ಇಲ್ಲ, ನೀವು ಫೇಲ್ ಆದ್ರಿ ಎಂದಾಗ ಆಗುವ ಬೇಜಾರು ಅಷ್ಟಿಷ್ಟಲ್ಲ. ಕೆಲವೊಮ್ಮೆ ಸಂದರ್ಶಕರು ಕೇಳುವ ಪ್ರಶ್ನೆಗೆ ಉತ್ತರಿಸಲು ಆಗುವುದಿಲ್ಲ. ಈ ವೇಳೆಯಲ್ಲಿ ಆ ವ್ಯಕ್ತಿಯಿಂದ ಅವಮಾನ ಆಗುವಂತಹ ಮಾತು ಬಂದು ಬಿಟ್ಟರೆ, ಉತ್ಸಾಹವೇ ಹೋಗಿ ಬಿಡುತ್ತದೆ. ಆದರೆ ಅರ್ಪಿತಾ ದಾಸ್ (Arpita Das) ಎಂಬ ಹೆಸರಿನ ಯುವತಿಯೊಬ್ಬಳು ಗೂಗಲ್ ನಲ್ಲಿ ಕೆಲಸ ಪಡೆದಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಈ ಕೆಲಸ ಸಿಗುವ ಮೊದಲು ಸ್ಟಾರ್ಟ್ ಅಪ್ ಕಂಪನಿಯಲ್ಲಿ ಸಂದರ್ಶನದಲ್ಲಿ ಆದ ಅವಮಾನವನ್ನು ವಿವರಿಸಿದ್ದಾಳೆ. ತನ್ನನ್ನು ಅವಮಾನಿಸಿದ ಕಂಪನಿಯಲ್ಲಿ ಸಂದರ್ಶಕರು ಹೇಳಿದ ಮಾತಿಗೆ ವಿರುದ್ಧವಾಗಿ, ಇಂದು ಸೆಡ್ಡು ಹೊಡೆಯುವಂತೆ ನಾನು ಕೆಲಸ ಗಿಟ್ಟಿಸಿಕೊಂಡೆ ಎಂದು ವಿವರಿಸಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಯುವತಿಯ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದಾರೆ.

@Apritha01 ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ನಾನು ಇತ್ತೀಚೆಗಷ್ಟೇ ಸ್ಟಾರ್ಟ್‌ಅಪ್ ಕಂಪನಿಯ ಸಂದರ್ಶನದಲ್ಲಿ ಭಾಗಿಯಾಗಿದ್ದೆ. ಆ ವೇಳೆಯಲ್ಲಿ ತುಂಬಾ ಕಷ್ಟಕರವಾದ ಪ್ರಶ್ನೆಗಳನ್ನು ಕೇಳಿದ್ದರು. ಸಿಸ್ಟಮ್ ಡಿಸೈನ್ ರೌಂಡ್ ಸಮಯದಲ್ಲಿ ಇನ್‌ಫ್ರಾಸ್ಟ್ರಕ್ಚರ್ ವಿನ್ಯಾಸಗೊಳಿಸಲು, ಸಿಪಿಯು ವೆಚ್ಚವನ್ನು ಅಂದಾಜು ಮಾಡಲು, ಮೂಲತಃ ಡೇಟಾ ಸೆಂಟರ್‌ನ ಫಿಸಿಕಲ್ ಕನ್ಸ್ಟ್ರಕ್ಷನ್ ಹೊರತುಪಡಿಸಿ ಉಳಿದ ಎಲ್ಲವನ್ನೂ ನನಗೆ ಕೇಳಿದರು. ಆದರೆ ಸಂದರ್ಶಕರ ಪ್ರಶ್ನೆಗೆ ಉತ್ತರ ಕೊಡಲು ಆಗಲಿಲ್ಲ. ಈ ವೇಳೆಯಲ್ಲಿ ‘ನಿಮ್ಮಂತಹ ಜನರು ಗೂಗಲ್ ಅಥವಾ ಮೆಟಾದಂತಹ ದೊಡ್ಡ ಕಂಪನಿಗಳಿಗೆ ಎಂದಿಗೂ ಪ್ರವೇಶಿಸಲು ಸಾಧ್ಯವಾಗದ ಕಾರಣವೇ ಇದು ಈ ಎಂದು ವ್ಯಂಗ್ಯವಾಡಿದರು ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ
Image
ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಜಾಲಿ ಟ್ರಿಪ್ ಹೋದ ಉದ್ಯೋಗಿ
Image
ಡ್ರೈವಿಂಗ್ ಅಂದ್ರೆ ಈಕೆಗೆ ಇಷ್ಟ, ಈ ಆಸಕ್ತಿಯನ್ನೇ ವೃತ್ತಿಯಾಗಿಸಿಕೊಂಡ ಯುವತಿ
Image
ಸ್ಯಾಲರಿ ಕ್ರೆಡಿಟ್ ಆದ ಕೆಲವೇ ನಿಮಿಷಕ್ಕೆ ಜಾಬ್ ರಿಸೈನ್ ಮಾಡಿದ ಉದ್ಯೋಗಿ
Image
ಗರ್ಭಿಣಿ ಪತ್ನಿಗಾಗಿ ಕೋಟಿ ಕೋಟಿ ಸಂಬಳದ ಕೆಲಸ ತ್ಯಜಿಸಿದ ವ್ಯಕ್ತಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ತಾನು ನಿರುತ್ಸಾಹಗೊಳ್ಳದೇ ಅವರ ಮಾತಿಗೆ ಹೇಗೆ ವಿರುದ್ಧವಾಗಿ ನಾನು ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಕಂಪನಿಯಲ್ಲಿ ತಮ್ಮ ಆನ್‌ಬೋರ್ಡಿಂಗ್, ಆ ಕಂಪನಿಯಿಂದ ತಮಗೆ ಬಂದ ವೆಲ್‌ಕಂ ಐಟಮ್ಸ್, ಅದ್ಭುತವಾದ ಗೂಗಲ್ ಪಿಕ್ಸೆಲ್ ಫೋನ್ ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾಳೆ. ಈ ಮೂಲಕ ತನಗೆ ಅವಮಾನ ಮಾಡಿದ ಸಂದರ್ಶಕರಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾಳೆ ಈ ಯುವತಿ.

ಇದನ್ನೂ ಓದಿ:Viral: ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಜಾಲಿ ಟ್ರಿಪ್ ಹೋದ ಉದ್ಯೋಗಿ, ಮುಂದೇನಾಯ್ತು ನೋಡಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಸಂದರ್ಶಕರಿಗೆ ಮೂಲಭೂತ ಕೌಶಲ್ಯದ ಕೊರತೆಯಿದೆ ಎಂದಿದ್ದಾರೆ. ಇನ್ನೊಬ್ಬರು ಇಂದು ಹೆಚ್ಚಿನ ಸಂದರ್ಶಕರು ಕಲಿಯುವ ಮನೋಭಾವ ಹಾಗೂ ಉತ್ಸಾಹವನ್ನು ನೋಡುತ್ತಾರೆ. ಆದರೆ ಒಬ್ಬ ವ್ಯಕ್ತಿಯನ್ನು ಹತ್ತರಿಂದ ಹದಿನೈದು ನಿಮಿಷಗಳಲ್ಲೇ ಸಂಪೂರ್ಣವಾಗಿ ನಿರ್ಣಯಿಸಲು ಸಾಧ್ಯವಿಲ್ಲ. ಆದರೆ ನಿಮಗೆ ಗೂಗಲ್ ಕೆಲಸ ಸಿಕ್ಕಿದ್ದಕ್ಕಾಗಿ ಅಭಿನಂದನೆಗಳು ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಭವಿಷ್ಯದಲ್ಲಿ ನಿಮಗೆ ಆ ಸಂದರ್ಶಕನನ್ನು ಸಂದರ್ಶಿಸಲು ಅವಕಾಶ ಸಿಗುತ್ತದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 am, Mon, 25 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ