AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಕಂದ ನಿಮ್ಮವನೆಂದು ಕಾಣಿರಿ’ ಹೀಗೆ ಹೇಳುತ್ತಿರುವವರು ಯಾರೆಂದು ಒಮ್ಮೆ ನೋಡಿ!

Video : ಒರಾಂಗುಟಾನ್ ಮೇಡಮ್​ನ ಈ ಸಾಮರಸ್ಯದ ಪಾಠಕ್ಕೆ ನಮ್ಮೆಲ್ಲ ರಾಜಕಾರಣಿಗಳನ್ನು ಕಳಿಸಿದರೆ ಹೇಗಿರುತ್ತೆ?

Viral Video: ‘ಕಂದ ನಿಮ್ಮವನೆಂದು ಕಾಣಿರಿ’ ಹೀಗೆ ಹೇಳುತ್ತಿರುವವರು ಯಾರೆಂದು ಒಮ್ಮೆ ನೋಡಿ!
ಹುಲಿಮರಿಗೆ ಬಾಟಲಿ ಹಾಲು ಕುಡಿಸುತ್ತಿರುವ ಒರಾಂಗುಟಾನ್
TV9 Web
| Edited By: |

Updated on:Aug 08, 2022 | 1:27 PM

Share

Viral : ಮಹೀಂದ್ರಾ ಗ್ರೂಪ್​ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಆಗಾಗ ಪ್ರಾಣಿಪ್ರೀತಿಗೆ ಸಂಬಂಧಿಸಿದ ಪೋಸ್ಟ್​ಗಳನ್ನು ಹಂಚಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಈ ಬಾರಿ ಇವರು ಹಂಚಿಕೊಂಡ ವಿಡಿಯೋ ನೆಟ್ಟಿಗರಲ್ಲಿ ವಿಶೇಷ ಸಂಚಲನ ಮೂಡಿಸಿದೆ. ಈ ವಿಡಿಯೋ ನೋಡಿದ ನೀವು ವಿವಿಧ ಆಯಾಮಗಳಿಂದ ಯೋಚಿಸಲಾರಂಭಿಸುತ್ತೀರಿ. ಹಾಗೆಯೇ ಸದ್ಯದ ಸಾಮಾಜಿಕ, ರಾಜಕೀಯ ವಾತಾವರಣದಲ್ಲಿ ಇದು ಅನೇಕ ರೀತಿಯ ಸಂದೇಶಗಳನ್ನು ಹೊಮ್ಮಿಸುವಂತಿದೆ. ಒರಾಂಗುಟಾನ್ ಹುಲಿಮರಿಗಳಿಗೆ ಹಾಲು ಕೊಡುತ್ತಿರುವ ಈ ವಿಡಿಯೋ ಐದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ, ಸುಮಾರು 23 ಸಾವಿರ ಲೈಕ್ಸ್​, 2,500 ಮರುಹಂಚಿಕೆ ಪಡೆದಿದೆ. ನಮ್ಮ ಮಕ್ಕಳೇ ಹಸಿವಿನಿಂದ ಅಳುತ್ತಿದ್ದರೆ, ಇನ್ನೇನೋ ಕಾರಣಕ್ಕೆ ಕಿರಿಕಿರಿ ಮಾಡುತ್ತಿದ್ದರೆ ನಮಗೆ ಸಂಭಾಳಿಸಲು ಪುರುಸೊತ್ತಿರುವುದಿಲ್ಲ. ಅಂಥದ್ದರಲ್ಲಿ ಬೇರೊಬ್ಬರ ಮಕ್ಕಳನ್ನು… ಆದರೆ ಇದು ಪ್ರಾಣಿಗಳಲ್ಲಿ ಅಯಾಚಿತವಾಗಿ ಸಾಧ್ಯವಾಗುತ್ತದೆ. ಹೇಗೆ ಎಂದು ಈ ವಿಡಿಯೋ ನೋಡಿ.

ಇದನ್ನು ನೋಡಿದ ನೆಟ್ಟಿಗರು, ‘ಈ ಪ್ರಾಣಿಗಳ ಲೋಕದಿಂದಾದರೂ ಪ್ರೀತಿ ಮತ್ತು ಸಾಮರಸ್ಯದ ಮಹತ್ವ ಅರಿಯಿರಿ. ಹೀಗೆ ಬದುಕಲು ಕಲಿಯಿರಿ’ ಎಂದಿದ್ದಾರೆ. ‘ಸಮಾನತೆ ಮತ್ತು ಪರಸ್ಪರ ಒಳಗೊಳ್ಳುವಿಕೆಯನ್ನು ಇಂಥ ಪ್ರಾಣಿಗಳಿಂದಲೇ ಮನುಷ್ಯ ಮರುತರಬೇತಿ ಪಡೆಯಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ‘ಪ್ರಾಣಿಗಳು ಇತರೇ ವರ್ಗದ ಪ್ರಾಣಿಗಳನ್ನು ಪ್ರೀತಿಸುವುದೇ ಶುದ್ಧ ಸಂತೋಷ’ ಎಂದಿದ್ದಾರೆ. ‘ತಾಯಿಯ ಮಮತೆ ಅಪರಿಮಿತ’ ಎಂದು ಮಗದೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಇಂಥ ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 1:25 pm, Mon, 8 August 22

ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ