AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಕಂದ ನಿಮ್ಮವನೆಂದು ಕಾಣಿರಿ’ ಹೀಗೆ ಹೇಳುತ್ತಿರುವವರು ಯಾರೆಂದು ಒಮ್ಮೆ ನೋಡಿ!

Video : ಒರಾಂಗುಟಾನ್ ಮೇಡಮ್​ನ ಈ ಸಾಮರಸ್ಯದ ಪಾಠಕ್ಕೆ ನಮ್ಮೆಲ್ಲ ರಾಜಕಾರಣಿಗಳನ್ನು ಕಳಿಸಿದರೆ ಹೇಗಿರುತ್ತೆ?

Viral Video: ‘ಕಂದ ನಿಮ್ಮವನೆಂದು ಕಾಣಿರಿ’ ಹೀಗೆ ಹೇಳುತ್ತಿರುವವರು ಯಾರೆಂದು ಒಮ್ಮೆ ನೋಡಿ!
ಹುಲಿಮರಿಗೆ ಬಾಟಲಿ ಹಾಲು ಕುಡಿಸುತ್ತಿರುವ ಒರಾಂಗುಟಾನ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 08, 2022 | 1:27 PM

Viral : ಮಹೀಂದ್ರಾ ಗ್ರೂಪ್​ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಆಗಾಗ ಪ್ರಾಣಿಪ್ರೀತಿಗೆ ಸಂಬಂಧಿಸಿದ ಪೋಸ್ಟ್​ಗಳನ್ನು ಹಂಚಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಈ ಬಾರಿ ಇವರು ಹಂಚಿಕೊಂಡ ವಿಡಿಯೋ ನೆಟ್ಟಿಗರಲ್ಲಿ ವಿಶೇಷ ಸಂಚಲನ ಮೂಡಿಸಿದೆ. ಈ ವಿಡಿಯೋ ನೋಡಿದ ನೀವು ವಿವಿಧ ಆಯಾಮಗಳಿಂದ ಯೋಚಿಸಲಾರಂಭಿಸುತ್ತೀರಿ. ಹಾಗೆಯೇ ಸದ್ಯದ ಸಾಮಾಜಿಕ, ರಾಜಕೀಯ ವಾತಾವರಣದಲ್ಲಿ ಇದು ಅನೇಕ ರೀತಿಯ ಸಂದೇಶಗಳನ್ನು ಹೊಮ್ಮಿಸುವಂತಿದೆ. ಒರಾಂಗುಟಾನ್ ಹುಲಿಮರಿಗಳಿಗೆ ಹಾಲು ಕೊಡುತ್ತಿರುವ ಈ ವಿಡಿಯೋ ಐದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ, ಸುಮಾರು 23 ಸಾವಿರ ಲೈಕ್ಸ್​, 2,500 ಮರುಹಂಚಿಕೆ ಪಡೆದಿದೆ. ನಮ್ಮ ಮಕ್ಕಳೇ ಹಸಿವಿನಿಂದ ಅಳುತ್ತಿದ್ದರೆ, ಇನ್ನೇನೋ ಕಾರಣಕ್ಕೆ ಕಿರಿಕಿರಿ ಮಾಡುತ್ತಿದ್ದರೆ ನಮಗೆ ಸಂಭಾಳಿಸಲು ಪುರುಸೊತ್ತಿರುವುದಿಲ್ಲ. ಅಂಥದ್ದರಲ್ಲಿ ಬೇರೊಬ್ಬರ ಮಕ್ಕಳನ್ನು… ಆದರೆ ಇದು ಪ್ರಾಣಿಗಳಲ್ಲಿ ಅಯಾಚಿತವಾಗಿ ಸಾಧ್ಯವಾಗುತ್ತದೆ. ಹೇಗೆ ಎಂದು ಈ ವಿಡಿಯೋ ನೋಡಿ.

ಇದನ್ನು ನೋಡಿದ ನೆಟ್ಟಿಗರು, ‘ಈ ಪ್ರಾಣಿಗಳ ಲೋಕದಿಂದಾದರೂ ಪ್ರೀತಿ ಮತ್ತು ಸಾಮರಸ್ಯದ ಮಹತ್ವ ಅರಿಯಿರಿ. ಹೀಗೆ ಬದುಕಲು ಕಲಿಯಿರಿ’ ಎಂದಿದ್ದಾರೆ. ‘ಸಮಾನತೆ ಮತ್ತು ಪರಸ್ಪರ ಒಳಗೊಳ್ಳುವಿಕೆಯನ್ನು ಇಂಥ ಪ್ರಾಣಿಗಳಿಂದಲೇ ಮನುಷ್ಯ ಮರುತರಬೇತಿ ಪಡೆಯಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ‘ಪ್ರಾಣಿಗಳು ಇತರೇ ವರ್ಗದ ಪ್ರಾಣಿಗಳನ್ನು ಪ್ರೀತಿಸುವುದೇ ಶುದ್ಧ ಸಂತೋಷ’ ಎಂದಿದ್ದಾರೆ. ‘ತಾಯಿಯ ಮಮತೆ ಅಪರಿಮಿತ’ ಎಂದು ಮಗದೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಇಂಥ ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 1:25 pm, Mon, 8 August 22

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!