AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru life Vs Village life: ಹಳ್ಳಿ ಜೀವನ ಸ್ವರ್ಗ; ಇದು ಹಳ್ಳಿಯ ಮುಗ್ಧ ಜನರ ಮನಸ್ಸಿನ ಮಾತು

ಓದು ಮುಗಿಯುತ್ತಿದ್ದಂತೆ ಕೆಲಸಕ್ಕೆಂದು ಬೆಂಗಳೂರಿನತ್ತ ಯುವಕ ಯುವತಿಯರು ಮುಖ ಮಾಡ್ತಾರೆ. ಸಿಟಿ ಲೈಫ್‌ನ್ನು ಎಂಜಾಯ್ ಮಾಡುವ ಇಂದಿನ ಯುವಪೀಳಿಗೆ ಹಳ್ಳಿ ಜನರ ಈ ಮಾತು ಕೇಳಿದ್ರೆ ಶಾಕ್ ಆಗ್ತೀರಾ. ಹೌದು, ಬೆಂಗಳೂರು ಜೀವನಕ್ಕಿಂತ ಹಳ್ಳಿ ಜೀವನವೇ ಸ್ವರ್ಗ ಎಂದು ಇಲ್ಲಿ ಖುಷಿಯಿಂದ ಬದುಕುತ್ತಿರುವ ಹಳ್ಳಿ ಜನರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿದೆ.

Bengaluru life Vs Village life: ಹಳ್ಳಿ ಜೀವನ ಸ್ವರ್ಗ; ಇದು ಹಳ್ಳಿಯ ಮುಗ್ಧ ಜನರ ಮನಸ್ಸಿನ ಮಾತು
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on:Dec 03, 2025 | 11:36 AM

Share

ಹಳ್ಳಿ (Village) ಎಂದರೆ ಸ್ವರ್ಗ. ಮೈ ದಂಡಿಸಿ ದುಡಿಯುವ ಹಳ್ಳಿ ಜನರು. ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ. ಇದರಲ್ಲೇ ನೆಮ್ಮದಿ ಕಾಣುವ ಹಳ್ಳಿ ಜನರನ್ನು ಕಂಡಾಗ ಖುಷಿಯಾಗುತ್ತದೆ. ಆದರೆ ಇಂದಿನ ಯುವ ಜನರಿಗೆ ಸಿಟಿ ಅಂದ್ರೆ ಅದೇನೋ ಸೆಳೆತ. ಆದರೆ ಹಳ್ಳಿಯ ಮುಗ್ಧ ಜನರು ಬೆಂಗಳೂರಿಗಿಂತ ನಾವು ಇಲ್ಲೇ ಸಖತ್ ಎಂಜಾಯ್ ಮಾಡ್ತೇವೆ ಎನ್ನುವ ಮಾತು ನಿಮ್ಮ ಕಣ್ಣನ್ನು ತೆರೆಸುತ್ತದೆ. ಹಳ್ಳಿಯ ಜನರು ಈ ಬದುಕನ್ನು ಎಷ್ಟು ಎಂಜಾಯ್ ಮಾಡ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಈ ಅಪರೂಪದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಳ್ಳಿ ಜನರ ಈ ಮಾತನ್ನು ಒಪ್ಪಿಕೊಂಡಿದ್ದಾರೆ.

Southside kannadiga ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ  ವಿಡಿಯೋದಲ್ಲಿ ಯುವಕನೊಬ್ಬ ಮುಗ್ಧ ಹಳ್ಳಿ ಜನರೊಂದಿಗೆ ಮಾತಿಗಿಳಿಯುವುದನ್ನು ನೋಡಬಹುದು. ಬೆಂಗಳೂರು ಜೀವನದ ಬಗ್ಗೆ ಹೇಳಿ ಅಣ್ಣ ಎಂದಾಗ ಒಬ್ಬ ವ್ಯಕ್ತಿ ಬೆಂಗಳೂರು ಜೀವನ ಚೆನ್ನಾಗಿಲ್ಲ ಎನ್ನುತ್ತಾನೆ. ಆದಕ್ಕೆ ಈ ಯುವಕನು ಚೆನ್ನಾಗಿದೆಯಣ್ಣ ಬೆಂಗಳೂರು ಜೀವನ, ದೊಡ್ಡ ದೊಡ್ಡ ಬಿಲ್ಡಿಂಗ್ ಇದೆ, ಪಾರ್ಟಿ ಮಾಡ್ಬಹುದು ಎನ್ನುವುದನ್ನು ನೋಡಬಹುದು. ಇದಕ್ಕೆ ಪ್ರತಿಯಾಗಿ ಹಳ್ಳಿ ವ್ಯಕ್ತಿ ಅದನ್ನೆಲ್ಲಾ ತಕೊಂಡು ಏನು ಮಾಡೋದು, ನಾವು ಇಲ್ಲಿ ವಾರದಲ್ಲಿ ಎರಡು ದಿನ ಪಾರ್ಟಿ ಮಾಡ್ತೇವೆ. ಬೆಂಗಳೂರಲ್ಲಿ ನೆಮ್ಮದಿ ಅನ್ನೋದೇ ಇದೆ ಎಂದು ಕಟು ವಾಸ್ತವವನ್ನು ತೆರೆದಿಟ್ಟಿದ್ದಾನೆ. ನಮಗೆ ದುಡ್ಡು ಮುಖ್ಯ ಅಲ್ಲ, ಮನುಷ್ಯ ಮುಖ್ಯ ಎನ್ನುವ ಸಂಬಂಧಗಳ ಮಹತ್ವದ ಬಗ್ಗೆ ಮಾತನಾಡಿರುವುದನ್ನು ನೀವು ನೋಡಬಹದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಕೃಷಿ ಅಂದ್ರೆ ಖುಷಿ; ನೃತ್ಯ ಮಾಡುತ್ತಾ ಕೆಲಸವನ್ನು ಆನಂದಿಸಿದ ಮಹಿಳೆ

ಈ ವಿಡಿಯೋ ಹನ್ನೊಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಯಾರಿಗೆ ಬೇಕು ಗುರು ಈ ಬೆಂಗಳೂರು ಎಂದಿದ್ದಾರೆ. ಇನ್ನೊಬ್ಬರು, ಹಳ್ಳಿ ಬದುಕೇ ಸುಂದರ ಎಂದು ಹೇಳಿದರೆ ಮತ್ತೊಬ್ಬರು ನೆಮ್ಮದಿ ಇದ್ರೇನೆ ಜೀವನ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Wed, 3 December 25

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ