
ಬೆಂಗಳೂರು, ಏಪ್ರಿಲ್ 07: ಮಾಯಾನಗರಿ ಬೆಂಗಳೂರು (Bengaluru), ಯುವಕರ ಪಾಲಿಗೆ ಅದೊಂದು ಕನಸಿನ ಲೋಕ, ಹೀಗಾಗಿ ನೂರಾರು ಕನಸುಗಳನ್ನು ಹೊತ್ತು ಇಲ್ಲಿಗೆ ಲಕ್ಷಾಂತರ ಜನರು ಬರುತ್ತಾರೆ. ಹೀಗೆ ಬಂದವರು ಹಾಗೂ ಇಲ್ಲಿನ ನಿವಾಸಿಗಳು ಕೂಡ ಇಲ್ಲಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡುವುದು ಕಡಿಮೆ. ಹೀಗಿರುವಾಗ ಬೆಂಗಳೂರಿನ ನಿವಾಸಿಯೊಬ್ಬರು ಎರಡು ವರ್ಷಗಳ ಬಳಿಕ ಈ ನಗರಕ್ಕೆ ಮರಳಿದ್ದು, ಇಲ್ಲಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ನಗರದ ಹದಗೆಡುತ್ತಿರುವ ಸ್ಥಿತಿಯ ಬಗ್ಗೆ ಬೆಂಗಳೂರಿನ ನಿವಾಸಿಯೊಬ್ಬರು ಮಾಡಿದ ಪ್ರಾಮಾಣಿಕ ಪೋಸ್ಟ್ ಮಾಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.
ಆದಿತ್ಯ ಕುಲಕರ್ಣಿ (Aditya Kulkarni) ಎಂಬ ವ್ಯಕ್ತಿ ತಮ್ಮ ಎಕ್ಸ್ ಖಾತೆಯಲ್ಲಿ ಹದಗೆಟ್ಟಿರುವ ಬೆಂಗಳೂರಿನ ಬಗ್ಗೆ ಹೇಳಿದ್ದಾರೆ. ನಾನು ಬೆಂಗಳೂರಿಗೆ ಹಿಂತಿರುಗಿ 3 ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ನಾನು ದೂರವಿದ್ದ 2 ವರ್ಷಗಳಲ್ಲಿ ನಗರವು ಗಮನಾರ್ಹವಾಗಿ ಬದಲಾಗಿದೆ ಎಂದು ನಾನು ಹೇಳಲೇಬೇಕು. ಬದಲಾವಣೆಯು ಕೆಟ್ಟದ್ದಾಗಿದೆ ಎಂದು ಹೇಳಲು ನನಗೆ ಭಯವಾಗಿದೆ ಎಂದು ಹೇಳಿದ್ದಾರೆ.
It’s been more than 3 months since I moved back to Bangalore and I must say that the city has changed significantly in the 2 years I was away. The change has been for the worse, I’m afraid. There’s construction everywhere, roads are either dug up or full of potholes. There’s…
— Aditya Kulkarni (@adikulk) April 6, 2026
ಎಲ್ಲೆಡೆ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ, ರಸ್ತೆಗಳು ಅಗೆದು ಹಾಕಲ್ಪಟ್ಟಿವೆ, ಇತ್ತ ಗುಂಡಿಗಳಿಂದ ತುಂಬಿವೆ. ಎಲ್ಲೆಡೆ ಕಸವಿದೆ ಮತ್ತು ಇಡೀ ನಗರವು ಹೊಲಸಿನಿಂದ ಗಬ್ಬು ನಾರುತ್ತಿದೆ. ಸಂಚಾರ ಹದಗೆಟ್ಟಿದೆ ಮತ್ತು ರಸ್ತೆಗಳಲ್ಲಿ ನಾಗರಿಕ ಪ್ರಜ್ಞೆಯ ಕೊರತೆಯನ್ನು ನೋಡಲು ಭಯಾನಕವಾಗಿದೆ. ನನ್ನ ಮನೆಯಿದ್ದ ಈ ನಗರವನ್ನು ನಾನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ನೆರವಿಗೆ ಬಂದ ಅಪರಿಚಿತರು
ಏಪ್ರಿಲ್ 6 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರು ಒಂದು ಅದ್ಭುತ ನಗರ. ನಗರವು ಜನರಿಂದ ಕೂಡಿದೆ, ಆದರೆ ಕೆಲವು ಮೂರ್ಖ ಜನರು ತಮ್ಮ ವಾಸಿಸುವ ಸ್ಥಳಗಳನ್ನು ನಾಶಮಾಡುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿರ್ಮಾಣ ಚಟುವಟಿಕೆಗಳಿಂದ ಮನೆಗಳಲ್ಲಿ ಧೂಳು ಸಂಗ್ರಹವಾಗುವುದನ್ನು ಮರೆಯಲು ಸಾಧ್ಯವೇ ಎಂದಿದ್ದಾರೆ. ಮತ್ತೊಬ್ಬರು, ರಾಜಕೀಯ ನಾಯಕರು ಸಮಸ್ಯೆಗಳನ್ನು ಸರಿಪಡಿಸುವುದಕ್ಕಿಂತ ಐಪಿಎಲ್ ಟಿಕೆಟ್ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರನ್ನು ಆಯ್ಕೆ ಮಾಡುವುದನ್ನು ಮುಂದುವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ