AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗಳ ಉಪಹಾರ ಗೃಹ; ಮುದುಮಲೈನ ತೆಪ್ಪಕಾಡಿನಲ್ಲಿರುವ ಶಿಬಿರಕ್ಕೆ ಬನ್ನಿ

Tamilnadu: ಆನೆಗಳನ್ನು ಹತ್ತಿರದಿಂದ ನೋಡಿದ್ದೀರಿ, ಮುಟ್ಟಿ ಮಾತನಾಡಿಸಿದ್ದೀರಿ. ಆದರೆ ಅವುಗಳು ಏನು ತಿನ್ನುತ್ತವೆ? ಆನೆ ಶಿಬಿರದಲ್ಲಿ ಅವುಗಳಿಗಾಗಿ ಇರುವ ಅಡುಗೆಮನೆ ಹೇಗಿರುತ್ತದೆ? ನೋಡಿದ್ದೀರಾ? ಬನ್ನಿ ಹಾಗಿದ್ದರೆ ತಮಿಳುನಾಡಿಗೆ.

ಆನೆಗಳ ಉಪಹಾರ ಗೃಹ; ಮುದುಮಲೈನ ತೆಪ್ಪಕಾಡಿನಲ್ಲಿರುವ ಶಿಬಿರಕ್ಕೆ ಬನ್ನಿ
ಆನೆಗಳ ಅಡುಗೆಮನೆ
TV9 Web
| Edited By: ಶ್ರೀದೇವಿ ಕಳಸದ|

Updated on:Dec 02, 2022 | 12:30 PM

Share

Viral Video : ದೈತ್ಯದೇಹಿ ಆನೆಗಳಿಗೆ ಆಹಾರ ಹೇಗೆ ತಯಾರಿಸಲಾಗುತ್ತದೆ? ಎಂಬ ಅಂದಾಜು ನಿಮಗಿದೆಯಾ? ಗೊತ್ತಿಲ್ಲವಾದರೆ ಈ ವಿಡಿಯೋ ನೋಡಿ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಆನೆಗಳ ಉಪಹಾರ ಗೃಹದ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ದೊಡ್ಡದಾದ ಅಡುಗೆಮನೆಯಲ್ಲಿ ದೊಡ್ಡದೊಡ್ಡ ಗಾತ್ರದ ಮುದ್ದೆಗಳನ್ನು ತಯಾರು ಮಾಡುವಲ್ಲಿ ಇವರೆಲ್ಲ ನಿರತರಾಗಿದ್ದಾರೆ. ಹೊರಗೆ ಆನೆಗಳು ಅಷ್ಟೇ ತಾಳ್ಮೆಯಿಂದ ತಮ್ಮ ಉಪಹಾರಕ್ಕಾಗಿ ಕಾಯುತ್ತಿವೆ.

ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಇವುಗಳ ಆಹಾರ ತಯಾರಿಕೆ ಪ್ರಕ್ರಿಯೆ ನಡೆಯುತ್ತದೆ. ರಾಗಿ, ಅಕ್ಕಿ, ಉಪ್ಪು, ಬೆಲ್ಲವನ್ನು ಸೇರಿಸಿದ ದೊಡ್ಡ ದೊಡ್ಡ ಮುದ್ದೆಗಳನ್ನು ಇಲ್ಲಿ ಮಾಡಲಾಗುತ್ತದೆ. ಈತನಕ 56,6000ಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಇಲ್ಲಿರುವ ಈ ಆಹಾರ ತಯಾರಕರು ಎಷ್ಟು ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಗಮನಿಸಿ.

ಭಾರತೀಯ ಅರಣ್ಯ ಅಧಿಕಾರಿ ಸುರೇಂದರ್ ಮೆಹ್ರಾ,ಮುದುಮಲೈನಲ್ಲಿರುವ ಈ ತೆಪ್ಪಕಾಡು ಆನೆ ಶಿಬಿರದಲ್ಲಿ ಆನೆಗಳ ಪೋಷಣೆಯನ್ನು ಕಣ್ಣಾರೆ ನೋಡಲು ಇಲ್ಲಿಗೆ ಭೇಟಿಕೊಡಬಹುದು. ಇದು ಇತರೇ ಶಿಬಿರಗಳಿಗಿಂತ ಅತ್ಯುತ್ತಮ ಎಂದು ಪ್ರತಿಕ್ರಿಯಿಸಿದ್ದಾರೆ.

ಎಲ್ಲವೂ ಸರಿ ಆದರೆ ಯಾಕೆ ಸರಪಳಿ ಕಟ್ಟಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಪ್ರಾಣಿಗಳಿಗೇ ಮೀಸಲಾದ ಜಾಗವೆಂದ ಮೇಲೆ ಇದು ಸರಿ ಅಲ್ಲ. ಮುಕ್ತವಾಗಿ ತಿರುಗಾಡಿಕೊಂಡು ತಮ್ಮ ಆಹಾರವನ್ನು ಅವು ಆನಂದಿಸುತ್ತ ತಿನ್ನಬೇಕು ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 7:10 pm, Thu, 1 December 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು