AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ಗದ ಲೆಹೆಂಗಾ ಕಳಿಸಿದ ವರನ ಕುಟುಂಬ, ಈ ಮದುವೆಯೇ ಬೇಡವೆಂದ ವಧು

Cheap Lehenga : ರೂ. 10,000 ಲೆಹೆಂಗಾ ಅನ್ನು ವರನ ತಂದೆತಾಯಿ ಆರ್ಡರ್ ಮಾಡಿದ್ದಾರೆ. ಆದರೆ ವಧು ಇದು ಅಗ್ಗದ್ದು ಎಂದು ತಿರಸ್ಕರಿಸಿದ್ದಾಳೆ. ಅಷ್ಟೇ ಅಲ್ಲ ಈ ಮದುವೆಯೇ ಬೇಡವೆಂದು ಹೇಳಿದ್ದಾಳೆ. ಎಲ್ಲೆಡೆ ಆಮಂತ್ರಣ ಪತ್ರಿಕೆ ಹಂಚಿಯಾಗಿತ್ತು.

ಅಗ್ಗದ ಲೆಹೆಂಗಾ ಕಳಿಸಿದ ವರನ ಕುಟುಂಬ, ಈ ಮದುವೆಯೇ ಬೇಡವೆಂದ ವಧು
Bride Calls Off Wedding As Groom’s Family Sends Her Cheap Lehenga
TV9 Web
| Edited By: |

Updated on:Nov 17, 2022 | 12:28 PM

Share

Viral : ಹಿರಿಯರು ನಿರ್ಧರಿಸಿದ ಮದುವೆ ಎಂದಮೇಲೆ ಎಲ್ಲವೂ ವಧುವರರ ಇಷ್ಟದಂತೆಯೇ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಅವರದೂ ಇಷ್ಟ ಇವರದೂ ಇಷ್ಟ ಅಂತ ಅಷ್ಟಷ್ಟೇ ಇಷ್ಟಕಷ್ಟಗಳ ನಡುವೆ ಮದುವೆ ತಯಾರಿ ನಡೆಯುತ್ತಿರುತ್ತದೆ. ಕೊನೆಗೆ ಹಾಗೂ ಹೀಗೂ ಆಗಿ ಅಂತೂ ಮದುವೆ ಎನ್ನುವುದೊಂದು ಆಗಿಯೇ ಬಿಡುತ್ತದೆ. ಆದರೆ ಮದುವೆಯೊಂದು ಮುರಿದು ಬೀಳುತ್ತದೆ ಎಂದರೆ ಅದಕ್ಕೆ ಇನ್ನೇನೋ ಗಂಭೀರ ಕಾರಣಗಳಿರುತ್ತವೆ ಎಂದರ್ಥ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಸುದ್ದಿಯನ್ನು ಗಮನಿಸಿ. ವರನ ಮನೆಯವರು ಅಗ್ಗದ ಲೆಹೆಂಗಾ ಕಳಿಸಿದ್ದಾರೆಂಬ ಕಾರಣಕ್ಕೆ ವಧು ಈ ಮದುವೆಯೇ ಬೇಡವೆಂದು ತೀರ್ಮಾನಿಸಿದಳು.

ಮದುವೆಗೆ ಕೆಲ ದಿನಗಳಿರುವಾಗ ಲಕ್ನೋದಿಂದ ವರನ ತಂದೆತಾಯಿ ವಧುವಿಗೆಂದು ರೂ. 10,000 ಲೆಹೆಂಗಾ ಆರ್ಡರ್ ಮಾಡಿದರು. ಆದರೆ ಇದು ಅಗ್ಗದ ಲೆಹೆಂಗಾ ತನಗೆ ಇಷ್ಟವಾಗಿಲ್ಲ ಎಂದು ಆಕೆ ಅದನ್ನು ನಿರಾಕರಿಸಿದಳು. ಅಷ್ಟೇ ಅಲ್ಲ ಈ ಮದುವೆಯೇ ಬೇಡವೆಂದು ಹೇಳಿದಳು. ಉತ್ತರಾಖಾಂಡದ ಹಲ್ದಾನಿಯಲ್ಲಿ ವಧು ವಾಸವಾಗಿದ್ದಾಳೆ. ಈ ಮದುವೆ ಆಮಂತ್ರಣ ಪತ್ರಿಕೆಗಳು ಎಲ್ಲೆಡೆ ಹಂಚಿಯಾಗಿತ್ತು. ಜೂನ್​ನಲ್ಲಿ ಇಬ್ಬರೂ ನಿಶ್ಚಿತಾರ್ಥಕ್ಕೆ ಒಳಗಾಗಿದ್ದರು. ನವೆಂಬರ್ 5ರಂದು ಇವರಿಬ್ಬರ ಮದುವೆ ನಡೆಯಬೇಕಿತ್ತು. ಇದೀಗ ಪೊಲೀಸರು ಈ ಮದುವೆ ರದ್ದಾಗಿದೆ ಎಂದು ಹೇಳಿದ್ದಾರೆ.

ನಿಜವಾದ ಕಾರಣವೇನಿತ್ತೋ? ತಿಳಿದುಬಂದಿಲ್ಲ. ಆದರೆ ಲೆಹೆಂಗಾದ ವಿಷಯವಾಗಿ ಮದುವೆ ಬೇಡವೆನ್ನುವುದು ಅಷ್ಟು ಸಮಂಜಸವೂ ಎನ್ನಿಸುತ್ತಿಲ್ಲ. ಯಾರಿಗೆ ಗೊತ್ತು ಯಾರ ಮನಸು, ಸಂದರ್ಭ, ನಿರೀಕ್ಷೆ, ಗುರಿ ಏನೆಲ್ಲ ಇರುತ್ತದೆ ಎಂದು?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:57 am, Thu, 17 November 22

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?