AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹುಡುಗನ ಕೊರಳಿಗೆ ವರಮಾಲೆ ಎಸೆದ ಹುಡುಗಿ; ಮದುವೆ ಮಂಟಪದಲ್ಲಿ ಹೀಗ್ಯಾಕೆ ಸಿಟ್ಟು?! ವಿಡಿಯೋ ನೋಡಿ

ಈ ವಿಡಿಯೋದಲ್ಲಿ ಮದುಮಗಳು ಹಾಗೂ ಮದುಮಗನ ನಡುವೆ ಹಾಗೊಂದು ಆಶ್ಚರ್ಯಕರ ಘಟನೆ ನಡೆದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಪಾಪ ಅಂದುಕೊಂಡಿದ್ದಾರೆ ಮತ್ತೊಂದೆಡೆ ನಕ್ಕು ನಕ್ಕು ಸುಸ್ತಾಯ್ತು ಎಂದೂ ಕಮೆಂಟ್ ಮಾಡಿದ್ದಾರೆ.

Viral Video: ಹುಡುಗನ ಕೊರಳಿಗೆ ವರಮಾಲೆ ಎಸೆದ ಹುಡುಗಿ; ಮದುವೆ ಮಂಟಪದಲ್ಲಿ ಹೀಗ್ಯಾಕೆ ಸಿಟ್ಟು?! ವಿಡಿಯೋ ನೋಡಿ
ವೈರಲ್ ವಿಡಿಯೋ
TV9 Web
| Edited By: |

Updated on: Jul 11, 2021 | 10:37 PM

Share

ವಿವಾಹ ಸಮಾರಂಭದ ತಮಾಷೆಯ ಅಥವಾ ಮದುವೆ ಮನೆಯಲ್ಲಿ ಅವಾಂತರ ಸೃಷ್ಟಿಯಾಗಿರುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಹುಡುಗಿಯ ಆಶ್ಚರ್ಯಕರ ನಡತೆ, ಹುಡುಗನ ಪೇಚಾಟ, ಮದುವೆಯಲ್ಲಿ ವಿಶೇಷ ವ್ಯವಸ್ಥೆ, ಅಸಮಾಧಾನ, ಸಂಬಂಧಿಕರ ಆಶ್ಚರ್ಯಗಳು ವೈರಲ್ ಆಗುತ್ತಿದೆ. ನೆಟ್ಟಿಗರು ಮದುವೆಯ ಗಮ್ಮತ್ತನ್ನು ಹಂಚಿಕೊಂಡು, ಕಮೆಂಟ್, ಲೈಕ್ ಮಾಡುತ್ತಿರುತ್ತಾರೆ. ಅಂತಹುದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮದುಮಗಳು ಹಾಗೂ ಮದುಮಗನ ನಡುವೆ ಹಾಗೊಂದು ಆಶ್ಚರ್ಯಕರ ಘಟನೆ ನಡೆದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಪಾಪ ಅಂದುಕೊಂಡಿದ್ದಾರೆ ಮತ್ತೊಂದೆಡೆ ನಕ್ಕು ನಕ್ಕು ಸುಸ್ತಾಯ್ತು ಎಂದೂ ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಹುಡುಗಿ ವರಮಾಲೆಯನ್ನು ನಿಂತಲ್ಲಿಂದಲೇ ಮೇಲಕ್ಕೆ ಎಸೆದು ಬಿಟ್ಟಿದ್ದಾಳೆ. ಆ ಮಾಲೆಯು ಹುಡುಗನ ಕೊರಳಿನಿಂದ ಜಾರಿ ಸೊಂಟದವರೆಗೂ ಬಂದುಬಿಟ್ಟಿದೆ. ಹುಡುಗನ ಕೈಯಲ್ಲೂ ಮಾಲೆ ಇದ್ದಕಾರಣ ಆತ ಸುಮ್ಮನೇ ನೋಡುತ್ತಾ ನಿಂತಿದ್ದಾನೆ. ಬಳಿಕ ಹಿಂದೆ ನಿಂತವರು ಅದನ್ನು ಸರಿಪಡಿಸಿದ್ದಾರೆ.

ವಿಡಿಯೋ ನೋಡಿ..

ಬಳಿಕ ಹುಡುಗ ಹುಡುಗಿಯ ಕೊರಳಿಗೆ ಸರಿಯಾಗೇ ಮಾಲೆ ಹಾಕಿದ್ದಾನೆ ಎಂಬುದು ಸಮಾಧಾನಕರ ವಿಷಯ. ಹುಡುಗಿ ಹಾಕಿದ ಮಾಲೆ ಹುಡುಗನ ಕುತ್ತಿಗೆಯಲ್ಲಿ ನಿಂತಿಲ್ಲವೆಂದು ಹುಡುಗನೂ ಸಿಟ್ಟು ತೋರಿಸಲು ಹೋಗಿಲ್ಲ. ಹೀಗಾಗಿ ಜೋಡಿಯ ಬಗ್ಗೆ ಪ್ರೀತಿಯನ್ನೇ ಹೆಚ್ಚು ತೋರಿದ್ದಾರೆ ನೋಡುಗರು.

ಈ ವಿಡಿಯೋವನ್ನು ನಿರಂಜನ್ ಮೊಹಪಾತ್ರ ಎಂಬವರು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋವನ್ನು 40 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋಗೆ ಬರುತ್ತಿರುವ ಕಮೆಂಟ್​ಗಳು ಕೂಡ ತಮಾಷೆಯಾಗಿವೆ. ಕೆಲವರು ಈ ಮದುವೆ ಹುಡುಗಿಗೆ ಇಷ್ಟ ಇಲ್ಲ ಎಂದೂ ಅನಿಸಿಕೆ ಹಂಚಿಕೊಂಡಿದ್ದಾರೆ. ಕೆಲವರು ಅರೇಂಜ್ಡ್ ಮ್ಯಾರೇಜ್​ನಲ್ಲಿ ಹೀಗೇ ಆಗಬಹುದು ಎಂಬ ಊಹೆಯನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಮೈದುನನ ಮದುವೆಯಲ್ಲಿ ಹಮ್ ಆಪ್ ಕೆ ಹೈ ಕೋನ್​ ಚಿತ್ರದ ಹಾಡಿ​ಗೆ ಅತ್ತಿಗೆಯ ಸಕತ್​ ಸ್ಟೆಪ್​! ವಿಡಿಯೋ ವೈರಲ್

Video Viral: ಮ್ಯಾಜಿಕ್​ ಥ್ರಿಲ್ಲಿಂಗ್​​ ರೈಡ್​ನಲ್ಲಿ ಯಡವಟ್ಟಾಯ್ತು! ಜನರ ಸಹಾಯದಿಂದ ಜೀವ ಉಳಿಯಿತು; ಶಾಂಕಿಂಗ್ ವಿಡಿಯೋ

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ