AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿಗೆ ನಾಯಿಮರಿಗಳನ್ನು ನೋಡಿ ಅಚ್ಚರಿಗೊಂಡ ಬೆಕ್ಕು: ವೀಡಿಯೋ ವೈರಲ್​

ಬೆಕ್ಕು ಮೊದಲ ಬಾರಿಗೆ ನಾಯಿ ಮರಿಗಳನ್ನು  ಕಂಡು ಅಚ್ಚರಿಗೊಂಡ ವೀಡಿಯೋ ವೈರಲ್​ ಆಗಿದೆ. ಎರಡು ದಿನಗಳ ಹಿಂದೆ ರೆಡಿಟ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ. 

ಮೊದಲ ಬಾರಿಗೆ ನಾಯಿಮರಿಗಳನ್ನು ನೋಡಿ ಅಚ್ಚರಿಗೊಂಡ ಬೆಕ್ಕು: ವೀಡಿಯೋ ವೈರಲ್​
ಬೆಕ್ಕು
TV9 Web
| Edited By: |

Updated on: Jan 05, 2022 | 3:30 PM

Share

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪ್ರಾಣಿಗಳ ವೀಡಿಯೋ ವೈರಲ್​ ಆಗುತ್ತಲೇ ಇರುತ್ತವೆ. ಬೆಕ್ಕು ನಾಯಿಗಳ ಕ್ಯೂಟ್​ ವೀಡಿಯೋ ನೆಟ್ಟಿಗರ ಮನ ಸೆಳೆದು ವೈರಲ್​ ಆಗುತ್ತವೆ. ಇದೀಗ ರೆಡಿಟ್​ನಲ್ಲಿ ಬೆಕ್ಕು ಮತ್ತು ನಾಯಿಯ ವೀಡಿಯೋವೊಂದು  ವೈರಲ್​ ಆಗಿದೆ. ಬೆಕ್ಕು ಮೊದಲ ಬಾರಿಗೆ ನಾಯಿ ಮರಿಗಳನ್ನು  ಕಂಡು ಅಚ್ಚರಿಗೊಂಡ ವೀಡಿಯೋ ವೈರಲ್​ ಆಗಿದೆ. ಎರಡು ದಿನಗಳ ಹಿಂದೆ ರೆಡಿಟ್​ನಲ್ಲಿ ಈ ವಿಡಿಯೋ ವೈರಲ್​ ಆಗಿದೆ.  ಯುಟ್ಯೂಬ್​ನಲ್ಲೂ ಈ ಬೆಕ್ಕು, ನಾಯಿಯ  ವೀಡಿಯೋ ಸಖತ್​ ವೈರಲ್​ ಅಗಿದೆ.

ವೀಡಿಯೋದಲ್ಲಿ ಬೆಕ್ಕು ಕುಳಿತಿರುವುದನ್ನು ಕಾಣಬಹುದು. ಬಳಿಕ ಅದರ ಎದುರು  ಮೂರ್ನಾಲ್ಕು ನಾಯಿಮರಿಗಳು  ಬರುತ್ತವೆ, ಆಗ ಬೆಕ್ಕು ತದೇಕಚಿತ್ತದಿಂದ ನಾಯಿಯ ಮರಿಗಳನ್ನು ನೋಡುತ್ತದೆ. ಒಂದು ನಾಯಿ ಮರಿ ಬೆಕ್ಕಿನ ಹತ್ತಿರ ಹೋಗಿ ಅದನ್ನು ಕಾಲಿನಿಂದ ಮುಟ್ಟುತ್ತದೆ. ಆಗ ಬೆಕ್ಕು ಹೆದರಿಕೊಂಡು ಮುದುಡಿ ಕುಳಿತುಕೊಳ್ಳುತ್ತದೆ. ನಾಯಿ ಮರಿ ಮತ್ತೆ ಮತ್ತೆ ಬೆಕ್ಕಿನ ಹಿಂದೆಯೇ ಹೋಗುತ್ತದೆ.  ಆಗ ಬೆಕ್ಕು ತಪ್ಪಿಸಿಕೊಂಡು ಮುಂದೆ ನಡೆದುಕೊಂಡು ಹೋಗುತ್ತದೆ. ಈ ಕ್ಯೂಟ್​ ವೀಡಿಯೋ ಈಗ ನೆಟ್ಟಿಗರ ಮನ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ  ವೀಡಿಯೋ ವೈರಲ್​​ ಆಗಿದ್ದು, ಬೆಕ್ಕಿನ ಮುಗ್ಧತೆಗೆ ಜನರು ಮನಸೋತಿದ್ದಾರೆ.

ಈ ಹಿಂದೆ ಬೆಕ್ಕು ಬ್ರೆಡ್​ ರೋಸ್ಟರ್​  ಯಂತ್ರದಿಂದ ಬ್ರೆಡ್​ ಹಾರಿದ್ದಕ್ಕೆ ಗಾಬರಿಗೊಂಡು ಅಡುಗೆ ಮನೆಯೊಂದರಲ್ಲಿ ಜಾರಿ ಬಿದ್ದ ವೀಡಿಯೋ ವೈರಲ್​ ಆಗಿತ್ತು. ಇದೀಗ ಮೊದಲ ಬಾರಿಗೆ  ನಾಯಿಮರಿಗಳನ್ನು ಕಂಡು ಅಚ್ಚರಿಯಿಂದ ನೋಡಿದ ವೀಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!

Follow Us
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!