AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮನೆಯವರ ಬೆಂಬಲವಿಲ್ಲ, ಮಕ್ಕಳನ್ನು ಬೆಳೆಸುವಾಗ ಕೈಯಲ್ಲಿ ಎಷ್ಟು ದುಡ್ಡಿದ್ರೂ ಸಾಲಲ್ಲ ಎಂದ ದಂಪತಿ

ಈ ದುಬಾರಿ ದುನಿಯಾದಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ. ಮದುವೆಯಾದ ಬಳಿಕ ಖರ್ಚು ವೆಚ್ಚಗಳು ಸಹಜವಾಗಿ ಹೆಚ್ಚಾಗುತ್ತದೆ. ಮಕ್ಕಳಾದ ಮೇಲಂತೂ ಕೇಳುವುದೇ ಬೇಡ. ಈ ವೇಳೆಯಲ್ಲಿ ಮನೆಯವರ ಬೆಂಬಲವಿದ್ದರೆ ಬದುಕು ಅಷ್ಟೇನು ಕಷ್ಟ ಅನಿಸಲ್ಲ. ಇದೀಗ ದಂಪತಿಯು ಮಗುವನ್ನು ನೋಡಿಕೊಳ್ಳಲು ತಿಂಗಳಿಗಾಗುವ ವೆಚ್ಚದ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಹೇಗೆ ಈ ಖರ್ಚನ್ನು ನಿಭಾಯಿಸಿಕೊಂಡು ಹೋಗುತ್ತೇವೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

Viral: ಮನೆಯವರ ಬೆಂಬಲವಿಲ್ಲ, ಮಕ್ಕಳನ್ನು ಬೆಳೆಸುವಾಗ ಕೈಯಲ್ಲಿ ಎಷ್ಟು ದುಡ್ಡಿದ್ರೂ ಸಾಲಲ್ಲ ಎಂದ ದಂಪತಿ
ಸಾಂದರ್ಭಿಕ ಚಿತ್ರImage Credit source: AJ_Watt/E+/Getty Images
ಸಾಯಿನಂದಾ
|

Updated on: Jul 25, 2025 | 12:16 PM

Share

ಇತ್ತೀಚೆಗಿನ ದಿನಗಳಲ್ಲಿ ದಿನಸಿ ವಸ್ತುಗಳಿಂದ ಹಿಡಿದು ಮನೆಗೆ ಬೇಕಾದ ಎಲ್ಲಾ ವಸ್ತುಗಳ ಬೆಲೆಯು ಗಗನಕ್ಕೆ ಏರುತ್ತಿದೆ. ಹೀಗಾಗಿ ಕೈಯಲ್ಲಿ ಎಷ್ಟು ದುಡ್ಡಿದರೂ ಮನೆನಿರ್ವಹಣೆ ಮಾಡುವುದು ಹಾಗೂ ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ. ಹೌದು, ಮದುವೆ, ಮಕ್ಕಳಾದ ಮೇಲಂತೂ ಕೈಯಲ್ಲಿನ ದುಡ್ಡು ಹೇಗೆ ಖಾಲಿಯಾಗುತ್ತದೆ ಎಂದು ತಿಳಿಯುವುದಿಲ್ಲ. ಇದೇ ಪರಿಸ್ಥಿತಿ ಚೆನ್ನೈ ದಂಪತಿಯದ್ದಾಗಿದೆ (Chennai couple). ಮನೆಯವರ ವಿರುದ್ಧವಾಗಿ ಮದುವೆ ಮಾಡಿಕೊಂಡ ಈ ದಂಪತಿಗೆ ಇದೀಗ ಎಂಟುವರೆ ತಿಂಗಳ ಮಗುವಿದೆ. ಮಗುವಾದ ಬಳಿಕ ಖರ್ಚು ವೆಚ್ಚಗಳು (expensive) ಹೆಚ್ಚಾಗಿದ್ದು, ಮನೆಯವರ ಬೆಂಬಲವಿಲ್ಲ. ಹೀಗಾಗಿ ಜವಾಬ್ದಾರಿ ಸಹಜವಾಗಿ ಹೆಚ್ಚಾಗಿದೆ. ತೆರಿಗೆ ಪಾವತಿಸಿ ಆದಾಯದಲ್ಲಿ 78000 ರೂ ಕೈ ಸೇರಿದರೂ ಕೂಡ ತಿಂಗಳಿಗೆ 8000 ರೂ ಉಳಿತಾಯ ಮಾಡುವುದು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ತಮ್ಮ ಮಗುವಿನ ಖರ್ಚು ವೆಚ್ಚವನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರೆಡ್ಡಿಟ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದಂಪತಿ , ನಾವು ಚೆನ್ನೈಯಲ್ಲಿ ವಾಸಿಸುತ್ತಿದ್ದೇವೆ. ತೆರಿಗೆ ಕಡಿತವಾಗಿ ಒಟ್ಟು ಮಾಸಿಕ ಆದಾಯ 78,000 ರೂ ನಮ್ಮ ಕೈ ಸೇರುತ್ತದೆ. ನಮಗೆ ಈಗ 8.5 ತಿಂಗಳ ಮಗುವಿದೆ. ಮಗುವಿಗಾಗಿ ಉತ್ತಮ ಡೇಕೇರ್ ವ್ಯವಸ್ಥೆ ಮಾಡಿದ್ದೇವೆ. ಅದರ ಹತ್ತಿರದಲ್ಲೇ ಸುರಕ್ಷಿತವಾದ ಬಾಡಿಗೆ ಮನೆಯಲ್ಲಿ ಇದ್ದೇವೆ. ನಮ್ಮ ಮಗುವಿನ ಸುರಕ್ಷತೆ, ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು ನಾವು ಸದಾ ಬಯಸುತ್ತೇವೆ. ಹೀಗಾಗಿ ಪ್ರತಿತಿಂಗಳು ಬಾಡಿಗೆ ಮತ್ತು ಡೇಕೇರ್‌ಗೆ ಪ್ರತಿ ತಿಂಗಳು 46,500 ರೂ ಖರ್ಚಾಗುತ್ತದೆ. ಇನ್ನು ಉಳಿದಂತೆ ದಿನಸಿ, ಹಣ್ಣು-ತರಕಾರಿಗಳು, ಹಾಲು ಹಾಗೂ ಆಹಾರ ಸೇರಿದಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳಿಗೆ ಸರಿಸುಮಾರು 10,000 ರೂ ಹಣವನ್ನು ಇಡಬೇಕಾಗುತ್ತದೆ. ನಮ್ಮ ದಿನನಿತ್ಯದ ಓಡಾಟಕ್ಕಾಗಿ 8,500 ರೂ ಹಣ ಬೇಕೆ ಬೇಕು. ಆಟೋ ಸವಾರಿ, ಮೆಟ್ರೋ ಮತ್ತು ಪೆಟ್ರೋಲ್ ಎಲ್ಲವೂ ಇದರಲ್ಲಿ ಬರುತ್ತವೆ ಎಂದಿದ್ದಾರೆ.

ಇನ್ನು ಉಳಿದಂತೆ ಬೇಬಿ ಡೈಪರ್‌ಗಳಿಗೆ 3,000 ರೂ, ವಿದ್ಯುತ್ ಮತ್ತು ಗ್ಯಾಸ್‌ಗಾಗಿ 2, 000 ರೂ ಎತ್ತಿಡಬೇಕಾಗುತ್ತದೆ. ಈ ಎಲ್ಲಾ ಖರ್ಚುಗಳನ್ನು ಒಟ್ಟು ಸೇರಿದಾಗ ಪ್ರತಿ ತಿಂಗಳು ಸರಿಸುಮಾರು 70,000 ರೂ. ಇನ್ನು ಕೈಯಲ್ಲಿ ಉಳಿಯುವುದು 8000 ರೂ ಮಾತ್ರ. ಈ ಹಣನ್ನು ಉಳಿತಾಯ ಹಾಗೂ ತುರ್ತು ಪರಿಸ್ಥಿತಿಗಾಗಿ ಎತ್ತಿ ಇಡುತ್ತೇವೆ. ಅದಲ್ಲದೇ, ನಾವಿಬ್ಬರೂ ಮನೆಯವರು ವಿರುದ್ಧವಾಗಿ ಕುಟುಂಬಗಳ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣ ಕುಟುಂಬದಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಇಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
Image
ತಲೆಕೆಳಗಾಗಿ ಮಲಗಿ ಹೋಮ್ ವರ್ಕ್ ಮಾಡೋದ್ರಲ್ಲಿ ಬ್ಯುಸಿ ಈ ಪುಟಾಣಿ
Image
ವರ್ಷದೊಳಗೆ ಶೇ.30ರಷ್ಟು ಬೆಂಗಳೂರು ಟ್ರಾಫಿಕ್​ನಿಂದ ಮುಕ್ತಿ
Image
ಬಾರ್​ ಗರ್ಲ್ ಜತೆಗೆ ಭಾರತೀಯ ಯುವಕರ ಕಿರಿಕ್
Image
ಬದುಕು ಕಟ್ಟಿಕೊಟ್ಟ ಸುಂದರ ನಗರಕ್ಕೆ ಧನ್ಯವಾದ ತಿಳಿಸಿದ ವ್ಯಕ್ತಿ

ಇದನ್ನೂ ಓದಿ: Video: ಸರ್ಕಸ್​​​ ವಿತ್​​​​​​ ಹೋಮ್ ವರ್ಕ್: ಎರಡು ಕಾಲು ಕುರ್ಚಿ ಮೇಲೆ, ತಲೆಕೆಳಗಾಗಿ ಮಲಗಿ ಹೋಮ್ ವರ್ಕ್ ಮಾಡಿದ ಪುಟಾಣಿ

ನನ್ನ ಪತ್ನಿ ಮನೆಯಲ್ಲೇ ಕುಳಿತು ಮಾಡಬಹುದಾದ ಆನ್‌ಲೈನ್ ಕೆಲಸ ಸಿಗುತ್ತದೆಯೇ ಎಂದು ನೋಡುತ್ತಿದ್ದಾಳೆ. ಅವಳಿಗೆ ಪ್ರತಿದಿನ ಒಂದು ಗಂಟೆ ಮಾತ್ರ ಸಮಯವಿದೆ. ಆ ಸಮಯಕ್ಕೆ ಹೊಂದುವಂತೆ ಇರುವ ಕೆಲಸವನ್ನು ಹುಡುಕುತ್ತಿದ್ದಾಳೆ ಎಂದು ವಿವರಿಸಿದ್ದಾರೆ. ಈ ದಂಪತಿ ಮಾಡಿದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ತಿಂಗಳ ಖರ್ಚು ವೆಚ್ಚಗಳನ್ನು ಸರಿದೂಗಿಸಿ ಉಳಿತಾಯ ಮಾಡುವುದು ಕಷ್ಟ ಎಂದಿದ್ದಾರೆ. ಕೆಲವರು ಮನೆಯವರ ಬೆಂಬಲ ಅಗತ್ಯ ಎಂದು ಕೂಡ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್