Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಶವದ ಪಾದವೇ?

Dead man's finger : ಥ್ಯಾಂಕ್ಸ್​ ಬ್ರೋ ಯುಪಿಎಸ್​ಸಿ ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳುವುದು ಗ್ಯಾರಂಟಿ ಎಂದಿದ್ದಾರೆ ಒಬ್ಬರು. ಇನ್ನೊಬ್ಬರು, ಹನುಮಾನ್ ಚಾಲೀಸಾ ಪಠಿಸಿದರೆ ದೆವ್ವ ಹತ್ತಿರ ಬಾರದು ಎಂದಿದ್ದಾರೆ. ನಿಜವಾಗಲೂ ಇದು ಏನು?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಶವದ ಪಾದವೇ?
ಶವದ ಪಾದದಂತೆ ಕಾಣುವ ಕ್ಸೈಲೇರಿಯಾ ಪಾಲಿಮಾರ್ಫಾ ಶಿಲೀಂಧ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 17, 2023 | 2:29 PM

Viral News : ಈ ಕಟ್ಟಿಗೆಯ ಕೆಳಗೆ ಕಾಣುತ್ತಿರುವ ಪಾದ ಶವದ್ದೇ? ನೋಡಿದ ಯಾರಿಗೂ ಈ ಅನುಮಾನ ಬಾರದೇ ಇರದು. ಈ ತೆಳುಪಾದವನ್ನು ಮತ್ತೆ ನೋಡಿದಾಗ ಇದೊಂದು ಹೆಣ್ಣುಶವದ ಪಾದವಿದ್ದಿರಬೇಕು ಎನ್ನಿಸುತ್ತದೆ. ಮತ್ತೂ ನೋಡಿದಾಗ ನಾಜೂಕಾದ ಉಗುರುಗಳಿಗೆ ನೇಲ್​ಪಾಲಿಶ್ ಹಚ್ಚಿದಂತೆ ಕಂಡು, ಇದು ಪಕ್ಕಾ ಹೆಣ್ಣುಶವದ ಪಾದವೇ ಎಂಬ ತೀರ್ಮಾನಕ್ಕೆ ಬರಬೇಕು ಎನ್ನಿಸುತ್ತದೆ.

ಐಎಫ್‌ಎಸ್ ಅಧಿಕಾರಿ ಸಾಮ್ರಾಟ್ ಗೌಡ ಈ ಫೋಟೋ ಟ್ವೀಟ್ ಮಾಡಿದ್ದಾರೆ. ಇದು ಶವದ ಬೆರಳುಗಳಂತೆ ಕಾಣುವ ಶಿಲೀಂಧ್ರ (Dead man’s finger). ಇದನ್ನು ಕ್ಸೈಲೇರಿಯಾ ಪಾಲಿಮಾರ್ಫಾ (Xylaria polymorpha)  ಎಂದು ಕರೆಯಲಾಗುತ್ತದೆ. ಇದನ್ನು ನೋಡಿದ ನೆಟ್ಟಿಗರು, ಸದ್ಯ! ಇದೊಂದು ಶಿಲೀಂಧ್ರ. ಈಗಲೂ ಈ ಫೋಟೋ ನೋಡಿ ಭಯವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್

ಈ ಶಿಲೀಂಧ್ರವು ಬೀಚ್​ವುಡ್​ ಮರಗಳ ಬೊಡ್ಡೆಗಳಡಿ ಬೆಳೆಯುತ್ತದೆ. ವರ್ಷವಿಡೀ ಇದು ಹೀಗೇ ಇರುತ್ತದೆ. ಆದ್ದರಿಂದ ಡೆಡ್​ ಮ್ಯಾನ್ಸ್​ ಫಿಂಗರ್ಸ್​ ಎಂದೇ ಇದನ್ನು ಕರೆಯುತ್ತಾರೆ. ಬ್ರಿಟನ್ ಮತ್ತು ಐರ್ಲೆಂಡ್​ನಲ್ಲಿ ಇದು ಸಾಮಾನ್ಯವಾಗಿ ಬೆಳೆಯುತ್ತದೆ. ಉತ್ತರ ಅಮೆರಿಕಾ, ಯುರೋಪ್​ನ ಅನೇಕ ಪ್ರದೇಶಗಳಲ್ಲಿ ಕೂಡ ಇದು ಬೆಳೆಯುತ್ತದೆ.

ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

ಪ್ರಕೃತಿಗಿಂತ ಸೃಜನಶೀಲ ಯಾವುದೂ ಇಲ್ಲ ಎಂದಿದ್ದಾರೆ ನೆಟ್ಟಿಗರೊಬ್ಬರು. ದೆವ್ವ ಇದು! ಎಂದು ನಕ್ಕಿದ್ದಾರೆ  ಕೆಲವರು. ಖಂಡಿತ ಈ ಕುರಿತು ಯುಪಿಎಸ್​ಸಿ ಪರೀಕ್ಷೆಯಲ್ಲಿ ಕೇಳುತ್ತಾರೆ, ಮಾಹಿತಿಗಾಗಿ ಥ್ಯಾಂಕ್ಸ್​ ಅಣ್ಣಾ ಎಂದಿದ್ದಾರೆ ಇನ್ನೊಬ್ಬರು. ಹನುಮಾನ್​ ಚಾಲೀಸಾ ಪಠಿಸಿ, ಆಗ ಇದು ನಿಮ್ಮ ಹತ್ತಿರ ಬರಲಾರದು ಎಂದಿದ್ದಾರೆ ಮತ್ತೊಬ್ಬರು.

ಅನೇಕ ನೆಟ್ಟಿಗರು, ಇದು ಕನಸಲ್ಲೂ ಕಾಡುವಂತಿದೆ ಎಂದಿದ್ದಾರೆ. ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:18 pm, Tue, 17 January 23

ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
ಮಚ್ಚುಹಿಡಿದಿದ್ದ ಶ್ರೀನಿವಾಸ ಪೂಜಾರಿಯನ್ನು ಕೂಡಲೇ ವಶಕ್ಕೆ ಪಡೆದ ಪೊಲೀಸ್
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
‘ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಇತ್ತೀಚೆಗೆ ಆಗಲೇ ಇಲ್ಲ’; ಸುಧಾರಾಣಿ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ಗದ್ದುಗೆ ಅಥವಾ ಬೃಂದಾವನ ದರ್ಶನದ ಹಿಂದಿನ ಅಧ್ಯಾತ್ಮಿಕ ರಹಸ್ಯ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ರವಿ ಮೇಷ ಪ್ರವೇಶದ ದಿನ: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
Anna Lezhneva: ತಿರುಪತಿಯಲ್ಲಿ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ