AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಶವದ ಪಾದವೇ?

Dead man's finger : ಥ್ಯಾಂಕ್ಸ್​ ಬ್ರೋ ಯುಪಿಎಸ್​ಸಿ ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳುವುದು ಗ್ಯಾರಂಟಿ ಎಂದಿದ್ದಾರೆ ಒಬ್ಬರು. ಇನ್ನೊಬ್ಬರು, ಹನುಮಾನ್ ಚಾಲೀಸಾ ಪಠಿಸಿದರೆ ದೆವ್ವ ಹತ್ತಿರ ಬಾರದು ಎಂದಿದ್ದಾರೆ. ನಿಜವಾಗಲೂ ಇದು ಏನು?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಶವದ ಪಾದವೇ?
ಶವದ ಪಾದದಂತೆ ಕಾಣುವ ಕ್ಸೈಲೇರಿಯಾ ಪಾಲಿಮಾರ್ಫಾ ಶಿಲೀಂಧ್ರ
TV9 Web
| Edited By: |

Updated on:Jan 17, 2023 | 2:29 PM

Share

Viral News : ಈ ಕಟ್ಟಿಗೆಯ ಕೆಳಗೆ ಕಾಣುತ್ತಿರುವ ಪಾದ ಶವದ್ದೇ? ನೋಡಿದ ಯಾರಿಗೂ ಈ ಅನುಮಾನ ಬಾರದೇ ಇರದು. ಈ ತೆಳುಪಾದವನ್ನು ಮತ್ತೆ ನೋಡಿದಾಗ ಇದೊಂದು ಹೆಣ್ಣುಶವದ ಪಾದವಿದ್ದಿರಬೇಕು ಎನ್ನಿಸುತ್ತದೆ. ಮತ್ತೂ ನೋಡಿದಾಗ ನಾಜೂಕಾದ ಉಗುರುಗಳಿಗೆ ನೇಲ್​ಪಾಲಿಶ್ ಹಚ್ಚಿದಂತೆ ಕಂಡು, ಇದು ಪಕ್ಕಾ ಹೆಣ್ಣುಶವದ ಪಾದವೇ ಎಂಬ ತೀರ್ಮಾನಕ್ಕೆ ಬರಬೇಕು ಎನ್ನಿಸುತ್ತದೆ.

ಐಎಫ್‌ಎಸ್ ಅಧಿಕಾರಿ ಸಾಮ್ರಾಟ್ ಗೌಡ ಈ ಫೋಟೋ ಟ್ವೀಟ್ ಮಾಡಿದ್ದಾರೆ. ಇದು ಶವದ ಬೆರಳುಗಳಂತೆ ಕಾಣುವ ಶಿಲೀಂಧ್ರ (Dead man’s finger). ಇದನ್ನು ಕ್ಸೈಲೇರಿಯಾ ಪಾಲಿಮಾರ್ಫಾ (Xylaria polymorpha)  ಎಂದು ಕರೆಯಲಾಗುತ್ತದೆ. ಇದನ್ನು ನೋಡಿದ ನೆಟ್ಟಿಗರು, ಸದ್ಯ! ಇದೊಂದು ಶಿಲೀಂಧ್ರ. ಈಗಲೂ ಈ ಫೋಟೋ ನೋಡಿ ಭಯವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್

ಈ ಶಿಲೀಂಧ್ರವು ಬೀಚ್​ವುಡ್​ ಮರಗಳ ಬೊಡ್ಡೆಗಳಡಿ ಬೆಳೆಯುತ್ತದೆ. ವರ್ಷವಿಡೀ ಇದು ಹೀಗೇ ಇರುತ್ತದೆ. ಆದ್ದರಿಂದ ಡೆಡ್​ ಮ್ಯಾನ್ಸ್​ ಫಿಂಗರ್ಸ್​ ಎಂದೇ ಇದನ್ನು ಕರೆಯುತ್ತಾರೆ. ಬ್ರಿಟನ್ ಮತ್ತು ಐರ್ಲೆಂಡ್​ನಲ್ಲಿ ಇದು ಸಾಮಾನ್ಯವಾಗಿ ಬೆಳೆಯುತ್ತದೆ. ಉತ್ತರ ಅಮೆರಿಕಾ, ಯುರೋಪ್​ನ ಅನೇಕ ಪ್ರದೇಶಗಳಲ್ಲಿ ಕೂಡ ಇದು ಬೆಳೆಯುತ್ತದೆ.

ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

ಪ್ರಕೃತಿಗಿಂತ ಸೃಜನಶೀಲ ಯಾವುದೂ ಇಲ್ಲ ಎಂದಿದ್ದಾರೆ ನೆಟ್ಟಿಗರೊಬ್ಬರು. ದೆವ್ವ ಇದು! ಎಂದು ನಕ್ಕಿದ್ದಾರೆ  ಕೆಲವರು. ಖಂಡಿತ ಈ ಕುರಿತು ಯುಪಿಎಸ್​ಸಿ ಪರೀಕ್ಷೆಯಲ್ಲಿ ಕೇಳುತ್ತಾರೆ, ಮಾಹಿತಿಗಾಗಿ ಥ್ಯಾಂಕ್ಸ್​ ಅಣ್ಣಾ ಎಂದಿದ್ದಾರೆ ಇನ್ನೊಬ್ಬರು. ಹನುಮಾನ್​ ಚಾಲೀಸಾ ಪಠಿಸಿ, ಆಗ ಇದು ನಿಮ್ಮ ಹತ್ತಿರ ಬರಲಾರದು ಎಂದಿದ್ದಾರೆ ಮತ್ತೊಬ್ಬರು.

ಅನೇಕ ನೆಟ್ಟಿಗರು, ಇದು ಕನಸಲ್ಲೂ ಕಾಡುವಂತಿದೆ ಎಂದಿದ್ದಾರೆ. ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:18 pm, Tue, 17 January 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ