AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ಯಾವ ನದಿಯಣ್ಣಾ, ನಾನಿದ್ದಲ್ಲೇ ಬಂದೈತೆ?; ಮಳೆನೀರಿನಲ್ಲಿ ಈಜುತ್ತಿರುವ ಕುಡುಕ

Chennai : ಚಿಕ್ಕವನಿದ್ದಾಗ ನೀನು ಈ ನದಿಯನ್ನು ಬಿಟ್ಟುಬಂದಿದ್ದೆ, ಅದೀಗ ನಿನ್ನನ್ನು ಹುಡುಕಿಕೊಂಡು ಬಂದಿದೆ ಎಂದು ಒಬ್ಬರು. ನೀ ಈಗ ಈಜಿಕೊಂಡು ಹೋಗದಿದ್ದರೆ ನದಿ ನಿಮ್ಮ ಮನೆಗೇ ನುಗ್ಗುತ್ತದೆ! ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

ಇದ್ಯಾವ ನದಿಯಣ್ಣಾ, ನಾನಿದ್ದಲ್ಲೇ ಬಂದೈತೆ?; ಮಳೆನೀರಿನಲ್ಲಿ ಈಜುತ್ತಿರುವ ಕುಡುಕ
Drunk man tries to swim in waterlogged street in Chennai
TV9 Web
| Edited By: |

Updated on:Nov 02, 2022 | 4:32 PM

Share

Viral Video : ಈ ಮಳೆಯಿಂದಾಗಿ ಊರಿಗೆ ಊರೇ ಹೊಳೆಯಂತೆ ಕಾಣುತ್ತಿವೆ. ಇನ್ನು ಇಂಥ ಸಮಯದಲ್ಲಿ ಕುಡುಕರಿಗೆ ಹೀಗನ್ನಿಸುವುದು ಸಹಜ ಅಲ್ಲವೆ? ಚೆನ್ನೈನಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಕುಡುಕನೊಬ್ಬ ಈಜಲು ನೋಡುತ್ತಿದ್ದಾನೆ. ಈ ವಿಡಿಯೋ ಇದೀಗ ಆನ್​ಲೈನ್​ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ತಲೆಗೊಬ್ಬೊಬ್ಬರಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಒಂದು ದಿನ ಇಡೀ ಜಗತ್ತೇ ನಿಮ್ಮನ್ನು ತಿರುಗಿ ನೋಡೋ ಹಾಗೆ ಆಗುವ ದಿನವೊಂದು ಬರುತ್ತದೆ ಎನ್ನುತ್ತಾರಲ್ಲ… ಈ ಮನುಷ್ಯನ ವಿಷಯದಲ್ಲಿ ಅದು ನಿಜವಾದಂತಿದೆ!

ಚೆನ್ನೈನ ಪುಲಿಯಾಂತೋಪ್​ನ ಬಳಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಪಾಪ ಕುಡಿದ ಅಮಲಿನಲ್ಲಿ ಇದು ಯಾವ ನದಿಯ ನೆನಪನ್ನು ಈತನಿಗೆ ತಂದಿದೆಯೋ ಏನೊ. ಅಂತೂ ಈಜಲು ಶುರುಮಾಡಿದ್ದಾನೆ. ಅಣ್ಣಾ ನೀನೊಬ್ಬನೇ ಸ್ಪರ್ಧಿ ಇಲ್ಲಿ, ನಿನಗೇ ಬಹುಮಾನ ಈಜು ಈಜು ಎಂದು ಹುರಿದುಂಬಿಸಿದ್ದಾರೆ ಒಬ್ಬರು. ಚಿಕ್ಕವನಿದ್ದಾಗ ನೀನು ಈ ನದಿಯನ್ನು ಬಿಟ್ಟುಬಂದಿದ್ದೆ. ಅದೀಗ ನಿನ್ನನ್ನು ಹುಡುಕಿಕೊಂಡು ಬಂದಿದೆ ಎಂದಿದ್ದಾರೆ ಇನ್ನೂ ಒಬ್ಬರು. ನೀ ಈಗ ಈಜಿಕೊಂಡು ಹೋಗದಿದ್ದರೆ ನದಿ ಈಗ ನಿಮ್ಮ ಮನೆಗೇ ನುಗ್ಗುತ್ತದೆ! ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಕಳೆದ ವರ್ಷದ ಮಳೆಗಾಲದಲ್ಲಿ ಮುಂಬೈನಲ್ಲಿ ಕುಡುಕನೊಬ್ಬ ಹೀಗೇ ಮಳೆನೀರಿನಲ್ಲಿ ರಸ್ತೆ ಮಧ್ಯೆ ಆರಾಮಾಗಿ ಮಲಗಿದ್ದ. ಬಸ್ಸು, ಲಾರಿಗಳ ಓಡಾಟದ ಖಬರು ಇಲ್ಲದಂತೆ ತನ್ನ ಪಾಡಿಗೆ ತಲೆಯನ್ನು ಕೈಗಿಟ್ಟು ಮಲಗಿದ್ದ. ಸಾವಿರಾರು ಜನರು ಈ ವಿಡಿಯೋ ನೋಡಿ ಮೆಚ್ಚಿದ್ದರು. ಮನಬಂದಂತೆ ಪ್ರತಿಕ್ರಿಯಿಸಿದ್ದರು.

ಇದೆಲ್ಲ ನೋಡುತ್ತ ಓದುತ್ತ ನಿಮಗೂ ಒಂದು ಕ್ಷಣ ನಗು ಬಂದಿರಬಹುದು. ಆದರೂ ಇವರ ಮನೆಮಂದಿ ಈ ವಿಡಿಯೋ ನೋಡಿದಲ್ಲಿ ಏನೆನ್ನಿಸಬಹುದು? ಪಾಪ ಅಲ್ಲವೆ…

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:31 pm, Wed, 2 November 22

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ