Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಗುವಿನ ಚಪ್ಪಲಿಯನ್ನು ವಾಪಾಸು ಕೊಟ್ಟ ಆನೆಯ ಹಳೆಯ ವಿಡಿಯೋ ವೈರಲ್

Wildlife : ಈ ಆನೆಯನ್ನು ನಾನು ಸಾಕುತ್ತೇನೆ. ಈಗಲೇ ಇದು ನನಗೆ ಬೇಕು. ಸೌಮ್ಯ ಹೃದಯೀ ದೈತ್ಯದೇಹಿ ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ... ನೆಟ್ಟಿಗರು ಈ ಹಳೆಯ ವಿಡಿಯೋ ನೋಡಿ ಹೇಳುತ್ತಿದ್ದಾರೆ. ಐಎಫ್​ಎಸ್​ ಸುಸಾಂತ ನಂದಾ ಈ ವಿಡಿಯೋ ಹಂಚಿಕೊಂಡಿದ್ದು ಇದೀಗ ಇದು ಮತ್ತೆ ವೈರಲ್ ಆಗುತ್ತಿದೆ. ಆನೆಯ ಕಾಳಜಿಯನ್ನು ನೋಡಿ ಅನೇಕರ ಹೃದಯ ಮೃದುವಾಗುತ್ತಿದೆ.

Viral Video: ಮಗುವಿನ ಚಪ್ಪಲಿಯನ್ನು ವಾಪಾಸು ಕೊಟ್ಟ ಆನೆಯ ಹಳೆಯ ವಿಡಿಯೋ ವೈರಲ್
ಆನೆ ತನ್ನ ಸೊಂಡಿಲಿನಿಂದ ಮಗುವಿಗೆ ವಾಪಾಸು ಚಪ್ಪಲಿ ಕೊಡುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Sep 29, 2023 | 5:31 PM

China: ಚೀನಾದ ಮೃಗಾಲಯವೊಂದಕ್ಕೆ ಆನೆಯನ್ನು (Elephant) ನೋಡಲು ಈ ಪುಟ್ಟ ಮಗು ತನ್ನ ಪೋಷಕರೊಂದಿಗೆ ಹೋಗಿದೆ. ಈ ದೊಡ್ಡ ಆನೆಯನ್ನು ಮೈಮರೆತು ನೋಡುವಾಗ ಅದರ ಪುಟ್ಟ ಪಾದದ ಚಪ್ಪಲಿ ಕೆಳಗೆ ಬಿದ್ದಿದೆ. ಆಗ ಆನೆ ಕಾಳಜಿಯಿಂದ ಮಗುವಿನ ಚಪ್ಪಲಿಯನ್ನು ಸೊಂಡಿಲಿಂದ ಎತ್ತಿ ಅದರ ಪುಟ್ಟ ಕೈಗೆ ಇತ್ತಿದೆ. ಇದು ಹಳೆಯ ವಿಡಿಯೋ. ಮತ್ತೀಗ ವೈರಲ್ ಆಗುತ್ತಿದೆ. ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಸೆ. 28ರಂದು Xನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈತನಕ ಸುಮಾರು 49,000 ಜನರು ನೋಡಿದ್ದಾರೆ. ಅನೇಕರು ‘ಸೌಮ್ಯ  ಮನಸಿನ ದೈತ್ಯ’ನನ್ನು ಕೊಂಡಾಡಿದ್ದಾರೆ. ಆನೆಯು ಬುದ್ಧಿವಂತ ಮತ್ತು ಸೂಕ್ಷ್ಮ ಮನಸಿನ ಪ್ರಾಣಿ ಎಂದಿದ್ದಾರೆ.

ಇದನ್ನೂ ಓದಿ : Viral Video: ಅಮೆರಿಕ: ‘ಅಂತ್ಯಕ್ರಿಯೆ’ ಪರಿಕಲ್ಪನೆಯಡಿ ಪ್ರೆಗ್ನೆನ್ಸಿ ಶೂಟ್ ಮಾಡಿಸಿಕೊಂಡ ಮಹಿಳೆ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಆನೆಗಳ ಮಿದುಳಲ್ಲಿ ಬುದ್ಧಿವಂತಿಕೆ ಮತ್ತು ಹೃದಯದಲ್ಲಿ ಪ್ರೀತಿ ತುಂಬಿರುತ್ತದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈ ಆನೆ ತುಂಬಾ ಮುದ್ದಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಶಾಂತ, ದೈತ್ಯಜೀವಿಯನ್ನು ನಾನು ಸದಾ ಪ್ರೀತಿಸುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ಅದು ತನ್ನ ಸೊಂಡಿಲನ್ನು ಗ್ರಿಲ್​ಗೆ ಸುತ್ತಿದುದರ ಅರ್ಥ ಯಾರಿಗಾದರೂ ಆಯಿತೇ? ಎಂದು ಕೇಳಿದ್ದಾರೆ ಮಗದೊಬ್ಬರು.

ಚಪ್ಪಲಿಯನ್ನು ಮಗುವಿಗೆ ಹಿಂದಿರುಗಿಸಿದ ಆನೆಯ ವಿಡಿಯೋ

ನಿಜಕ್ಕೂ ಇದು ಬಹಳ ಆಪ್ತವಾದ ವಿಡಿಯೋ, ಇದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ ಎಂದು ಅನೇಕರು ಹೇಳಿದ್ಧಾರೆ. ಇದರ ಸೌಮ್ಯತನ ಇದರ ಮೇಲೆ ಮತ್ತಷ್ಟು ಗೌರವವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈಗಲೇ ಈ ಆನೆಯನ್ನು ತಬ್ಬಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಈ ಆನೆ ನನಗೆ ಬೇಕು ನಾನು ಸಾಕಿಕೊಳ್ಳುತ್ತೇನೆ ಎಂದು ಪ್ರೀತಿಗರೆದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ‘ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು’

ನಾನು ಅದೆಷ್ಟು ಬಾರಿ ಈ ವಿಡಿಯೋ ನೋಡಿದೆನೋ ಕಾಣೆ ಎಂದಿದ್ದಾರೆ ಒಬ್ಬರು. ದೈತ್ಯದ ಶಾಂತ ಮತ್ತು ಕಾಳಜಿ, ಹಾಗೆಯೇ ಆ ಪುಟ್ಟ ಕೈಗಳು, ಪುಟ್ಟ ಚಪ್ಪಲಿ ಆಹಾ… ಸ್ವರ್ಗ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್  ಮಾಡಿ

Published On - 5:31 pm, Fri, 29 September 23

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್