AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು’

Love Story : ಸ್ಫುರದ್ರೂಪಿಯಾದ ಎಲ್ಲಾ ರೀತಿಯಿಂದ ಸದೃಢರಾಗಿರುವ ಮತ್ತು ಅನುಕೂಲಸ್ಥರಾಗಿರುವ ಹುಡುಗ/ಹುಡುಗಿ ಬೇಕು ಎನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ಇಂಥ ಅರ್ಥವಿಲ್ಲದ ಗ್ರಹಿಕೆಗಳಿಗೆ ಸೆಡ್ಡು ಹೊಡೆದು ನಿಂತಿದ್ದಾಳೆ ಮಹಾರಾಷ್ಟ್ರದ ಈ ವರ್ಷಾ. ಈಕೆ ತನ್ನೊಂದಿಗೆ ಇರದಿದ್ದರೆ ನಾನಿಂದು ಏನಾಗುತ್ತಿದ್ದೆನೋ ಎಂದು ತನ್ನ ಕಥೆಯನ್ನು ಇಲ್ಲಿ ಹೇಳಿಕೊಂಡಿದ್ದಾನೆ ಓಂಕಾರ.

Viral Video: 'ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು'
ಓಂಕಾರ್ ಮತ್ತು ವರ್ಷಾ ದಂಪತಿ
ಶ್ರೀದೇವಿ ಕಳಸದ
|

Updated on:Sep 29, 2023 | 2:25 PM

Share

Love : ವರ್ಷಾಳನ್ನು ನಾನು ಮೊದಲ ಸಲ ಕಾಲೇಜಿನಲ್ಲಿ (College Love) ನೋಡಿದಾಗ ನನಗೆ 17 ವರ್ಷ. ಸ್ನೇಹಿತರಾದೆವು, ಬಲುಬೇಗನೆ ಪ್ರೀತಿಯಲ್ಲಿಯೂ ಬಿದ್ದೆವು. ಆದರೆ 2021ರಲ್ಲಿ ಒಂದು ದಿನ ಮುಂಬೈನಿಂದ ಪುಣೆಗೆ ಹೋಗುವಾಗ ಹೆದ್ದಾರಿಯಲ್ಲಿ ನನ್ನ ಕಾರಿನ ಟಯರ್​ ಸಿಡಿದು ದೊಡ್ಡ ಅಪಘಾತವಾಯಿತು. ನನ್ನ ಒಂದು ಕಾಲು ಅಲ್ಯೂಮಿನಿಯಂ ಶೀಟ್​ನಲ್ಲಿ ಸಿಕ್ಕಿಹಾಕಿಕೊಂಡಿತು. ಆ ಕಾಲನ್ನು ಕತ್ತರಿಸದಿದ್ದರೆ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದರು. ಒಂದು ತಿಂಗಳತನಕ ವರ್ಷಾ ನನ್ನೊಂದಿಗೆ ಹಗಲೂ ರಾತ್ರಿ ಇದ್ದಳು. ಊಟ ಮಾಡಿಸುವುದು, ಡೈಪರ್ ಬದಲಾಯಿಸುವುದರಿಂದ ಹಿಡಿದು ನನ್ನೆಲ್ಲ ಕೆಲಸಗಳನ್ನು ಮಾಡಿದಳು. ನಂತರ ‘ನಾನು ಓಂಕಾರನೊಂದಿಗೆ ಜೀವನಪೂರ್ತಿ ಇರುತ್ತೇನೆ’ ಎಂದು ನನ್ನ ಪೋಷಕರಿಗೆ ಹೇಳಿದಳು.’ ಓಂಕಾರ ರೌಂಡಾಲೆ, ಮಹಾರಾಷ್ಟ್ರ

ಇದನ್ನೂ ಓದಿ : Viral Video: ಪೈನಾಪಲ್​ ಮೊಮೊ: ‘ಇದಕ್ಕೆ ಚಟ್ನಿ ಬೇಡ, ಹಾರ್ಪಿಕ್ ಹಾಕಿ ಕೊಟ್ಟುಬಿಡು’; ನೆತ್ತಿಗೇರಿದ ನೆಟ್ಟಿಗರ ಕೋಪ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘2021ರಲ್ಲಿ ನಮ್ಮಿಬ್ಬರ ಮದುವೆಯಾಯಿತು. ನಮಗೀಗ ಮುದ್ದಾದ ಹೆಣ್ಣು ಮಗುವಿದೆ. ನಾನೀವತ್ತು ಮಹಾರಾಷ್ಟ್ರ ವೀಲ್​ಚೇರ್ ಕ್ರಿಕೆಟ್​  ಟೀಮ್​ ಅಸೋಸಿಯೇಷನ್​ ಅನ್ನು ಮುನ್ನಡೆಸುತ್ತಿದ್ದೇನೆ. ಬದುಕಿನ ಸಂಕಷ್ಟಗಳು ನನ್ನ ಮತ್ತು ವರ್ಷಾ ಬಂಧವನ್ನು ಗಟ್ಟಿಗೊಳಿಸಿವೆ. ವರ್ಷಾ ಇಲ್ಲದಿದ್ದರೆ ನನ್ನ ಬದುಕೇನಾಗುತ್ತಿತ್ತೋ’ ಎನ್ನುತ್ತಾರೆ ಓಂಕಾರ.

ವರ್ಷಾ ಓಂಕಾರ ಬಂಧ ಹೀಗಿದೆ

ಇಂಥ ನಿಸ್ವಾರ್ಥ ಪ್ರೀತಿ ಮತ್ತು ಕಾಳಜಿಯು ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಮಧ್ಯೆ ಕಣ್ಮರೆಯಾಗಿದೆ. ಒಣ ಅಹಂಕಾರ, ಹಣ ಮತ್ತು ಸ್ವಾತಂತ್ರ್ಯ ಎಂಬ ತಪ್ಪು ವ್ಯಾಖ್ಯಾನದಿಂದಾಗಿ ಸಂಬಂಧಗಳು ಅರ್ಥವನ್ನೇ ಕಳೆದುಕೊಂಡಿವೆ ಎಂದಿದ್ದಾರೆ ಒಬ್ಬರು. ಜೀವನದ ನಿಜವಾದ ಅರ್ಥವನ್ನು ನೀವು ಗಂಭೀರವಾಗಿ ತೋರಿಸುತ್ತಿದ್ದೀರಿ. ನಿಮ್ಮ ಇಚ್ಛಾಶಕ್ತಿಯ ಮುಂದೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದೀರಿ ಎಂದಿದ್ಧಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಬೆಂಗಳೂರಿನಲ್ಲಿ ಬ್ಯಾಟ್​ಮೊಬೈಲ್​, ಮಿಸ್ಟರಿ ಮಷೀನ್​, ಬಂಬಲ್​ಬೀ ಕಾರುಗಳು; ನೆಟ್ಟಿಗರ ಹಾಸ್ಯದಲೆ

ಆಕೆ ರಾಣಿ! ದೇವರು ಅವಳನ್ನು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮಿಬ್ಬರಿಗೂ ಹೆಚ್ಚಿನ ಶಕ್ತಿ ಲಭಿಸಲಿ ಎಂದಿದ್ದಾರೆ ಮತ್ತೊಬ್ಬರು. ಇಂಥವಳನ್ನು  ಪಡೆದ ನೀವು ಧನ್ಯ ಮತ್ತು ಅದೃಷ್ಟವಂತರು ಎಂದಿದ್ದಾರೆ ಮಗದೊಬ್ಬರು. ಅನೇಕರು ಇಂಥವರ ಸಂತತಿ ಹೆಚ್ಚಲಿ ಎಂದು ಹಾರೈಸಿದ್ದಾರೆ. ಸಿನೆಮಾ ಮತ್ತು ಜಾಹೀರಾತು ಪ್ರಪಂಚ ಹುಟ್ಟುಹಾಕುವ ಹುಸಿ ಆದರ್ಶದ ವ್ಯಾಖ್ಯಾನವನ್ನು ಇಂಥವರೇ ಅಳಿಸಬೇಕು ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:23 pm, Fri, 29 September 23

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ