AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವೀ ಅಳಿಯನಿಗಾಗಿ 365 ಬಗೆಯ ತಿನಿಸುಗಳನ್ನು ತಯಾರಿಸಿ ಔತಣಕೂಟ ಆಯೋಜಿಸಿದ ಕುಟುಂಬ

ಮಗಳನ್ನು ಮದುವೆಯಾಗುವ ಹುಡುಗನಿಗೆ ಕುಟುಂಬವೊಂದು 365 ಬಗೆಯ ವಿವಿಧ ತಿನಿಸುಗಳನ್ನು ತಯಾರಿಸಿ ಊಟ ಬಡಿಸಿದ್ದಾರೆ. ಅತ್ತೆಯ ಮನೆಗೆ ಬಂದ 365 ಬಗೆಯ ತಿನಿಸುಗಳನ್ನು ನೋಡಿ ಹುಡುಗ ದಂಗಾಗಿದ್ದಾನೆ.

ಭಾವೀ ಅಳಿಯನಿಗಾಗಿ 365 ಬಗೆಯ ತಿನಿಸುಗಳನ್ನು ತಯಾರಿಸಿ ಔತಣಕೂಟ ಆಯೋಜಿಸಿದ ಕುಟುಂಬ
365 ಬಗೆಯ ತಿನಿಸು ತಯಾರಿಸಿದ ಕುಟುಂಬ
TV9 Web
| Edited By: |

Updated on:Jan 19, 2022 | 11:04 AM

Share

ಸಂಕ್ರಾಂತಿ ಹಬ್ಬದಂದು ಮಗಳನ್ನು ಮದುವೆಯಾಗುವ ಹುಡುಗನಿಗೆ ಕುಟುಂಬವೊಂದು 365 ಬಗೆಯ ವಿವಿಧ ತಿನಿಸುಗಳನ್ನು ತಯಾರಿಸಿ ಊಟ ಬಡಿಸಿದ್ದಾರೆ. ಅತ್ತೆಯ ಮನೆಗೆ ಬಂದ 365 ಬಗೆಯ ತಿನಿಸುಗಳನ್ನು ನೋಡಿ ಹುಡುಗ ದಂಗಾಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ (Viral Video) ಆಗಿದೆ.  ಈ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ (West Godavari) ಜಿಲ್ಲೆಯಲ್ಲಿ ನಡೆದಿದೆ. ಊಟದಲ್ಲಿ 30 ಬಗೆಯ ಕರಿಗಳು, ವಿವಿಧ ರೀತಿಯ ಪೇಸ್ಟರಿ ತಿನಿಸುಗಳು, 100 ಬಗೆಯ ಸಿಹಿತಿನಿಸಗಳು, 19 ಬಗೆಯ ಬಿಸಿ ಆಹಾರಗಳು, 15 ಬಗೆಯ ಐಸ್​ಕ್ರೀಮ್​ಗಳು, 35 ಬಗೆಯ ಬಿಸ್ಕತ್​ಗಳು ಹಾಗೂ 35 ರೀತಿಯ ಕೂಲ್​ ಡ್ರಿಂಕ್ಸ್​ಗಳನ್ನು ಭಾವೀ ಅಳಿಯನಿಗೆ ನೀಡಿದ್ದಾರೆ. ಈ ಕುರಿತು ಯುಟ್ಯೂಬ್ (Youtube)  ​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿಯನ್ನು 365 ಬಗೆಯ ತಿನಿಸಿನ ಎದುರು ಕೂರಿಸಲಾಗಿದ್ದು, ಇಬ್ಬರೂ ಸಿಹಿಯೊಂದನ್ನು ತಿನಿಸುತ್ತಿರುವ ವಿಡಿಯೋ ಇದಾಗಿದೆ. ಈ ವಿಶೇಷ ಕಾರ್ಯಕ್ರಮದ ಬಗ್ಗೆ ಹುಡುಗಿಯ ತಾಯಿ ಮಾತನಾಡಿದ್ದು, ಭಾವೀ ಅಳಿಯ ಮತ್ತು ಮಗಳಿಗೆ ಈ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದಕ್ಕೆ ಸಂತಸವಿದೆ. ಇದಕ್ಕೆ ಸಂಬಂಧಿಕರನ್ನೂ ಕೂಡ ಅಹ್ವಾನಿಸಲಾಗಿದೆ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಈ ಔತಣಕೂಟವನ್ನು ಆಯೋಜಿಸಲಾಗಿದೆ ಎಂದಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದ್ದು, ಜೋಡಿಯು ಕೆಲವು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹೀಗಾಗಿ ಹುಡುಗಿಯ ಅಜ್ಜಿ ಈ ಕಾರ್ಯಕ್ರಮವನ್ನು ಆಯೋಜಿಸುವಂತೆ ತಿಳಿಸಿದ್ದರು ಎಂದು ಹೇಳಲಾಗಿದೆ.

ಜ.14ರಂದು ಮಕರ ಸಂಕ್ರಾಂತಿಯನ್ನು ದೇಶದೆಲ್ಲೆಡೆ ಆಚರಿಸಲಾಗಿದೆ. ಚಳಿಗಾಲದ ಅಂತ್ಯದ ದಿನವೆಂದು ಕರೆಯುವ ಸಂಕ್ರಾಂತಿಯನ್ನು ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಸೂರ್ಯ ಪಥದಲಿಸಿ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಚಲಿಸುವ ಪುಣ್ಯ ಕಾಲವನ್ನು ಸಂಕ್ರಮಣ ಕಾಲ ಎನ್ನುತ್ತಾರೆ.

ಇದನ್ನೂ ಓದಿ:

ಐಫೋನ್​ ರಿಂಗ್​ಟೋನ್​ ಶಬ್ದದಂತೆ ಧ್ವನಿ ಹೊರಡಿಸುವ​ ಗಿಳಿ: ವಿಡಿಯೋ ವೈರಲ್​

Published On - 11:01 am, Wed, 19 January 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ