AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದಲ್ಲಿ ತಯಾರಾಯ್ತು ರೆಸ್ಟೋರೆಂಟ್; ಗುಜರಾತ್​ನ ಫ್ಲೈಟ್ ಥೀಮ್ ರೆಸ್ಟೋರೆಂಟ್ ವಿಶೇಷತೆ ಏನು ಗೊತ್ತಾ?

ರೆಸ್ಟೋರೆಂಟ್​ನೊಳಕ್ಕೆ ಪ್ರವೇಶಿಸಿದಾಗ ವಿಮಾನದಲ್ಲಿ ಹತ್ತಿರುವ ಅನುಭವ ನೀಡುತ್ತದೆ. ವಿಮಾನದಲ್ಲಿ ಕುಳಿತು ನಿಮಗೆ ಬೇಕಾದ ತಿಂಡಿಯನ್ನು ಸವಿಯಬಹುದು.

ವಿಮಾನದಲ್ಲಿ ತಯಾರಾಯ್ತು ರೆಸ್ಟೋರೆಂಟ್; ಗುಜರಾತ್​ನ ಫ್ಲೈಟ್ ಥೀಮ್ ರೆಸ್ಟೋರೆಂಟ್ ವಿಶೇಷತೆ ಏನು ಗೊತ್ತಾ?
ವಿಮಾನದಲ್ಲಿ ತಯಾರಾದ ರೆಸ್ಟೋರೆಂಟ್​
TV9 Web
| Edited By: |

Updated on: Oct 28, 2021 | 11:39 AM

Share

ಹೊಸದಾದ, ವಿಭಿನ್ನವಾದ ರೆಸ್ಟೋರೆಂಟ್​ಗೆ ಭೇಟಿ ನೀಡಬೇಕು ಎಂದು ಯೋಚಿಸುತ್ತಿದ್ದರೆ ಗುಜರಾತ್​ಗೆ ನೀವೊಮ್ಮೆ ಭೇಟಿ ನೀಡಬಹುದು. ಗ್ರಾಹಕರು ಹಾರಾಟ ಮಾಡದೇ ವಿಮಾನದಲ್ಲಿ ಕುಳಿತು ವಿವಿಧ ಬಗೆಯ ತಿಂಡಿಗಳನ್ನು ಸವಿಯಬಹುದು. ಈ ರೆಸ್ಟೋರೆಂಟ್​ನ ವಿಶೇಷವೆಂದರೆ ವಿಮಾನದಲ್ಲಿಯೇ ರೆಸ್ಟೋರೆಂಟ್​ ತಯಾರಿಸಲಾಗಿದೆ. ಫ್ಲೈಟ್ ಥೀಮ್​ನೊಂದಿಗೆ ತಯಾರಾದ ರೆಸ್ಟೋರೆಂಟ್ ಗುಜರಾತ್​ನ ವಡೋದರಾ ನಗರದ ಹೆದ್ದಾರಿಯ ಮುಖ್ಯ ರಸ್ಯೆಯ ಬಳಿಯಿದೆ.

ರೆಸ್ಟೋರೆಂಟ್ ನಿಜವಾದ ವಿಮಾನದಿಂದ ಮಾಡಲ್ಪಟ್ಟಿದೆ. ಒಂದೇ ಬಾರಿಗೆ ಸುಮಾರು 106 ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ವೇಟರ್​ಅನ್ನು ಕರೆತರಲು ವಿಮಾನದಂತೆಯೇ ಸೆನ್ಸಾರ್​ಗಳನ್ನು ಅಳವಡಿಸಲಾಗಿದೆ. ಸಿಬ್ಬಂದಿ ಕೆಲಸ ಮಾಡುವಾಗ ಸಮವಸ್ತ್ರವನ್ನು ಧರಿಸಿರುತ್ತಾರೆ. ನಿಜವಾದ ವಿಮಾನ ಹತ್ತುವ ರೀತಿಯಲ್ಲಿಯೇ ಈ ರೆಸ್ಟೋರೆಂಟ್ ಪ್ರವೇಶ ಮಾಡಬಹುದು. ವಿಮಾನ ಟಿಕೆಟ್​ನಂತೆ ಬೋರ್ಡಿಂಗ್ ಪಾಸ್ ಪಡೆದು ವಿಮಾನ ರೆಸ್ಟೋರೆಂಟ್​ಗೆ ಪ್ರವೇಶ ಪಡೆಯಬಹುದಾಗಿದೆ.

ಈ ರೆಸ್ಟೋರೆಂಟ್ ನಿರ್ಮಿಸಲಲು ಏರ್​ಬಸ್​ 320ಅನ್ನು ಬೆಂಗಳೂರಿನ ಕಂಪನಿಯಿಂದ ಖರೀದಿಸಲಾಗಿದೆ. ವಿಮಾನದ ಪ್ರತಿಯೊಂದು ಭಾಗವೂ ವಡೋದರಾಕ್ಕೆ ತಂದು ನಿರ್ಮಿಸಲಾಗಿದೆ. ವಿಮಾನದ ಒಳಗೆ ರೆಸ್ಟೋರೆಂಟ್​ನಂತೆ ಅನುಭವ ನೀಡುವಂತೆ ತಯಾರು ಮಾಡಲಾಗಿದೆ ಎಂದು ರೆಸ್ಟೋರೆಂಟ್ ಮಾಲೀಕ, ವ್ಯವಸ್ಥಾಪಕ ನಿರ್ದೇಶಕ ಮುಖಿ ಅವರು ಹೇಳಿದ್ದಾರೆ.

ರೆಸ್ಟೋರೆಂಟ್​ನೊಳಕ್ಕೆ ಪ್ರವೇಶಿಸಿದಾಗ ವಿಮಾನದಲ್ಲಿ ಹತ್ತಿರುವ ಅನುಭವ ನೀಡುತ್ತದೆ. ವಿಮಾನದಲ್ಲಿ ಕುಳಿತು ನಿಮಗೆ ಬೇಕಾದ ತಿಂಡಿಯನ್ನು ಸವಿಯಬಹುದು. ಪಂಜಾಬಿ, ಚೈನೀಸ್, ಇಟಾಲಿಯನ್, ಮೆಕ್ಸಿಕನ್​ ಮತ್ತು ಥಾಯ್ ಸೇರಿದಂತೆ ವಿವಿಧ ರೀತಿಯ ಫುಡ್​ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಎಂದು ರೆಸ್ಟೋರೆಂಟ್ ಮಾಲೀಕರು ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ರೆಸ್ಟೋರೆಂಟ್​ಗೆ ಭೇಟಿ ನೀಡುವುದನ್ನು ತುಂಬಾ ಇಷ್ಟಪಟ್ಟಿದ್ದೇನೆ. ವಿಮಾನದೊಳಕ್ಕೆ ಪ್ರವೇಶಿಸಿದಂತೆಯೇ ಅನುಭವ ಕೊಡುತ್ತದೆ. ಇದು ನಿಜವಾಗಿಯೂ ವಿಶಿಷ್ಟ ಪರಿಕಲ್ಪನೆ ಎಂದು ಗ್ರಾಹಕ ಎಸ್. ಅಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral News: ಫ್ಲಿಪ್​ ಕಾರ್ಟ್​ನಲ್ಲಿ ಇಯರ್ ಫೋನ್ ಆರ್ಡರ್ ಮಾಡಿದ್ದ ನಟ; ಸಿಕ್ಕಿದ್ದು ಮಾತ್ರ ಖಾಲಿ ಬಾಕ್ಸ್!

Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ