AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ‘ಡೂಡಲ್​ ಕೇಕ್​’ ಮೂಲಕ 23ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್​

Google Doodle: ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ವಿಶೇಷ ಡೂಡಲ್​ನೊಂದಿಗೆ ಆಚರಿಸುತ್ತಿದೆ. ಗೂಗಲ್ ಅಕ್ಷರಗಳಿಗೆ ಚಾಕಲೇಟ್ ಕೇಕ್ ಮತ್ತು ಎಲ್ (L) ಅಕ್ಷರವು ಮೇಣದಬತ್ತಿಯಾಗಿದ್ದು ದೀಪದಿಂದ ಬೆಳಗುತ್ತಿದೆ. ಕೇಕ್​ನ ಮೇಲೆ 23 ಎಂದು ಬರೆಯಲಾಗಿದೆ.

Google: ‘ಡೂಡಲ್​ ಕೇಕ್​’ ಮೂಲಕ 23ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್​
‘ಡೂಡಲ್​ ಕೇಕ್​’ ಮೂಲಕ 23ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್​
Follow us
TV9 Web
| Updated By: shruti hegde

Updated on:Sep 27, 2021 | 10:10 AM

ಸರ್ಚ್ ಇಂಜಿನ್ ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ಇಂದು (ಸೆ.27, ಸೋಮವಾರ) ಆಚರಿಸಿಕೊಳ್ಳುತ್ತಿದೆ. ಗೂಗಲ್ ತನ್ನ ಮುಖಪುಟದಲ್ಲಿ ಕೇಕ್ ಚಿತ್ರವನ್ನು ಹಂಚಿಕೊಂಡಿದೆ. ಗೂಗಲ್ ಅಕ್ಷರಗಳಿಗೆ ಚಾಕಲೇಟ್ ಕೇಕ್ ಮತ್ತು ಎಲ್ (L) ಅಕ್ಷರವು ಮೇಣದಬತ್ತಿಯಾಗಿದ್ದು ದೀಪದಿಂದ ಬೆಳಗುತ್ತಿದೆ. ಕೇಕ್​ನ ಮೇಲೆ 23 ಎಂದು ಬರೆಯಲಾಗಿದೆ.

ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ವಿಶೇಷ ಡೂಡಲ್​ನೊಂದಿಗೆ ಆಚರಿಸುತ್ತಿದೆ. ತಾಂತ್ರಿಕವಾಗಿ 1998, ಸೆಪ್ಟೆಂಬರ್ 4ರಂದು ಸ್ಥಾಪನೆಯಾಯಿತು. ಸರ್ಚ್ ಇಂಜಿನ್ ಇತಿಹಾಸ 1996ಕ್ಕಿಂತಲೂ ಹಿಂದಿನದು. ಕಂಪನಿಯು ಸೆಪ್ಟೆಂಬರ್​ 27 ಅನ್ನು ಸಾಂಪ್ರದಾಯಿಕವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸುವ ದಿನವಾಗಿ ಆಯ್ಕೆ ಮಾಡಿದೆ.

ಪ್ರತಿದಿನ ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ಭಾಷೆಗಳಲ್ಲಿ ಗೂಗಲ್​ನಲ್ಲಿ ಶತಕೋಟಿ ಹುಡುಕಾಟಗಳು ನಡೆಯುತ್ತವೆ. ಜಾಗತಿಕವಾಗಿ 20ಕ್ಕೂ ಹೆಚ್ಚು ಡೇಟಾ ಸೆಂಟರ್​ಗಳಲ್ಲಿ ಪ್ರಪಂಚದ ಮಾಹಿತಿಯನ್ನು ಎಲ್ಲರಿಗೂ ತಲುಪುವಂತೆ ಮಾಡುವ ಉದ್ದೇಶದೊಂದಿಗೆ ಸಾಗುತ್ತಿದೆ.

ಕ್ಯಾಲಿಫೋರ್ನಿಯಾದ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಜೆ ಬ್ರಿನ್ 1998, ಸೆಪ್ಟೆಂಬರ್ 4ರಂದು ಗೂಗಲ್ಅನ್ನು ಸ್ಥಾಪಿಸಿದರು. ಕೇವಲ ಒಂದು ವರ್ಷದಲ್ಲಿ ಇಬ್ಬರೂ ಮೂಲ ಸರ್ಚ್ ಇಂಜಿನ್ಅನ್ನು ಆರಂಭಿಸಿದರು. ಅಂದಿನಿಂದ ಇಪ್ಪತ್ಮೂರು ವರ್ಷಗಳವರೆಗೂ ಗೂಗಲ್ ಎಲ್ಲೆಡೆ ಇದೆ. 2015 ಅಕ್ಟೋಬರ್ 24ರಂದು ಲ್ಯಾರಿ ಪೇಜ್ ಬದಲಿಗೆ ಸುಂದರ್ ಪಿಚೈ ಗೂಗಲ್​ನ ಸಿಇಒ ಆಗಿ ನೇಮಕಗೊಂಡರು.

ಇದನ್ನೂ ಓದಿ:

Shirley Temple: ಶಿರ್ಲೆ ಟೆಂಪಲ್​ ಅವರಿಗೆ ಡೂಡಲ್​ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್​

Margherita Hack: ಖಗೋಳ ಭೌತಶಾಸ್ತ್ರಜ್ಞೆ ಮಾರ್ಗರಿಟಾ ಹ್ಯಾಕ್​​ 99ನೇ ಜನ್ಮದಿನಕ್ಕೆ ಗೂಗಲ್ ಡೂಡಲ್​ ವಿಶೇಷ ನಮನ

(Google turns 23 celebrating birthday with a special animated cake doodle know details in Kannada)

Published On - 10:00 am, Mon, 27 September 21

Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ