AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ‘ಡೂಡಲ್​ ಕೇಕ್​’ ಮೂಲಕ 23ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್​

Google Doodle: ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ವಿಶೇಷ ಡೂಡಲ್​ನೊಂದಿಗೆ ಆಚರಿಸುತ್ತಿದೆ. ಗೂಗಲ್ ಅಕ್ಷರಗಳಿಗೆ ಚಾಕಲೇಟ್ ಕೇಕ್ ಮತ್ತು ಎಲ್ (L) ಅಕ್ಷರವು ಮೇಣದಬತ್ತಿಯಾಗಿದ್ದು ದೀಪದಿಂದ ಬೆಳಗುತ್ತಿದೆ. ಕೇಕ್​ನ ಮೇಲೆ 23 ಎಂದು ಬರೆಯಲಾಗಿದೆ.

Google: ‘ಡೂಡಲ್​ ಕೇಕ್​’ ಮೂಲಕ 23ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್​
‘ಡೂಡಲ್​ ಕೇಕ್​’ ಮೂಲಕ 23ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್​
TV9 Web
| Edited By: |

Updated on:Sep 27, 2021 | 10:10 AM

Share

ಸರ್ಚ್ ಇಂಜಿನ್ ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ಇಂದು (ಸೆ.27, ಸೋಮವಾರ) ಆಚರಿಸಿಕೊಳ್ಳುತ್ತಿದೆ. ಗೂಗಲ್ ತನ್ನ ಮುಖಪುಟದಲ್ಲಿ ಕೇಕ್ ಚಿತ್ರವನ್ನು ಹಂಚಿಕೊಂಡಿದೆ. ಗೂಗಲ್ ಅಕ್ಷರಗಳಿಗೆ ಚಾಕಲೇಟ್ ಕೇಕ್ ಮತ್ತು ಎಲ್ (L) ಅಕ್ಷರವು ಮೇಣದಬತ್ತಿಯಾಗಿದ್ದು ದೀಪದಿಂದ ಬೆಳಗುತ್ತಿದೆ. ಕೇಕ್​ನ ಮೇಲೆ 23 ಎಂದು ಬರೆಯಲಾಗಿದೆ.

ಗೂಗಲ್ ತನ್ನ 23ನೇ ಹುಟ್ಟುಹಬ್ಬವನ್ನು ವಿಶೇಷ ಡೂಡಲ್​ನೊಂದಿಗೆ ಆಚರಿಸುತ್ತಿದೆ. ತಾಂತ್ರಿಕವಾಗಿ 1998, ಸೆಪ್ಟೆಂಬರ್ 4ರಂದು ಸ್ಥಾಪನೆಯಾಯಿತು. ಸರ್ಚ್ ಇಂಜಿನ್ ಇತಿಹಾಸ 1996ಕ್ಕಿಂತಲೂ ಹಿಂದಿನದು. ಕಂಪನಿಯು ಸೆಪ್ಟೆಂಬರ್​ 27 ಅನ್ನು ಸಾಂಪ್ರದಾಯಿಕವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸುವ ದಿನವಾಗಿ ಆಯ್ಕೆ ಮಾಡಿದೆ.

ಪ್ರತಿದಿನ ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ಭಾಷೆಗಳಲ್ಲಿ ಗೂಗಲ್​ನಲ್ಲಿ ಶತಕೋಟಿ ಹುಡುಕಾಟಗಳು ನಡೆಯುತ್ತವೆ. ಜಾಗತಿಕವಾಗಿ 20ಕ್ಕೂ ಹೆಚ್ಚು ಡೇಟಾ ಸೆಂಟರ್​ಗಳಲ್ಲಿ ಪ್ರಪಂಚದ ಮಾಹಿತಿಯನ್ನು ಎಲ್ಲರಿಗೂ ತಲುಪುವಂತೆ ಮಾಡುವ ಉದ್ದೇಶದೊಂದಿಗೆ ಸಾಗುತ್ತಿದೆ.

ಕ್ಯಾಲಿಫೋರ್ನಿಯಾದ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಜೆ ಬ್ರಿನ್ 1998, ಸೆಪ್ಟೆಂಬರ್ 4ರಂದು ಗೂಗಲ್ಅನ್ನು ಸ್ಥಾಪಿಸಿದರು. ಕೇವಲ ಒಂದು ವರ್ಷದಲ್ಲಿ ಇಬ್ಬರೂ ಮೂಲ ಸರ್ಚ್ ಇಂಜಿನ್ಅನ್ನು ಆರಂಭಿಸಿದರು. ಅಂದಿನಿಂದ ಇಪ್ಪತ್ಮೂರು ವರ್ಷಗಳವರೆಗೂ ಗೂಗಲ್ ಎಲ್ಲೆಡೆ ಇದೆ. 2015 ಅಕ್ಟೋಬರ್ 24ರಂದು ಲ್ಯಾರಿ ಪೇಜ್ ಬದಲಿಗೆ ಸುಂದರ್ ಪಿಚೈ ಗೂಗಲ್​ನ ಸಿಇಒ ಆಗಿ ನೇಮಕಗೊಂಡರು.

ಇದನ್ನೂ ಓದಿ:

Shirley Temple: ಶಿರ್ಲೆ ಟೆಂಪಲ್​ ಅವರಿಗೆ ಡೂಡಲ್​ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್​

Margherita Hack: ಖಗೋಳ ಭೌತಶಾಸ್ತ್ರಜ್ಞೆ ಮಾರ್ಗರಿಟಾ ಹ್ಯಾಕ್​​ 99ನೇ ಜನ್ಮದಿನಕ್ಕೆ ಗೂಗಲ್ ಡೂಡಲ್​ ವಿಶೇಷ ನಮನ

(Google turns 23 celebrating birthday with a special animated cake doodle know details in Kannada)

Published On - 10:00 am, Mon, 27 September 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್