AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇನುಗೂಡನ್ನು ಕಬಳಿಸುವ ಈ ಹಕ್ಕಿಯ ವಿಡಿಯೋ ವೈರಲ್

Honey Buzzard : ಈ ಹಕ್ಕಿ ಜೇನುಗೂಡಿನ ಮೇಲೆ ದಾಳಿ ಮಾಡಿ ಜೇನುತುಪ್ಪ ತಿನ್ನುತ್ತದೆ ಎನ್ನುವ ಅಂದಾಜು ಇರಲಿಲ್ಲ ಎಂದು ನೆಟ್ಟಿಗರೆಲ್ಲ ಅಚ್ಚರಿಯಿಂದ ಈ ವಿಡಿಯೋ ನೋಡುತ್ತಿದ್ದಾರೆ.

ಜೇನುಗೂಡನ್ನು ಕಬಳಿಸುವ ಈ ಹಕ್ಕಿಯ ವಿಡಿಯೋ ವೈರಲ್
ಹನಿ ಬಝರ್ಡ್ ಜೇನುಗೂಡಿನ ಮೇಲೆ ದಾಳಿ ಮಾಡಿ ತುಪ್ಪ ತಿನ್ನುತ್ತಿರುವುದು
TV9 Web
| Edited By: ಶ್ರೀದೇವಿ ಕಳಸದ|

Updated on:Dec 02, 2022 | 6:16 PM

Share

Viral Video : ಈ ಹಕ್ಕಿ ಜೇನುಗೂಡಿನಲ್ಲಿರುವ ತುಪ್ಪವನ್ನು ತಿನ್ನಲು ಹೋಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ರೆಗ್​ ಸ್ಯಾಡ್ಲರ್​ ಎಂಬ ಖಾತೆದಾರರು ಟ್ವೀಟ್ ಮಾಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಹೀಗೆ ಹಕ್ಕಿಯೂ ಜೇನುಗೂಡಿನ ಮೇಲೆ ದಾಳಿ ಮಾಡಬಹುದೆಂಬ ಅಂದಾಜೇ ಇರಲಿಲ್ಲ ಎಂದು ನೆಟ್ಟಿಗರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಪಕ್ಷಿಗಳ ಆಹಾರ ಎಲ್ಲರಿಗೂ ಗೊತ್ತಿರುವಂಥದ್ದೇ.

ನೂರಾರು ಜೇನುನೊಣಗಳು ಹನಿ ಬಝರ್ಡ್​ ಎನ್ನುವ ಈ ಹಕ್ಕಿಯ ಸುತ್ತಲೂ ಹಾರಾಡುತ್ತಿದ್ದರೂ ಕಚ್ಚಲು ಪ್ರಯತ್ನಿಸುತ್ತಿದ್ದರೂ ಹಕ್ಕಿ ಮಾತ್ರ ಜೇನು ತಿನ್ನುವ ಧ್ಯಾನದಲ್ಲಿ ಮುಳುಗಿದೆ. ರಾಯಲ್ ಸೊಸೈಟಿ ಫಾರ್ ದಿ ಪ್ರೊಟೆಕ್ಷನ್ ಆಫ್ ಬರ್ಡ್ಸ್ ಪ್ರಕಾರ, ಈ ಹನಿ ಬಝಾರ್ಡ್ ಪಕ್ಷಿಯು ಬೇಟೆಯಾಡುವ ದೊಡ್ಡ ಗಾತ್ರದ ಹಕ್ಕಿ. ಅಗಲವಾದ ರೆಕ್ಕೆಗಳನ್ನು ಮತ್ತು ಉದ್ದವಾದ ಬಾಲವನ್ನು ಬಲಿಷ್ಠ ಕಾಲುಗಳನ್ನು ಇದು ಹೊಂದಿರುತ್ತದೆ. ಜೇನುಗೂಡು ಮತ್ತು ಕಣಜಗಳ ಗೂಡುಗಲ ಮೇಲೆ ಇದು ದಾಳಿ ಮಾಡುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರು, ಮೊದಲ ಸಲ ಪಕ್ಷಿಯೊಂದು ಹೀಗೆ ಜೇನು ತಿನ್ನುತ್ತಿರುವುದನ್ನು ನೋಡುತ್ತಿದ್ದೇನೆ ಎಂದಿದ್ದಾರೆ. ಹಕ್ಕಿ ಕೂಡ ಜೇನು ತಿನ್ನುತ್ತಿದೆಯೇ? ಹಾಗಿದ್ದರೆ ಇದರ ಊಟ ಜೇನುತುಪ್ಪವೇ ಇಡೀ ದಿನ ಎಂದಿದ್ದಾರೆ ಮತ್ತೊಬ್ಬರು. ಇದು ವಲಸೆ ಹಕ್ಕಿ, ಬೇಸಿಗೆಯಲ್ಲಿ ಸೈಬೀರಿಯಾ ಜಪಾನ್​ಗೆ ಸಂತಾನೋತ್ಪತ್ತಿಗಾಗಿ ಹಾರಿ ಹೋಗುತ್ತದೆ ಎಂದಿದ್ದಾರೆ ಮಗದೊಬ್ಬರು. ನೋಡಲು ಬಹಳ ಕ್ರೂರ ಅನ್ನಿಸುತ್ತದೆ, ಆದರೆ ಪ್ರಕೃತಿಯ ಭಾಗವೇ ಅಲ್ಲವೆ ಇದೂ ಕೂಡ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:15 pm, Fri, 2 December 22

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ