AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇನುಗೂಡನ್ನು ಕಬಳಿಸುವ ಈ ಹಕ್ಕಿಯ ವಿಡಿಯೋ ವೈರಲ್

Honey Buzzard : ಈ ಹಕ್ಕಿ ಜೇನುಗೂಡಿನ ಮೇಲೆ ದಾಳಿ ಮಾಡಿ ಜೇನುತುಪ್ಪ ತಿನ್ನುತ್ತದೆ ಎನ್ನುವ ಅಂದಾಜು ಇರಲಿಲ್ಲ ಎಂದು ನೆಟ್ಟಿಗರೆಲ್ಲ ಅಚ್ಚರಿಯಿಂದ ಈ ವಿಡಿಯೋ ನೋಡುತ್ತಿದ್ದಾರೆ.

ಜೇನುಗೂಡನ್ನು ಕಬಳಿಸುವ ಈ ಹಕ್ಕಿಯ ವಿಡಿಯೋ ವೈರಲ್
ಹನಿ ಬಝರ್ಡ್ ಜೇನುಗೂಡಿನ ಮೇಲೆ ದಾಳಿ ಮಾಡಿ ತುಪ್ಪ ತಿನ್ನುತ್ತಿರುವುದು
TV9 Web
| Edited By: |

Updated on:Dec 02, 2022 | 6:16 PM

Share

Viral Video : ಈ ಹಕ್ಕಿ ಜೇನುಗೂಡಿನಲ್ಲಿರುವ ತುಪ್ಪವನ್ನು ತಿನ್ನಲು ಹೋಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ರೆಗ್​ ಸ್ಯಾಡ್ಲರ್​ ಎಂಬ ಖಾತೆದಾರರು ಟ್ವೀಟ್ ಮಾಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಹೀಗೆ ಹಕ್ಕಿಯೂ ಜೇನುಗೂಡಿನ ಮೇಲೆ ದಾಳಿ ಮಾಡಬಹುದೆಂಬ ಅಂದಾಜೇ ಇರಲಿಲ್ಲ ಎಂದು ನೆಟ್ಟಿಗರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಪಕ್ಷಿಗಳ ಆಹಾರ ಎಲ್ಲರಿಗೂ ಗೊತ್ತಿರುವಂಥದ್ದೇ.

ನೂರಾರು ಜೇನುನೊಣಗಳು ಹನಿ ಬಝರ್ಡ್​ ಎನ್ನುವ ಈ ಹಕ್ಕಿಯ ಸುತ್ತಲೂ ಹಾರಾಡುತ್ತಿದ್ದರೂ ಕಚ್ಚಲು ಪ್ರಯತ್ನಿಸುತ್ತಿದ್ದರೂ ಹಕ್ಕಿ ಮಾತ್ರ ಜೇನು ತಿನ್ನುವ ಧ್ಯಾನದಲ್ಲಿ ಮುಳುಗಿದೆ. ರಾಯಲ್ ಸೊಸೈಟಿ ಫಾರ್ ದಿ ಪ್ರೊಟೆಕ್ಷನ್ ಆಫ್ ಬರ್ಡ್ಸ್ ಪ್ರಕಾರ, ಈ ಹನಿ ಬಝಾರ್ಡ್ ಪಕ್ಷಿಯು ಬೇಟೆಯಾಡುವ ದೊಡ್ಡ ಗಾತ್ರದ ಹಕ್ಕಿ. ಅಗಲವಾದ ರೆಕ್ಕೆಗಳನ್ನು ಮತ್ತು ಉದ್ದವಾದ ಬಾಲವನ್ನು ಬಲಿಷ್ಠ ಕಾಲುಗಳನ್ನು ಇದು ಹೊಂದಿರುತ್ತದೆ. ಜೇನುಗೂಡು ಮತ್ತು ಕಣಜಗಳ ಗೂಡುಗಲ ಮೇಲೆ ಇದು ದಾಳಿ ಮಾಡುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರು, ಮೊದಲ ಸಲ ಪಕ್ಷಿಯೊಂದು ಹೀಗೆ ಜೇನು ತಿನ್ನುತ್ತಿರುವುದನ್ನು ನೋಡುತ್ತಿದ್ದೇನೆ ಎಂದಿದ್ದಾರೆ. ಹಕ್ಕಿ ಕೂಡ ಜೇನು ತಿನ್ನುತ್ತಿದೆಯೇ? ಹಾಗಿದ್ದರೆ ಇದರ ಊಟ ಜೇನುತುಪ್ಪವೇ ಇಡೀ ದಿನ ಎಂದಿದ್ದಾರೆ ಮತ್ತೊಬ್ಬರು. ಇದು ವಲಸೆ ಹಕ್ಕಿ, ಬೇಸಿಗೆಯಲ್ಲಿ ಸೈಬೀರಿಯಾ ಜಪಾನ್​ಗೆ ಸಂತಾನೋತ್ಪತ್ತಿಗಾಗಿ ಹಾರಿ ಹೋಗುತ್ತದೆ ಎಂದಿದ್ದಾರೆ ಮಗದೊಬ್ಬರು. ನೋಡಲು ಬಹಳ ಕ್ರೂರ ಅನ್ನಿಸುತ್ತದೆ, ಆದರೆ ಪ್ರಕೃತಿಯ ಭಾಗವೇ ಅಲ್ಲವೆ ಇದೂ ಕೂಡ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:15 pm, Fri, 2 December 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ