ಫಿಲಿಪೈನ್ಸ್​ನಲ್ಲಿ ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ವೈರಲ್​

Philippine : ಈ ವೃದ್ಧನ ಹೆಂಡತಿ ತೀರಿ ಹೋಗಿದ್ದಾಳೆ. ಆದರೆ ಈತನಿಗೆ ಮಗ, ಮೊಮ್ಮಕ್ಕಳೊಂದಿಗೆ ವಾಸಿಸಬೇಕು ಎನ್ನಿಸಿದೆ. ನೆರೆಹೊರೆಯವರು ಈತನ ಮನೆಯನ್ನೇ ಹೊತ್ತು ಮಗನ ಮನೆಯ ಬಳಿ ಇರಿಸಿದ್ದಾರೆ. ಹೇಗಿದೆ ಈ ಉಪಾಯ!

ಫಿಲಿಪೈನ್ಸ್​ನಲ್ಲಿ ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ವೈರಲ್​
ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿರುವ ಫಿಲಿಪೈನ್ಸ್​ನ ಸ್ಥಳೀಯರು
Follow us
| Updated By: ಶ್ರೀದೇವಿ ಕಳಸದ

Updated on:Dec 03, 2022 | 9:25 AM

Viral : ಹಿರಿಯರಿಗೆ ಕಿರಿಯರ ಆಶ್ರಯ ಬೇಕು. ಕಿರಿಯರಿಗೆ ಹಿರಿಯರ ಆಶ್ರಯ ಬೇಕು. ಕುಟುಂಬ ಎನ್ನುವುದು ಹೀಗೆ ಪರಸ್ಪರ ಸಹಕಾರ, ಸಹಾನುಭೂಮಿಯಿಂದಲೇ ಚೆಂದಗೊಳ್ಳುವುದು. ಆದರೆ ಫಿಲಿಪೈನ್ಸ್​ನಲ್ಲಿ ನಡೆದ ಘಟನೆ ಒಂದು ಕ್ಷಣ ವಿಚಿತ್ರ ಎನ್ನಿಸಿದರೂ ವಾಸ್ತವದಲ್ಲಿ ನೋಡಿದಾಗ ಒಳಸತ್ಯ ಅರ್ಥವಾಗುವುದು. ತನ್ನ ಮಗ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸಬೇಕೆಂದು ಇಚ್ಛಿಸಿದ ವಯೋವೃದ್ಧನ ಮನೆಯನ್ನೇ ಹೆಗಲ ಮೇಲೆ ಹೊತ್ತು ವೃದ್ಧನ ಆಸೆ ಈಡೇರಿಸಿದ್ಧಾರೆ ಫಿಲಿಪೈನ್ಸ್​ನ ಈ ಹಳ್ಳಿಗರು. ಇವರ ಸಹಾನುಭೂತಿಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

2 ಮಿಲಿಯನ್​ ಜನರು ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿದ್ಧಾರೆ. 24 ಜನರು ಫಿಲಿಪೈನ್ಸ್‌ನ ಜಾಂಬೊಂಗಾ ಡೆಲ್ ನಾರ್ಟೆಯ ಕಚ್ಚಾರಸ್ತೆಗುಂಟ ಸುಮಾರು 7 ಅಡಿ ಎತ್ತರದ ಮನೆಯನ್ನು ತಮ್ಮ ಹೆಗಲುಗಳ ಮೇಲೆ ಹೊತ್ತೊಯ್ದು ಸಾಗಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಅನೇಕರು ಇವರ ಈ ಸಾಹಸದ ಕಾರ್ಯಕ್ಕೆ ಹುರುಪು ತುಂಬುತ್ತಿರುವುದನ್ನು ನೋಡಬಹುದು.

ಸುಮಾರು ಎರಡು ಗಂಟೆಗಳೇ ಬೇಕಾದವು ಹೀಗೆ ಈ ಮನೆಯನ್ನು ಸಾಗಿಸಲು. ಸುಲಭವಲ್ಲವಲ್ಲ? ಆಗಾಗ ವಿಶ್ರಾಂತಿ ತೆಗೆದುಕೊಂಡು ಸಾಗಣೆ ಕೆಲಸದಲ್ಲಿ ಇವರು ನಿರತರಾಗುತ್ತಿದ್ದರು. ಈ ವೃದ್ಧನ ಹೆಂಡತಿ ತೀರಿಹೋಗಿದ್ದಾರೆ. ಹಾಗಾಗಿ ಮಗ ಮತ್ತು ಸಂಬಂಧಿಕರು ಈ ವೃದ್ಧನೆಂದರೆ ಭಾರ ಎಂಬಂತೆ ವರ್ತಿಸುತ್ತಿದ್ದರು. ಆದರೆ ವೃದ್ಧನಿಗೆ ತನ್ನ ಮಗ ಮೊಮ್ಮಕ್ಕಳೊಂದಿಗೆ ವಾಸಿಸಬೇಕು ಎನ್ನಿಸುತ್ತಿತ್ತು. ಈತನ ಅಳಲು ಕೇಳಿಸಿಕೊಂಡ ನೆರೆಹೊರೆಯವರು ಹೀಗೊಂದು ಉಪಾಯ ಮಾಡಿ ಯಶಸ್ವಿಯಾದರು. ನಂತರ ವೃದ್ಧ ಇವರೆಲ್ಲರಿಗೂ ಊಟೋಪಚಾರ ಮಾಡಿ ಹಬ್ಬದಂತೆ ಇದನ್ನು ಸಂಭ್ರಮಿಸಿದರು.

ನೆಟ್ಟಿಗರು ಈ ನಡೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಹೀಗೆ ಮನೆಯನ್ನೇ ಸಾಗಿಸುವ ದೃಶ್ಯವನ್ನು ಮೊದಲ ಬಾರಿಗೆ ನೋಡುತ್ತಿರುವುದು ಎನ್ನುತ್ತಿದ್ದಾರೆ.

ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:22 am, Sat, 3 December 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್