AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಥಿ ದೇವೋ ಭವ; ‘ನೀವೂ ಉಂಡು ಹಾಸ್ಟೆಲ್​ ಸ್ನೇಹಿತರಿಗೂ ಊಟ ತೆಗೆದುಕೊಂಡು ಹೋಗಿ ಎಂದ ವರ

Gatecrashing : ಕ್ಷಮಿಸಿ, ಹಸಿವಾಗಿತ್ತು ಉಚಿತವಾಗಿ ಉಣ್ಣಲು ನಿಮ್ಮ ಮದುವೆಗೆ ಬಂದೆ ಎಂದು ಈ ವಿದ್ಯಾರ್ಥಿ ಹೇಳಿದಾಗ ವರನಾದವನು ಅವನೊಂದಿಗೆ ಆಪ್ತವಾಗಿ ಒಡನಾಡಿದ ರೀತಿಯೇ ಅತ್ಯಂತ ಹೃದಯಸ್ಪರ್ಶಿಯಾಗಿದೆ. ನೋಡಿ ವಿಡಿಯೋ.

ಅತಿಥಿ ದೇವೋ ಭವ; ‘ನೀವೂ ಉಂಡು ಹಾಸ್ಟೆಲ್​ ಸ್ನೇಹಿತರಿಗೂ ಊಟ ತೆಗೆದುಕೊಂಡು ಹೋಗಿ ಎಂದ ವರ
ಕ್ಷಮಿಸಿ ಆಹ್ವಾನಿಲ್ಲದೆ ಉಚಿತ ಊಟಕ್ಕಾಗಿ ಬಂದೆ ಎನ್ನುತ್ತಿರುವ ಹಾಸ್ಟೆಲ್ ವಿದ್ಯಾರ್ಥಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 02, 2022 | 4:30 PM

Viral Video : ಆಹ್ವಾನವಿಲ್ಲದೆ ಮದುವೆಯ ಊಟಕ್ಕೆ ಬಂದ ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಿದ ವಿಡಿಯೋ ವೈರಲ್ ಆಗಿದ್ದನ್ನು ಈಗಷ್ಟೇ ನೋಡಿದಿರಿ. ಆದರೆ ಇನ್ನೊಂದು ಪ್ರಕರಣದಲ್ಲಿ, ಇದಕ್ಕೆ ವಿರುದ್ಧವಾದ ಅಂದರೆ ಹೃದಯಕ್ಕೆ ಆಪ್ತವಾಗುವಂಥ ಘಟನೆ ಜರುಗಿದೆ. ಹಾಸ್ಟೆಲ್​ನಲ್ಲಿ ವಾಸಿಸುತ್ತಿರುವ ಹುಡುಗನೊಬ್ಬ ಈ ಮದುವೆಗೆ ಬಂದು ವರನೊಂದಿಗೆ ಮಾತನಾಡುತ್ತ, ‘ಕ್ಷಮಿಸಿ ನಿಮ್ಮ ಹೆಸರು ನನಗೆ ಗೊತ್ತಿಲ್ಲ. ನಾನು ಹಾಸ್ಟೆಲ್​ನಲ್ಲಿ ವಾಸಿಸುತ್ತಿದ್ದೇನೆ. ನೀವು ಆಹ್ವಾನಿಸದಿದ್ದರೂ ಉಚಿತವಾಗಿ ಊಟ ಮಾಡಲು ಬಂದಿದ್ದೇನೆ’ ಎನ್ನುತ್ತಾನೆ. ಪ್ರತ್ಯುತ್ತರವಾಗಿ ವರ, ‘ನೀವೂ ಊಟ ಮಾಡಿ, ಹಾಸ್ಟೆಲ್​ನಲ್ಲಿರುವ ನಿಮ್ಮ ಸ್ನೇಹಿತರಿಗೂ ಊಟವನ್ನು ತೆಗೆದುಕೊಂಡು ಹೋಗಿ’ ಎನ್ನುತ್ತಾನೆ. ಐಎಎಸ್​ ಅಧಿಕಾರಿ ಅವನೀಶ್ ಶರಣ್​ ಈ ವಿಡಿಯೋ ಟ್ವೀಟ್ ಮಾಡಿದ್ದು ಇದೀಗ ವೈರಲ್ ಆಗಿದೆ.

This is how it should be.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದು ಯಾವ ರಾಜ್ಯದ ವಿಡಿಯೋ ಎಂದು ತಿಳಿದುಬಂದಿಲ್ಲ. ಆದರೆ ಈ ಹುಡುಗ ಹಿಂದಿಯಲ್ಲಿ ಮಾತನಾಡುತ್ತಾನೆ. ತನಗೆ ಹಸಿವಾಗಿತ್ತು ಹಾಗಾಗಿ ಇಲ್ಲಿಗೆ ಬಂದೆ ಎಂದು ಹೇಳುತ್ತಾನೆ. ನನ್ನ ಈ ನಡೆವಳಿಕೆಗೆ ಕ್ಷಮಿಸಿ ಎಂದೂ ಕೇಳುತ್ತಾನೆ. ಆದರೆ ವರನಾದವನು ಅಷ್ಟೇ ವಿನಯದಿಂದ ನಿಮ್ಮ ಹಾಸ್ಟೆಲ್​ ಸ್ನೇಹಿತರಿಗೂ ಊಟವನ್ನು ಪ್ಯಾಕ್ ಮಾಡಿಕೊಂಡು ಹೋಗಿ, ಅದರಲ್ಲೇನಿದೆ ಎನ್ನುತ್ತಾನೆ. ಈ ವಿಡಿಯೋ ಅತ್ಯಂತ ಹೃದಯಸ್ಪರ್ಶಿಯಾಗಿದೆ ಎನ್ನುತ್ತಿರುವ ನೆಟ್ಟಿಗರು ಹುಡುಗನ ಪ್ರಾಮಾಣಿಕತೆ ಮತ್ತು ವರನ ಆತಿಥ್ಯವನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ : ‘ನನ್ನ ಮದುವೆಯಾಗುತ್ತೀಯಾ?’ ಆತ ಆಕೆಯನ್ನು ಕೇಳುವ ಮೊದಲೇ ಉಂಗುರ ನೀರುಪಾಲು!?

ಇದು ನಮ್ಮ ಭಾರತವೆಂದರೆ ಎಂದು ಹೆಮ್ಮೆ ಪಡುತ್ತಿದ್ದಾರೆ ಹಲವರು. ಅದಕ್ಕಾಗಿಯೇ ನಾನು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ ಎನ್ನುತ್ತಿದ್ದಾರೆ ಅನೇಕರು. ಈತನಕ ಈ ವಿಡಿಯೋ ಅನ್ನು 7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸಾವಿರಾರು ಜನ ಮೆಚ್ಚಿದ್ದಾರೆ.

ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ ನೀಡಿದ ವಿಡಿಯೋ ಅನ್ನು ಈ ವಿಡಿಯೋ ಥ್ರೆಡ್​ಗೆ ಟ್ವೀಟ್​ ಮಾಡಿದ ನೆಟ್ಟಿಗರು ಈ ಎರಡೂ ನಡೆವಳಿಕೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ.

ಏನೇ ಆಗಲಿ ಹಸಿವು ಎಂದು ಬಂದವರನ್ನು ಎಂದೂ ಅವಮಾನಿಸಬಾರದು. ಹಾಗೆಯೇ ಅಪರಿಚಿತರಾದರೂ ನಿಮ್ಮನ್ನು ಆದರದಿಂದ ಕಂಡವರನ್ನು ಎಂದೂ ಮರೆಯಬಾರದು.

ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:20 pm, Fri, 2 December 22

ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ