AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ದುಃಸ್ಸಾಹಸಕ್ಕೆ ಇಳಿದ ಶಿರಸಿಯ ಈ ಯುವಕನಿಗೆ ನಾಗಪ್ಪ ಕೊಟ್ಟಿದ್ದೇನು?

Cobra : ಮಾಝ್​ ಸಯೀದ್​ಗೆ ಕೇವಲ 20 ವರ್ಷ. ಮೂರೂ ನಾಗರಹಾವುಗಳನ್ನು ಏಕಕಾಲಕ್ಕೆ ಪಳಗಿಸಲು ಪ್ರಯತ್ನಿಸಿದ್ದಾನೆ. ಆದರೆ ಅವನ ಈ ತಪ್ಪುವಿಧಾನ ಹಾವುಗಳನ್ನು ಕೆಣಕಿದೆ. ಆಗ ಒಂದು ಹಾವು ಏನು ಮಾಡಿದೆ ನೋಡಿ.

Viral Video : ದುಃಸ್ಸಾಹಸಕ್ಕೆ ಇಳಿದ ಶಿರಸಿಯ ಈ ಯುವಕನಿಗೆ ನಾಗಪ್ಪ ಕೊಟ್ಟಿದ್ದೇನು?
ಹಾವು ಕಚ್ಚಿಸಿಕೊಂಡ ಯುವಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 14, 2022 | 2:58 PM

Viral Video : ಹಾವೆಂದರೆ ಯಾರಿಗೆ ಭಯವಿಲ್ಲ? ಸ್ವಲ್ಪ ಧೈರ್ಯ ಇದ್ದವರು ಅದನ್ನು ಹಿಡಿಯಲು ಮುಂದಾಗುತ್ತಾರೆ. ಇನ್ನೂ ಕೆಲವರು ಹಾವು ಹಿಡಿಯುವಲ್ಲಿ ಪಳಗಿದ ನಂತರ ಅದನ್ನೇ ಹವ್ಯಾಸವಾಗಿಸಿಕೊಂಡು  ಹುಚ್ಚಿಗೆ ಬಿದ್ದುಬಿಡುತ್ತಾರೆ. ಸಾಮಾನ್ಯವಾಗಿ ಒಂದು ಬಾರಿಗೆ ಒಂದು ಹಾವನ್ನು ಪಳಗಿಸುವುದೇ ಸಾಹಸದ ಕೆಲಸ. ಅದರಲ್ಲೂ ಮೂರು ನಾಗರಹಾವುಗಳನ್ನು ಏಕಕಾಲಕ್ಕೆ ಪಳಗಿಸುವುದೆಂದರೆ ಅದು ದುಃಸ್ಸಾಹಸಕ್ಕೆ ಎಡೆ ಮಾಡಿಕೊಡುವುದಿಲ್ಲವೆ? ಹೌದು ಎನ್ನುತ್ತಿದೆ ಈ ವಿಡಿಯೋ. ಶಿರಸಿಯ ಈ ಯುವಕ ಅತೀ ಉತ್ಸಾಹದಲ್ಲಿ ಮೂರೂ ಹಾವುಗಳನ್ನು ಪಳಗಿಸಲು ಹೋಗಿ ಎಂಥ ಪರಿಸ್ಥಿತಿ ತಂದುಕೊಂಡಿದ್ದಾನೆ ನೋಡಿ.

ಮೂರು ನಾಗರಗಳು ಹೆಡೆಯೆತ್ತಿ ಆಡುತ್ತಿವೆ. ಅತ್ಯಂತ ಆತ್ಮವಿಶ್ವಾಸದಲ್ಲಿ ಸಮೀಪವೇ ಕುಳಿತುಕೊಂಡು ಅವುಗಳನ್ನು ಆಡಿಸಲು ನೋಡುತ್ತಿದ್ದಾನೆ. ಅಷ್ಟರಲ್ಲಿಯೇ ಒಂದು ಹಾವು ಆಕ್ರಮಣಕಾರಿಯಾಗಿ ಅವನ ಮೊಣಕಾಲನ್ನು ಕಚ್ಚಿ ಹಿಡಿದುಕೊಂಡಿದೆ. ಎದ್ದು ಓಡಲು ನೋಡುತ್ತಾನೆ ಆದರೆ ಪ್ಯಾಂಟ್​ ಕೂಡ ಬಿಡದಂತೆ ಗಟ್ಟಿಯಾಗಿ ಕಚ್ಚಿ ಹಿಡಿದಿದೆ. ಅದರ ಬಾಯಿಗೆ ಇವನ ಚರ್ಮವೂ ಸಿಕ್ಕಿದ್ದರೆ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಎಚ್ಚರಿಕೆಯ ಸಂದೇಶವನ್ನು ಸಾರುತ್ತಿದೆ.

ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಹಂಚಿಕೊಂಡು, ‘ನಾಗರಹಾವುಗಳನ್ನು ಪಳಗಿಸುವ ಭಯಾನಕ ವಿಧಾನ. ಹೀಗೆ ಕೈಆಡಿಸುವುದನ್ನು ನೋಡಿದ ಹಾವು ಹೆದರಿ ಆ ಚಲನೆಯನ್ನು ಅನುಸರಿಸುತ್ತದೆ. ಆದರೆ ಪರಿಣಾಮ ಕೆಲವೊಮ್ಮೆ ಹೀಗೆ ಮಾರಕವಾಗಿರಬಹುದು’ ನೋಟ್​ ಬರೆದಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:56 pm, Wed, 14 September 22

ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು