Viral Video: ಹೋ…ಮುಜೇ ಚೋಡ್​ಕರ್ ಜೋ ತುಮ್ ಜಾವೋಗೇ.. ಹಾಡು ಹೇಳಿದ ಬಾಲಕನನ್ನು ನೋಡಿ ನೆಟ್ಟಿಗರು ಫಿದಾ!

ಕಾರಿನ ಒಳಗೆ ಕೂತು ಬಾಲಕ, ಅರಿಜಿತ್​ ಸಿಂಗ್​ ಅವರ ಹಾಡನ್ನು ಹೇಳಲು ಪ್ರಾರಂಭಿಸುತ್ತಾನೆ. ಜನಪ್ರಿಯತೆ ಪಡೆದ ಹೋ...ಮುಜೇ ಚೋಡ್​ಕರ್ ಜೋ ತುಮ್ ಜಾವೋಗೇ ಹಾಡನ್ನು ಸುಮಧುರವಾಗಿ ಹಾಡುತ್ತಾನೆ.

Viral Video: ಹೋ...ಮುಜೇ ಚೋಡ್​ಕರ್ ಜೋ ತುಮ್ ಜಾವೋಗೇ.. ಹಾಡು ಹೇಳಿದ ಬಾಲಕನನ್ನು ನೋಡಿ ನೆಟ್ಟಿಗರು ಫಿದಾ!
ಹೋ...ಮುಜೇ ಚೋಡ್​ಕರ್ ಜೋ ತುಮ್ ಜಾವೋಗೇ.. ಹಾಡು ಹೇಳಿದ ಬಾಲಕ
Follow us
| Updated By: shruti hegde

Updated on:Jun 08, 2021 | 4:16 PM

ಮಕ್ಕಳು ಹಾಡು ಹೇಳುತ್ತಿದ್ದರೆ ಕೇಳುವುದೇ ಮನಸ್ಸಿಗೆ ಹಿತವೆನಿಸುತ್ತದೆ. ಅದೆಷ್ಟೇ ಕಷ್ಟದ ಹಾಡಾಗಿರಲಿ ತಮಗೆ ಇಷ್ಟವಾದ ಹಾಡನ್ನು ಸರಳವಾಗಿ ಕಲಿತುಬಿಡುತ್ತಾರೆ. ಇಲ್ಲೋರ್ವ ಬಾಲಕ, ಅರಿಜಿತ್​ ಸಿಂಗ್​ ಅವರ ಹೋ… ಮುಜೇ ಚೋಡ್​ಕರ್ ಜೋ ತುಮ್ ಜಾವೋಗೇ.. ಹಾಡನ್ನು ಸುಮಧುರವಾಗಿ ಹಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಧ್ವನಿಗೆ ಫಿದಾ ಆಗಿದ್ದು, ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಬಾಲಕನನ್ನು ಶ್ಲಾಘಿಸಿದ್ದಾರೆ.

ಕಾರ್​ ಡ್ರೈವರ್​ ಮೊದಲಿಗೆ ಬಾಲಕನೊಂದಿಗೆ ಮಾತನಾಡುವುದುನ್ನು ನೀವು ವಿಡಿಯೋದಲ್ಲಿ ನೋಡಬಹುದು. ಒಂದು ಹಾಡನ್ನು ಹೇಳುವುದಾಗಿ ಡ್ರೈವರ್​ ಬಾಲಕನಲ್ಲಿ ಕೇಳಿಕೊಳ್ಳುತ್ತಾನೆ. ಕಾರಿನ ಒಳಗೆ ಕೂತು ಬಾಲಕ ಅರಿಜಿತ್​ ಸಿಂಗ್​ ಅವರ ಹಾಡನ್ನು ಹೇಳಲು ಪ್ರಾರಂಭಿಸುತ್ತಾನೆ. ಜನಪ್ರಿಯತೆ ಪಡೆದ ಹೋ…ಮುಜೇ ಚೋಡ್​ಕರ್ ಜೋ ತುಮ್ ಜಾವೋಗೇ ಹಾಡನ್ನು ಸುಮಧುರವಾಗಿ ಹಾಡುತ್ತಾನೆ. ಜೂನ್​ 4ನೇ ತಾರೀಕಿನಂದು ಬಾಲಕ ಹೇಳಿದ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಫೇಸ್​ಬುಕ್​ ಹಾಗೂ ಟ್ವಿಟರ್​ ಪುಟಗಳಲ್ಲಿಯೂ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಮಿಲಿಯನ್​ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮಕ್ಕಳ ಹಾಡು ಹೇಳುವ ವಿಡಿಯೋ ನೆಟ್ಟಿಗರಿಗೆ ಬಲು ಇಷ್ಟವಾಗಿದೆ. ‘ತನ್ನ ಸುಮಧುರ ಕಂಠದಿಂದ ಸುಂದರವಾಗಿ ಬಾಲಕ ಹಾಡಿದ್ದಾನೆ’ ಎಂದು ಇನ್ನೋರ್ವರು ಹೇಳಿದ್ದಾರೆ. ನಮ್ಮ ಸುತ್ತಮುತ್ತಲೇ ಅದೆಷ್ಟೋ ಪ್ರತಿಭೆಗಳಿವೆ. ಪ್ರಯತ್ನ ಪಟ್ಟರೆ ಮುಂದೊಂದು ದಿನ ಈ ಬಾಲಕ ಸಾಧನೆ ಮಾಡಬಹುದು ಎಂಬ ಅನಿಸಿಕೆ ಹಂಚಿಕೊಂಡಿದ್ದಾರೆ.

ರಾತ್ರಿಯಿಂದ ಬೆಳಗಾಗುವದರೊಳಗೆ ಅದೆಷ್ಟೋ ವಿಡಿಯೋಗಳು ವೈರಲ್​ ಆಗಿರುತ್ತವೆ. ನಮ್ಮ ಸುತ್ತಮುತ್ತಲೇ ಅಡಗಿರುವ ಅದೆಷ್ಟೋ ಜನರು ಬೆಳಗಾಗುವುದರೊಳಗೆ ಜನಪ್ರಿಯತೆ ಪಡೆದಿರುತ್ತಾರೆ. ಹೊಸ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ ಸಾಮಾಜಿಕ ಜಾಲತಾಣ.

ಇದನ್ನೂ ಓದಿ:

ಹಿಂದಿ ಹಾಡಿಗೆ ಸ್ಟೆಪ್​ ಹಾಕಿದ ಭಜರಂಗಿ ಭಾಯಿಜಾನ್​ ಸಿನಿಮಾದ ಹರ್ಷಾಲಿ ಮಲ್ಹೋತ್ರಾ; ವಿಡಿಯೋ ವೈರಲ್

Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್

Published On - 3:59 pm, Tue, 8 June 21

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್