ಅಬ್ಬಾ ಎಂಥ ಗುಡುಗು! ಅಪ್ಪನನ್ನು ತಬ್ಬಿಹಿಡಿವ ಎಳೆಗೂಸಿನ ವಿಡಿಯೋ ವೈರಲ್

Thunder : ಇಷ್ಟೆಲ್ಲಾ ಆದರೂ ಆ ಅಪ್ಪ ಮಗುವಿನ ಮುಖವನ್ನು ನೋಡದೆ ಮೊಬೈಲಿನಲ್ಲಿಯೇ ಹುದುಗಿದ್ದಾನಲ್ಲಾ ಎಂದು ಕೆಲವರು. ಮುಗ್ಧತೆಯೇ ಸೌಂದರ್ಯ, ಪರಿಶುದ್ಧ ಆತ್ಮವಿದು ಎಂದಿದ್ದಾರೆ ಹಲವರು. ನೀವೇನಂತೀರಿ?

ಅಬ್ಬಾ ಎಂಥ ಗುಡುಗು! ಅಪ್ಪನನ್ನು ತಬ್ಬಿಹಿಡಿವ ಎಳೆಗೂಸಿನ ವಿಡಿಯೋ ವೈರಲ್
ಗುಡುಗಿನ ಶಬ್ದಕ್ಕೆ ಭಯಪಟ್ಟ ಮಗು ಅಪ್ಪನನ್ನು ತಬ್ಬಿ ಹಿಡಿಯುವುದು
Follow us
| Updated By: ಶ್ರೀದೇವಿ ಕಳಸದ

Updated on:May 02, 2023 | 4:16 PM

Rain : ಅಪ್ಪ ಅಮ್ಮನೆಂದರೆ ಮಕ್ಕಳಿಗೆ ಭದ್ರ ಭಾವ. ಅದರಲ್ಲೂ ಎಳೆಗೂಸುಗಳಿಗಂತೂ ಅರೆಕ್ಷಣವೂ ಅವರ ತೋಳಿನಿಂದ ಇಳಿಯಲಾರವು. ಹಾಗಾಗಿ ಇಂದಿನ ಅಪ್ಪ ಅಮ್ಮಂದಿರು ಕೆಲಸ ಮಾಡುತ್ತಲೇ ಮಕ್ಕಳನ್ನು ಸಂಭಾಳಿಸಬೇಕಾಗುವುದು ಅನಿವಾರ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ಕೂಸು ಅಪ್ಪನ ಕಂಕುಳನ್ನೇರಿ ಕುಳಿತಿದೆ. ಅಪ್ಪ ಮೊಬೈಲಿನಲ್ಲಿ ಮಗ್ನನಾಗಿದ್ದಾನೆ. ಹೊರಗೆ ಮಳೆ ಸುರಿಯುತ್ತಿದೆ. ಗುಡುಗಿನ ಶಬ್ದ ಕೇಳಿಬರುತ್ತಿದ್ದಂತೆ ಹೌಹಾರಿದ ಮಗು ಭಯದಿಂದ ಅಪ್ಪನ ಎದೆಯನ್ನು ಅವುಚಿ ಕೊರಳಸುತ್ತ ಕೈಹಾಕಿ ಹಿಡಿದುಕೊಳ್ಳುತ್ತದೆ.

ಈ ವಿಡಿಯೋ ನೋಡಿ

ಆ ಪುಟ್ಟ ಬಾಯಿ ಮತ್ತು ಕಣ್ಣುಗಳು ಭಯಕ್ಕೆ ಸ್ಪಂದಿಸುವುದನ್ನು ಗಮನಿಸಿದಿರಾ? ಈತನಕ ಸುಮಾರು 80,000 ಜನರು ಈ ವಿಡಿಯೋ ನೋಡಿದ್ದಾರೆ. 2,800 ಜನರು ಇಷ್ಟಪಟ್ಟಿದ್ದಾರೆ. ಸುಮಾರು 250ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಪ್ರಜ್ಞೆ ತಪ್ಪಿದ ಚಾಲಕ; 66 ಜನರನ್ನು ಉಳಿಸಿದ 7ನೇ ತರಗತಿಯ ಬಾಲಕನ ವಿಡಿಯೋ ವೈರಲ್

ಸೌಂದರ್ಯ ಎನ್ನುವುದು ಮುಗ್ಧತೆಯಲ್ಲಿದೆ, ಪರಿಶುದ್ಧ ಆತ್ಮವಿದು ಎಂದಿದ್ದಾರೆ ಒಬ್ಬ ನೆಟ್ಟಿಗರು. ಅಪ್ಪನೆಂದರೆ ಆನೆಯ ಬಲ ಎಂದಿದ್ದಾರೆ ಮತ್ತೊಬ್ಬರು. ನಾನು ಇಂಥ ಅಪ್ಪುಗೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಮತ್ತೂ ಒಬ್ಬರು. ಅಪ್ಪಿಕೊಳ್ಳುವ ಮೊದಲು ಅಪ್ಪನ ಮುಖವನ್ನು ಅದು ಎಷ್ಟು ಛಂದ ನೋಡುತ್ತದೆ ಗಮನಿಸಿದ್ದೀರಾ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ನಾಯಿಗಳ ಈ ಪಂದ್ಯಕ್ಕೆ ಬೆಕ್ಕೇ ರೆಫರಿ; ನೆಟ್ಟಿಗರ ಗಮನ ಸೆಳೆದ ಈ ವಿಡಿಯೋ ನೋಡಿ

ಇಷ್ಟೆಲ್ಲಾ ಆದರೂ ಆ ಅಪ್ಪ ಮಗುವಿನ ಮುಖವನ್ನು ನೋಡದೆ ಮೊಬೈಲಿನಲ್ಲಿಯೇ ಹುದುಗಿದ್ದಾನಲ್ಲಾ! ಎಂದಿದ್ದಾರೆ ಇನ್ನೊಬ್ಬರು. ಇಂಥ ಎಳೆ ಮಕ್ಕಳಿಗಷ್ಟೇ ಯಾಕೆ ಅಪ್ಪನೆಂದರೆ ಸೂಪರ್ ಹೀರೋನೇ ಸರಿ ಎಂದಿದ್ದಾರೆ ಹಲವಾರು ಜನರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:14 pm, Tue, 2 May 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ