AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?

Squirrel : ತಿಂಡಿಪೋತ ಈ ಅಳಿಲು ಹೇಗೆ ಈ ಪುಟ್ಟಿಯ ಜಾಕೆಟ್​ ಏರಿ ಅವಳ ಕೈಯ್ಯೊಳಗಿನ ತಿಂಡಿ ತಿಂದು ಓಡಿಹೋಗುವುದು ನೋಡಿ. 1.8 ಮಿಲಿಯನ್ ಜನರು ಈ ಮುದ್ದಾದ ದೃಶ್ಯ ನೋಡಿದ್ದಾರೆ.

ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?
Little girl feeds squirrel
TV9 Web
| Edited By: |

Updated on: Oct 13, 2022 | 5:10 PM

Share

Viral Video : ಅಳಿಲುಗಳಿಗೆ ನಮ್ಮ ಸಾಂಗತ್ಯ ಬೇಕು. ಹಾಗಂತ ಪೂರ್ತಿ ಮನೆಗಳಲ್ಲೇ ಇರಲಾರವು, ತಮಗೆ ಬೇಕಾದ ಸ್ವಾತಂತ್ರ್ಯವನ್ನು ಪಡೆದುಕೊಂಡು ನಮ್ಮನ್ನು ದಿನಕ್ಕೊಮ್ಮೆಯಾದರೂ ಮಾತನಾಡಿಸಿ, ಕೊಟ್ಟ ತಿಂಡಿ ತಿಂದು ಮುದ್ದು ಮಾಡಿ, ಮಾಡಿಸಿಕೊಂಡು ಮತ್ತೆ ತಮ್ಮ ಜಾಗಗಳಿಗೆ ಸಾಗುವಂಥವು. ಈ ವಿಡಿಯೋ 1.8 ಮಿಲಿಯನ್​ ವೀಕ್ಷಕರನ್ನು ತಲುಪಿ ವೈರಲ್ ಆಗುತ್ತಿದೆ. ಈ ಪುಟ್ಟಿ ಕೈಯಲ್ಲಿ ಏನನ್ನೋ ಹಿಡಿದುಕೊಂಡಿದ್ದಾಳೆ. ಅದಕ್ಕೇ ಅಲ್ಲವೆ ಈ ಅಳಿಲು ಹೀಗೆ ಅವಳನ್ನು ಏರಿ ಅವಳ ಕೈಲಿದ್ದ ತಿಂಡಿಯನ್ನು ತಿಂದು ಸರಕ್ಕನೆ ಮತ್ತೆ ಓಡಿಹೋಗುತ್ತಿರುವುದು.

ನಮ್ಮಲ್ಲಿ ಸಹನೆ, ಸಹಾನುಭೂತಿ ಇದ್ದಲ್ಲಿ ಪ್ರಾಣಿ, ಪಕ್ಷಿಗಳು ತಾವಾಗಿಯೇ ಹತ್ತಿರ ಬರುತ್ತವೆ. ಮನುಷ್ಯನ ಆಂತರ್ಯವನ್ನು ಬಹುಬೇಗನೆ ಅರ್ಥ ಮಾಡಿಕೊಳ್ಳುವಂಥ ಶಕ್ತಿ ಇವುಗಳಿಗಿದೆ. ತಿಂಡಿ ಎನ್ನುವುದು ನೆಪವಷ್ಟೇ. ನಮಗೂ ಅವುಗಳ ಸಾಂಗತ್ಯ ಬೇಕು, ಅವುಗಳಿಗೂ ನಮ್ಮ ಸಾಂಗತ್ಯ ಬೇಕು. ಎಳವೆಯಿಂದಲೇ ಮಕ್ಕಳಿಗೆ ಪ್ರಾಣಿಗಳೊಂದಿಗೆ ಒಡನಾಟ ಅಭ್ಯಾಸ ಮಾಡಿಸಿದರೆ ಕರುಣೆ, ದಯೆ, ಸಹಾನುಭೂತಿ, ತಾಳ್ಮೆ, ಸಹಾಯದಂಥ ಮಾನವೀಯ ಗುಣಗಳು ಮೊಳಕೆ ಒಡೆಯುತ್ತವೆ. ಮುಂದೆ ವಿದ್ಯೆ, ಬುದ್ಧಿಯೂ ಸೇರಿ ಅವರ ವ್ಯಕ್ತಿತ್ವವು ಉದಾತ್ತವಾಗುತ್ತದೆ.

ನಿಮ್ಮ ಮನೆ ಹೀಗೆ ಬರುವ ಅಳಿಲು, ಬೆಕ್ಕು, ನಾಯಿ, ಹಸು, ಕಾಗೆ, ಪಾರಿವಾಳಗಳಿಗೆ ಆಹಾರ ಕೊಡುವ ಅಭ್ಯಾಸವನ್ನು ನೀವೂ ಮಾಡಿ, ನಿಮ್ಮ ಮಕ್ಕಳಿಗೂ ಮಾಡಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್