AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?

Squirrel : ತಿಂಡಿಪೋತ ಈ ಅಳಿಲು ಹೇಗೆ ಈ ಪುಟ್ಟಿಯ ಜಾಕೆಟ್​ ಏರಿ ಅವಳ ಕೈಯ್ಯೊಳಗಿನ ತಿಂಡಿ ತಿಂದು ಓಡಿಹೋಗುವುದು ನೋಡಿ. 1.8 ಮಿಲಿಯನ್ ಜನರು ಈ ಮುದ್ದಾದ ದೃಶ್ಯ ನೋಡಿದ್ದಾರೆ.

ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?
Little girl feeds squirrel
TV9 Web
| Updated By: ಶ್ರೀದೇವಿ ಕಳಸದ|

Updated on: Oct 13, 2022 | 5:10 PM

Share

Viral Video : ಅಳಿಲುಗಳಿಗೆ ನಮ್ಮ ಸಾಂಗತ್ಯ ಬೇಕು. ಹಾಗಂತ ಪೂರ್ತಿ ಮನೆಗಳಲ್ಲೇ ಇರಲಾರವು, ತಮಗೆ ಬೇಕಾದ ಸ್ವಾತಂತ್ರ್ಯವನ್ನು ಪಡೆದುಕೊಂಡು ನಮ್ಮನ್ನು ದಿನಕ್ಕೊಮ್ಮೆಯಾದರೂ ಮಾತನಾಡಿಸಿ, ಕೊಟ್ಟ ತಿಂಡಿ ತಿಂದು ಮುದ್ದು ಮಾಡಿ, ಮಾಡಿಸಿಕೊಂಡು ಮತ್ತೆ ತಮ್ಮ ಜಾಗಗಳಿಗೆ ಸಾಗುವಂಥವು. ಈ ವಿಡಿಯೋ 1.8 ಮಿಲಿಯನ್​ ವೀಕ್ಷಕರನ್ನು ತಲುಪಿ ವೈರಲ್ ಆಗುತ್ತಿದೆ. ಈ ಪುಟ್ಟಿ ಕೈಯಲ್ಲಿ ಏನನ್ನೋ ಹಿಡಿದುಕೊಂಡಿದ್ದಾಳೆ. ಅದಕ್ಕೇ ಅಲ್ಲವೆ ಈ ಅಳಿಲು ಹೀಗೆ ಅವಳನ್ನು ಏರಿ ಅವಳ ಕೈಲಿದ್ದ ತಿಂಡಿಯನ್ನು ತಿಂದು ಸರಕ್ಕನೆ ಮತ್ತೆ ಓಡಿಹೋಗುತ್ತಿರುವುದು.

ನಮ್ಮಲ್ಲಿ ಸಹನೆ, ಸಹಾನುಭೂತಿ ಇದ್ದಲ್ಲಿ ಪ್ರಾಣಿ, ಪಕ್ಷಿಗಳು ತಾವಾಗಿಯೇ ಹತ್ತಿರ ಬರುತ್ತವೆ. ಮನುಷ್ಯನ ಆಂತರ್ಯವನ್ನು ಬಹುಬೇಗನೆ ಅರ್ಥ ಮಾಡಿಕೊಳ್ಳುವಂಥ ಶಕ್ತಿ ಇವುಗಳಿಗಿದೆ. ತಿಂಡಿ ಎನ್ನುವುದು ನೆಪವಷ್ಟೇ. ನಮಗೂ ಅವುಗಳ ಸಾಂಗತ್ಯ ಬೇಕು, ಅವುಗಳಿಗೂ ನಮ್ಮ ಸಾಂಗತ್ಯ ಬೇಕು. ಎಳವೆಯಿಂದಲೇ ಮಕ್ಕಳಿಗೆ ಪ್ರಾಣಿಗಳೊಂದಿಗೆ ಒಡನಾಟ ಅಭ್ಯಾಸ ಮಾಡಿಸಿದರೆ ಕರುಣೆ, ದಯೆ, ಸಹಾನುಭೂತಿ, ತಾಳ್ಮೆ, ಸಹಾಯದಂಥ ಮಾನವೀಯ ಗುಣಗಳು ಮೊಳಕೆ ಒಡೆಯುತ್ತವೆ. ಮುಂದೆ ವಿದ್ಯೆ, ಬುದ್ಧಿಯೂ ಸೇರಿ ಅವರ ವ್ಯಕ್ತಿತ್ವವು ಉದಾತ್ತವಾಗುತ್ತದೆ.

ನಿಮ್ಮ ಮನೆ ಹೀಗೆ ಬರುವ ಅಳಿಲು, ಬೆಕ್ಕು, ನಾಯಿ, ಹಸು, ಕಾಗೆ, ಪಾರಿವಾಳಗಳಿಗೆ ಆಹಾರ ಕೊಡುವ ಅಭ್ಯಾಸವನ್ನು ನೀವೂ ಮಾಡಿ, ನಿಮ್ಮ ಮಕ್ಕಳಿಗೂ ಮಾಡಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!