AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?

Squirrel : ತಿಂಡಿಪೋತ ಈ ಅಳಿಲು ಹೇಗೆ ಈ ಪುಟ್ಟಿಯ ಜಾಕೆಟ್​ ಏರಿ ಅವಳ ಕೈಯ್ಯೊಳಗಿನ ತಿಂಡಿ ತಿಂದು ಓಡಿಹೋಗುವುದು ನೋಡಿ. 1.8 ಮಿಲಿಯನ್ ಜನರು ಈ ಮುದ್ದಾದ ದೃಶ್ಯ ನೋಡಿದ್ದಾರೆ.

ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?
Little girl feeds squirrel
TV9 Web
| Edited By: ಶ್ರೀದೇವಿ ಕಳಸದ|

Updated on: Oct 13, 2022 | 5:10 PM

Share

Viral Video : ಅಳಿಲುಗಳಿಗೆ ನಮ್ಮ ಸಾಂಗತ್ಯ ಬೇಕು. ಹಾಗಂತ ಪೂರ್ತಿ ಮನೆಗಳಲ್ಲೇ ಇರಲಾರವು, ತಮಗೆ ಬೇಕಾದ ಸ್ವಾತಂತ್ರ್ಯವನ್ನು ಪಡೆದುಕೊಂಡು ನಮ್ಮನ್ನು ದಿನಕ್ಕೊಮ್ಮೆಯಾದರೂ ಮಾತನಾಡಿಸಿ, ಕೊಟ್ಟ ತಿಂಡಿ ತಿಂದು ಮುದ್ದು ಮಾಡಿ, ಮಾಡಿಸಿಕೊಂಡು ಮತ್ತೆ ತಮ್ಮ ಜಾಗಗಳಿಗೆ ಸಾಗುವಂಥವು. ಈ ವಿಡಿಯೋ 1.8 ಮಿಲಿಯನ್​ ವೀಕ್ಷಕರನ್ನು ತಲುಪಿ ವೈರಲ್ ಆಗುತ್ತಿದೆ. ಈ ಪುಟ್ಟಿ ಕೈಯಲ್ಲಿ ಏನನ್ನೋ ಹಿಡಿದುಕೊಂಡಿದ್ದಾಳೆ. ಅದಕ್ಕೇ ಅಲ್ಲವೆ ಈ ಅಳಿಲು ಹೀಗೆ ಅವಳನ್ನು ಏರಿ ಅವಳ ಕೈಲಿದ್ದ ತಿಂಡಿಯನ್ನು ತಿಂದು ಸರಕ್ಕನೆ ಮತ್ತೆ ಓಡಿಹೋಗುತ್ತಿರುವುದು.

ನಮ್ಮಲ್ಲಿ ಸಹನೆ, ಸಹಾನುಭೂತಿ ಇದ್ದಲ್ಲಿ ಪ್ರಾಣಿ, ಪಕ್ಷಿಗಳು ತಾವಾಗಿಯೇ ಹತ್ತಿರ ಬರುತ್ತವೆ. ಮನುಷ್ಯನ ಆಂತರ್ಯವನ್ನು ಬಹುಬೇಗನೆ ಅರ್ಥ ಮಾಡಿಕೊಳ್ಳುವಂಥ ಶಕ್ತಿ ಇವುಗಳಿಗಿದೆ. ತಿಂಡಿ ಎನ್ನುವುದು ನೆಪವಷ್ಟೇ. ನಮಗೂ ಅವುಗಳ ಸಾಂಗತ್ಯ ಬೇಕು, ಅವುಗಳಿಗೂ ನಮ್ಮ ಸಾಂಗತ್ಯ ಬೇಕು. ಎಳವೆಯಿಂದಲೇ ಮಕ್ಕಳಿಗೆ ಪ್ರಾಣಿಗಳೊಂದಿಗೆ ಒಡನಾಟ ಅಭ್ಯಾಸ ಮಾಡಿಸಿದರೆ ಕರುಣೆ, ದಯೆ, ಸಹಾನುಭೂತಿ, ತಾಳ್ಮೆ, ಸಹಾಯದಂಥ ಮಾನವೀಯ ಗುಣಗಳು ಮೊಳಕೆ ಒಡೆಯುತ್ತವೆ. ಮುಂದೆ ವಿದ್ಯೆ, ಬುದ್ಧಿಯೂ ಸೇರಿ ಅವರ ವ್ಯಕ್ತಿತ್ವವು ಉದಾತ್ತವಾಗುತ್ತದೆ.

ನಿಮ್ಮ ಮನೆ ಹೀಗೆ ಬರುವ ಅಳಿಲು, ಬೆಕ್ಕು, ನಾಯಿ, ಹಸು, ಕಾಗೆ, ಪಾರಿವಾಳಗಳಿಗೆ ಆಹಾರ ಕೊಡುವ ಅಭ್ಯಾಸವನ್ನು ನೀವೂ ಮಾಡಿ, ನಿಮ್ಮ ಮಕ್ಕಳಿಗೂ ಮಾಡಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ