AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?

Squirrel : ತಿಂಡಿಪೋತ ಈ ಅಳಿಲು ಹೇಗೆ ಈ ಪುಟ್ಟಿಯ ಜಾಕೆಟ್​ ಏರಿ ಅವಳ ಕೈಯ್ಯೊಳಗಿನ ತಿಂಡಿ ತಿಂದು ಓಡಿಹೋಗುವುದು ನೋಡಿ. 1.8 ಮಿಲಿಯನ್ ಜನರು ಈ ಮುದ್ದಾದ ದೃಶ್ಯ ನೋಡಿದ್ದಾರೆ.

ಅಳಿಲಿಗೆ ಈ ಪುಟ್ಟಿ ತಿನ್ನೋದಕ್ಕೆ ಏನೋ ಕೊಡ್ತಿದಾಳೆ, ಏನಿರಬಹುದು?
Little girl feeds squirrel
TV9 Web
| Edited By: ಶ್ರೀದೇವಿ ಕಳಸದ|

Updated on: Oct 13, 2022 | 5:10 PM

Share

Viral Video : ಅಳಿಲುಗಳಿಗೆ ನಮ್ಮ ಸಾಂಗತ್ಯ ಬೇಕು. ಹಾಗಂತ ಪೂರ್ತಿ ಮನೆಗಳಲ್ಲೇ ಇರಲಾರವು, ತಮಗೆ ಬೇಕಾದ ಸ್ವಾತಂತ್ರ್ಯವನ್ನು ಪಡೆದುಕೊಂಡು ನಮ್ಮನ್ನು ದಿನಕ್ಕೊಮ್ಮೆಯಾದರೂ ಮಾತನಾಡಿಸಿ, ಕೊಟ್ಟ ತಿಂಡಿ ತಿಂದು ಮುದ್ದು ಮಾಡಿ, ಮಾಡಿಸಿಕೊಂಡು ಮತ್ತೆ ತಮ್ಮ ಜಾಗಗಳಿಗೆ ಸಾಗುವಂಥವು. ಈ ವಿಡಿಯೋ 1.8 ಮಿಲಿಯನ್​ ವೀಕ್ಷಕರನ್ನು ತಲುಪಿ ವೈರಲ್ ಆಗುತ್ತಿದೆ. ಈ ಪುಟ್ಟಿ ಕೈಯಲ್ಲಿ ಏನನ್ನೋ ಹಿಡಿದುಕೊಂಡಿದ್ದಾಳೆ. ಅದಕ್ಕೇ ಅಲ್ಲವೆ ಈ ಅಳಿಲು ಹೀಗೆ ಅವಳನ್ನು ಏರಿ ಅವಳ ಕೈಲಿದ್ದ ತಿಂಡಿಯನ್ನು ತಿಂದು ಸರಕ್ಕನೆ ಮತ್ತೆ ಓಡಿಹೋಗುತ್ತಿರುವುದು.

ನಮ್ಮಲ್ಲಿ ಸಹನೆ, ಸಹಾನುಭೂತಿ ಇದ್ದಲ್ಲಿ ಪ್ರಾಣಿ, ಪಕ್ಷಿಗಳು ತಾವಾಗಿಯೇ ಹತ್ತಿರ ಬರುತ್ತವೆ. ಮನುಷ್ಯನ ಆಂತರ್ಯವನ್ನು ಬಹುಬೇಗನೆ ಅರ್ಥ ಮಾಡಿಕೊಳ್ಳುವಂಥ ಶಕ್ತಿ ಇವುಗಳಿಗಿದೆ. ತಿಂಡಿ ಎನ್ನುವುದು ನೆಪವಷ್ಟೇ. ನಮಗೂ ಅವುಗಳ ಸಾಂಗತ್ಯ ಬೇಕು, ಅವುಗಳಿಗೂ ನಮ್ಮ ಸಾಂಗತ್ಯ ಬೇಕು. ಎಳವೆಯಿಂದಲೇ ಮಕ್ಕಳಿಗೆ ಪ್ರಾಣಿಗಳೊಂದಿಗೆ ಒಡನಾಟ ಅಭ್ಯಾಸ ಮಾಡಿಸಿದರೆ ಕರುಣೆ, ದಯೆ, ಸಹಾನುಭೂತಿ, ತಾಳ್ಮೆ, ಸಹಾಯದಂಥ ಮಾನವೀಯ ಗುಣಗಳು ಮೊಳಕೆ ಒಡೆಯುತ್ತವೆ. ಮುಂದೆ ವಿದ್ಯೆ, ಬುದ್ಧಿಯೂ ಸೇರಿ ಅವರ ವ್ಯಕ್ತಿತ್ವವು ಉದಾತ್ತವಾಗುತ್ತದೆ.

ನಿಮ್ಮ ಮನೆ ಹೀಗೆ ಬರುವ ಅಳಿಲು, ಬೆಕ್ಕು, ನಾಯಿ, ಹಸು, ಕಾಗೆ, ಪಾರಿವಾಳಗಳಿಗೆ ಆಹಾರ ಕೊಡುವ ಅಭ್ಯಾಸವನ್ನು ನೀವೂ ಮಾಡಿ, ನಿಮ್ಮ ಮಕ್ಕಳಿಗೂ ಮಾಡಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಕೈ ಶಾಸಕನ ಎಡವಟ್ಟು:ಆಸ್ಪತ್ರೆಯಲ್ಲಿ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಕೈ ಶಾಸಕನ ಎಡವಟ್ಟು:ಆಸ್ಪತ್ರೆಯಲ್ಲಿ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ