ಕ್ಯಾನ್ಸರ್​ನಿಂದ ಬಳಲುತ್ತಿರುವ ತಂಗಿಗಾಗಿ ಅಣ್ಣನೂ ತಲೆ ಬೋಳಿಸಿಕೊಂಡ ಆ ಕ್ಷಣ

Cancer : ಬೆರಳತುದಿಯಲ್ಲಿ ಇಂದು ಎಲ್ಲವೂ ಲಭ್ಯ. ಆದರೆ ನಿನ್ನೊಂದಿಗೆ ನಾನಿದ್ದೇನೆ ಎನ್ನುವುದು? ಈಗಿಲ್ಲಿ ಈ ಅಣ್ಣ, ತಂಗಿಗೆ ಈ ಭಾವ, ಭರವಸೆಯನ್ನು ನೀಡುತ್ತಿರುವ ರೀತಿ ನೋಡಿ. ಎಂಥ ಭಾವುಕ ಕ್ಷಣಗಳು...

ಕ್ಯಾನ್ಸರ್​ನಿಂದ ಬಳಲುತ್ತಿರುವ ತಂಗಿಗಾಗಿ ಅಣ್ಣನೂ ತಲೆ ಬೋಳಿಸಿಕೊಂಡ ಆ ಕ್ಷಣ
Big brother shaves his head in solidarity with sister battling cancer
Follow us
| Updated By: ಶ್ರೀದೇವಿ ಕಳಸದ

Updated on:Oct 13, 2022 | 3:50 PM

Viral Video : ಯಾರೊಬ್ಬರೂ ಒಂಟಿಯಾಗಿ ಬದುಕಲು ಹೋರಾಡಲು ಸಾಧ್ಯವೇ ಇಲ್ಲ. ಜೊತೆಗೊಂದು ಜೀವ ಪರೋಕ್ಷವಾಗಿಯೋ ಪ್ರತ್ಯಕ್ಷವಾಗಿಯೋ ಇದ್ದೇ ಇರುತ್ತದೆ. ಬದುಕು ಹೀಗೊಂದು ಸಂಬಂಧವನ್ನು ಜೋಡಿಸಿರುತ್ತದೆ. ಇನ್ನು ಸಂಬಂಧಗಳ ಆಳ ಅರ್ಥವಾಗುವುದು ನೋವಿನಲ್ಲಿದ್ದಾಗ, ಸಂಕಟದಲ್ಲಿದ್ದಾಗ ಮತ್ತು ಅತೀವ ದುಃಖದಲ್ಲಿದ್ದಾಗಲೇ. ಕ್ಯಾನ್ಸರ್!​ ಯಾರಿಗೆ ತಾನೆ ಕತ್ತಲು ಕವಿದಂತಾಗುವುದಿಲ್ಲ? ಆದರೆ ಕತ್ತಲನ್ನು ಸರಿಸಿ ಅಷ್ಟಷ್ಟೇ ಬೆಳಕು ಮಾಡಿಕೊಳ್ಳಲೇಬೇಕಲ್ಲವೆ? ಚಿಕಿತ್ಸೆಗೆ ಹಣ ಹೊಂದಿಸಬಹುದು. ಆದರೆ ನೋಯುತ್ತಿರುವ ಜೀವಕ್ಕೆ ಜೊತೆಯಾಗುವುದು? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ತಂಗಿ ಕ್ಯಾನ್ಸರ್​ಗೆ ಈಡಾಗಿದ್ಧಾಳೆ. ಅಣ್ಣನೂ ಆಕೆಯಂತೆ ತಲೆ ಬೋಳಿಸಿಕೊಂಡು ನಿನ್ನ ಜೊತೆ ನಾನಿದ್ದೇನೆ ಎಂಬ ಭಾವ ಭರವಸೆ ಮೂಡಿಸುತ್ತಿದ್ದಾನೆ.

ಗುಡ್‌ನ್ಯೂಸ್ ಮೂವ್‌ಮೆಂಟ್‌ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 3 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿ ಭಾವಪರವಶರಾಗಿದ್ದಾರೆ. ತಂಗಿಯ ತಲೆಯನ್ನು ಬೋಳಿಸುವಾಗ ಇದ್ದಕ್ಕಿದ್ದಂತೆ ಈ ಅಣ್ಣ ತನ್ನ ತಲೆಗೂ ಟ್ರಿಮ್ಮರ್ ತಾಕಿಸಿಕೊಳ್ಳುತ್ತಾನೆ. ಆಗ ತಂಗಿ ಭಾವುಕಳಾಗುತ್ತಾಳೆ. ನಂತರ ಸಮಾಧಾನ ತಂದುಕೊಂಡು ಅಣ್ಣನ ತಲೆಯನ್ನು ಬೋಳಿಸಲು ಶುರುಮಾಡುತ್ತಾಳೆ.

ಇಂದು ಎಲ್ಲವೂ ಬೆರಳತುದಿಯಲ್ಲಿ ಲಭ್ಯ ಔಷಧಿ, ಚಿಕಿತ್ಸೆ ಏನೆಲ್ಲವೂ. ಆದರೆ ಎಲ್ಲದಕ್ಕಿಂತಲೂ ಮುಖ್ಯವಾಗಿ ಬೇಕಿರುವುದು ಮನಸಿನ ಸಾಂತ್ವನ. ನಿನ್ನೊಂದಿಗೆ ನಾನಿದ್ದೇನೆ ಎನ್ನುವ ಭಾವ. ಹಾಗಾಗಿ ರೋಗಕ್ಕೆ ತುತ್ತಾದವರಿಗೆ ಸಮಯ ಕೊಡುವುದು, ಅವರ ನೋವನ್ನು ನಲಿವಿಗೆ ತಿರುಗಿಸುವುದು ಬಹಳ ಮುಖ್ಯ. ಸಂಬಂಧಗಳು ಗಾಢವಾಗುವುದು ಇಂಥ ಸಂದರ್ಭಗಳಲ್ಲಿಯೇ. ಅವುಗಳಿಗೆ ಹೆಚ್ಚು ಅರ್ಥ ಒದಗುವುದು ಇಂಥ ಸಂಕಟದ ಸನ್ನಿವೇಶಗಳಲ್ಲಿ ಜೊತೆಗಿದ್ದಾಗಲೇ.

ಹಾಗೆಂದು ರಕ್ತಸಂಬಂಧಗಳೇ ಎಲ್ಲವೂ ಆಗಬೇಕಿಲ್ಲ. ಮನುಷ್ಯ ಸಂಬಂಧ ಎನ್ನುವುದು ಬಹಳ ಅಮೂಲ್ಯ. ನಿನ್ನ ಕಷ್ಟದ ಹಾದಿಯಲ್ಲಿ ನಾನಿದ್ದೇನೆ, ಉದ್ದಕ್ಕೂ ನಾನಿರುತ್ತೇನೆ ಎನ್ನುವ ಭರವಸೆ ಮೂಡಿಸುವುದು ಯಾವುದೇ ಸಂಬಂಧದ ಸಾರ್ಥಕತೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:33 pm, Thu, 13 October 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ