AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ರಸ್ತೆ ದಾಟುತ್ತಿರುವಾಗ ಅಡ್ಡ ಬಂದ ಈ ಬೈಕ್, ಮುಂದೇನಾಯಿತು?

Accident : ಈ ಮಹಿಳೆ ಹೀಗೆ ಗಾಡಿ ಓಡಿಸುತ್ತ ಹೋಗುವಾಗ ಬಲಬದಿಯಿಂದ ಆನೆ ರಸ್ತೆ ದಾಟಲು ಹೊರಟಿದೆ. ನಿಯಂತ್ರಣ ತಪ್ಪಿದೆ. ಮುಂದೇನಾಗಿದೆ ನೋಡಿ ವಿಡಿಯೋ.

ಆನೆ ರಸ್ತೆ ದಾಟುತ್ತಿರುವಾಗ ಅಡ್ಡ ಬಂದ ಈ ಬೈಕ್, ಮುಂದೇನಾಯಿತು?
Rider almost hits elephant crossing road
TV9 Web
| Updated By: ಶ್ರೀದೇವಿ ಕಳಸದ|

Updated on:Oct 13, 2022 | 4:19 PM

Share

Viral Video : ಮಹಿಳೆಯೊಬ್ಬರು ಬೈಕ್​ ಸವಾರಿ ಮಾಡುತ್ತಿದ್ದಾರೆ. ಆನೆಯೊಂದು ತನ್ನ ಪಾಡಿಗೆ ತಾನು ರಸ್ತೆ ದಾಟುತ್ತಿದೆ. ಸ್ವಲ್ಪ ನಿಯಂತ್ರಣ ತಪ್ಪಿದ್ದರೆ ಅನಾಹುತವಾಗುತ್ತಿತ್ತು. ಆದರೆ ಆನೆ ಸಾವರಿಸಿಕೊಂಡು ರಸ್ತೆ ದಾಟಿಕೊಂಡಿದೆ. ಬೈಕ್ ಸವಾರಿ ಮಾಡುತ್ತಿರುವ ಮಹಿಳೆಯೂ ಮುಗ್ಗರಿಸದೆ ಪಾರಾಗಿದ್ದಾರೆ. ಬಲಿಷ್ಠ ಮತ್ತು ಚಾಣಾಕ್ಷ ಆನೆ ತಾನೂ ಘಾಸಿಗೊಳಗಾಗದೆ ಮಹಿಳೆಗೂ ಏನೂ ತೊಂದರೆ ಮಾಡದೆ ದಾಟಿದೆ. ಪರಸ್ಪರರ ಜೀವ ಉಳಿದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಐಎಫ್ಎಸ್​ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ 16,000ಕ್ಕಿಂತಲೂ ಹೆಚ್ಚು ಜನರನ್ನು ತಲುಪಿದೆ. ಧುತ್ತನೆ ಹೀಗೆ ಬಲಬದಿಯಿಂದ ಆನೆ ಪ್ರತ್ಯಕ್ಷವಾದಾಗ ಮಹಿಳೆಗೆ ಗಾಡಿ ನಿಯಂತ್ರಿಸುವುದು ಕಷ್ಟವಾಗಿದೆ. ಆದರೂ ಸದ್ಯ ಏನೂ ಅವಘಡ ಸಂಭವಿಸಿಲ್ಲ. ಅಕ್ಕ ಪಕ್ಕ ಅಥವಾ ಮುಂದೆ ಹಿಂದೆ ಯಾವ ಗಾಡಿಗಳೂ ಇಲ್ಲದಿದುದರಿಂದ ಅದೃಷ್ಟವಶಾತ್​ ಈಕೆ ಪಾರಾಗಿದ್ದಾರೆ. ಇನ್ನು ಆನೆ ಬಲವುಳ್ಳ ಪ್ರಾಣಿಯಾಗಿರುವುದರಿಂದ ಅದಕ್ಕೂ ಏನು ಹೆಚ್ಚು ತೊಂದರೆಯಾಗಿರಲಾರದು ಎಂಬ ಊಹೆ.

ಪ್ರತೀ ವರ್ಷ ವನ್ಯಮೃಗಗಳ ವಲಯದಲ್ಲಿ ನೂರಾರು ಅಪಘಾತಗಳು ವಾಹನ ಸಂಚಾರದಿಂದಲೇ ಸಂಭವಿಸುತ್ತಿವೆ. ಹಾಗಾಗಿ ವಾಹನ ಸವಾರರು ನಿಧಾನವಾಗಿ ಸಂಚರಿಸಬೇಕೆಂದು ಅರಣ್ಯ ಇಲಾಖೆ ಆಗಾಗ ಎಚ್ಚರಿಸುತ್ತಲೇ ಇರುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:13 pm, Thu, 13 October 22

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್