AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ರಸ್ತೆ ದಾಟುತ್ತಿರುವಾಗ ಅಡ್ಡ ಬಂದ ಈ ಬೈಕ್, ಮುಂದೇನಾಯಿತು?

Accident : ಈ ಮಹಿಳೆ ಹೀಗೆ ಗಾಡಿ ಓಡಿಸುತ್ತ ಹೋಗುವಾಗ ಬಲಬದಿಯಿಂದ ಆನೆ ರಸ್ತೆ ದಾಟಲು ಹೊರಟಿದೆ. ನಿಯಂತ್ರಣ ತಪ್ಪಿದೆ. ಮುಂದೇನಾಗಿದೆ ನೋಡಿ ವಿಡಿಯೋ.

ಆನೆ ರಸ್ತೆ ದಾಟುತ್ತಿರುವಾಗ ಅಡ್ಡ ಬಂದ ಈ ಬೈಕ್, ಮುಂದೇನಾಯಿತು?
Rider almost hits elephant crossing road
TV9 Web
| Edited By: |

Updated on:Oct 13, 2022 | 4:19 PM

Share

Viral Video : ಮಹಿಳೆಯೊಬ್ಬರು ಬೈಕ್​ ಸವಾರಿ ಮಾಡುತ್ತಿದ್ದಾರೆ. ಆನೆಯೊಂದು ತನ್ನ ಪಾಡಿಗೆ ತಾನು ರಸ್ತೆ ದಾಟುತ್ತಿದೆ. ಸ್ವಲ್ಪ ನಿಯಂತ್ರಣ ತಪ್ಪಿದ್ದರೆ ಅನಾಹುತವಾಗುತ್ತಿತ್ತು. ಆದರೆ ಆನೆ ಸಾವರಿಸಿಕೊಂಡು ರಸ್ತೆ ದಾಟಿಕೊಂಡಿದೆ. ಬೈಕ್ ಸವಾರಿ ಮಾಡುತ್ತಿರುವ ಮಹಿಳೆಯೂ ಮುಗ್ಗರಿಸದೆ ಪಾರಾಗಿದ್ದಾರೆ. ಬಲಿಷ್ಠ ಮತ್ತು ಚಾಣಾಕ್ಷ ಆನೆ ತಾನೂ ಘಾಸಿಗೊಳಗಾಗದೆ ಮಹಿಳೆಗೂ ಏನೂ ತೊಂದರೆ ಮಾಡದೆ ದಾಟಿದೆ. ಪರಸ್ಪರರ ಜೀವ ಉಳಿದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಐಎಫ್ಎಸ್​ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ 16,000ಕ್ಕಿಂತಲೂ ಹೆಚ್ಚು ಜನರನ್ನು ತಲುಪಿದೆ. ಧುತ್ತನೆ ಹೀಗೆ ಬಲಬದಿಯಿಂದ ಆನೆ ಪ್ರತ್ಯಕ್ಷವಾದಾಗ ಮಹಿಳೆಗೆ ಗಾಡಿ ನಿಯಂತ್ರಿಸುವುದು ಕಷ್ಟವಾಗಿದೆ. ಆದರೂ ಸದ್ಯ ಏನೂ ಅವಘಡ ಸಂಭವಿಸಿಲ್ಲ. ಅಕ್ಕ ಪಕ್ಕ ಅಥವಾ ಮುಂದೆ ಹಿಂದೆ ಯಾವ ಗಾಡಿಗಳೂ ಇಲ್ಲದಿದುದರಿಂದ ಅದೃಷ್ಟವಶಾತ್​ ಈಕೆ ಪಾರಾಗಿದ್ದಾರೆ. ಇನ್ನು ಆನೆ ಬಲವುಳ್ಳ ಪ್ರಾಣಿಯಾಗಿರುವುದರಿಂದ ಅದಕ್ಕೂ ಏನು ಹೆಚ್ಚು ತೊಂದರೆಯಾಗಿರಲಾರದು ಎಂಬ ಊಹೆ.

ಪ್ರತೀ ವರ್ಷ ವನ್ಯಮೃಗಗಳ ವಲಯದಲ್ಲಿ ನೂರಾರು ಅಪಘಾತಗಳು ವಾಹನ ಸಂಚಾರದಿಂದಲೇ ಸಂಭವಿಸುತ್ತಿವೆ. ಹಾಗಾಗಿ ವಾಹನ ಸವಾರರು ನಿಧಾನವಾಗಿ ಸಂಚರಿಸಬೇಕೆಂದು ಅರಣ್ಯ ಇಲಾಖೆ ಆಗಾಗ ಎಚ್ಚರಿಸುತ್ತಲೇ ಇರುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:13 pm, Thu, 13 October 22

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ