AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸ್​ಲ್ಯಾಂಡ್​​ನ ನೆಲದೊಳಗೆ ಬ್ರೆಡ್​ ಬೇಯುತ್ತದೆ, ಹೇಗೆಂದು ನೋಡಿ ಈ ವಿಡಿಯೋದಲ್ಲಿ

Iceland: ಇಲ್ಲಿಯ ಜನ ನೆಲದಲ್ಲಿ ಬ್ರೆಡ್ ಬೇಯಿಸುತ್ತಾರೆ. ಮೊಟ್ಟೆ ಬೇಯಿಸುತ್ತಾರೆ. ಕೇಕ್​ ಕೂಡ. ಅಚ್ಚರಿಯಾಗ್ತಿದೆಯಾ? ಈ ವಿಡಿಯೋ ಮೂಲಕ ಐಸ್​ಲ್ಯಾಂಡಿಗೆ ಬನ್ನಿ ಹಾಗಿದ್ದರೆ...

ಐಸ್​ಲ್ಯಾಂಡ್​​ನ ನೆಲದೊಳಗೆ ಬ್ರೆಡ್​ ಬೇಯುತ್ತದೆ, ಹೇಗೆಂದು ನೋಡಿ ಈ ವಿಡಿಯೋದಲ್ಲಿ
Man bakes bread in the ground in Iceland
TV9 Web
| Edited By: |

Updated on:Nov 16, 2022 | 5:32 PM

Share

Viral Video : ಐಸ್​ಲ್ಯಾಂಡ್​ನ ಈ ನದೀತಟದಲ್ಲಿ ನೆಲದೊಳಗೆ ಬ್ರೆಡ್​ ಬೇಯಿಸಲಾಗುತ್ತದೆ. ಅಚ್ಚರಿಯಾಗುತ್ತಿದೆಯಾ? ಬೇಕರಿಯ ಓವನ್ನುಗಳಲ್ಲಿ ಬ್ರೆಡ್​ ಬೇಯುವುದು ಗೊತ್ತು. ಆದರೆ ನೆಲದಲ್ಲಿ? ಹೌದು. ಇಲ್ಲಿ ಕಾಣುವ ನದೀ ತಟದಲ್ಲಿರುವ ಮಣ್ಣನ್ನು ಅಗೆದು ಗುಂಡಿ ತೋಡಲಾಗುತ್ತದೆ. ಪಾತ್ರೆಯೊಳಗೆ ಬ್ರೆಡ್​ನ ಹಿಟ್ಟನ್ನು ಹಾಕಿ ಆ ಗುಂಡಿಯೊಳಗೆ ಹೂತಿಡಲಾಗುತ್ತದೆ. ಹೇಗೆಂದು ತಿಳಿದುಕೊಳ್ಳಬೇಕಾ? ಈ ವಿಡಿಯೋ ನೋಡಿ.

ಇಲ್ಲಿ ಕ್ಲಿಕ್ ಮಾಡಿ ಬ್ರೆಡ್ ಹೇಗೆ ಬೇಯಿಸಲಾಗುತ್ತದೆ ಎಂದು ತಿಳಿದುಕೊಳ್ಳಲು

ಬಿಸಿನೀರಿನ ಬುಗ್ಗೆಗಳಿಂದಾಗಿ ಸಹಜವಾದ ಶಾಖವು ಇಲ್ಲಿ ಉತ್ಪತ್ತಿಯಾಗುತ್ತದೆ. ಐಸ್​ಲ್ಯಾಂಡ್​ನ ಜನರು ಈ ಶಾಖದಲ್ಲಿ ಬ್ರೆಡ್​, ಕೇಕ್​ ಮತ್ತು ಮೊಟ್ಟೆಗಳನ್ನು ಬೇಯಿಸುತ್ತಾರೆ. ಟ್ರಾವೆಲ್ ಬ್ಲಾಗರ್​ ಕಯಾನಾ ಸ್ಯೂ ಪವರ್ಸ್​ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಐಸ್​ಲ್ಯಾಂಡ್​ನ ಲೌಗರ್ವಾಟ್ನ್ ಫೌಂಟಾನಾ ಎಂಬ ಬೇಕರಿಯಲ್ಲಿ ನೆಲದಲ್ಲಿ ಮಾಡಿದ ತಾಜಾ ಬ್ರೆಡ್​ನ ರುಚಿಯನ್ನು ನೋಡಿದ್ದಾರೆ.

ಈ ವಿಡಿಯೋದಲ್ಲಿ ಬ್ರೆಡ್​ ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ. ಸ್ಥಳೀಯರು ಬೇಕಾದ ಆಹಾರಗಳನ್ನು ಹೀಗೆ ಬೇಯಿಸಿಕೊಂಡು ಹೋಗುತ್ತಾರೆ. ಕಳೆದ ತಿಂಗಳು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಈತನಕ ಸಾವಿರಾರು ಜನರು ಮೆಚ್ಚಿದ್ದಾರೆ. ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಇದು ಅದ್ಭುತವಾಗಿದೆ. ಎಲ್ಲ ಊರುಗಳಲ್ಲಿಯೂ ಇಂಥ ಬಿಸಿನೀರಿನ ಬುಗ್ಗೆಗಳಿರಬಾರದಾ? ಎಂದಿದ್ದಾರೆ ನೆಟ್ಟಿಗರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:50 pm, Wed, 16 November 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್